Tuesday, May 14, 2013

ಕುಡುಕನಿಗೊಂದು ಸರ್ಕಾರ...!

ನನ್ನದು ಸಣ್ಣ ಹಳ್ಳಿ. ಐವತ್ತು ಮನೆಗಳಿರುವ ಹಳ್ಳಿ. ಊರಿನ ಪ್ರತಿಯೊಂದು ಮನೆಯ ಬಾಗಿಲು ನನಗೆ ಗೊತ್ತು; ಪ್ರತಿಯೊಬ್ಬರ ಜೊತೆ ಒಂದು ಬಗೆಯ ಸಂಬಂಧವು ನನಗಿದೆ. ಹೀಗಿರುವಾಗ...

ಅವಳು ನಾನು ೭ ನೇ ತರಗತಿಯಲ್ಲಿ ಓದುತ್ತಿರುವಾಗ ನಮ್ಮೂರ ಹುಡುಗನೊಬ್ಬನ ಕೈ ಹಿಡಿದು ಬಂದವಳು;ಅರ್ಥಾತ್  ಮದುವೆಯಾದವಳು. ಆತ  ಮಾತ್ರ ಸಕತ್ ಕುಡುಕ. ಮಾವನ ಮನೆಯವರು ಹೆಂಡತಿಗೆ  ಹಾಕಿದ  ಬಂಗಾರವನೆಲ್ಲ  ಕುಡಿದೆ ಬಿಟ್ಟಿದ್ದಾನೆ. ಅದೆಷ್ಟೋ ಬಾರಿ ಬುದ್ದಿ ಹೇಳಿದರು  ತನ್ನ ಕುಡಿತ ಮಾತ್ರ ಬಿಟ್ಟವನಲ್ಲ. ಆತನ  ಕುಡಿತ ಏನಾದ್ರು ಸ್ವಲ್ಪ ಕಡಿಮೆ ಇದೆ ಅನಿಸಿದರೆ :-ಒಂದು ಅವನಲ್ಲಿ ಹಣವಿಲ್ಲ, ಎರಡನೇದಾಗಿ ಯಾರು ಸಾಲ ಕೊಟ್ಟಿಲ್ಲ ಅಂತಾನೆ ಅರ್ಥ. ಇಂಥಹ ಸಂದರ್ಭದಲ್ಲಿ  ಹೆಂಡತಿ-ಮಕ್ಕಳಿಗೆ ದುಡ್ಡಿಗಾಗಿ ಪಿಡಿಸುವುದು  ಅವನ  ದುರುಳತನದ ವಿಚಾರ. ಹೀಗಿರುವಾಗ ಕಷ್ಟ ಪಾಡಿನಲ್ಲಿ ಬದುಕಿತ್ತಿರುವ ಅವನ ಹೆಂಡತಿಯ ಬದುಕು ಹೇಗಿರಬೇಡ? ಅವಳ ಕಷ್ಟಕ್ಕೆ ಒಂದಿಷ್ಟೂ ಸಾಂತ್ವನ ಹೇಳುವ ಮಂದಿಯಲ್ಲಿ ನಾನು ಒಬ್ಬ.

ಎಂದಿನಂತೆ  ನಿನ್ನೆ ಕಾಲ್ ಮಾಡಿ ಮಾತನಾಡುತಿದ್ದಂತೆ.... ಅವಳು ತನ್ನ ವ್ಯಕ್ತಿತ್ವಕ್ಕೆ ನಿಲುಕದ, ನಾನೆಂದು ಅವಳಿಂದ ನಿರಕ್ಷಿಸಿರದ  ವಿಚಾರ -ಚುನಾವಣೆ,ಸರ್ಕಾರದ ಕುರಿತಾಗಿ ಹೇಳುತ್ತಿದ್ದಳು.ಅವಳ ಮಾತು ಹೀಗಿತ್ತು:
"ಚುನಾವಣಾ ಆಯಿತು... ರಾಮಣ್ಣ ಅಂತ ಮುಖ್ಯ ಮಂತ್ರಿ ಅಂತೆ... ಅವರು ತಿಂಗಳಿಗೆ 30 ಕೆ. ಜಿ  ಅಕ್ಕಿ  30 /- ಗೆ ಕೊಡ್ತಾರಂತೆ.. ಇವಗಲೇ ನಮ್ಮ ಮನೆಯವರು ರೇಶನ್ ಅಕ್ಕಿ ನಂಬ್ಕೊಂಡು ... ದುಡಿದುದ್ದೆಲ್ಲಾ  ಕುಡಿತ್ತಾರೆ . ಇನ್ನು 1/- ಗೆ ಅಕ್ಕಿ ಕೊಡ್ತಾರೆ ಅಂದ್ರೆ ಖಂಡಿತ ಅವರು ಕುಡಿದೇ ಸಾಯ್ತರೆ...!. ಸೀರೆಗೆ ಹಾಕುವ ನಾಲ್ಕು ಪಿನ್ 10/- ರೂಪಾಯಿಗೆ  ಸಿಗದೇ ಇರುವ ಕಾಲದಲ್ಲಿ 1/- ಗೆ ಅಕ್ಕಿ ಅಂದ್ರೆ ಅದು ಹೇಗೆ ಸಾಧ್ಯ?... ಅದರ ಬದಲಾಗಿ ಮಕ್ಕಳಿಗೆ ಒಂದಿಷ್ಟು ಪುಸ್ತಕ- ಬಟ್ಟೆ ಕೊಟ್ಟರೆ ಒಳ್ಳೆದಾಗ್ತಿತ್ತು ... ಒಟ್ಟಾರೆ  ಈ ಕುಡಿತಕ್ಕೆ ನಾನು ಮಾಂಗಲ್ಯನೂ  ಕಳ್ಕೋ ಬೇಕೋ ಏನು ?"

