Saturday, November 24, 2012

ಪ್ರೇಮಗೀತೆಗೊಂದು ಷರಾ ಬರೆದ ಕೂಲಿ

ನಾನು ಒಮ್ಮೆ ಸ್ವರ್ಣ ನದಿಯ ತೀರದಲ್ಲಿ  ಹೋದಾಗ ಪ್ರೇಮ ವಂಚಿತ ಮಣಿಪಾಲದ ವಿದ್ಯಾರ್ಥಿ ಭೇಟಿಯಾಗಿದ್ದ. ಶಾಂತ ನದಿಯ ತೀರದಲ್ಲಿ ನನ್ನ ಭಾವಚಿತ್ರ ತೆಗೆಯಲು ಅವನಲ್ಲಿ ಸಹಾಯ ಕೇಳಿದಾಗ ಅವನು ನನ್ನ ಜೊತೆ ಮಾತು-ಕತೆ ನಡೆಸಿ ತನ್ನ ಬದುಕು ವಿವರಿಸಿದ.  ಆ ಕತೆಯನ್ನು ಆಧಾರಿಸಿ ಒಂದು ಲಹರಿಯಲ್ಲಿ ಮುಳುಗಿ ಈ  ಕತೆ ನಿರೂಪಕ ಬರೆದೆ.
ಈ ಕವನದಲ್ಲಿ ಪ್ರೇಮಿಯು  ಗೆಳತಿಯಿಂದ  ದೂರವಾಗಿ ಏಕಾಂಗಿಯಾಗಿ ಹೋಗುತಿರಲು ಒಬ್ಬ ಕೂಲಿಯ  ಹತ್ತಿರ ಕುಡಿಯಲು ನೀರು  ಕೇಳುತ್ತಾನೆ. ದಿಗ್ಭ್ರಾಂತ ಪ್ರೇಮಿಗೆ ಅವನು ಜೀವನದ ಸಲಹೆ ಕೊಟ್ಟು ವಿದ್ಯಾರ್ಥಿಯನ್ನು ಉದ್ಧರಿಸುತ್ತಾನೆ.

ನೋಡಿ ತರುಣಿಯ ಮೊಗವ
ಮೋಡ ಕವಿದಂತಾಗಿ ಮನಕೆ
ಮೂಢ ಭಾವವು ಜನಿಸಿರೆ...
ಎಡ ಬಲದಲಿ ಕಂಡನು ವಿನಾಶವ....||1||

ಅರಿಯದಾಯಿತು ಹಣೆಬರಹವ
ಹರ -ಹರಿ -ಗುರುಗಳ ನೆನೆದು
ತಿರುವಂತಾಯಿತು ಜಗದಗಲ
ಬರಿದಾಯಿತು ಬದುಕೆನ್ನುತ .....||2||

ಅಲ್ಲಿ ಸಿಕ್ಕನು ಶಾಂತ ಸ್ವರೂಪ
ಜಲ್ಲಿ-ಕಲ್ಲುಗಳ ಯಂತ್ರ ನಿರೂಪಕ
ಬಲ್ಲಿದವಗೆ ಏನು ಗೊಳ್ ? ಎಂದು ಪ್ರಶ್ನಿಸಿ
ಚೆಲ್ಲಿದನು ತನ್ನ ಸಹಾಯ ಹಸ್ತವ....|| 3||

ಏನು ಹೇಳಲಿ ಬಂಧುವೇ ?
ಬಾನಿಗೆ ಏಣಿ ಕಟ್ಟಲು ಹಾತೊರೆದು
ಮಾನ ಕೆಳೆದು ಹೋಯಿತಲ್ಲೋ
ಘನ ಬದುಕಿ ಬರಿದಾಯಿತಲ್ಲೋ ..||4||

ಮೌನ ಯಾನವು ಲೇಸೆಂದು
ನಾನಿತ್ತ ಪೋಪಿರೆ ನಿನ್ನ ಕಂಡೆ
ಪಾನಿಯಗಳನಿತ್ತು ಸಲಹಿರೆ
ಜನಾರ್ಧನನು ಕರುಣಿಪ ನೆಂದ ..||5|

ಕೂಲಿಯು ನೀರನ್ನು ಕೊಟ್ಟು
ತಲೆಯಲ್ಲ ಕೆದಕುತ್ತ ಭಾವುಕನಾಗಿ
ಲಲನೆಯ ಒಲವಿಗೆ  ಬರಿದಾದ
ಸೋಲ್ಲಂಗಳ ಕೇಳುತ ನಿಂತ ....||6||


ಮೂರು ವರ್ಷಗಳ ಹಿಂದೆ
ಯಾರು ಎಂದೇ ತಿಳಿಯದೇ
ವರ ಕನ್ಯೆ ಎಂದು ಭಾವಿಸಿ
ಜಾರಿ ಹೋದೇನು ಅವಳತ್ತ ...||7||

ಪ್ರೀತಿಯೇ ಕುರುಡು ಅಂತರಲ್ಲವೇ
ಕೀರ್ತಿ-ಬದುಕೇ ಮರೆತು
ಸ್ವಾರ್ಥ ಭಾವವೂ ಮರೆತು
ಶ್ವೇತ ಹೃದಯವು ಅವಳಿಗೆ ತೆರೆದಿಟ್ಟೆ ..||8||

ಬಂದು ಕುಣಿದಳು ಹಗಲು-ಇರುಳು
ಮಂದ ಬುದ್ದಿಗೆ ತಿಳಿಯದಾಯಿತು
ಸೌಂದರ್ಯದ ಸೆಳೆತಗಳ ಭಾವ
ಅಂದೇ ಬದುಕು ತಿರಿಹೋಗಿದೆ .....||9||

ಮಲ್ಪೆಯ ಮರಳಲ್ಲಿ  ಉರುಳಾಡಿ
ಕಲ್ಪೆನೆಯಲ್ಲೇ ಭವಿಷ್ಯ ಕಂಡು
ಸ್ವಲ್ಪವೂ ಯೋಚಿಸದೆ  ಹೋದೆನಲ್ಲ ಇವಳ ವಿ-
ಕಲ್ಪ ಬುದ್ದಿಯ ಬಗೆಯನ್ನು....||10||

ಅಪ್ಪ ಕೊಟ್ಟ ಹಣವನ್ನೆಲ್ಲ ಸುರಿಸಿ
ಲ್ಯಾಪ್ಟಾಪ್ ಅನ್ನು  ಕೊಡಿಸಿಬಿಟ್ಟೆ
ತಪ್ಪು ಅನಿಸಲಿಲ್ಲ ಅಂದು ಆ  ವರ್ತನೆ
ಒಪ್ಪಿ ಕೊಂಡ  ಪ್ರೀತಿ ಯಲ್ಲವೆ...?!..||11||

ಹಂಗೊಯೋ ದಲ್ಲಿ ಊಟ ಮಾಡಿ
ಮಂಗಳೂರಿನಲ್ಲಿ ಸಿನೆಮ ನೋಡಿ
ಇಂಗು ತಿಂದ ಮಂಗ ನಾದೆಲ್ಲೋ
ಹಂಗಿನ ಪ್ರೀತಿ  ನನ್ನ ದಾಯ್ತಲ್ಲೋ...||12||

