Thursday, February 13, 2014

ಫೆಬ್ರುವರಿ ೧೪-ಪ್ರೇಮಿಗಳ ದಿನ..!

ಇದು  ಹುಚ್ಚುರ ದಿನವೇ ಅನ್ನು ತರ ಸಾಂಪ್ರದಾಯಿಕ  ಜಗತ್ತಿನ ಹಲವು ಮಂದಿ ಫೇಸ್ಬುಕ್, ಪತ್ರಿಕೆ ಅಂಕಣ ಗಳಲ್ಲಿ ಬರೆದುದ್ದನು  ಓದಿದ್ದೇನೆ. ಕೆಲವು ಸಂಘಟನೆಗಳು  ಈ  ದಿನದ ಆಚಾರಣೆಯನ್ನೇ ಬಹಿಸ್ಕಾರ ಕೂಡ ಹಾಕಿವೆ. ಆದರೆ, ಪ್ರೇಮದ ಲೋಕದಲ್ಲಿ ವಿವಹರಿಸುತ್ತಿರುವವರು ಮಾತ್ರ ಯಾವುದು ಸಂಬಂಧವಿಲ್ಲದೆ ಕೆಂಪು ಗುಲಾಬಿ ಖರಿದಿಸುತ್ತಿದ್ದಾರೆ; ಆಫೀಸ್ ಗೆ ರಜೆ ಹಾಕುತ್ತಿದ್ದಾರೆ . ಏನ್ ಕತೆಯೋ ಗೊತ್ತಿಲ್ಲ..! ಎಲ್ಲ ಪ್ರೇಮ ರೀ !

ಅಂದಹಾಗೆ ಪ್ರೀತಿ ಅಂದ್ರೆ ಏನು ? ಎಲ್ಲರು ಕೇಳುವ ಪ್ರಶ್ನೆ ಮಾತ್ರವೊಂದೇ.. ಆದರೆ, ಭೂಮಿಯ ಮೇಲಿರುವ ಪ್ರತಿಯೊಂದು ವ್ಯಕ್ತಿಯ ವಾಖ್ಯನ ಬೇರೆ ಬೇರೆನೆ. ಅದಕ್ಕಾಗಿಯೆ ಸಾವಿರಾರು ಲವ್ ಫಿಲ್ಮ್ಸ್ ಬಂದರು, ಸಾವಿರಾರು ಪುಸ್ತಕಗಳನ್ನು ಪ್ರೀತಿಯ ಕುರಿತಾಗಿ ಬರೆದರೂ ಇವತ್ತಿಗೂ ಪ್ರೀತಿ ಹೀಗೆ ಎಂದು ತಿರ್ಮಾನಕ್ಕೆ ಬಂದವರಿಲ್ಲ. ಪ್ರೇಮಿಗಳ ದಿನಾಚರಣೆ ಸರಿಯೋ ತಪ್ಪೋ ಅನ್ನುವ ಜಿಜ್ಞಾಷೆಗಿಂತಲೂ, ಭಾರತೀಯ ಸಂಸ್ಕೃತಿಯಲ್ಲಿ ಇಂತದೊಂದು ದಿನ ಕೆಟ್ಟದ್ದು ಎಂದು ಹೇಳುವ ವಸ್ತು ಸ್ಥಿತಿ ನನಗೆ ಕಾಣುವುದಿಲ್ಲ. ದೇವರ ದೇವ ಶ್ರೀ ಕೃಷ್ಣನಿಗೆ ರುಕ್ಮಿಣಿ ದೇವಿ ಪ್ರೇಮ ಪತ್ರ ಬರೆದು ಪ್ರೀತಿಯನ್ನು ನಿವೇದನೆ ಮಾಡಿಕೊಂಡ ಭೂಮಿ ಇದು. ಸಮಾಜದಲ್ಲಿ, ನ್ಯಾಯುತವಾದ  ಆಸೆ, ಪ್ರೀತಿ, ಕಾಮ (ವಾತ್ಸಾಯನ ಕಾಮಸೂತ್ರ ಬರೆದುದ್ದು ಇದೆ ಭೂಮಿಯಲ್ಲಿ) ಅಪರಾಧವಲ್ಲ. ಎಲ್ಲವು ಮಿತಿಯೊಳಗೆ ಇದ್ದರೆ ಆರೋಗ್ಯಕ್ಕೆ ಒಳ್ಳೆಯದೇ...!

