Saturday, December 21, 2013

ಹಳ್ಳಿ ಹುಡುಗ

ಹಳ್ಳಿ ಹುಡುಗ.
     ನೀವು ಯಾವತ್ತಾದರೂ, 'ಲೇ ಹಳ್ಳಿ  ಹೈದ' ಅಂತ ಬೈದಿದ್ದಿರಾ? ಅಥವಾ ಹಿಗಂತಾನು ಜನ ಬೈತಾರೆ ಅಂತ ನಿಮಗೆ ಗೊತ್ತು ತಾನೇ? ಹೌದು, ನಾವು ಬಯ್ಯುವ ಶಬ್ಧಗಳಲ್ಲಿ ಹಳ್ಳಿ ಎಂಬ ಶಬ್ದ ಸೇರಿಸಿ ಬಯ್ಯುವದರ ಹಿಂದೆ ಹಳ್ಳಿಯ ಕುರಿತಾಗಿ, ಹಳ್ಳಿಯ ಜನರ ಕುರಿತಾಗಿ ಇರುವ ಕೀಳು ಭಾವನೆ ಎತ್ತಿ ತೋರಿಸುತ್ತದೆ. ಹಳ್ಳಿಯ ಬಗ್ಗೆ, ಹಳ್ಳಿತನ ಬಗ್ಗೆ ಯಾಕೆ ನಮಗೆ ಅಷ್ಟೊಂದು ಆಕ್ರೋಶ?

ನಾನು ಹಳ್ಳಿಯ ಹುಡುಗ. ಯಾವ ಊರಲ್ಲಿ ರಸ್ತೆ ಇರಲಿಲ್ಲ;ವಿದ್ಯುತ ಇರಲಿಲ್ಲ; ಅಲ್ಲಿಂದ ಬಂದವನು.ಎಲ್ಲರ ಮಧ್ಯದಲ್ಲಿ ನಿಂತಾಗ ಡಿಗ್ರಿ ಯಿಂದ ಇಂಜಿನಿಯರ್ ಅದರೂ, ಬದುಕುತ್ತಿರುವುದು  ಬೃಹತ್ ನಗರದಲ್ಲಾದರು ನನ್ನ ಮನಸ್ಸಿನಲ್ಲಿ ಅಚ್ಚು ಹಾಕಿದಂತ 'ಹಳ್ಳಿತನ' ಬಿಡಲು ಮನಸಾಗುವುದಿಲ್ಲ. ಹಳ್ಳಿತನ ಬಿಟ್ಟು ಹೊರಬಂದು ನಗರದ ಬದುಕಿನೊಂದಿಗೆ ನಾನು ಸೇರಿದ್ದೇನೆ ಎಂದು ತೋರಿಸಿಕೊಳ್ಳಲು ಬಹಳ ಪ್ರಯತ್ನ ಮಾಡಿದ ಮೇಲೆ, ಕೆಲವೊಮ್ಮೆ ನಾನು ಎಲ್ಲೋ ನನ್ನ ಪೂರ್ವ ಪರ ಕಳೆದು 'ನಾನು', 'ನನ್ನದು' ಎಂಬ ಐಡೆಂಟಿಟಿ ಕಳೆದು ಕೊಳ್ಳುತ್ತಿದ್ದೇನೆ ಅನಿಸುತಿತ್ತು.ಆದರೆ ಅದಕ್ಕೊಂದು ದಿನ ಉತ್ತರವೂ ಸಿಕ್ಕಿದೆ.