ಬ್ಯೂಟಿ ಪಾರ್ಲೋರ್   ಕರ್ದೊಯ್ದೆ
ಕ್ಯಾಟ್ ವಾಕ್ ಡ್ರೆಸ್ಸು ನೂ  ತಂದುಕೊಟ್ಟೆ
ನೀಟಾಗಿ  ಬಾಳುವಳು  ಎಂಬ  ಭ್ರಮೆಯಲಿ 
ಸುಟ್ಟು  ಕೊಂಡೆನಲ್ಲೋ  ಹೃದಯ ಮಂದಿರವ  ...||13||

ನೊಂದ ಹೃದಯದ  ಯುವಕನು
ಬೆಂದ ಬಗೆಯನು ತೆರೆದಿಡಲು
ಸಂದ  ಕಾಲವನ್ನು ಮರೆತು
ಗೊಂದಲಗಳ ಅರಿತು ಬದುಕೆಂದ... ||14||

ಕಲಿತವರ ಬವಣೆಯು  ಇಷ್ಟೆಯೋ ..!
ಒಲಿದ ಹೆಣ್ಣು ಮಣ್ಣು ಗುಡಿಸಿದಲೇ   ಬಾಳ
ಲಲನೆಯರ ಸಂಗ  ಯಾತಕ್ಕೆ  ವಿದ್ಯಾರ್ಥಿಗೆ
ಬಲ್ಲವನಲ್ಲ  ಕಲಿಕೆಯ ಒಳಗುಟ್ಟು;ಚಿಂತಿಸುತಲಿ ||15||

ಎನಗಿಲ್ಲ ಅಕ್ಷರ ಲೋಕದ ಜ್ಞಾನ
ಕನಕಾಂಗಿಯಾರನಂತು ನಾ  ಬಯಸಿಲ್ಲ
ಮನದಲಿ ಸೋತಿಹೆನು  ಅರಿಯಲು
ನಿನ್ನ ದುಗುಡ ದುಮ್ಮಾನಂಗಳೆಂದ ...||16||

ಮನದಲ್ಲಿ ನೊಂದು ಬಗೆಯಲ್ಲಿ ಬೆಂದು
ಮೌನದಲ್ಲಿ ಈ  ಪರಿಯಲಿ ಕೊರಗುತಿರೆ
ಅನುಮಾನವೂ ಎನಗೆ ನಿನ್ನ  ಭಾವದಲ್ಲಿ
ತನುವು  ನೀ  ಉಳಿಸಿಕೊಂಬೆ ಎಂಬುದರಲಿ ...||17||

ಬದುಕೆಂಬದು  ದೇವರಾಟವು
ಸದುಪಯೋಗದಲಿ ಕಳೆ  ಕಾಲವ
ಓದುತ ಬರೆಯುತ ಸಾಗುತಿರೆ
ವಿದುರತ್ವವು  ಮರೆಯುವುದೆನ್ನುತ   ||18||

ಬುದ್ದಿವಂತರು ಇವರು ವಿಜ್ಞಾನಿಗಳು
ಸದ್ದು ಮಾಡುವರು ಮಾತುಗಳಲಿ
ಬದುಕಿನ ಅರ್ಥವೇ ತಿಳಿಯದ
ಹದ್ದಿನ ಬಾಳು ಇವರದೇ? ಹರ..ಹರಾ..! ||19||


ಬಡವನಿಗೆ ಹೊಟ್ಟೆಯ ಚಿಂತೆ
ಕೆಡುವವಗೆ  ಒಲವಿನ ಚಿಂತೆ
ಬುಡವೇ  ಇಲ್ಲ ಇವರ  ಬದುಕಿಗೆ
ಒಡನೆ  ಪ್ರೀತಿ ಪ್ರೇಮಕ್ಕೆ ಬಲಿಗಳು...||20 ||

ಅಕ್ಷರ  ಬದುಕಿಗೆ ಆಧಾರ
ಶಿಕ್ಷಣ ಜೀವನಕ್ಕೆ ಸ್ವರ್ಗ
ಲಕ್ಷಣಯುತ ಬದುಕು ಪ್ರಿಯವು
ಚಕ್ಷುಗಲಿರೆ  ತಿಳಿಯಲು ಸತ್ಯವನ್ನು  || 21||
 
ಕಾರ್ಮಿಕನ ಮಾತುಗಳ ತಿಕ್ಷಣ
ಮರ್ಮವನರಿತ  ಭಗ್ನ ಪ್ರೇಮಿಯು
ಕರ್ಮ ಲೋಕದ  ಪರಿಯನ್ನು ಚಿಂತಿಸುತ
ನಿರ್ಮಲ ಬದುಕಿಗೆ  ಆಣೆಯನಿತ್ತ ....|| 22||

ತನ್ನ  ಒಳಗಿನ  ಭಾವ ಶಕ್ತಿಗಳ
ಕನ್ನ  ಹೊಡೆದ ಯುವತಿಗೆ
ಅನ್ನದ  ಋಣ ವಿಲ್ಲ ವೆಂದೆನುತ
ಮನ್ನಿಸುವುದೇ ಲೇಸು - ಲೇಸೆಂದ         || 23||

ಮನೆಯನ್ನು ಸೇರಿದ ತವಕದಲಿ
ಅನುಮಾನಿಸದೆ  ಹೊತ್ತಿಗೆಗಳನ್ನು ತೆರೆದು
ಮನಸ್ಸನ್ನು  ಓದಿನಲ್ಲಿ ಸೇರಿಸಲು
ಜನ-ಮನವ  ಗೆದ್ದು ಬಂದ...||24||

ಪ್ರೀತಿ ಪ್ರೆಮಗಳೇ  ಸುಳ್ಳು
ಕೀರ್ತಿ- ಬದುಕುಗಳು  ಸತ್ಯ
ನರ್ತಿಸುವೆ  ಇಂದು  ನೆನೆದು
ತರ್ಕಿಸಿ ಹಿಂದಿನ ನೋವುಕತೆಗಳನು || 25||

ಗೆಳೆಯರೇ ಕೇಳಿ  ಎನ್ನೆಯ
ಏಳಿಗೆಯ  ಮಾತುಗಳನು
ಬಳಿಕ  ನೀವೇ ಯೋಚಿಸಿ
ಸುಳ್ಳೆಂದು ಅನುಮಾನಿಸಿರೆ   ||26||

ಬೇಡ ಬೇಡ ಲಲನೆಯರ  ಸಂಗ
ಹಾಡಿ  ನಲಿಯೋಣ  ಸುಮ್ಮನೆ
ಜೋಡಿಯಾಗಲು  ಕ್ಷಣಗಳು  ಸಾಕು
ಬೇಡಿಕೊಂಡರು ಸಿಗದೆಂದು ಸ್ವಂತಿಕೆ  ..|| 27||

ಪ್ರೇಮ  ಕಲ್ಪನೆ  ಮಾತ್ರ-ಇದು ಸತ್ಯ
ಕ್ರಮೇಣ  ಸವೆಸುವುದು  ನಿಮ್ಮ ಹೃದಯ
ಪ್ರೇಮ ರೋಗವು ಬಲು ಜಾಡ್ಯ
ಚರ್ಮ ರೋಗದನತಲ್ಲ  ನಿನರಿಯೇ ||28 ||

ಕವಿತೆ ರೂಪದೊಳು  ನಿಮ್ಮ ಹೃದಯ
ಸವಿಯಲು ಕಲ್ಪಿಸಿರೆ ಎನಗೊಂದು
ಅವಕಾಶ ಜೀವನದೊಳು  ತಮಗೆ
ದೇವರು ಕರುಣಿಸಲೆಂದು ಬೇಡಿಕೊಂಬೇನು  || 29||

ಮಂಗಳಂ  ಪಾಡುವೇನು  ಮೊದಲ  ಬರಹಕ್ಕೆ
ಅಂಗಳದೊಳು ಕುಣಿದು  ನಲಿಯುವೇನು
ತಿಂಗಳ ರಾತ್ರಿಯ  ಚಂದದ  ಬೆಳಕಿನಲಿ
ಮಂಗಳವಾಗಲಿ ತಮಗೂ ತಮ್ಮವರಿಗೂ  || 30||

Tuesday, November 13, 2012

ಮಕ್ಕಳ ದಿನಾಚರಣೆ:ಭಾಗ-2

ಮಕ್ಕಳ ದಿನಾಚರಣನೆ ಭಾಗ-1 ರಲ್ಲಿ ನನ್ನ ಕೆಲವು ಬಾಲ್ಯದ ನೆನಪುಗಳನ್ನು ಕುರಿತು ಬರೆದಿದ್ದೆ.
 