ನನಗೆ ಮನಸಿನಲ್ಲಿ ಒಂದು ಕ್ಷಣ ಮೌನ ಆವರಿಸಿತ್ತು. ಹಳ್ಳಿಯ ಹೆಣ್ಣು ಮಗಳಿಗೆ ರಾಜಧಾನಿಯಲ್ಲಿ  ಕುಳಿತು ಮಾಡುವ ಒಂದೊಂದು ಕೆಲಸ ಕೂಡ ಎಷ್ಟೊಂದು ನೋವು ಉಂಟು ಮಾಡಬಲ್ಲದು ? ಎಂಬ ಕಲ್ಪನೆ ನನಗೆ ಇದೆ ಮೊದಲ ಬಾರಿಗೆ ಕ್ಷಣ ಮಾತ್ರದಲ್ಲಿ ಮೂಡಿ ಹೋಗಿತ್ತು. ಅವಳು ಕೇಳಿದ ಪ್ರಶ್ನೆಗೆ ನನ್ನಲ್ಲಿ ಉತ್ತರವೂ ಇರಲಿಲ್ಲ... 

"ಅತ್ತೆಗೊಂದು ಕಾಲ , ಸೊಸೆಗೊಂದು ಕಾಲ" ಅಂತಾರಲ್ಲ  ಹಾಗೆಯೇ  "ಕುಡಿಯದಿರುವರಿಗೊಂದು ಸರ್ಕಾರ, ಕುಡಿಯುವರಿಗೊಂದು ಸರ್ಕಾರ" ಎಂದು ಹೇಳಿ, ವಿಷಯಕ್ಕೆ ಕಡಿವಾಣ ಹಾಕಿದೆ.

ಒಂದುಂತು ಸತ್ಯ ..ಎಲ್ಲಿಯ ತನಕ "ಉಚಿತ " ಎನ್ನುವ  ಮಾತಿರುತ್ತದೋ  ಅಲ್ಲಿಯ ತನಕ ಜನ ಯಾರು ದುಡಿಯುವುದಿಲ್ಲ.ಅದೆಷ್ಟೋ ರೈತರು ಸಾಲ ಮೊನ್ನ ವಾಗುತ್ತದೆ ಎಂದು ಸಾಲ ತೆಗೆದು ಕುಡಿದು ಕುಪ್ಪಳಿಸಿದ ಕತೆಗಳು ನಾನು ಕೇಳಿದ್ದೇನೆ. ಮತ-ರಾಜಕಾರಣ  ದೇಶದ ದುಡಿಯುವ ವರ್ಗವನ್ನು ದುಶ್ಚಟಗಳಿಗೆ ಬಲಿಕೊಡುವಂತಿದೆ. ಅಹಿಂದ ಉದ್ಧಾರವೆಂದು ಅವರ ಸಂಪೂರ್ಣ ನಿರ್ನಾಮವಾಗುವಂತಿದೆ. ಆದರೆ ಸತ್ಯ ಗೊತ್ತಾಗಲು  ಇನ್ನು ಕೆಲವು ವರ್ಷಗಳು ಬೇಕು...!

Monday, May 13, 2013

ಚುನಾವಣೆ -"ನಾನು ಬೆಂಗಳೂರಿನಿಂದ ಬಂದೆ"

ಕಾರ್ಮಿಕ ದಿನಚಾರಣೆ ನಿಮಿತ್ತ ಸಿಕ್ಕ ರಜೆ,ಮನೆಗೆ ಹೋಗಬೇಕೆಂಬ ತವಕದೊಂದಿಗೆ ಚುನಾವಣೆ ಕಾರಣವನ್ನಿಟ್ಟುಕೊಂಡು ಏಪ್ರಿಲ್ 30 ರಾತ್ರಿಯೇ ಬೆಂಗಳೂರಿನಿಂದ ಹೊರಟಿದ್ದೆ. ನನ್ನ ಊರು ಯಾಣದ ಬಲ ಭಾಗದ ಗುಡ್ಡದ ಮೇಲೆ ಇದೆ . ಹೀಗಾಗಿ ಕುಮಟಾದಲ್ಲಿ ಬಸ್ಸಿಳಿದು, ಸಿರ್ಸಿ ಬಸ್ಸನ್ನು ಹತ್ತಿ, ಯಾಣ ಕ್ರಾಸ್ ಬಳಿ ಯಾವುದಾದರು ವಾಹನ ಸಿಗಬಹುದೇ ಎಂದು ಕಾದು ಕುಳಿತಿದ್ದೆ.

