Sunday, September 29, 2013

ರವಿ ಮತ್ತು ಸಿಂಹ...!

ನಾನು ಬರೆಯುತ್ತಿದ್ದದು ರವಿ ಬೆಳೆಗರೇ ಹಾಗೂ ಪ್ರತಾಪ್ ಸಿಂಹರ ಬಗ್ಗೆ. ಅವರಿಬ್ಬರೂ ಒಂದೇ ನಾಣ್ಯದ ಎರಡು ಮುಖಗಳು(ಯಾವತ್ತು ಒಬ್ಬರನೊಬ್ಬರು ಒಪ್ಪಿಕೊಲ್ಲಲಾರರು ಎನ್ನುವ ಅರ್ಥದಲ್ಲಿ).ಆದರೆ ನನ್ನ ಬದುಕಿನಲ್ಲಿ ಒಂದು ಒಳ್ಳೆಯ ಕಲ್ಪನೆಗಳ ಹಿಂದೆ ಈ ಲೇಖಕರ  ಭಾಷೆ, ನುಡಿ ಹಾಗೂ ಒಂದು ಬಗೆಯ ಗೌರವವಿದೆ.

ನಾನು PUC  ಮುಗಿಸಿದ ಬಳಿಕ ಮೆಡಿಕಲ್ ಸೇರಬೇಕೆಂಬ ತುಂಬಾ ಆಸೆ ಇತ್ತು. CET ಯಲ್ಲಿ ಒಳ್ಳೆಯ ರಾಂಕ್ ಗಳಿಸುವ ಮೂಲಕ ಬಳ್ಳಾರಿಯ ಮೆಡಿಕಲ್ ಸೀಟ್ ಸಿಕ್ಕಿದ್ದರು ಸೇರಲು ಸಾಧ್ಯವಾಗದೆ ನಂತರ ಕೆಲವು ಮಹನಿಯರ ಕೃಪೆಯಿಂದ(ಮುಂದೊಂದು ದಿನ -ಅವರಿಗಾಗಿ ಹೊಸ ಲೇಖವನ್ನೇ ಬರೆಯುತ್ತೇನೆ.) ಇಂಜಿನಿಯರಿಂಗ್ ಸೇರಿ, ಜಾಬ್ ಸಿಕ್ಕಿ ಆರು ವರ್ಷಗಳೇ ಕಳೆದು ಹೋದವು.