ಮಕ್ಕಳು ಅಂದರೆ ಅರಳಿ ನಿಂತ ಹೂವು; ಅತ್ಯಂತ ಜಟಿಲ ಪ್ರಶ್ನೆಗಳ ಆಗರ; ಎಡೆಬಿಡದ ಕುಣಿದಾಟ -ಚೀರಾಟ ; ನಡೆದಿದ್ದೆ ನಾಟ್ಯ; ನುಡಿದುದ್ದೆ  ಹಾಸ್ಯ; ಅದನ್ನೆಲ್ಲಾ  ಹಿಂಬಾಲಿಸಿ  ಬರುವ ಅಳು -ಕಣ್ಣೀರು. ಬಿಸ್ಕುಟ್ ಕೊಟ್ಟರೆ  ಅದು ಬೇಡ; ಅದರ ಪ್ಯಾಕ್  ಕವರೇ ಬೇಕು. ಅಣ್ಣ-ತಮ್ಮ ಇದ್ದರಂತೂ ತಮ್ಮನಿಗಿಂತ ಸ್ವಲ್ಪವೇ ಹೆಚ್ಚು ತನಗೆ ಬೇಕು ಅನ್ನುವ ಅಣ್ಣ; ತನ್ನ ಸಣ್ಣತನದಿಂದಲೇ ತಂದೆ ತಾಯಿಯರ  ಒಲವು ಗಳಿಸುವ ತಮ್ಮ ಎಷ್ಟೋ ಸಾರಿ ತನಗೆ ಬೇಕಾದುದ್ದನ್ನು  ಪಡೆಯುತ್ತಾನೆ. ಅಲ್ಲೊಂದು ಸಣ್ಣ  ಚೀರಾಟ -ಕಣ್ಣೀರು; ಇನ್ನು ಕಣ್ಣೀರು  ಆರುವ  ಮೊದಲೇ ಅಣ್ಣ-ತಮ್ಮ ಅನುಬಂಧವು ಆಟ-ಊಟ ಮುಂದುವರಿಸುತ್ತದೆ.

ಇಂತ ಬಾಲ್ಯದ ದಿನಗಳು ಇಂದು ನನ್ನ ಪಾಲಿಗಂತೂ  ಹೇಳಲಾಗದ -ಎಂದೆಂದೂ ನಟಿಸಲಾಗದ ನನ್ನದೇ ನಾಟಕ. ಅದ್ಭುತ-ನಿಶ್ಚಿಂತ-ಸ್ವತಂತ್ರ ಮನೋಗತಿ ಇಂದು ತಲುಪುವುದು ಅಸಾಧ್ಯವೇ ?  ಹೀಗಾಗಿ ಮಕ್ಕಳ ಬಗ್ಗೆ ನನ್ನಿಂದ ನಿಮ್ಮಲೆರಲ್ಲಿ ಕೆಲವು ಹೇಳಿಕೆಗಳಿವೆ;ಬೇಡಿಕೆಗಳಿವೆ. ಮನ್ನಿಸುತ್ತುರಿ ತಾನೇ?

ನಾನು ಕಂಡಿರುವ ಒಂದು ಅದ್ಭುತ ಜ್ಞಾನವೆಂದರೆ ಜೀವನದಲ್ಲಿ ಸುಖ -ಸಂತೋಷ -ಸಮಾಧಾನಗಳು ಮರೀಚಿಕೆ ಮಾತ್ರ.ಅವುಗಳನ್ನು ಹಿಂಬಾಲಿಸಿ ನಮ್ಮ ಕಾಲಿಗೆ ನಾವು ನೋವು ಮಾಡಿಕೊಳ್ಳುತೇವೆ  ಹೊರತು ಅದನ್ನು ಕೈ ಗೆ ಸಿಗುವುವುದು ಅಸಾಧ್ಯವೇ, ಸಿಕ್ಕರೂ ನಾವು ಹಿಂಬಾಲಿಸಿದ್ದು ಇದನ್ನೇ ಎಂಬ ಪ್ರಶ್ನೆ ಕಾಡುತ್ತದೆ; ಮತ್ತೆ ಓಡುವಂತೆ ಯಾಗುತ್ತದೆ. ಎಷ್ಟೋ ಮಂದಿ  ಅರಳು-ಮರಳು ಸ್ಥಿತಿ ತಲುಪಿದರೂ  ನಮಗೆ ಸಂತೋಷವೇ ಜೀವನದಲ್ಲಿ ಸಿಕ್ಕಿಲ್ಲ ಎಂದು ಕಣ್ಣೀರು ಬತ್ತಿ ಹೋಗಿದ್ದರು ಕಣ್ಣುಗಳನ್ನು ಅದುಮಿಕೊಂಡು ಗದ್ಗದಿತರಾಗಿದ್ದನ್ನು ಕಂಡಿದ್ದೇನೆ. ಹೀಗಾಗಿ ಜೀವನದ ಅತ್ಯಂತ ಸಂತೋಷದ ದಿನಗಳು ಬಾಲ್ಯ ಮಾತ್ರ ಎಂದು ತಿರ್ಮಾನಕ್ಕೆ ಬಂದಿದ್ದೇನೆ. ಪ್ರತಿಯೊಬ್ಬರಿಗೂ(ಮಗುವಿಗೂ) ಇಂತ  ಬಾಲ್ಯ ಪರಿಪೂರ್ಣವಾಗಿ ಅನುಭವಿಸುವ ಅವಕಾಶ ಸಿಗುವಂತಾಗಲಿ; ಅದಕ್ಕೆ ಹಿರಿತನದ ಪಟ್ಟ ಹಿಡಿದಿರುವ ತಾವುಗಳು ಅವಕಾಶ ಕಲ್ಪಿಸಿಕೊಡುವಂತಾಗಲಿ ಎಂದು ಮೊದಲ ಹೇಳಿಕೆ ನೀಡುತ್ತೇನೆ.