ಚುನಾವಣ ಪ್ರಚಾರಕ್ಕೆ ಅದೆಷ್ಟೋ ಮಂದಿ ಅದೇ ರಸ್ತೆಯಲ್ಲಿ ಓಡಾಡಿದರು. ಅದೆಷ್ಟೋ ಬೈಕ್ ಗಳು ನನ್ನ ಕಣ್ಣ ಮುಂದೆ ಸಾಗಿ ಹೋದವು. ಯಾರು ಕೂಡ ಯಾಣದ ತುದಿಯ ತನಕ ತಲುಪುವವರು ಆಗಿರಲಿಲ್ಲ(೧೬ ಕೀ .ಮಿ ). ಸುಮಾರು ನಾನು ಕ್ರಾಸ್ ಗೆ ಇಳಿದ ಒಂದೂವರೆ ತಾಸಿನ ಬಳಿಕ ಒಬ್ಬ ಯುವಕ ಬೈಕ್ ನ ಮೇಲೆ ಬಂದು ನಾನು ಕುಳಿತ ಸ್ತಳದಲ್ಲಿಯೇ ಬೈಕ್ ನಿಲ್ಲಿಸಿ, ಬಹುಶ ನನ್ನ ಬೆಂಗಳೂರಿನ ಡ್ರೆಸ್, ಶೂಸ್, ಸ್ಟೈಲ್ ಗಮನಿಸಿ ನೀವು ಯಾಣಕ್ಕೆ ಪ್ರವಾಸಿಗರೊ? ಎಂದು ಪ್ರಶ್ನಿಸಿ ಮಾತಿಗೆ ತೊಡಗಿದ. ಹೀಗೆ ಮಾತಿಗೆ ಮಾತು ಬೆಳೆದು, ನನ್ನ ಊರು ಯಾಣ ಸಮೀಪವೆಂದು ತಿಳಿ ಹೇಳಿ, ವಂಶದ ಸಾರವನ್ನೆಲ್ಲ ಹೇಳಿಕೊಂಡ ಮೇಲೆ, ನನ್ನ ತಮ್ಮನಿಗೆ ಪರಿಚಯದವನು ಎಂದು ತಿಳಿದು ಬಂತು. ಜೊತೆಗೆ, ನಮ್ಮೂರಿನ ಮೂಲಕ ಮುಂದಿನ ಯಾವುದೋ ಊರುಗಳನ್ನು ಕೆಲಸ ನಿಮಿತ್ತವಾಗಿ ತೆರಳುವುದಾಗಿ ಹೇಳಿದ ಮೇಲೆ, ನನಗೆ ಸ್ವಲ್ಪ ನನ್ನ ಊರಿಗೆ ಬಿಡುತ್ತಿರಾ ಎಂದು ದೈನ್ಯತೆಯಿಂದ ಕೇಳಿಕೊಳ್ಳಬೇಕಾಯಿತು. ಅವನ ಬೈಕ್ ಹತ್ತಿ ಒಂದು ಕೀ . ಮೀ ಸುಮಾರು ಕ್ರಮಿಸಿದ ಬಳಿಕ ತಾನು ದಾರಿಯಲ್ಲಿ ಸಿಗುವ ಎಲ್ಲ ಮನೆಗಳಿಗೂ ಹೋಗಿ ಹೋಗುವನೆಂದು, ತಾನೊಂದು ರಾಜಕೀಯ ಪಕ್ಷದ ಪ್ರಚಾರಕ್ಕಾಗಿ ಹೋಗುತ್ತಿರುವನೆಂದು ಹೇಳಿದ. ಇವನು ಪ್ರಚಾರ ಮಾಡಿದರೆ ನನಗೇನು, ನಾನು ಯಾವತ್ತು ಹೋಗದ ಹಳ್ಳಿಗಳಿಗೆ ಒಂದು ಪ್ರವಾಸ ದಂತೆ ಎಂದು ಭಾವಿಸಿ, ಅವನ ಪಕ್ಷದ ಪರವಾಗಿಯೇ ಧನಾತ್ಮಕವಾಗಿ ಮಾತುನಾಡುತ್ತ ಸಾಗಿದೆ.( ಬೈಕ್ ಮೇಲೆ ಕುಳಿತುದ್ದಕ್ಕೆ ಅಷ್ಟು ಕೆಲಸವಾದರೂ ನಾನು ಮಾಡಲೇ ಬೇಕಾಗಿತ್ತು). ಹಾಗೆಂದು ನಾನು ಯಾವ ಕಾರಣಕ್ಕೂ ಒಂದು ರಾಜಕೀಯ ಪಕ್ಷದ ಜೊತೆಯಲ್ಲಿ ಗುರಿತಿಸಿಕೊಳ್ಳಲು ಮನಸಿರಲಿಲ್ಲ. ನಾನು ಒಬ್ಬ ಒಳ್ಳೆಯ ಮತದಾರ ಮಾತ್ರವೆಂದು ನಾನು ಭಾವಿಸಿಕೊಂಡವನಾಗಿದ್ದೆ.

