ನನ್ನದು ಸಣ್ಣ ಹಳ್ಳಿ. ಐವತ್ತು ಮನೆಗಳಿರುವ
ಹಳ್ಳಿ. ಊರಿನ ಪ್ರತಿಯೊಂದು ಮನೆಯ ಬಾಗಿಲು ನನಗೆ ಗೊತ್ತು; ಪ್ರತಿಯೊಬ್ಬರ ಜೊತೆ ಒಂದು
ಬಗೆಯ ಸಂಬಂಧವು ನನಗಿದೆ. ಹೀಗಿರುವಾಗ...
ಅವಳು ನಾನು ೭ ನೇ ತರಗತಿಯಲ್ಲಿ ಓದುತ್ತಿರುವಾಗ ನಮ್ಮೂರ ಹುಡುಗನೊಬ್ಬನ ಕೈ ಹಿಡಿದು ಬಂದವಳು;ಅರ್ಥಾತ್ ಮದುವೆಯಾದವಳು. ಆತ ಮಾತ್ರ ಸಕತ್ ಕುಡುಕ. ಮಾವನ ಮನೆಯವರು ಹೆಂಡತಿಗೆ ಹಾಕಿದ ಬಂಗಾರವನೆಲ್ಲ ಕುಡಿದೆ ಬಿಟ್ಟಿದ್ದಾನೆ. ಅದೆಷ್ಟೋ ಬಾರಿ ಬುದ್ದಿ ಹೇಳಿದರು ತನ್ನ ಕುಡಿತ ಮಾತ್ರ ಬಿಟ್ಟವನಲ್ಲ. ಆತನ ಕುಡಿತ ಏನಾದ್ರು ಸ್ವಲ್ಪ ಕಡಿಮೆ ಇದೆ ಅನಿಸಿದರೆ :-ಒಂದು ಅವನಲ್ಲಿ ಹಣವಿಲ್ಲ, ಎರಡನೇದಾಗಿ ಯಾರು ಸಾಲ ಕೊಟ್ಟಿಲ್ಲ ಅಂತಾನೆ ಅರ್ಥ. ಇಂಥಹ ಸಂದರ್ಭದಲ್ಲಿ ಹೆಂಡತಿ-ಮಕ್ಕಳಿಗೆ ದುಡ್ಡಿಗಾಗಿ ಪಿಡಿಸುವುದು ಅವನ ದುರುಳತನದ ವಿಚಾರ. ಹೀಗಿರುವಾಗ ಕಷ್ಟ ಪಾಡಿನಲ್ಲಿ ಬದುಕಿತ್ತಿರುವ ಅವನ ಹೆಂಡತಿಯ ಬದುಕು ಹೇಗಿರಬೇಡ? ಅವಳ ಕಷ್ಟಕ್ಕೆ ಒಂದಿಷ್ಟೂ ಸಾಂತ್ವನ ಹೇಳುವ ಮಂದಿಯಲ್ಲಿ ನಾನು ಒಬ್ಬ.