 ಮಮಗುವಿಗೆ ಸ್ವಾತಂತ್ರ್ಯ  ಕೊಡಿ. ಅದು ಮಣ್ಣಿನಲ್ಲಿ ಆಡಲಿ; ಗಿಡ-ಬಳ್ಳಿಗಳ ಜೊತೆ ನಿಲ್ಲಲಿ.ನಾಯಿ-ಬೆಕ್ಕು ಜೊತೆ ಬಾಂಧವ್ಯ  ಬೆಳೆಸಲಿ; ಓರಗೆಯ ಮಕ್ಕಳೊಂದಿಗೆ ಆಟ ಆಡಲಿ-ಜಗಳ ಮಾಡಲಿ; ಅವರ ಜಗಳಕ್ಕೆ ತಮ್ಮ ಮಗುವೆಂದು ಯಾವತ್ತು ಅವರನ್ನೇ ಹೊತ್ತುಕೊಳ್ಳದೆ  ಸಾಮಾಜಿಕ ನ್ಯಾಯೇನ ಅವರ ವಾದ-ವಿವಾದಗಳಿಗೆ ತೆರೆ ಎಳೆದು ಬಿಡಿ. ಅದ್ಭುತವಾಗಿ ಕೇಳಲ್ಪಡುವ ಆಶ್ಚರ್ಯಕಕರ ಮಕ್ಕಳ  ಪ್ರಶ್ನೆಗಳಿಗೆ ನೀವು ಎಂದಾದರೂ ಸಮರ್ಥವಾಗಿ ಉತ್ತರಿಸಿದ್ದಿರಾ ?  ಚಂದ್ರ ಯಾಕೆ ಹೇಗೆ ಮೇಲೆ ನಿಂತಿದ್ದಾನೆ ? ಆತ  ಯಾಕೆ ಕೆಳಗೆ ಬೀಳುವುದಿಲ್ಲ? ಹಕ್ಕಿಗಳು ಮರ ಬಿದ್ದರೆ ಏನು ಮಾಡುತ್ತವೆ ? ರಾತ್ರಿ ಮರದ ಕೆಳಗೆ ಮಲಗಿದ ಪ್ರಾಣಿಗಳು ಮರ ಬಿದ್ದರೆ ಹೇಗೆ  ತಪ್ಪಿಸಿ ಕೊಳ್ಳುತ್ತವೆ ? ಈ ಮಳೆಯಲ್ಲಿ ನಾಯಿ ತಿರುಗುತ್ತದೆ ; ದನ ಗಳು ಮೇಯುತ್ತಿವೆ ; ಆದರೆ ನಾನು ಮಾತ್ರ  ಮಳೆಗೆ ಹೋದರೆ ನನಗೆ ನೆಗಡಿ ಯಾಗುತ್ತದೆಯೇ?   ಮಕ್ಕಳಿಗೆ ಸಮರ್ಪಕ ಉತ್ತರ ಅಸಾಧ್ಯವೇ..! ಆದರು ನಾವು ಪ್ರಶ್ನೆಗಳನ್ನು  ನಿಷ್ಪ್ರಯೋಜಕ ಅಂತ ಮಾತ್ರ ಹೇಳ್ಬೇಡಿ.!

ಇಷ್ಟವಿಲ್ಲದ ಶಿಕ್ಷಣದ ಒತ್ತಡ ; ಇಷ್ಟವಾಗುವ ಹವ್ಯಾಸಕ್ಕೆ ತಡೆ ಖಂಡಿತ ತರಬೇಡಿ. ನಿಮ್ಮ ಮಗು ಪ್ರಕೃತಿಯ ಜೊತೆಯಲ್ಲಿ ಬೆಳೆಯುತ್ತ-ಗಮನಿಸುತ್ತ  ಅದುವೇ ಬೇಕಾದನ್ನು ಆಕರ್ಷಣೆಗೆ ಒಳಗಾಗಿ ಏನೋ  ಬೇಕೋ ಅದನ್ನು ಕಲಿಯುವಂತಾಗಲಿ. ನಿಮ್ಮ ಗುರಿ ಕೇವಲ ಮಗುವನ್ನು ಮಾನವ ಮುಖ್ಯವಾಹಿನಿಯತ್ತ ತರುವುದು ಮಾತ್ರ ವಾಗಿರಬೇಕು ಹೊರತು ಪ್ರತಿಯೊಂದು ನಡೆಯು ನಿಮ್ಮಿಂದಲೇ ನಿರ್ದೇಶಿಸಲ್ಪಟ್ಟರೆ ನಿಮ್ಮ ಮಗುವಿನ ಸ್ವಾತಂತ್ರ್ಯ ಕಸಿದ ಹಾಗೇನೆ. ಮಗುವು ಹಾಡುಗಾರನಾಗಲು ತವಿಕಿಸಿದರೆ ನೀವು ಇಂಜಿನಿಯರ್ ಆಗಲೇ ಬೇಕು ಅನ್ನುದು ಸರಿಯಲ್ಲ ಅನ್ನುದು ನನ್ನ ತಾತ್ಪರ್ಯ.

ಆದರೆ ಎಷ್ಟೋ ಮಕ್ಕಳ ಬದುಕು ನಾವು ಅಂದು ಕೊಂಡಂತೆ ಇಲ್ಲ. ಕೆಲವು ಮನೆಗಳಲ್ಲಿ  ಬಡತನ ಯಾವ ಪರಿ ಕಾಡಿದೆಯಂದರೆ  ಅವರಿಗೆ ಹಸಿವಿನ ಕುರಿತಾಗಿ ಚಿಂತೆಯನ್ನು ಉಳಿಸಿದೆ ಹೊರತು ಒಂದು ನಗುವ ಕಾರಣವನ್ನೇ ಕೊಟ್ಟಿಲ್ಲ. ಅಂತ ಮಕ್ಕಳಿಗೆ ಯಾವ ಶಿಕ್ಷಣ ? ಯಾವ ಕಲೆ?  ಏನು ಗುರಿ ಉಳಿದಿತು ಜೀವನದಲ್ಲಿ ?

ನಮ್ಮ ಬುದ್ಧಿವಂತ ಸಮಾಜದ ಇನ್ನೊಂದು ವಿಚಿತ್ರ  ನನ್ನ ತಲೆಯಲ್ಲಿ ಸುಳಿದು ಹೋಯಿತು. ಯಾಕಾದರೂ 'ಹೆಣ್ಣು ಮಗು ಬೇಡ- ಗಂಡು ಮಗು ಬೇಕು' ಎಂಬ ವಾದಕ್ಕೆ ನಮ್ಮ ಬುದ್ಧಿವಂತರೆಲ್ಲ ಗುರಿಯಾಗಿದ್ದರೋ ? ಇದರ ಪರಿಣಾಮವಾಗಿ  ದೇಶದಲ್ಲಿಯೇ  ಹೆಣ್ಣು-ಗಂಡುಗಳ ವಿಷಮ ಅನುಪತದಿಂದಾಗಿ  ಸಾಮಾಜಿಕ  ವಿಷಮಯ ಸ್ಥಿತಿಯೊಂದು ಬಂದು ಹೋದಗುವುದು ಅಂತು ಖಂಡಿತ. ಅದಕ್ಕೆ ' ಆರತಿಗೊಬ್ಬಳು  ಮಗಳು ಕೀರ್ತಿಗೊಬ್ಬ  ಮಗ ' ಎಂಬ ಮಾತು ಪಾಲಿಸಿದ್ರೆನೆ ಚೆನ್ನಾಗಿರುತ್ತೆ ಅನಿಸ್ತಾ ಇದೆ ರೀ..!

 ಈ  ಲೇಖನ ಇಲ್ಲಿಗೆ ನಿಲ್ಲಿಸುತ್ತೇನೆ. ನನ್ನ ಓರಗೆಯ ಮಕ್ಕಳು ದೀಪಾವಳಿಯ ಹಬ್ಬಕ್ಕಾಗಿ ಕೇಪು-ಪಟಾಕ್ಷಿ ಗಳೊಂದಿಗೆ ಹೊರಗೆ ಬಂದಿದ್ದವೆ. ನಾನು ಅವರ ಜೊತೆ ಮಗುವಿನಂತೆ ಪಾಲ್ಗೊಂಡು ಇವತ್ತು ಸಾರ್ಥಕ ಅಂತ ಭಾವಿಸುತ್ತೇನೆ.