ಮೊದಲ ಹಳ್ಳಿಯ ಮನೆಗೆ ಪ್ರವೇಶ ಮಾಡಿದ ಬಳಿಕ, ಬೈಕ್ ಶಬ್ಧಕ್ಕೆ ಆಚೆ-ಇಚೆ ಮನೆಯವರೆಲ್ಲ ಸೇರಲಾರಮ್ಬಿಸಿದರು. ನನ್ನ ಡ್ರೆಸ್, ನನ್ನ ಮೊಬೈಲ್, ನನ್ನ ಶೂ ಇವೆಲ್ಲ ಒಂದುರಿತಿಯಲ್ಲಿ ಪ್ರದರ್ಶನಕ್ಕೆ ಇಟ್ಟಂತೆ ಇತ್ತು ಆ ಸಂದರ್ಭ. ಎಲ್ಲರು ಬಂದು ಸುತ್ತಲು ನೆರದ ಬಳಿಕ, "ನೋಡಿ, ಈ ವರ್ಷ ನಾವು ಈ XYZ ಪಕ್ಷದವರನ್ನು ಆಯ್ಕೆ ಮಾಡಬೇಕೆಂದಿದ್ದೇವೆ. ನೀವೆಲ್ಲ ಇದಕ್ಕೆ ವೋಟ್ ಮಾಡಬೇಕು. ನಿಮಗೆ ರಸ್ತೆ, ರೇಶನ್, ಕರೆಂಟ್ ಎಲ್ಲ ನಮ್ಮ ಪಕ್ಷದವರು ಮಾಡಿಕೊಳ್ಳುತ್ತಾರೆ..(ನನ್ನ ಕೈ ತೋರಿಸುತ್ತ )... ಇವರು ನಿಮಗೆ ಗೊತ್ತಿರಬೇಕಲ್ಲ..? ಇವರದು ಕೂಡ ಇಲ್ಲೇ ಪಕ್ಕದ ಹಳ್ಳಿ...ಇವರು ಬೆಂಗಳೂರಿನಲ್ಲಿ ಇಂಜಿನಿಯರ್ ಸಾಹೇಬ್ರು. ಇವರು ಕೂಡ XYZ ಪಕ್ಷಕ್ಕೆನೇ ಮತ ಹಾಕುದು. ಅದನ್ನು ಹೇಳುದಕ್ಕೆ ಇವರು ಬೆಂಗಳೂರಿಂದ ಅವರು ನಮ್ಮ ಜೊತೆ ಬಂದಿದ್ದಾರೆ . ನಮ್ಮ ಮೇಲೆ ನಂಬಿಕೆ ಬರಲಿಲ್ಲ ಅಂದರೆ ...ನಿಮ್ಮ ಸಮೀಪದವರಾದ ಇವರನ್ನು ನಂಬಿ..." ಎಂದು ಹೇಳಿ, ಕೆಲವು ಆಮಿಷದ ಮಾತುಗಳನ್ನು ತೋಡಿಕೊಂಡರು. ಅವನ ಮಾತು ಮುಗಿದ ಬಳಿಕ, ನಾನು ಹಾಗೇನೆ ಮಾತು ಆಡುತ್ತೇನೆ ಎಂದು ಕೊಂಡಿದ್ದ ಹಳ್ಳಿಯ ಮಂದಿಗೆ, ಒಂದು ರೀತಿಯಲ್ಲಿ ಚುನಾವಣೆಗೆ ಬಂದ ನಟ ನಂತೆ ನನ್ನ ಕಡೆ ನೋಡಿದರು. ನಾನು ಅವನ ಮಾತಿಗೆ ವಿಷ್ಮಯಗೊಂಡು, ನನ್ನ ನೋವು ನುಂಗಿ, ಮೌನವಾದೆ . ನನಗೆ ಮಾತನಾಡಲು ಏನು ಉಳಿದಿರಲಿಲ್ಲ.