'ಹಳ್ಳಿತನ' ಎನ್ನುದು ಒಂದು ಕೆಟ್ಟ ನಡತೆಯಲ್ಲ;ಅದು ಅಜ್ಞಾನದ ಸಂಕೇತ ಅಲ್ಲ; ಅದು ನಿಸರ್ಗದ ಜೊತೆಯಲ್ಲಿ ಬದುಕುವ ಪರಿ. ಹಳ್ಳಿಯ ಜನತೆಗೆ ಏನಿಲ್ಲ ಅಂದರು ನಿಸರ್ಗದ ಕುರಿತಾಗಿ ಬಹಳ ತಿಳುವಳಿಕೆ ಇರುತ್ತದೆ. ವೈಜ್ಞಾನಿಕವಾಗಿ ಹವಾಮಾನ ವರದಿ ನಿಡುವ ನಮ್ಮ ಹವಾಮಾನ ಇಲಾಖೆಗಿಂತ ಅದೆಷ್ಟೋ ಬಾರಿ ಹಳ್ಳಿಯ ಜನ ಯಾವುದೊ ಮರದ ಎಲೆಗಳನ್ನು, ಕಾಯಿಗಳ ಸಂಖೆಯನ್ನು ನೋಡಿ ಹೇಳುವ ಮಳೆಯ ವರದಿ  ಅದೆಷ್ಟೋ ನಿಖರವಾಗಿರುತ್ತದೆ. ಬೆಂಗಳೂರಿನಲ್ಲಿ ಕನ್ನಡ ಕಾವಲು ಸಮಿತಿಗಳು(ಕನ್ನಡ ಪರಿಷತ್ ನಂತಹ ಸಂಸ್ಥೆಗಳು) ಸಾವಿರಾರು ಇವೆ. ಆದರೆ ಹಳ್ಳಿಗಳಲ್ಲಿ ಕನ್ನಡ ಭಾಷೆಯನ್ನೂ, ಅದರ ಜನಪದ ಕಲೆಯನ್ನು ಉಳಿಸಿಕೊಂಡು ಬರುತ್ತಿರುದು ಹಳ್ಳಿಯ ಮುಗ್ದ ಮನಸ್ಸುಗಲಿಂದಲೇ.( ಕನ್ನಡದ ನಟ-ನಟಿಯರ ಬಗ್ಗೆ ನನಗಂತೂ ಅದೆಷ್ಟೋ ನೋವು ಇದೆ. ಕನ್ನಡ  ಭಾಷೆಯನ್ನೂ ತಮ್ಮ ದುಡ್ಡಿನ ಮೂಲವಾಗಿಸಿ ಕೊಂಡಿರುವ ಇವರಿಗೆ, TV  ಕ್ಯಾಮೆರಾದ ಮುಂದೆ ಮಾತ್ರ ಇಂಗ್ಲೆಂಡ್ ನಿಂದ ಎರವಲು ಪಡೆದ ಜೆವಿಗಳಂತೆ ವರ್ತಿಸುತ್ತಾರೆ.). ಹಳ್ಳಿಗರ ಇನ್ನೊಂದು ವಿಶೇಷ ಅಂದರೆ ನಿಸರ್ಗದತ್ತವದ ಗಿಡಮೂಲಿಕೆಗಳು. ಬಹಳಷ್ಟು ರೋಗಗಳಿಗೆ ಆಸ್ಪತ್ರೆಗಳಲ್ಲಿ ಸಿಗಲಾರದ ಮದ್ದುಗಳು ಹಳ್ಳಿಗಳಲ್ಲಿ ಸಿಗುತ್ತಿವೆ. ಉದಾಹರಣೆಗೆ ಅಂಕೋಲದ ಬೆಲಾಂಬರ್ ಅಂತ ಹಳ್ಳಿಯಲ್ಲಿ ನಿಡುವ ಮದ್ದು ಪಾರ್ಶ್ವವಾಯು ಪಿದಿತರಿಗೆ ವರದಾನ. ಅದೆಷ್ಟೋ ಹಾವು-ಚೇಳು ಕಡಿತಗಳಿಗೆ ಹಳ್ಳಿಗಲ್ಲಿ ಮದ್ದುಗಳಿವೆ.