Thursday, November 8, 2012

ಮಕ್ಕಳ ದಿನಾಚಾರಣೆ : ಭಾಗ -1

ನಾನು ಚಿಕ್ಕವನಿದ್ದೆ. ನಾನು ಶಾಲೆಯ ಮೆಟ್ಟಿಲು ತುಳಿದುದ್ದು  ನನ್ನ 8 ನೆ ವಯಸ್ಸಿನಲ್ಲಿ. ಹೀಗಿರುವಾಗ  ನನ್ನ ಎಂಟು ವರ್ಷಗಳು-ನಾನು ಅಮ್ಮನ ಮಡಿಲಿನಿಂದ ಜಾರಿ ಕೊಂಡು ತೋಟ-ಗದ್ದೆ ಇತ್ಯಾದಿಗಳನ್ನು ಸುತ್ತುತ್ತ ಇದ್ದೆ. ಆ  ಬದುಕು ಎಷ್ಟೊಂದು ಸ್ವಾತಂತ್ರ್ಯ!.  ಓದು ಎಂದು ಯಾವತ್ತು ನನ್ನ ಅಪ್ಪ-ಅಮ್ಮ ಗದರಿಸಿದ್ದೆ  ಇಲ್ಲ..! ಆ  ವಿಚಾರದಲ್ಲಿ ಹಳ್ಳಿಯ ಅಪ್ಪ-ಅಮ್ಮ ಅಂತ ಹೇಳಿಕೊಳ್ಳುವುದಕ್ಕೆ  ಹೆಮ್ಮೆ ಅನಿಸುತ್ತದೆ.

ನನ್ನ ದಿನಚರಿ ಎಷ್ಟೊಂದು ಸೊಗಸಾಗಿತ್ತು  ಆ  ಕಾಲದಲ್ಲಿ..! ಕೋಳಿಯ ಘಂಟನಾದವೆ  ಏಳಬೇಕು ಎನ್ನುವುದರ ಗಂಟೆ ಯಾಗಿರುತಿತ್ತು.ಅಷ್ಟು ಹೊತ್ತಿಗಾಗಲೇ ಕಾಡಿನ  ಪಕ್ಷಿಗಳ ಸುಪ್ರಭಾತ ಸುರುವಾಗಿರುತಿತ್ತು. ಅಮ್ಮ ಎದ್ದು ರೇಡಿಯೋ ತಿರುವಿದಾಗ -'ಆಕಾಶವಾಣಿ ಧಾರವಾಡ...ಈಗ ಚಿಂತನ...' ಎನ್ನುತ್ತಾ ಮುಂದೆ ವಿವಿಧ ಕಾರ್ಯಕ್ರಮಗಳನ್ನು  ಬಿತ್ತರಿಸುತಿತ್ತು(ಈಗಲೂ  ಇದೆ). ಎಲ್ಲ ನೈಸರ್ಗಿಕ ಕೆಲಸಗಳಿಗೆ ಹೊರ ಹೋಗುವುದು ಹಳ್ಳಿಯ ಸಂಪ್ರದಾಯ. ಸುತ್ತಲು ಇರುವ ಗುಡ್ಡದ ಮೇಲೆ ಹೋದಾಗ  ಕಾಣುವ ಗಿಡಗಳ ಹೂವು ಇತ್ಯಾದಿಗಳನ್ನು ತೆರೆದು ಚೆಲ್ಲುತ್ತ ....ಗುಬ್ಬಿ ಕಂಡರೆ  ಅದು ಹಾರಿದ ಗಿಡದ ಗೊಂಚಲಿನಲ್ಲಿ ಅದರ ಗೂಡು ಇದೆಯೇ ಎಂದು ನೋಡಿ...ಅದು ಮುಂದೆ ಎಲ್ಲಿ ಹೋಗುತ್ತದೆ ಎಂತ ಗಮನಿಸಿ...ವಿಶಾಲ ವಾದ ಬೆಟ್ಟದಲ್ಲಿ ಅದು ಮರೆಯದಾಗಲೇ ಗುಬ್ಬಿಯನ್ನು ಮರೆಯುವನ್ತೆಯಾಗುತಿತ್ತು. ಗುಯಂ  ಎಂದು ಎಲ್ಲಿ ಯಾದರು ಜೇನು ನೋಣ ದ ಝೇಂಕಾರ ಕೇಳಿದರೆ ಸಾಕು...ಜೇನು ಸಂಶೋಧನ ಕಾರ್ಯಕ್ರಮ ಸುರುವಾಗಿಯೇ ಬಿಡುತ್ತದೆ ...ಹೂವು ಬಿಟ್ಟಿರುವ ಮರಗಳಿಗೆ ಎಷ್ಟೊಂದು ಜೇನು ನೊಣಗಳು ಸುತ್ತು ಕೊಂಡಿರುತ್ತವೆ  ಅಂದರೆ  ಅಪ್ಪ- ಅಮ್ಮ ಬಂದು ಅಲ್ಲಿ ಇರುವುದು ಜೇನು ನೊಣ ಮಾತ್ರ; ಜೇನು ಖಂಡಿತ ಇಲ್ಲವೆಂದು ಸಂಶೋಧನ ಕಾರ್ಯಕ್ರಮಕ್ಕೆ ಷರಾ  ಬರದಾಗಲೇ ಒಂದು ಬಗೆಯ ಸಮಾಧಾನ.  ಅಂತು ಇಂತೂ ಬೆಳಗ್ಗಿನ ತಿಂಡಿ ಮುಗಿಸಿ ಅಪ್ಪ -ಅಮ್ಮ ತಮ್ಮ ರೈತತನದ  ಕೆಲಸಗಳಿಗೆ ನಡೆದರೆ ಮನೆಯ ಮುಂದಿನ ಧೂಳಿನಲ್ಲಿ ರಸ್ತೆಗಳನ್ನು ನಿರ್ಮಿಸಿ  ಬಾಳೆ  ಗಿಡದ ದಿಂಡಿನಿಂದ  ಗಾಡಿ ತಯಾರಿಸಿ ಓಡಿಸುತಿದ್ದೆ . ನಾನು ಪ್ಲಾಸ್ಟಿಕ್ ನ ಅಂತಹ ಆಟಿಕೆ ಗಳನ್ನು ನನ್ನ ಬಾಲ್ಯದ ದಿನಗಳಲ್ಲಿ ನೋಡಿಯೇ ಇರಲಿಲ್ಲ. ತೋಟಕ್ಕೆ ನೀರು  ಬಿಡುವ ಕೆಲಸವಂತೂ ಬದಲು  ಯಾವುತ್ತು ಮುಂದೆ . ನಾನೆ ಜಲಪಾತಗಳನ್ನು ನಿರ್ಮಿಸಿ ಅದರಲ್ಲೇ ಸ್ನಾನ ಮಾಡಿಸಿ...ಕೆಲವೊಮ್ಮೆ ಬಟ್ಟೆ ಧರಿಸಯೂ  ಕೆಲೋಮ್ಮೆ ಬೆತ್ತಲಾಗಿಯೂ   ತುಳಿಸಿ ಕಟ್ಟೆಗೆ ಭಾರಿ ಪೂಜೆ ಮಾಡಿದ ದಿನಗಳಿವೆ.   ಇನ್ನು ತೋಟಕ್ಕೆ ಹೋದರೆ ಸಾಕು - ಪೆರ್ಲ ಹಣ್ಣು, ಜಾಮ್ಬಲೇ ಹಣ್ಣ...ಹೆಸರು ತಿಳಿಯದ ಹಲವಾರು ಬಗೆಯ ಹಣ್ಣುಗಳನ್ನು ತಿನ್ನುತಿದ್ದೆ. ಮಧ್ಯಾಹ್ನ ಊಟದ ಬಳಿಕ  ಒಂದು ಸಮಾಧಾನದ ನಿದ್ರೆ ... ಆ ಬಳಿಕ ಮತ್ತೆ ... ಇಂತ ಕ್ರಿಯಾತ್ಮಕ ಚಟುವಟಿಕೆಗಳು  ಮುಗಿಸಿ ಮನೆ ಸೇರುವಾಗ , ಮತ್ತೆ ರೇಡಿಯೋ, " ಆಕಾಶವಾಣಿ ಧಾರವಾಡ...ಕೃಷಿ ರಂಗ ' ಅಂದಾಗಲೇ ಇಂದಿನ ಹಗಲ ಚಟುವಟಿಕೆ ಮುಗಿಯಿತು ಅಂತಾನೆ ಅರ್ಥ.  ಹೀಗೆ ಬರೆಯುತ್ತ ಹೋದರೆ ಇಂತ  ನನ್ನ ಬದುಕು ಹಳ್ಳಿಯಲ್ಲಿ ಎಷ್ಟೋ ಚೆನ್ನಾಗಿತ್ತು ಅಂತ ಈಗ ಅನಿಸುತ್ತದೆ.  