ಮುಂದಿನ ಮನೆಗೆಳಿಗೆ ಹೋದ ಮೇಲೆ, ಇದೆ ಪರಿಸ್ಥಿತಿ ನನಗಾಗಬರದೆಂದು, "ನನ್ನನ್ನು ನಿಮ್ಮ ಪ್ರಚಾರ ಕಾರ್ಯಕ್ಕೆ ಬಳಸಿಕೊಳ್ಳಬೇಡಿ" ಎಂದು ತಾಕೀತು ಮಾಡುವುದು ದೈನ್ಯತೆಯಿಂದ ನನ್ನ ಊರಿಗೆ ಬಿಡುತ್ತಿರಾ ಎಂದು ಕೇಳಿಕೊಂಡ ನನ್ನ ಮಾತಿಗೆ ವಿರೋಧಭಾಷವಾಗಿ ಕಾಣುತ್ತಿರುವುದರಿಂದಲೂ, ನಾನೇ ಹೇಗಾದರೂ ಮಾಡಿ ನನ್ನ ಸಮಸ್ಯೆ ನಾನೇ ಬಗೆಹರಿಸಿಕೊಳ್ಳಬೇಕೆಂದು ನಿರ್ಧರಿಸಿದೆ. ಮುಂದಿನ ಮನೆಗೆ ಪ್ರವೇಶಿಸಿದ ಕೂಡಲೇ,"ನಾನು ಯಾಣ ಸಮೀಪದ ಹಳ್ಳಿಯವನು, ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿದ್ದೇನೆ. ಊರಿಗೆ ಬರಲು ಯಾಣದ ಕ್ರಾಸ್ ನಲ್ಲಿ ಬಸ್ಸು ಕಾಯುತ್ತ ಇದ್ದೆ.ಇವರ ಪರಿಚಯವಾಯಿತು.. ಹೀಗಾಗಿ ಇವರ ಜೊತೆ ಬಂದೆ... ನಾನು ಬೆಂಗಳೂರಿಂದ ಬಂದೆ...." (ಈ ಮಾತಿನಲ್ಲಿ ನನಗೂ-ನನ್ನ ಜೊತೆಯಲ್ಲಿದ್ದ ಪ್ರಚಾರಕನಿಗೂ ಯಾವ ರಾಜಕೀಯ ಸಂಬಂಧವಿಲ್ಲ ಎಂದು ಎತ್ತಿ ಹಿಡಿಯುವುದಾಗಿತ್ತು.).

ಹೀಗೆ ಒಂದು ಮನೆಯಿಂದ ಇನ್ನೊಂದು ಮನೆಗೆ ಪ್ರವೇಶಿಸದ ಕೂಡಲೇ, ಅವನ ರಾಜಕೀಯ ಪ್ರಚಾರಕ್ಕಿಂತಲೂ ನಾನು ಬೆಂಗಳೂರಿಂದ ಬಂದುದ್ದೆ ದೊಡ್ಡ ಪ್ರಚಾರವೆನ್ನುವಂತೆ ನನಗೆ ಅನಿಸಲಾರಂಭಿಸಿತು. ಅದೆಷ್ಟೋ ಬಾರಿ ಮೇಲಿನ ಮಾತು ಹೇಳಿದೆನೋ ದೇವರಿಗೆ ಗೊತ್ತು. ಕೊನೆಗೂ ಅವನಿಗೆ ನನ್ನನ್ನು ರಾಜಕೀಯ ದಲ್ಲಿ ಸೇರಿಸಿ ಕೊಳ್ಳಲು ಆಗಲಿಲ್ಲ.

ಬೆಂಗಳೂರುರಾಜಧಾನಿಯಗಿದ್ದರು, ಸ್ವಚ ಬದುಕಿನ ನೆಲೆಯಲ್ಲಿ ಯೋಚಿಸಿದಾಗ ನನ್ನ ಪುಟ್ಟ ಹಳ್ಳಿ, ಮನೆ ಬೆಂಗಳೂರಿನ ವರ್ಣ ರಂಜಿತ ಬದುಕಿಗಿಂತ ಎಷ್ಟೋ ಮೆಲು. ಬೆಂಗಳೂರಿಂದ ನಾನು ಕಳೆದ ಮೂರೂ ಬಾರಿ ಮನೆಗೆ ಹೋದರು ಮನೆಯ ಅಕ್ಕ-ಪಕ್ಕದವರಿಗೂ ನಾನು ಬೆಂಗಳೂರಿನಲ್ಲಿದ್ದಿನೋ ... ಮಂಗಳೂರಿನಲ್ಲಿದ್ದಿನೋ... ತಿಳಿಯದಾಗಿತ್ತು. ಈ ಬಾರಿ ಮಾತ್ರ ನಾನೇ ಚುನಾವಣೆಯಲ್ಲಿ ಪ್ರಚಾರದ ಹಾಗೇನೆ , "ಬೆಂಗಳೂರಿನಿಂದ ಬಂದೆ" ಎಂಬ ಘೋಷ ವಾಕ್ಯದೊಂದಿಗೆ ಪ್ರಚಾರ ಮಾಡಿದ ಹಾಗಿತ್ತು. ಕೊನೆಗೂ ನಾನು ಸ್ವತಂತ್ರ ಅಭ್ಯರ್ತಿಯಾಗಿ ಗುರುತಿಸಿಕೊಂಡೆ.