ಎಂದಿನಂತೆ ನಿನ್ನೆ ಕಾಲ್ ಮಾಡಿ ಮಾತನಾಡುತಿದ್ದಂತೆ.... ಅವಳು ತನ್ನ ವ್ಯಕ್ತಿತ್ವಕ್ಕೆ ನಿಲುಕದ, ನಾನೆಂದು ಅವಳಿಂದ ನಿರಕ್ಷಿಸಿರದ ವಿಚಾರ -ಚುನಾವಣೆ,ಸರ್ಕಾರದ ಕುರಿತಾಗಿ ಹೇಳುತ್ತಿದ್ದಳು.ಅವಳ ಮಾತು ಹೀಗಿತ್ತು:
"ಚುನಾವಣಾ ಆಯಿತು... ರಾಮಣ್ಣ ಅಂತ ಮುಖ್ಯ ಮಂತ್ರಿ ಅಂತೆ... ಅವರು ತಿಂಗಳಿಗೆ 30 ಕೆ. ಜಿ ಅಕ್ಕಿ 30 /- ಗೆ ಕೊಡ್ತಾರಂತೆ.. ಇವಗಲೇ ನಮ್ಮ ಮನೆಯವರು ರೇಶನ್ ಅಕ್ಕಿ ನಂಬ್ಕೊಂಡು ... ದುಡಿದುದ್ದೆಲ್ಲಾ ಕುಡಿತ್ತಾರೆ . ಇನ್ನು 1/- ಗೆ ಅಕ್ಕಿ ಕೊಡ್ತಾರೆ ಅಂದ್ರೆ ಖಂಡಿತ ಅವರು ಕುಡಿದೇ ಸಾಯ್ತರೆ...!. ಸೀರೆಗೆ ಹಾಕುವ ನಾಲ್ಕು ಪಿನ್ 10/- ರೂಪಾಯಿಗೆ ಸಿಗದೇ ಇರುವ ಕಾಲದಲ್ಲಿ 1/- ಗೆ ಅಕ್ಕಿ ಅಂದ್ರೆ ಅದು ಹೇಗೆ ಸಾಧ್ಯ?... ಅದರ ಬದಲಾಗಿ ಮಕ್ಕಳಿಗೆ ಒಂದಿಷ್ಟು ಪುಸ್ತಕ- ಬಟ್ಟೆ ಕೊಟ್ಟರೆ ಒಳ್ಳೆದಾಗ್ತಿತ್ತು ... ಒಟ್ಟಾರೆ ಈ ಕುಡಿತಕ್ಕೆ ನಾನು ಮಾಂಗಲ್ಯನೂ ಕಳ್ಕೋ ಬೇಕೋ ಏನು ?"
ನನಗೆ ಮನಸಿನಲ್ಲಿ ಒಂದು ಕ್ಷಣ ಮೌನ ಆವರಿಸಿತ್ತು. ಹಳ್ಳಿಯ ಹೆಣ್ಣು ಮಗಳಿಗೆ ರಾಜಧಾನಿಯಲ್ಲಿ ಕುಳಿತು ಮಾಡುವ ಒಂದೊಂದು ಕೆಲಸ ಕೂಡ ಎಷ್ಟೊಂದು ನೋವು ಉಂಟು ಮಾಡಬಲ್ಲದು ? ಎಂಬ ಕಲ್ಪನೆ ನನಗೆ ಇದೆ ಮೊದಲ ಬಾರಿಗೆ ಕ್ಷಣ ಮಾತ್ರದಲ್ಲಿ ಮೂಡಿ ಹೋಗಿತ್ತು. ಅವಳು ಕೇಳಿದ ಪ್ರಶ್ನೆಗೆ ನನ್ನಲ್ಲಿ ಉತ್ತರವೂ ಇರಲಿಲ್ಲ...
ಅವಳು ನಾನು ೭ ನೇ ತರಗತಿಯಲ್ಲಿ ಓದುತ್ತಿರುವಾಗ ನಮ್ಮೂರ ಹುಡುಗನೊಬ್ಬನ ಕೈ ಹಿಡಿದು ಬಂದವಳು;ಅರ್ಥಾತ್ ಮದುವೆಯಾದವಳು. ಆತ ಮಾತ್ರ ಸಕತ್ ಕುಡುಕ. ಮಾವನ ಮನೆಯವರು ಹೆಂಡತಿಗೆ ಹಾಕಿದ ಬಂಗಾರವನೆಲ್ಲ ಕುಡಿದೆ ಬಿಟ್ಟಿದ್ದಾನೆ. ಅದೆಷ್ಟೋ ಬಾರಿ ಬುದ್ದಿ ಹೇಳಿದರು ತನ್ನ ಕುಡಿತ ಮಾತ್ರ ಬಿಟ್ಟವನಲ್ಲ. ಆತನ ಕುಡಿತ ಏನಾದ್ರು ಸ್ವಲ್ಪ ಕಡಿಮೆ ಇದೆ ಅನಿಸಿದರೆ :-ಒಂದು ಅವನಲ್ಲಿ ಹಣವಿಲ್ಲ, ಎರಡನೇದಾಗಿ ಯಾರು ಸಾಲ ಕೊಟ್ಟಿಲ್ಲ ಅಂತಾನೆ ಅರ್ಥ. ಇಂಥಹ ಸಂದರ್ಭದಲ್ಲಿ ಹೆಂಡತಿ-ಮಕ್ಕಳಿಗೆ ದುಡ್ಡಿಗಾಗಿ ಪಿಡಿಸುವುದು ಅವನ ದುರುಳತನದ ವಿಚಾರ. ಹೀಗಿರುವಾಗ ಕಷ್ಟ ಪಾಡಿನಲ್ಲಿ ಬದುಕಿತ್ತಿರುವ ಅವನ ಹೆಂಡತಿಯ ಬದುಕು ಹೇಗಿರಬೇಡ? ಅವಳ ಕಷ್ಟಕ್ಕೆ ಒಂದಿಷ್ಟೂ ಸಾಂತ್ವನ ಹೇಳುವ ಮಂದಿಯಲ್ಲಿ ನಾನು ಒಬ್ಬ.