ಎಂಟನೇ  ವರ್ಷದಲ್ಲಿ  ಶಾಲೆ ಸೇರಿ.... ಅಂಗನವಾಡಿಯಂತ ಶಾಲೆ ಸೇರದೆ ಬಾಲ್ಯದ ದಿನಗಳನ್ನು ಪರಿಪೂರ್ಣವಾಗಿ ಕಳೆದೆ ಅನಿಸುತ್ತದೆ. ಆದರೆ ಇಂದಿನ ಮಕ್ಕಳು ಹೇಗಿದ್ದಾರೆ...? ಅವರ ನಗು ? ಅವರ ಸೃಜನಶೀಲತೆಗೆ ಏನಾಗಿದೆ ?
ಇತ್ಯಾದಿ ವಿವರಗಳೊಂದಿಗೆ ಮತ್ತೆ ಬರುತ್ತೇನೆ. ನವೆಂಬೆರ್ 14 -ಮಕ್ಕಳ ದಿನಾಚರಣೆಯ ನಿಮ್ಮಿತ್ತ ಒಂದು ವಿಚಾರಧಾರೆ..

Tuesday, November 6, 2012

ಊಟದ ಮೇಜಿನ ಮೇಲೆ ನಡೆಯುವ ಮದುವೆಗಳು

ಊಟಕ್ಕೆ ಕುಳಿತಾಗ ಬರಿ ಊಟ ಮಾಡುವ ಮಂದಿ ಸಿಗುವುದು ಬಹಳ ಕಷ್ಟ. ಒಂದೊಮ್ಮೆ ಯಾವುದೇ ವಿಷಯದ ಕುರಿತಾಗಿ, ಧನಾತ್ಮಕವಾಗಿ ಮಾತನಾಡಲು ಸಾಧ್ಯವಾಗಿರದಿದ್ದರು, ಊಟದ ರುಚಿಯ ಕುರಿತಾಗಿ ತೆಗಳಿಕೆಯ ಮಾತೊಂದಾದರು ಇರುತ್ತದೆ ಅನ್ನುವುದು ಬಹುಷ್ಯ ಓಂದು ಸತ್ಯ. ನಾನಂತು ಊಟಕ್ಕೆ ಅನ್ನ-ಸಾಂಬಾರುಗಳಿಗಿಂತ ಮುಖ್ಯವಾಗಿ ಮಾತು ಇಷ್ಟ ಪಡುತ್ತೇನೆ. ಏಕಾಂಗಿಯಾಗಿ ಮನೆಯಿಂದ ಆಫೀಸ್ ಸೇರಿದ ಮೇಲೆ, ಆಫೀಸ್ ನ ಕೆಲಸ ಮುಗಿಸಿ ನಗುತ್ತ, ಬೇಡವಾದ, ಆಸಕ್ತಿಯ, ಕುಹಕ, ಅಣಕಿಸುವ, ವಿರೋಧಾಭಾಸದ , ಭವಿಷ್ಯದ ಕುರಿತಾದ ಮಾತುಗಳು ಆಡಲು ಅವಕಾಶ ಸಿಗುವುದು ಆಫೀಸ್ ನ ಮಧ್ಯಾನ ಊಟದ  ಮೇಜು ಮಾತ್ರ. ಎಷ್ಟೋ ಪ್ರಯತ್ನ ಪಟ್ಟು ಓಂದು ಪಾರ್ಟಿ, ಅಥವಾ ಗೆಳೆಯರ ಬಳಗದ ಸೇರ್ಪಡೆ ಅಂದರು ಯಾರದರೊಬ್ಬರು ಕೈ ಕೊಡುವುದು ಅಥವಾ ಊಟದ ಕುರಿತಾಗಿ ಆರ್ಡರ್ ಮಾಡುವುದರಲ್ಲೇ ಸಮಯ ಕಳೆದು ಹೋಗುವುದರಿಂದ  ಆಫೀಸ್ ನ ಮಧ್ಯಾನ ಊಟದ ಟೇಬಲ್ ಓಂದು ರೀತಿಯಲ್ಲಿ ಬಹಳ ಮುಖ್ಯ ಅವಕಾಶವೇ.