ಆದರೆ, ಅದೆಷ್ಟೋ ಹಳ್ಳಿಯ ಮಂದಿ ನನ್ನ ಕುರಿತಾಗಿ " ಬೆಂಗಳೂರಿಗೆ ಹೊದುದ್ದಕ್ಕೆ ಅವನಿಗೆ ಸೊಕ್ಕು ನೋಡಿ" ಅಂದುಕೊಂಡರೋ ತಿಳಿಯದು.

ಅಡುಗೆ ಕಲೆ..!

ಬಹುಶ ನನ್ನ resume ದಲ್ಲಿ ನಾನು ಹೊಸ skill update ಮಾಡಬೇಕಾಗಿದೆ.I know self cooking ..!
ನಾವೆಲ್ಲಾ ಅಡುಗೆ ಕೆಲಸ ಅಂದರೆ ಅದು ಹೆಣ್ಣಿಗೆ ಮಾತ್ರ ಸೀಮಿತ ...ನಮ್ಮ ಕೆಲಸ ಏನಿದ್ರೂ ತಟ್ಟೆಯಲ್ಲಿ ಅನ್ನ ಹಾಕಿದರಿಂದ -ಹೆಚ್ಚೆಂದರೆ ತಟ್ಟೆ ತೊಳೆಯುವತನಕ ಮಾತ್ರ ಅಂತ ಭಾವಿಸಿರುತ್ತೇವೆ. ಮಣಿಪಾಲ ದಲ್ಲಿ ಒಂದು ವರ್ಷದಿಂದ ಎಲ್ಲ ವ್ಯವಸ್ತೆ ಇದ್ದರು ಒಂದು ದಿಂದ ಸಹ ಅಡುಗೆ ಮಾಡಿ ಊಟ ಮಾಡಿರಲಿಲ್ಲ. ಆದರೆ ಬೆಂಗಳೂರಿನ ಪರಿಸ್ಥಿತಿ ನನ್ನ ಅಡಿಗೆ ಮನೆಯಲ್ಲೂ ಪಳಗ ಬೇಕಾದ ದಾರಿಗೆ ನಾಂದಿಯಾಯಿತು . ಆದರೆ ನನಗೆ ಸಂತೋಷವಿದೆ .
ನಾವು ಬೈಕು-ಕಾರು ಓಡಿಸುವುದು, ಇಜಾಡುವುದು ಇತ್ಯಾದಿಗಳನ್ನ "emergency ಬೇಕಾಗುತ್ತೆ ..ಮಗಾ ..!" ಎಂದು ಹೇಳಿಕೊಂಡು ಕಲಿತಿದ್ದೇವೆ . ಆದರೆ ಅಡುಗೆ ಮಾತ್ರ emergency ಗು ಬೇಕಾಗುತ್ತೆ ಅಂತ ಯಾಕೆ ಅನಿಸಲೇ ಇಲ್ಲಿಯ ತನಕ? ಇತ್ತಿಚ್ಚಿ ಗೆ ನಮ್ಮ ಸಹೋದ್ಯೋಗಿಯ ಜತೆ ನನ್ನ ಅಡುಗೆ ಸಾಮರ್ಥ್ಯದ ಬಗ್ಗೆ ಜಂಬ ಕೊಚ್ಚಿ ಕೊಳ್ಳುತ್ತಿರುವಾಗ, ಅವರು ಏನು ಹೇಳಿದರು ಗೊತ್ತ ...." ಲೇ .. ನಿನ್ನ ಅದೃಷ್ಟ ಚೆನ್ನಾಗಿದೆ ನೀನು ಇವಾಗಲಾದ್ರೂ ಕಲಿತ ಇದ್ದೀಯ ..? ನಾನೆಲ್ಲ ಬೈಕ್ ಹಿಡ್ಕೊಂಡು ದಿನ ಹೊರಗೆ ಹೋಗ್ತಾ ಇದ್ದೆ ...