ಎಂದಿನಂತೆ ನಿನ್ನೆ ಕಾಲ್ ಮಾಡಿ ಮಾತನಾಡುತಿದ್ದಂತೆ.... ಅವಳು ತನ್ನ ವ್ಯಕ್ತಿತ್ವಕ್ಕೆ ನಿಲುಕದ, ನಾನೆಂದು ಅವಳಿಂದ ನಿರಕ್ಷಿಸಿರದ ವಿಚಾರ -ಚುನಾವಣೆ,ಸರ್ಕಾರದ ಕುರಿತಾಗಿ ಹೇಳುತ್ತಿದ್ದಳು.ಅವಳ ಮಾತು ಹೀಗಿತ್ತು:
"ಚುನಾವಣಾ ಆಯಿತು... ರಾಮಣ್ಣ ಅಂತ ಮುಖ್ಯ ಮಂತ್ರಿ ಅಂತೆ... ಅವರು ತಿಂಗಳಿಗೆ 30 ಕೆ. ಜಿ ಅಕ್ಕಿ 30 /- ಗೆ ಕೊಡ್ತಾರಂತೆ.. ಇವಗಲೇ ನಮ್ಮ ಮನೆಯವರು ರೇಶನ್ ಅಕ್ಕಿ ನಂಬ್ಕೊಂಡು ... ದುಡಿದುದ್ದೆಲ್ಲಾ ಕುಡಿತ್ತಾರೆ . ಇನ್ನು 1/- ಗೆ ಅಕ್ಕಿ ಕೊಡ್ತಾರೆ ಅಂದ್ರೆ ಖಂಡಿತ ಅವರು ಕುಡಿದೇ ಸಾಯ್ತರೆ...!. ಸೀರೆಗೆ ಹಾಕುವ ನಾಲ್ಕು ಪಿನ್ 10/- ರೂಪಾಯಿಗೆ ಸಿಗದೇ ಇರುವ ಕಾಲದಲ್ಲಿ 1/- ಗೆ ಅಕ್ಕಿ ಅಂದ್ರೆ ಅದು ಹೇಗೆ ಸಾಧ್ಯ?... ಅದರ ಬದಲಾಗಿ ಮಕ್ಕಳಿಗೆ ಒಂದಿಷ್ಟು ಪುಸ್ತಕ- ಬಟ್ಟೆ ಕೊಟ್ಟರೆ ಒಳ್ಳೆದಾಗ್ತಿತ್ತು ... ಒಟ್ಟಾರೆ ಈ ಕುಡಿತಕ್ಕೆ ನಾನು ಮಾಂಗಲ್ಯನೂ ಕಳ್ಕೋ ಬೇಕೋ ಏನು ?"