ನಾವು ಏನೆಲ್ಲಾ ಮಾತಾಡುತ್ತೇವೆ ? ಅನ್ನುವ ವಿಷಯ ನನಗೆ ಇಚೆಗೆ ನಡೆದ ಕ್ವಿಜ್ ಕಾರ್ಯ ಕ್ರಮದ ನಂತರ ಗಮನಿಸಲು ಪ್ರಾರಂಭ ಮಾಡಿದ್ದೆ. ನಾನು ಕ್ವಿಜ್ ನಲ್ಲಿ ಭಾಗವಹಿಸಲು ನಮ್ಮ ಊಟದ ಟೇಬಲ್ ನ ಚರ್ಚೆಗಳೇ ಆಸಕ್ತಿಯನ್ನು ತಂದು ಕೊಟ್ಟಿತ್ತು ಅಂದರೆ ತಪ್ಪಾಗಲಾರದು. ನಾವು ಅಮೆರಿಕನ್ ಚುನಾವಣೆ, ಭಾರತದ G -ಹಗರಣಗಳು(CWG , 3G , Coal  G ....), IAC (India  Against  Corruption ), IFC (India  For  Corruption ನಾವು ಹಗರಣದಲ್ಲಿ ಬಳಲುತ್ತಿರುವವರಿಗೆ ಕೊಟ್ಟಿರುವ ಹೆಸರುಗಳು ), ಐಫೋನ್, ವಿಂಡೋಸ್- ಲಿನಕ್ಸ್, ಇತ್ತೆಚಿಗೆ ಬಂದ-ತಂದ ಮೊಬೈಲ್, ನಿನ್ನೆಯ ಕ್ರಿಕೆಟ್, ರಿಲೀಸ್ ಅದ ಹೊಸ ಸಿನೆಮಾ. ಕ್ರಿಕೆಟ್ ವಿಷಯ ಬಂದಾಗ ಮಾತ್ರ ನಾನು ಫುಲ್ ಸೈಲೆಂಟ್.!( ಮೂರೂ ಕೋಲು ಓಂದು ಬಾಲು ಎಂತ ದರಿದ್ರ ಆಟ ಅಂತ ಎಷ್ಟೋ ಸರಿ ನೋವು ನುಂಗಿ ಸುಮ್ಮನೆ ಕುಳಿತ್ತಿದ್ದೆ).  ಇವುಗಳ ಜೊತೆಗೆ, ಇತ್ತೇಚೆಗೆ ಬಂದ ಹುಡುಗಿ-ಅವಳ ನಡೆ-ನುಡಿ ಗಳ ಕುರಿತಾಗಿ ಒಂದಿಷ್ಟು ಜೋಕು...! ಲವ್ ವಿಷಯದಿಂದ ಪ್ರಾರಂಭವಾಗಿ ಜಾತಿ ಮತಗಳ ಮೇಲೆ ಹರಿಹಾಯ್ದು  ಮದುವೆ ಎಂಬಲ್ಲಿಗೆ ವಿಷಯ ನಿಲ್ಲಿಸಿ ಸುತ್ತಲು ಕಣ್ಣು ಹರಳಿಸಿ,ಬದಲಾಗದ ಸಾಮಾಜಿಕ ನಿಯಮಗಳಿಗೆ ಒಂದಿಷ್ಟು ಛಿ ಥೂ ಅಂದು ಕೊಂಡು ನಿರ್ಗಮಿಸಿದ ದಿನಗಳು ಎಷ್ಟೋ ಇದ್ದಾವೆ.

 ನಮ್ಮ ಸಮಾಜದ  ಕೆಲವು ನಿಯಮಗಳು ಉತ್ತರವಿಲ್ಲದವುಗಳು. ಶಾಲೆಗಳಲ್ಲಿ ಉಚ್ಚ ಆದರ್ಶಗಳ ಬೋಧನೆ; ನೈಜ ಸಮಾಜದಲ್ಲಿ ನೀಚ ಬಾಳು. ಇದು ಯಾರೋ ನಮ್ಮ ಮೇಲೆ ಹೇರಿದ್ದರೋ ಅಥವಾ ನಾವೇ ಮಾಡಿಕೊಂಡ  ದಾರಿಯೋ ತಿಳಿಯದು. ನಾನು (ನೀವು ಕೂಡ ಇರಬಹುದು) ಹಾಯ್ ಸ್ಕೂಲ್ ಸೇರಿದಾಗ ಎಂಥೆಂತ ನಿಬಂಧಗಳನ್ನು(essay) ಬರೆದಿದ್ದೆ..! 'ಜಾತ್ಯತೀತತೆ ' ಬರೆಯುವಾಗ  ನಾನು ಜಾತಿಯ ವಿರುದ್ಧ ವಾಗಿ ಬರೆದಿದ್ದೆ; ' ವರದಕ್ಷಿಣೆ' ಬರೆಯುವಾಗ  ಅದೊಂದು ಮಹಾ ಪಾಪ.... ವರದಕ್ಷಿಣೆ ಕೇಳುವವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಅಂತಲೂ ಬರೆದಿದ್ದೆ. ಇನ್ನು ಸರ್ವಜ್ಞ , ಪುರಂದರ ದಾಸ, ಕನದಾಸರ ಕುರಿತಾಗಿ ಬರೆಯುವಂತ 10 ಮಾರ್ಕ್ ನ ಪ್ರಶ್ನೆಗಳಿಗೂ ನಾನು ಯಾವತ್ತು ತಪ್ಪು ಉತ್ತರ ಬರೆದಿರಲಿಲ್ಲ. ಕುವೆಂಪು 'ವಿಶ್ವಮಾನವ ಸಂದೇಶ' ವಾರೆ ವ್ಹಾ...!  ಹೇಳುವುದೇನು?
ಇವತ್ತು ಅಂತ ಅದ್ಭುತ ಕ್ಲಾಸ್ ಗಳಲ್ಲಿ  ಉಚ್ಚ ಅಂಕಗಳು ಪಡೆದು, ಜಾತಿ-ಕನ್ನಡ  ಅಂತ  ಕೃಪಾಂಕದಿಂದ ಇಂಜಿನಿಯರಿಂಗ್ ಪಡೆದು , ವಿಶ್ವೆಶ್ವರರಂತೆ ಸಾಧನೆಯ  ದಾರಿ ತುಳಿಯುವುದಾಗಿ  ಊರು -ಮನೆಗಳಲ್ಲಿ ಅಂತಹ ನಂಬಿಕೆ ಹುಟ್ಟಿಸಿ, 5 ಅಂಕಿಗಳ  ಪಗಾರ ಪಡೆದು ಊಟದ  ಟೇಬಲ್ ಮೇಲೆ ನಾವು ಮಾತನಾಡುವ  ಜಾತ್ಯತೀತತೆ  ಎಂಥಹದು  ಗೊತ್ತೇ?
ಊಟದ ಟೇಬಲ್ ನ ಕೆಲವು ಚರ್ಚೆಗಳು ಹೀಗಿವೆ : ಒಬ್ಬನ ಮಾತು -" ನಾನು  ಅವಳನ್ನು ಇಷ್ಟ ಪಡುತ್ತೇನೆ, ಆದರೆ ಅವಳು ನಮ್ಮ ಜಾತಿಯವಳು ಅಲ್ಲ. ನಮ್ಮ ಮನೆಯಲ್ಲಿ ಒಪ್ಪಲು ಸಾಧ್ಯವೇ ಇಲ್ಲ ...!...ಮನೆಯಲ್ಲಿ ಓದದಿದ್ದರೂ ಪರವಾಗಿಲ್ಲ ...ಜಾತಕ ಸರಿಯಿಲ್ಲದಿದ್ದರೂ ಪರವಾಗಿಲ್ಲ  ಕಾಸ್ಟ ಇಸ್ ಮಸ್ಟ್..!".
ಇನ್ನೊಬ್ಬನ ಮಾತು: ' ನಮ್ಮ ಮನೆಯಲ್ಲಿ ಜಾತಿಯ ಬಗ್ಗೆ ಅಂತ ಸಮಸ್ಯೆ ಇಲ್ಲ . ಆದರೆ ಹುಡುಗಿ ಮಾತ್ರ ನಮ್ಮ ಜಾತಿಗಿಂತ ಮೇಲು ಜಾತಿಯವಳಾಗಿರಬೇಕು. ಇಲ್ಲಾಂದರೆ ಒಪ್ಪುವುದಿಲ್ಲ.."
ಮತ್ತೊಬ್ಬನ ಮಾತು :' ಆದರೆ, ನನಗಂತೂ ಇಂತ ಮದುವೆಯಲ್ಲಿ ಇಷ್ಟನೇ ಇಲ್ಲ .... ನಾವೇನಾದರೂ ಲವ್  ಮದುವೆ  ಆದರೆ ಅದು ನಷ್ಟವೇ...! ಯಾಕಂದರೆ, ನೋಡು....ನನ್ನ ತಂಗಿ ಮದುವೆಗೆ ನಮ್ಮ ಮನೆಯಲ್ಲಿ ಬರೋಬರಿ 10 ಲಕ್ಷ ವರದಕ್ಷಿಣೆ ಕೊಟ್ಟಿದ್ದೇವೆ.ಈಗ  ನನ್ನ ಮದುವೆಯಲ್ಲಿ ಅದನ್ನು ರಿಟರ್ನ್ ತರಬೇಕು. ಸಮಾಜದಲ್ಲಿ ಇದು ಒಂತರ ಕೊಡುವ-ತೆಗೆದು ಕೊಳ್ಳುವ  ವಿಚಾರ..ಅದಕ್ಕೆಲ್ಲ್ ತಲೆ ಯಾಕೆ ಕೊಡಬೇಕು....ಮಾವ ಹೇಗೋ ಕಾರ್  ಕೊಡ್ತಾನೆ...!"