ಆದರೆ ನಮ್ಮ ಶಿಕ್ಷಣ ವ್ಯವಸ್ತೆಯಲ್ಲಿ ಒಂದು ದೊಡ್ಡ ದುರಂತವೇ ನಡೆದು ಹೋಗಿದೆ. ಅದು ಏನು? (ಇಲ್ಲಿದೆ ಓದಿ-http://epapervijayavani.in/Details.aspx?id=10503&boxid=142241281). ಶಿಕ್ಷಣದ ಉದ್ದೇಶ ಹಣದ ಸಂಪಾದನೆಯಾಯಿತೆ ಹೊರತು ನಿಜವಾದ ನಮ್ಮ ಸಂಸ್ಕೃತಿಯ  ಪುನರುಜ್ಜೀವನ ಆಗಲಿಲ್ಲ. ಅದಕ್ಕೆ ನಾವು ಪಶ್ಚಾತಾಪ ಪದಬಹುದೇ ಹೊರತು, ಧಿಕ್ಕನ್ನು ಬದಲಾಯಿಸಲು ಸಾಧ್ಯವಿಲ್ಲ. ಹೋಗಲಿ ಬಿಡಿ, ಅಂತು ಹಳ್ಳಿಯಿಂದ ಬೆಂಗಳೂರ್ ನಂತಹ ನಗರಗಳಿಗೆ ಬಂದಿದ್ದೇವೆ.

ಆದರೆ ಇಲ್ಲಿ ಹಳ್ಳಿತನ ಅಂದರೆ ಪೆದ್ದತನವೆಂದೆ ಅರ್ಥ ಕಲ್ಪಿಸುತ್ತಾರೆ. ಯಾವನಿಗೆ ಕಾಫಿ ಮಷೀನ್ ಆಪರೇಟ್ ಮಾಡಲು ಬರುವುದಿಲ್ಲವೋ, ಯಾವನಿಗೆ ಲಿಫ್ಟ್ ನಂಬರ್ ಗೊತ್ತಗುವುದಿಲ್ಲವೋ, ಯಾವನು ಇಡ್ಲಿಯನ್ನು ಸ್ಪೂನ್ ಬಳಸಿ ತಿನ್ನುವುದಿಲ್ಲವೋ, ಯಾವನು ಮಾತಾಡುವಾಗ ಇಂಗ್ಲಿಷ್ ಬಳಸುವುದಿಲ್ಲವೋ, ಯಾವನಿಗೆ ಪಿಜ್ಜಾ ಆರ್ಡರ್ ಮಾಡಲು ಬರುವುದಿಲ್ಲವೋ, ಯಾವನು ಪೆಪ್ಸಿ ಬೇಡ ಅನ್ನುತ್ತಾನೋ ಅವನೇ ಹಳ್ಳಿಯ ಪೆದ್ದ ಅನ್ನುತ್ತಾರೆ. ನಿಜವಾಗಿ ಹಳ್ಳಿಯ ಹುಡುಗ ಅದನ್ನೆಲ್ಲಾ ತಿಳಿದಿರಲೇ ಬೇಕಾ? ಮನುಷ್ಯ ಮಾಡಿದ ಮಷೀನ್ಗಳು ದಿನಕ್ಕೊಂದು ರೀತಿ ಬದಲಾಯಿಸುವಾಗ ಅವನೆಲ್ಲ ತಿಲಿದರಲೇ ಬೇಕು ಅನ್ನುವುದು ಶುದ್ಧ ತಪ್ಪು ಅಥವಾ ಇಂತ ಒಂದು ಮಷೀನ್ ಬಗ್ಗೆ ಗೊತ್ತೇ ಇಲ್ಲ ಎಂದು  ನನ್ನಂತ ಹಳ್ಳಿಯ ಹುಡುಗ, 'ಅಯ್ಯೋ ನನಗೆ ಗೊತ್ತಿಲ್ಲ ಅಲ್ವ' ಅಂತರಿಕವಾಗಿ ನೊಂದು ಕೊಳ್ಳಬೇಕಾದ ಅಗತ್ಯವಿದೆಯಾ? 