ಸರಿ, ನಮ್ಮ-ನಿಮ್ಮ ನಡುವೆ ಇರುವ ಒಬ್ಬ ಹುಡುಗನ ಕತೆ ಹೇಳುತ್ತೇನೆ ಕೇಳಿ. ಅವನೊಬ್ಬ ಬುದ್ಧಿವಂತ ಹುಡುಗ.  ಎಂ ಬಿ ಎ  ಓದುವಾಗ, ಜೆರಾಕ್ಸ್ ಅಂಗಡಿಯೊಂದರಲ್ಲಿ ಇವನು ನಿಂತಾಗ ಅವಳು ಇವನಿಗೆ ಪರಿಚಯವಾಗಿದ್ದಳು. ಅವಳು ಅಲ್ಲಿಯೇ ಸಮೀಪದ ಕಾಲೇಜ್ ನಲ್ಲಿ  ಪಿ ಯು ಸಿ  ಓದುತಿದ್ದಳು. ನೂರಾರು ಪೇಜ್ ಜೆರಾಕ್ಸ್ ಮಾಡುತ್ತಿರುವಾಗ, ಸುಮ್ಮನ್ನೆ ನಿಂತಲೇ ನೋಟ, ಭಾವ, ಮಾತು ಸುರುವಾಗಿ, ಪ್ರೀತಿಗೆ ನಾಂದಿಯಾಗಿತ್ತು.ಅವರ ಜಾತಿ ಬೇರೆ; ಮನೆ-ಊರು-ಕೇರಿ ಬೇರೆ ಬೇರೇನೆ, ಭಾಷೆ ಬೇರೆ; ಆದರೆ ಹೃದಯದ ಕೂಗು ಒಂದೇ ಆಗಿತ್ತು. ದಿನದಿಂದ ದಿನಕ್ಕೆ ಅವರ ಪ್ರೀತಿ ಗಾಢವಾಗುತ್ತ ಹೋಯಿತು.ಬಡತನದಲ್ಲಿದ್ದ ಹುಡುಗಿಯ ಓದನ್ನು  ಎಂ ಎಸ್ ಸಿ ಗೆ ತಂದ ಆ ಪುಣ್ಯಾತ್ಮ. ಹುಟ್ಟು ಕುಡಕನ ಮಗಳು ಇವನ ಸಾಂಗತ್ಯದಲ್ಲಿ ಪಿ ಯು ಸಿ ಗಿಂತ  ಮುಂದಿನ ಶಿಕ್ಷಣ ಸಾಧ್ಯವಾಗಿತ್ತು. ಬದುಕಿನ ನಿರ್ಧಾರವಾಗಿ , ಅವಳೇ ತನ್ನ ಹೆಂಡತಿಯೆಂದುಕೊಂಡ ಅವನು ತನಗೆ ನೌಕರಿ ಸಿಗುವ ತನಕ, ಮನೆಯಲ್ಲಿ ಯಾವ ವಿಷಯವನ್ನು ಹೇಳಲಿಲ್ಲ. ತಂಗಿಯ ಮದುವೆ ಮಾಡಿಸಿದ; ಅಪ್ಪನ ಸಾಲ ತಿರಿಸಿದ. ಒಂದು ದಿನ ಅಪ್ಪ-ಅಮ್ಮ ತನ್ನ ಮದುವೆಯ ಕುರಿತಾಗಿ ಹೇಳುವಾಗ, ಮನೆಯಲ್ಲಿ ಶಾಂತವಾಗಿ ಕುಳಿತು ತನ್ನ ಪ್ರೀತಿಯನ್ನು ಹೇಳಿದ.