 ಹಾಗೆಂದು ಎಲ್ಲರೂ ಇಂಥ ಮಾತುಗಳನ್ನು ಹೇಳುತ್ತಾರೆ ಅಂತಲ್ಲ. "ಜಾತಿ ಮತಗಳಿಗಿಂತಲು ಸುಶಿಕ್ಷಿತ ಸಂಗಾತಿ, ಅರ್ಥ ಮಾಡಿಕೊಳ್ಳುವ ಸಂಗಾತಿ, ಸಮಾನ ಆಸಕ್ತಿ ಹಾಗು ಬದುಕಿನ ಕುರಿತಾಗಿ ಸಮಾನ ವಿಚಾರ ಧಾರೆ ಹೊಂದಿರುವ ಸಂಗಾತಿ ಇದ್ದಾರೆ ಎಷ್ಟು ಒಳ್ಳೇದು..! ದೂರದ ಉರಿನಲ್ಲಿ ಬದುಕುವ ನಮಗೆ ಸ್ವಂತ ಊರಿನ ಸಂಪ್ರದಾಯ ಗಳಿಗಿಂತಲೂ ಆಯಾ ಪ್ರದೇಶದಲ್ಲಿ ಹೊಂದಿಕೊಂಡು ಬದುಕುವುದೇ ಅವಶ್ಯಕವಾಗುತ್ತದೆ. ಜಾತಿಯೇ ಮುಖ್ಯವೆಂದು, ನಮ್ಮ ಪರಿಸರದ ಅರ್ಥವೇ ಆಗದ ಯಾರೊಬ್ಬರನ್ನು ಕಟ್ಟಿಕೊಳ್ಳುವುದು  ಸುಲಭವೇ ? ಇದೆಲ್ಲ ಹೇಗೆ ತಿಳಿಸುವುದು? ಮದುವೆ  ಬಗ್ಗೆ ಮಾತನಾಡಿದರೆ ತಪ್ಪಾಗಿ ಅರ್ಥೈಸುವ ಸಮಾಜ ನಮ್ಮದು. ಜಾತಿ-ಮತ ಕಟ್ಟಳೇ  ಮೀರಿದರೆ ಬುದ್ಧಿಹೀನರಂತೆ ನಮ್ಮನ್ನು ನೋಡಿಕೊಲ್ಲಗುತ್ತಾದೆ.  ಅದಕ್ಕಾಗಿ ಹಣೆಬರಹ ನಂಬಿಕೆಯೇ  ಬಹಳ ಮುಖ್ಯ " ಎಂತೆಲ್ಲ ತೋಡಿ ಕೊಂಡವರು  ಇದ್ದಾರೆ. ಇನ್ನೂ  ಮರ್ಡರ್ ನಂತಹ ಮಹಾನ್ ಕಾಮುಕ ಚಿತ್ರವನ್ನು ಕಣ್ಣು ಮಿಟಿಕಿಸದೇ  ಥೀಯೇಟರ್  ನಲ್ಲಿ ನೋಡಿ, ಮದುವೆ  ಬಗ್ಗೆ ಮಾತನಾಡುವಾಗ ಊಟದ ಟೇಬಲ್ ನಲ್ಲಿ ಸಮಾಜವೇ ಕೆಟ್ಟು ಹೋಗಿದೆ...ಧರ್ಮ ಹಾಳಾಗಿದೆ...ಇವರೆಲ್ಲ ಸಂಸ್ಕೃತಿ ಇಲ್ಲದವರು ಅಂತ ಹೇಳಿ ಹೋದವರು ಇದ್ದಾರೆ.

ನಾನು ನಂಬಿದ ಸಾಹಿತ್ಯ ಸತ್ಯವೇ ? ನಂಬಿದ ವ್ಯಕ್ತಿಗಳು ಸತ್ಯವೇ ? ಸರ್ವಜ್ನ ನಿಂದ  ಹಿಡಿದು ಎಲ್ಲ ಧರ್ಮ ಸುಧಾರಕರು, ಕವಿಗಳು ಜಾತ್ಯತೀತ  ನಿಲುವು ಪ್ರಕಟಿಸಿದ್ದಾರೆ. ' ಜ್ಯೋತಿ ತಾ ಹಿನವೇ ? , ' ಕುಲ ಕುಲ ವೆಂದು....', ಎಂತ ವಾಕ್ಯಗಳ ರಚನೆ ಕೇವಲ ಸಂಗಿತಕ್ಕಾಗಿಯೇ ?  ಹೋಗಲಿ  ಬಿಡಿ - ಹೊಸಕಾಲದ- ಅಧುನಿಕ ಕಾಲದ ವ್ಯಕ್ತಿ  ಮಾನ್ಯ ಸಚಿವ  ನಂದನ ನಿಲಕೆಣಿ  ತಮ್ಮ 'ಇಮ್ಯಾಜಿನ್  ಇಂಡಿಯ ' ಪುಸ್ತಕದಲ್ಲಿ ಕೂಡ ಜಾತಿಯೇ  ನಮ್ಮ ಭಾರತಿಯ ಭವಿಷ್ಯಕ್ಕೆ  ದುರಂತ ಅನ್ನುವಂತೆ ವರ್ಣಿಸಿದ್ದಾರೆ. ಇವರೆಲ್ಲ ಸುಮ್ಮನೆ ಬರಿತಾರೆಯೇ ...!  ಉಡುಪಿಯ ಮಠದಲ್ಲಿ ನಡೆದ  ಹಲವಾರು ಕಾರ್ಯಕ್ರಮಗಳನ್ನು ನೋಡಿದ್ದೇನೆ. ಅಲ್ಲಿ 'ಸರ್ವೇಜನ ಸುಖಿನೋ ಭವಂತು ...! ವಸುದೇವ ಕುಟುಂಬ' ಅಂತೆಲ್ಲ ವರ್ಣಿಸುವ ವಾಕ್ಯ ಗಳು ಕೇವಲ ಕೇಳುಗರ  ಮನವೋಲಿಸುವ ಮೋಹಕ ಮಾತುಗಳೇ? ಇಲ್ಲದೇ ಹೋದರೆ ವೇದಗಳಲಿಲ್ಲದ, ಧರ್ಮಗೃಂಥ ಗಳಿಲ್ಲದ, ಬುದ್ಧಿಜೀವಿಗಳೆಲ್ಲ ಒಪ್ಪದ  ಜಾತಿಯನ್ನು ಸಮ್ಮತಿಸಿ  ಅಂತರ್ಜಾತೀಯ ವಿವಾಹಗಳು ನಿಶಿದ್ಧವೆಂದು ಪಂಡಿತರಾದ ವಿಶ್ವತೀರ್ಥರಂತವರು ಹೇಳಬಹುದೇ?
Oh ...Sorry  education  destroyed  me ...!!!!!!!!!!!! :)