ಆದರೆ ಮದುವೆ ಆದ ಮೇಲೆ...ನನ್ನ ಕಷ್ಟ ಹೇಳಿದ್ರೆ ..ನನಗೆ ನಾಚಿಕೆ ಅನಿಸುತ್ತೆ ....ನೀನು ಫ್ರೆಂಡ್ಸ್ ಹತ್ತಿರ ಅಡುಗೆ ಕಲಿತ ಇದ್ದೀಯ ...? ಹೆಂಡತಿಯ ಹತ್ತಿರ ಏನ್ ಬೇಕಾದ್ರೂ ಕಲಿ ಬಹುದು ಆದರೆ ಅಡುಗೆ ಮಾತ್ರ ಬೇಡ ಗೊತ್ತ?" ಅಂದರು .
"ಬೆಂಗಳೊರಿನಲ್ಲಿ ಎಲ್ಲ ಹುಡುಗರು ಅಂದುಕೊಳ್ಳುವ ತಪ್ಪು ಕಲ್ಪನೆ ಅಂದರೆ ಮದುವೆಯಾದರೆ ಊಟದ ಸಮಸ್ಯೆ ತಾನಾಗಿಯೇ ನಿಗುತ್ತೆ ಅಂತ. ಅದು ಶುದ್ಧ ತಪ್ಪು . ಹುಡುಗರ ಜತೆ ಹೆಗಲು ಕೊಟ್ಟು ದುಡಿಯುವ ಹುಡುಗಿಯರಿಗೂ ತಮ್ಮದೇ ಜಗತ್ತು, ತಮ್ಮದೇ ನೋವು-ಕಷ್ಟ ಇರುತ್ತೆ ನೋಡು ..ಅವರಿಗೆ ಪ್ರತಿನಿತ್ಯ ಅಡುಗೆ ಮಾಡುವುದಂದರು ಬೇಸರ ಅಲ್ವಾ ..?. ಆದರೆ ಜತೆಗೆ ಬರುವ ಶೀತ-ನೆಗಡಿ, ಓವರ್ ವರ್ಕ್ ಲೋಡ್, ಅಪ್ಪ ಮನೆಯ ಕಾಲ್ ಅಂತ ಎಷ್ಟೋ ಸಲ ಕೈ ಕೊಡ್ತಾರೆ ಗೊತ್ತ ? ಊಟದ ಸಮಸ್ಯೆ ಗೊತ್ತಾಗುವ ಹೊತ್ತಿಗೆ ರಾತ್ರಿಯಾಗಿರತ್ತೆ ? ಊಟ ಎಲ್ಲಿ ಹುಡುಕುತ್ತಿಯಾ ? ನಾನು ಹೆಂಡತಿಯ ಬಳಿ ಅಡುಗಿ ಕಲಿತಿದ್ದೇನೆ ...ಅಡುಗೆ ಏನು ಸಾಮಾನ್ಯ ಅಂತ ತಿಳಿಯ ಬೇಡ ... ಉಪ್ಪು ಖಾರ ಎಲ್ಲ ಕೂಡಿಸುವ ಕಲೆ ಸಣ್ಣದಲ್ಲ. ಅಪ್ಪಿ ತಪ್ಪಿ ಹೆಂಡತಿಗೆ ಇಷ್ಟ ವಾಗದ ಅಡುಗೆ ನಡೆದು ಹೋಗಿ(ಮಾಡಿದ್ದಲ್ಲ ) ಬಿಟ್ಟರೆ...ಊಟದ ಗೋಳು ಬೇರೆ... ನಮ್ಮ ego ಮೇಲೆ ಹೆಂಡತಿಯ ದಾಳಿ ಬೇರೆ... ಚೆನ್ನಾಗಿ ಇವಗಲೇ ಕಲಿತುಕೋ ..ಗೆಳೆಯರ ಮೇಲೆ ಅಡುಗೆಯ ಟೆಸ್ಟ್ ಕೇಸ್ ಮಾಡಬಹುದು...ಹೆಂಡತಿ ಮೇಲೆ ಆಗಲ್ಲ ಕಣಯ್ಯಾ ..."