ಮದುವೆಯಾದ ತಂಗಿಯನ್ನು ಭಾವನೊನ್ದಿಗೆ ಕರೆಸಿದ. ಅಪ್ಪ-ಅಮ್ಮನಿಗೆ ಸಾವಧಾನದಿಂದ ಮಾತಿಗೆ ತಂದ. ವಿಷಯ ಹೀಗೆ ಹೇಳಿದ, " ಅಪ್ಪ, ನಾನು ನಮ್ಮ ಜಾತಿಗಿಂತ ಕೆಳಗಿನ ಹುಡುಗಿಯನ್ನು ಪ್ರೀತಿಸಿದ್ದೇನೆ. ಅವಳು ತುಂಬಾ ಒಳ್ಳೆಯವಳು. ಕಳೆದ ನಾಲ್ಕು ವರ್ಷಗಳಿಂದ ನಾವು ಪ್ರೇತಿಯಲ್ಲಿದ್ದೆವೆ. ಆದರು ನಾನು ನನ್ನ ಯಾವ ಕರ್ತವ್ಯವನ್ನು ಮರೆತಿಲ್ಲ.ಅವಳು ನಂಬಿಕೆಯ ಹಾಗೂ ಪ್ರೀತಿಯಿಂದ ನೋಡಿಕೊಂಡು ಹೋಗುವ ಹುಡುಗಿ ಎಂಬ ಭರವಸೆ ಇದೆ. ಅವಳಲ್ಲದೆ ಬೇರೆಯವರನ್ನು ನಾನು ಒಪುವುದಿಲ್ಲ" ಎಂದು ಹೇಳಿದ. ಅದೊಂದು ಕಾಲದಲ್ಲಿ ಜಬ್ಧಾರಿಯಿಲ್ಲದ ಹುಡುಗ, ಹುಡುಗಿಯಿಂದಾಗಿ ಒಳ್ಳೆಯ ಸಭ್ಯ ವ್ಯಕ್ತಿಯಾಗಿದ್ದ. ಅವನ ಪ್ರೀತಿಯ ಗಿಂತಲೂ, ಜಾತಿಯ ಪ್ರಶ್ನೆ ಕಾಡಿತ್ತು. ನಾಲ್ಕಾರು ಬಾರಿ ತಿಳಿ ಹೇಳಿ, ಜಾತಿ ಹೊರಗಿನ ಮದುವೆಗೆ ಒಪ್ಪಸಲಾಗದೆ, ಒಂದು ದಿನ ಪೋಲೀಸರ ಮುಂದೆ ಮದುವೆ ಮಾಡಿಕೊಂಡರು.

ಮದುವೆಯಾದ ನಂತರ, ಮುಂದಿನ ಒಂದು ವರ್ಷ ಮನೆಯಿಂದ ಹೊರಗೆ ಉಳಿಯಬೇಕಾಯಿತು. ತನ್ನ ತಂದೆ-ತಾಯಿಗೆ ಯತಾವತ್ತಾಗಿ ಹಣವನ್ನು ಕೊಟ್ಟು, ಹೊರಗಿನವರಿಂದ ಮನೆಯ ಸ್ಥಿತಿಗತಿಗಳನ್ನು ತಿಳಿದುಕೊಳ್ಳುತ್ತಾ  ಇರಲು, ಒಂದು ದಿನ ಕಾಲ ಬದಲಾಗಿತ್ತು. ಮೊಮ್ಮಗನ ಕಾಣುವ ಬಯಕೆಯಿಂದ, ಜಾತಿ ಹೀನ ಸೊಸೆಯ ಮನೆಗೆ ಅಪ್ಪ-ಅಮ್ಮ ಬಂದಿದ್ದರು. ಜಾತಿ ಮರೆಗೆ ಸರಿದಿತ್ತು. ಅತುತ್ತಮ ಸಂಸಾರವಾಗಿ, ಸಾರವಾಗಿ ನಡೆಯುತ್ತಿದೆ ಆ ಬದುಕು.