ನನಗೆ ಮನಸಿನಲ್ಲಿ ಒಂದು ಕ್ಷಣ ಮೌನ ಆವರಿಸಿತ್ತು. ಹಳ್ಳಿಯ ಹೆಣ್ಣು ಮಗಳಿಗೆ ರಾಜಧಾನಿಯಲ್ಲಿ ಕುಳಿತು ಮಾಡುವ ಒಂದೊಂದು ಕೆಲಸ ಕೂಡ ಎಷ್ಟೊಂದು ನೋವು ಉಂಟು ಮಾಡಬಲ್ಲದು ? ಎಂಬ ಕಲ್ಪನೆ ನನಗೆ ಇದೆ ಮೊದಲ ಬಾರಿಗೆ ಕ್ಷಣ ಮಾತ್ರದಲ್ಲಿ ಮೂಡಿ ಹೋಗಿತ್ತು. ಅವಳು ಕೇಳಿದ ಪ್ರಶ್ನೆಗೆ ನನ್ನಲ್ಲಿ ಉತ್ತರವೂ ಇರಲಿಲ್ಲ...
"ಅತ್ತೆಗೊಂದು ಕಾಲ , ಸೊಸೆಗೊಂದು ಕಾಲ" ಅಂತಾರಲ್ಲ ಹಾಗೆಯೇ "ಕುಡಿಯದಿರುವರಿಗೊಂದು
ಸರ್ಕಾರ, ಕುಡಿಯುವರಿಗೊಂದು ಸರ್ಕಾರ" ಎಂದು ಹೇಳಿ, ವಿಷಯಕ್ಕೆ ಕಡಿವಾಣ ಹಾಕಿದೆ.
ಒಂದುಂತು ಸತ್ಯ ..ಎಲ್ಲಿಯ ತನಕ "ಉಚಿತ " ಎನ್ನುವ ಮಾತಿರುತ್ತದೋ ಅಲ್ಲಿಯ ತನಕ ಜನ ಯಾರು ದುಡಿಯುವುದಿಲ್ಲ.ಅದೆಷ್ಟೋ ರೈತರು ಸಾಲ ಮೊನ್ನ ವಾಗುತ್ತದೆ ಎಂದು ಸಾಲ ತೆಗೆದು ಕುಡಿದು ಕುಪ್ಪಳಿಸಿದ ಕತೆಗಳು ನಾನು ಕೇಳಿದ್ದೇನೆ. ಮತ-ರಾಜಕಾರಣ ದೇಶದ ದುಡಿಯುವ ವರ್ಗವನ್ನು ದುಶ್ಚಟಗಳಿಗೆ ಬಲಿಕೊಡುವಂತಿದೆ. ಅಹಿಂದ ಉದ್ಧಾರವೆಂದು ಅವರ ಸಂಪೂರ್ಣ ನಿರ್ನಾಮವಾಗುವಂತಿದೆ. ಆದರೆ ಸತ್ಯ ಗೊತ್ತಾಗಲು ಇನ್ನು ಕೆಲವು ವರ್ಷಗಳು ಬೇಕು...!
ಒಂದುಂತು ಸತ್ಯ ..ಎಲ್ಲಿಯ ತನಕ "ಉಚಿತ " ಎನ್ನುವ ಮಾತಿರುತ್ತದೋ ಅಲ್ಲಿಯ ತನಕ ಜನ ಯಾರು ದುಡಿಯುವುದಿಲ್ಲ.ಅದೆಷ್ಟೋ ರೈತರು ಸಾಲ ಮೊನ್ನ ವಾಗುತ್ತದೆ ಎಂದು ಸಾಲ ತೆಗೆದು ಕುಡಿದು ಕುಪ್ಪಳಿಸಿದ ಕತೆಗಳು ನಾನು ಕೇಳಿದ್ದೇನೆ. ಮತ-ರಾಜಕಾರಣ ದೇಶದ ದುಡಿಯುವ ವರ್ಗವನ್ನು ದುಶ್ಚಟಗಳಿಗೆ ಬಲಿಕೊಡುವಂತಿದೆ. ಅಹಿಂದ ಉದ್ಧಾರವೆಂದು ಅವರ ಸಂಪೂರ್ಣ ನಿರ್ನಾಮವಾಗುವಂತಿದೆ. ಆದರೆ ಸತ್ಯ ಗೊತ್ತಾಗಲು ಇನ್ನು ಕೆಲವು ವರ್ಷಗಳು ಬೇಕು...!