ಹೀಗಿರುವಾಗ, ನಾನು ಮೆಡಿಕಲ್ ಸೇರಲಾಗದ ನೋವು ನನಗೆ ಇಂಜಿನಿಯರಿಂಗ್ ದಿನಗಳಲ್ಲಿ ಬಹಳ ಕಾಡಿತ್ತು. ಆ ದಿನಗಳ, ಮೆಡಿಕಲ್ ಎಂಬ ನೋವಿನ ಪರಿಣಾಮವಾಗಿ ನನ್ನಲ್ಲಿ ಹುಟ್ಟಿದ ಹುಚ್ಚು ಕಲ್ಪನೆಯೆಂದರೆ ನಾನು ಡಾಕ್ಟರ ಒಬ್ಬಳನ್ನೇ ಮದುವೆಯಾಗಬೇಕು ಎಂದು. ಇಂಜಿನಿಯರಿಂಗ್ ಮುಗಿಯುವತನಕವು ಆ ಕನಸ್ಸು ನನ್ನ ರಕ್ತದಲ್ಲಿ ಇದ್ದೆ ಇತ್ತು. ಆದರೆ ಇಂಜಿನಿಯರಿಂಗ್ ಮುಗಿಸಿ, ಜಾಬ್ ಸಿಕ್ಕಿದ ಮೇಲೆ, ಅಂತ ಹುಡುಗಿಯೊಬ್ಬಳು ಸಿಗುವಳೇ ? ನನಗಾರಾದರು ತಿಳಿದವರು ಇರುವರೇ ಇಂತಲ್ಲ ಲೆಕ್ಕ ಹಾಕಿದಾಗ ಮೆಡಿಕಲ್ ಹುಡುಗಿಯೊಬ್ಬಳು ಈ ಬಡಪಾಯಿಗೆ ಸಿಗುತ್ತಲೇ ಅನ್ನುವ ನಂಬಿಕೆಯೇ ಬರಲಿಲ್ಲ. ಆದರೆ ನನ್ನ ಅಜ್ಜ, ನನ್ನ ಅಪ್ಪ ತನ್ನ ಜೀವಿತಾವಧಿಯಲ್ಲಿ ದುಡಿದುದ್ದನ್ನು ಒಂದೇ ವರ್ಷದಲ್ಲಿ ದುಡಿಯಲು ಸಾಧ್ಯವಿರುವ ನಾನು, ಯಾಕೆ ಒಂದು ಒಳ್ಳೆಯ ಹುಡುಗಿಯನ್ನು ನೋಡಿ ಅವಳಿಗೆ ಮೆಡಿಕಲ್ ಓದಿಸಬಾರದು ಎಂದು ಆಲೋಚನೆಗೆ ಬಿದ್ದೆ. ಆಲೋಚನೆಯೇನೋ ಒಳ್ಳೆಯದು.. ಆದರೆ ಮದುವೆಗೆ ಒಪ್ಪಿಸಿ ....ನಾನು ಸಹಾಯ ಮಾಡುತ್ತೇನೆ ಎನ್ನುವುದು ಹೆಣ್ಣನ್ನು ಕೊಂಡು-ಕೊಂಡಂತೆ, ಮತ್ತು ಸಂಸ್ಕೃತಿಯ ಭಾಷೆ  ದೃಷ್ಟಿಯಿಂದ ಸರಿಯಲ್ಲ ಎನ್ನುವ  ನೋವು ನನಗೆ ಧರ್ಮ ಸಂಕಟಕ್ಕೆ ತೊಡಗಿಸಿತ್ತು. ಆದರು, ಮದುವೆಯ ಬಗ್ಗೆ ಸ್ವಲ್ಪವೂ ಓಪನ್ ಆಗಿ ಮಾತನಾಡಲಾಗದ ಆ ದಿನಗಳಲಿ ನನ್ನ ಗೆಳೆಯನೊಬ್ಬನಿಗೆ ನನ್ನ ಕತೆ ವಿವರಿಸಿದಾಗ, " ಹುಚ್ಚು ಕಲ್ಪನೆ....ಸಹಾಯ ಬೇಕಾದರೆ ಮಾಡು ....ಆದ್ರೆ ಮದುವೆ ಮತ್ತು ಸಹಾಯ ಬೇರೇನೆ ಇರಬೇಕು..." ಹೇಳಿದ್ದಲ್ಲದೆ, ರವಿ ಬೆಳೆಗೆರೆಯವರ "ಹೇಳಿ ಹೋಗು ಕಾರಣ" ಕಾದಂಬರಿಯನ್ನು ಓದುವಂತೆ ಸಲಹೆ ನೀಡಿದ. "ಹೇಳಿ ಹೋಗು ಕಾರಣ" ಕಾದಂಬರಿ ಹೀಗೆ ಒಬ್ಬ ಮೆಡಿಕಲ್ ಹುಡುಗಿಯನ್ನು ಓದಿಸಿದ ಒಬ್ಬ ಹಳ್ಳಿಯ ಬಡ ಹುಡುಗನ ದುರಂತ ಜೀವನವನ್ನು ಅಧರಿಸಿರುವಂತ್ತದ್ದು. ಕೆಲವೊಮ್ಮೆ ಸಾಹಿತ್ಯ-ಪುಸ್ತಕಗಳು ಬದುಕಿನಲ್ಲಿ ಎಂಥ  ಭಾವನಾತ್ಮಕ ವಿಚಾರಗಳಿಗೆ ಉತ್ತರವನ್ನು , ಸಮಾಧಾನವನ್ನು ಕೊಡುತ್ತವೆ ಅನ್ನುವುದುಕ್ಕೆ ಇದು ಒಳ್ಳೆಯ ಉದಾಹರಣೆ.

ಈ ಕಾದಂಬರಿಯ ಮೂಲಕ ನಾನು ರವಿ ಬೆಳೆಗೆರೆಯನ್ನು ಬಹಳ ಪ್ರೀತಿಸಿದೆ. ನಾನು ಅವರ ಬಗ್ಗೆ ಇರುವ "ಹಾಯ್ ಬೆಂಗಳೂರು" ಮೂವಿ ನೋಡಿದೆ. ಮುಕ್ತ ಧಾರವಾಹಿಯಲ್ಲಿ ನ್ಯಾಧಿಶರಾಗಿಯು ನೋಡಿದೆ. ಅವರ 'ಓ ಮನಸ್ಸೇ...!" (ಈಗ ಬಂದಾಗಿದೆ) ಪುಸ್ತಕಕ್ಕೆ  ಪ್ರತಿತಿಂಗಳ ಚಂದದಾರನು ಆಗಿಬಿಟ್ಟೆ. ತಾನು ಪ್ರೀತಿಸಿದ ಹುಡುಗಿಗಾಗಿ ೧೭ ವರ್ಷ ಶೂನ್ಯ ಸಂಪಾದನೆಯೊಂದಿಗೆ, ಶೂನ್ಯ ಲೋಕವನ್ನೇ ಸೃಷ್ಟಿಸಿ,ಕುಡಿತ-ಸಿಗರಟ್ ಗೆ ಬಲಿಯಾಗಿಕಳೆದು ಹೋದ ಆಯುಷ್ಯದ ಕುರಿತ  ಅವರ ಜೀವನಗತಿ ಓದಿ ಮರುಕ ಹುಟ್ಟಿತ್ತು