ಹೀಗಿರುವಾಗ, ಕಾಲಗಟ್ಟದಲ್ಲಿ ಉಂಟಾದ ಪ್ರೀತಿ ಹುಡುಗಿಯ ಕನಸುಗಳು, ಹುಡುಗನ ಬವಣೆಗಳನ್ನು ದೂರಿಕರಿಸುವಲ್ಲಿ ಸಹಕಾರಿಯಾಯಿತು. ಜಾತಕ ನೋಡಲಿಲ್ಲ ;ವರದಕ್ಷಿಣೆ ತೆರಲಿಲ್ಲ. ವಾದ್ಯ ಬಾರಿಸಿ ನಾಲ್ಕು ಜನರಿಗೆ ಊಟ ಬಡಿಸಲಿಲ್ಲ ಅನ್ನುವ ಕಾರಣಕ್ಕೆ ಇಂತ ಮದುವೆ ತಪ್ಪು ಎಂದು ಯಾವತ್ತು ಹೇಳುತ್ತಲೇ ಇರಬೇಕೆ? ಆದರೆ ಒಪ್ಪಿದ ಹೃದಯಗಳು ಕೂಡಿದಾಗ, ಜೀವನದ ಗುರಿ ಸಾಧಿಸಿದಂತಲೇ ಅಲ್ಲವೇ?

ಪ್ರೀತಿ ಬದುಕಿನ ನಿಜವಾದ ಆಶವಾದದ ಕಿರಣ. ಮನುಷ್ಯ ಕೇವಲ ಹೊಟ್ಟೆಗಾಗಿ ಮಾತ್ರ ದುಡಿಯುತ್ತಿಲ್ಲ; ಭಾವನಾತ್ಮಕವಾದ ಆಕಾಂಕ್ಷೆಗಳು ಮುಖ್ಯ. ಪ್ರೀತಿಯಾರಲ್ಲಿ ಹುಟ್ಟುತದ್ದೋ ಅವರೇ ಪ್ರೀತಿಯನ್ನು ತುಂಬಬಲ್ಲರು. ತಮ್ಮ ಮಗಳು/ಮಗ   ತಮ್ಮದೇ ಜಾತಿಯ ಹುಡುಗ/ಹುಡುಗಿ ಪ್ರೀತಿಸಿಲ್ಲ ಅನ್ನುವ ಕಾರಣದಿಂದ ನಿಮ್ಮ ಮನಸ್ಸಿಗೆ ಬಂದವರನ್ನು ಬದಲಿಸಿ ಮದುವೆ ಮಾಡುವ ವಿಕೃತ ವ್ಯವಹಾರ  ಸರಿಯಲ್ಲ. ಅದಕ್ಕಾಗಿ, ಪ್ರೀತಿಸಿದವರನ್ನೇ ಕೈ ಹಿಡಿಯಬೇಕು  ಎನ್ನುವ ಸಂದೇಶವನ್ನು ಸಾರುವುದೇ ಪ್ರೇಮಿಗಳ ದಿನವಾಗಲಿ ಅನ್ನುವುದು ನನ್ನ ಉದ್ದೇಶ.

ಪ್ರೇಮಕ್ಕೂ ಮಿತಿ ಇದೆ ಅನ್ನುವುದನ್ನು ತಿಳಿದಿರಬೇಕಾದ ಸತ್ಯ. ಇಲ್ಲವಾದರೆ, ಒಳ್ಳೆಯದಾಗುವ ಬದಲು ಇನ್ನೇನೋ ನಡೆದು, ಏನೇನೋ ಆಗಿ ಜೀವನ ಕಷ್ಟವಾದೀತು. ಏನೇನೋ ಆಗುವ ಆಚರಣೆಗಳು ಬೇಡ. ಬದಲಾಗಿ, ತಮ್ಮ ಪ್ರೇಯಸಿ/ಪ್ರಿಯಕರಿಂದ ಜೀವನದ ಕುರಿತಾಗಿ ವಿಶಾಲ ಚರ್ಚೆಗೆ ಇಂಥ ದಿನ ವಿಶ್ವಾಶ ಪೂರ್ವಕವಾಗಿ ಬಳಸಿಕೊಂಡರೆ  ಉತ್ತಮ.

ಜಾತಿವ್ಯವಸ್ಥೆಯ ವಿರುದ್ಧ ಹೊರಡಲು ನೀವು ಮಾತ್ರ ಸಕ್ತರು; ನಿಮಗೆ ನಾನು ಹಾರ್ದಿಕವಾಗಿ ಅಭಿನಂದಿಸುತ್ತೇನೆ.