ಹೌದು, ಹಿಂದೆ ಮನೆ ಅಂದರೆ ಅಪ್ಪ-ಅಮ್ಮ,ತಂಗಿ-ನಾದಿನಿ- ಅತ್ತಿಗೆ ಯಾರಾದ್ರೂ ಇದ್ದು ಅಡಿಗೆ ಸಹಾಯವಾಗುತಿತ್ತು. ಒಬ್ಬರು ಕೈ ಕೊಟ್ಟರು ಇನ್ಯಾರಾದರೂ ಅನುಕೂಲಕ್ಕೆ ಬರುತಿದ್ದರು. ಆದರೆ ಇವತ್ತು ಬೆಂಗಳೂರು ನಂತ ನಗರದಲ್ಲಿರುವ ಬೆಂಕಿ ಪೆಟ್ಟಿಗೆಯಷ್ಟು ಚಿಕ್ಕ ಮನೆಯಲ್ಲಿ ಗಂಡ ಹೆಂಡತಿನೇ ಭಾರ ವಾಗಿರುವಾಗ ಬೇರೆಯವರನ್ನು ಕರೆಯುವುದಾದರೂ ಹೇಗೆ ?

ಅಡುಗೆ ಅಂದರೆ -ಕೇವಲ ತಿನ್ನುವ ಪರಿಕರಗಳ ತಯಾರಿಕೆ ಮಾತ್ರ ಅಲ್ಲ...ಒಮ್ಮೆ ಅಡುಗಿ ಮುಗಿಸಿದ ಮೇಲೆ ಮತ್ತೊಮ್ಮೆ ಅಡುಗೆ ಮನೆಗೆ ಹೋದಾಗ ಮೂಗು ಹಿಡಿಯುವ ಪರಿಸ್ಥಿತಿ ಇರಬಾರದು. ಅಚ್ಚು ಕಟ್ಟಾಗಿ ಪಾತ್ರೆ ಗಳನ್ನೂ ಒರಾಣವಾಗಿಸಿ ಇಡುವುದು ಬಹಳ ಮುಖ್ಯ. ಒಟ್ಟಾರೆ ಅಡುಗೆ ಮನೆಯಲ್ಲಿ ಊಟ ಮಾಡಿ ಅನುಭವಿದ್ದರು, ಅಡುಗೆ ಮಾಡುವ ಅನುಭವ ಹೊಸತು. ಅಡುಗೆ ಮನೆಯ ಅನುಭವ ೧ ತಿಂಗಳು.
Kitchen Guruji-Mallikarjun A Biradar and Chetan Hoskoti

ರಾಜಧಾನಿಗೆ ಬಂದಾಗ..!

ನಾನು ನನ್ನ ಹಳ್ಳಿಗಿಂತಲೂ ಅತಿ ಹೆಚ್ಚು ಪ್ರೀತಿಸಿದ ಸ್ಥಳ ಇದ್ದರೆ ಅದು ಉಡುಪಿ. ಉಡುಪಿಯ ಕಲೆ-ಸಂಸ್ಕೃತಿ-ಆಹಾರ ನನ್ನ ಹೃದಯದಲ್ಲಿ ಬಹುದೊಡ್ಡ ಸ್ಥಾನ ಪಡೆದಿರುವ ಸಂಗತಿಗಳು. ಹಿಗುರುವಾಗ-ರಾಜಧಾನಿ ಬೆಂಗಳೂರಿಗೆ ಒಲ್ಲದ ಮನಸ್ಸಿನಿಂದ ಬಂದವನು ನಾನು. ಇವತ್ತು ಸುಮಾರು ದಿನಗಳು ಕಳೆದು ಹೋದವು.
ರಾಜಧಾನಿಯ ಧೂಳು, ವಾಹನ ಸಂದಣಿ, ಸ್ವಲ್ಪವೂ ಹೃದಯ ಬಿಚ್ಚದ(ಮಾತಾಡದ) ಜನ ನೋಡಿ ಯಾವ ನರಕಕ್ಕೆ ನಾನು ಬಂದೆ ಅಂದುಕೊಂಡಿದ್ದೆ ಮೊದಲ ದಿನಗಳಲ್ಲಿ. ಬೆಂಗಳೊರಿನಲ್ಲಿ ಬದುಕು ಅನ್ನುದು ಒಂದು ಇದೆಯಾ ? ಇವರೆಲ್ಲ ಯಾಕೆ ಹುಚ್ಚಾರ ಹಾಗೆ ರಾತ್ರಿ ಹಗಲು ರಸ್ತೆಯ ನೂಕು-ನುಗ್ಗಲಿನಲ್ಲಿ ಕಾಲ ಕಳೆಯುತ್ತಿದ್ದಾರೆ ಅನ್ನುವ ಪ್ರಶ್ನೆ ಕೆಲವೊಮ್ಮೆ ನಿದ್ದೆಯಲ್ಲೂ ಕನಸುಗಳಾಗಿ ಕಾಣಿಸಿದ್ದುಂಟು. ಇಂತ ವಿಚಿತ್ರ ಸ್ಥಿತಿಯಿಂದ ಯೋಚಿಸುತಿದ್ದ ನಾನು ಇವತ್ತು ಧೂಳನ್ನು ಉಸಿರಾಡುತ್ತಾ....ವಾಹನಗಳ ಶಬ್ಧವನ್ನು ಜೋಗುಳವೆಂದೆ ಭಾವಿಸಿ ದಿನದ ಎರಡು ತಾಸು ನಿದ್ರೆ ಮಾಡುತಿದ್ದೇನೆ. ಉಡುಪಿಯಲ್ಲಿ ನಾನು ಆಲೋಚಿಸಿತ್ತಿದ್ದ ಬದುಕಿಗೂ ಇಲ್ಲಿರುವ ಬದುಕಿಗೂ ವತ್ಯಾಸವಿದೆ. ಬದುಕು ನಾಟ್ಯ-ಸಂಗೀತದಷ್ಟು ಸುಲಭವಲ್ಲ. ಇಲ್ಲಿಯ ಬದುಕಿನ ವಿವಿಧ ಅಂಗಗಳ ಕುರಿತಾಗಿ - ನಾನು ಅನುಭವಿಸಿದ್ದು, ಕೇಳಿದ್ದು, ಜನ ಹೇಳಿದ್ದು -ಬರೆಯುತ್ತೇನೆ.

ನಿರೀಕ್ಷಿಸಿ ಮುಂದಿನ ಅಂಕಣದಲ್ಲಿ ..