ಬೆಂಗಳೂರಿಗೆ ನಾನು ಮೊದಲು ಬಂದಾಗ ಬಹಳಷ್ಟು ವಿಷಯಗಳು ಗೊತ್ತಿರಲಿಲ್ಲ. ಬೇಸ್ಮೆಂಟ್ ಎಂಬ ಪದ  ಹೊಸದಾಗಿತ್ತು. ಆದರೆ ಗ್ರೌಂಡ್ ಫ್ಲೋರ್ ನ ಕೆಳಗಿನ ಫ್ಲೋರ್ ಗೆ ಬೇಸ್ ಮೆಂಟ್ ಎಂದು ಕರೆಯುತ್ತಾರೆ ಎಂದು ಸ್ವಲ್ಪ ಮಟ್ಟಿಗೆ ಅರಿವು ಇತ್ತು. ಆದರೆ ಅದೊಂದು ದಿನ ಬೇರೆ ಕಂಪನಿ ಬಿಲ್ಡಿಂಗ್ ಗೆ ಹೋದಾಗ, ಅಲ್ಲಿ ಅಪ್ಪೆರ್ ಬೇಸ್ಮೆಂಟ್, ಲೋವರ್ ಬೇಸ್ಮೆಂಟ್ ಎಂದಿತ್ತು. ಅಪ್ಪೆರ್ ಬೇಸ್ಮೆಂಟ್ ನಲ್ಲಿ ಕ್ಯಾಂಟೀನ್ ಇತ್ತು. ನನ್ನ ಪ್ರಕಾರ ಲೋವರ್ ಬಸ್ಮೆಂತ್ ಗ್ರೌಂಡ್ ಫ್ಲೋರ್ ನ  ಕೆಳಗೆ ಇದ್ದರೇ, ಅಪ್ಪರ್ ಬೇಸ್ಮೆಂಟ್ top most ಫ್ಲೋರ್ ಗಿಂತ ಮೇಲೆ ಇರಬೇಕು. ಹೀಗಾಗಿ ೧೦ ಅಂತಸ್ತಿನ  ಬಿಲ್ಡಿಂಗ್ ನ ೧೦ ನೆ ಫ್ಲೋರ್ ಗೆ ಹೋಗಿ ಅಪ್ಪರ್ ಬೇಸ್ಮೆಂಟ್ ಹುಡುಕಾಡಿದೆ. ಸಿಗಲಿಲ್ಲ; ಬ್ರೇಕ್ಫಾಸ್ಟ್ ಮಾಡಿರಲಿಲ್ಲ. ನನ್ನ ಹಳ್ಳಿತನ ಬಯಲಾದಿತು ಎಂದು ಕೇಳಲು ಸಾಧ್ಯವಾಗದೆ ಮನೆಗೆ ಬಂದು  ಗೆಳೆಯರಿಗೆ ಕೇಳಿದ್ದೆ.
ನನ್ನ ಹಾಗೆ, ಇಂಥ ತೊಳಲಾಟ ಬಳಷ್ಟು  ಗೆಳೆಯರು ಕೂಡ ಅನುಭವಿಸಿದ್ದರಂತೆ. ಆದರೆ ಹಾಗೆ ನಾಚಿಕೆಯಾಗಿ ಯಾರೊಂದಿಗೂ ಹೇಳಿಕೊಳ್ಳಲಿಲ್ಲ ಅಂತೆ!

ಆದರೆ ಅದೊಂದು ದಿನ, ಬೆಂಗಳೂರಿನ BMS  ಕಾಲೇಜಿನಲ್ಲಿ, 'ಹೊಸ ಕಾಲದ ವೈರುಧ್ಯಗಳು' ಎಂಬ ಚರ್ಚ ಗೋಷ್ಠಿಯಲ್ಲಿ, ಹರೀಶ್ ಹಂದೆಯವರು ಹಳ್ಳಿತನ ಅನ್ನುವುದು ಅಜ್ಞಾನವಲ್ಲ. ಅದು ಒಂದು ಬದುಕುವ ರೀತಿ.ಅಲ್ಲೂ ಮೌಲ್ಯಗಳಿವೆ ಎಂದಾಗ, ನನ್ನ ಮನಸ್ಸಿನಲ್ಲಿದ್ದ ಹಳ್ಳಿಯ ಎಂಬ ಪರದೆ ಹರಿದಿತ್ತು.

ಯಾರು ಏನು ಅನ್ನಲಿ, ಇಡ್ಲಿ ಬರಿಗೈಯಲ್ಲಿ ತಿನ್ನುತ್ತೇನೆ. ನೇರವಾಗಿ ಅಪ್ಪರ್ ಬೇಸ್ಮೆಂಟ್ ಯಾವುದು ಎಂದು ಕೇಳುತ್ತೇನೆ. ನನ್ನ ತನ ಹಳ್ಳಿತನ.

No comments:

Post a Comment