ದುರದೃಷ್ಟ ವಶಾತ್, ಅವರ ಬದುಕಿನ ಪ್ರತಿಯೊಂದು ಘಟ್ಟವನ್ನು ಅವಲೋಕಿಸುವಾಗ ಅವರು ವಯಕ್ತಿಗವಾಗಿ ಬದುಕಿನ  ಮೌಲಿಕ ವಿಚಾರಗಳಲ್ಲಿ ಕೆಲೋಮ್ಮೆ 'ಸರಿಯಲ್ಲ' ಎನ್ನುವ ವಿಚಾರಗಳನ್ನು ಓದಿದ ಮೇಲೆ ನಾನು ಅತಿಯಾಗಿ ನೋವು ಅನುಭವಿಸಿದೆ. ಇವರು ಬರೆಯುವುದಕ್ಕೂ ಇವರು ಇರುವುದಕ್ಕೂ ವತ್ಯಾಸವಿದೆ ಎಂದಾಗ ಅವರ ಸಾಹಿತ್ಯದ ನಂಬಿಕೆ ಕಳೆದುಕೊಂಡದ್ದು ಸತ್ಯ. ಪ್ರತಿಯೊಬ್ಬ ವ್ಯಕ್ತಿ, ಸಾಹಿತಿ ಬರೆದ ಲೇಖನ ಹಾಗೂ ಅವನ ಜೀವನದ ರೀತಿ-ನೀತಿಗಳು ತುಲನಾತ್ಮವಾಗಿರಬೆಕು ಎಂದು ಬಯಸುತ್ತಾನೆ. ಹೀಗಾಗಿ ನನ್ನ ಬದುಕಿನಲ್ಲಿ ಒಂದು  ಹುಚ್ಚು ಕಲ್ಪನೆಗೆ ಉತ್ತರ ನೀಡಿದ ಲೇಖಕ, ಹೆಚ್ಚು ದಿನ ಆದರ್ಶ ಲೇಖಕನಾಗಿ ಇಲ್ಲದಿರುವುದು ದುಖದ ವಿಷಯ.

ಸಿಂಹ... ನನ್ನ ಬದುಕಿನಲ್ಲಿ ಬರೆಯುವುದನ್ನು ಕಳಿಸಿದ ಗುರು. ಎಲ್ಲರು ಬರೆಯುತ್ತಾರೆ, ಎಲ್ಲರು ಮಾತನಾಡುತ್ತಾರೆ...ಆದರೆ ಅದಕ್ಕೊಂದು ಶೈಲಿ ಬೇಕು. ಅದು ಪ್ರತಾಪರಲ್ಲಿದೆ. ಯಾವುದೇ ಲೇಖನ ಓದಲು ಕುಳಿತರೆ... ಲೇಖನವೇ ನಮ್ಮನ್ನು ಓದಿಸುವಂತೆ ಪ್ರೆರಿಪಿಸುತ್ತದೆ.

ರವಿ-ಸಿಂಹ ಜಗಳ ಹೊಸದೇನು ಅಲ್ಲ. ಸಿಂಹದ ನೈತಿಕತೆ, ಮದುವೆಯ ಮುಂಚೆ ಕಾಲು ಕಳೆದು ಕೊಂಡ ಪ್ರೇಯಸಿಯನ್ನು  ಒಂದಿಷ್ಟು ನೋವು ಇಲ್ಲದೆ ಒಪ್ಪಿ ಮದುವೆಯಾಗಿ ಜೀವನ ಮಾಡುತ್ತಿರುವುದು ನನಗೆ ಬಹಳ ಹೆಮ್ಮೆ ಅನಿಸಿತು. ನೈತಿಕತೆಯ ಮುಂದೆ ರವಿ ತಗ್ಗಿ ಹೋದಾಗ, ಸಿಂಹ ನನ್ನ ಹೃದಯದಲ್ಲಿ  ನೆಲೆಸಿದ. ಆದರು ಇಬ್ಬರ ಜಗಳ  ಮಾಡುತ್ತಿರುವುದು ನನಗೆ ಸರಿಯಲ್ಲ ಅನಿಸಿತ್ತು.  'ಗಂಡ-ಹೆಂಡತಿಯ ಜಗಳದಲ್ಲಿ ಕೂಸು ಬಡವಾಯಿತ್ತಂತೆ ' ಅನ್ನುವಂತೆ ಇವರ ಜಗಳ ನನಗೆ ನೋವು ಕೊಟ್ಟಿತ್ತು.  ಕಾರಣ ಇಷ್ಟೇ- ಒಬ್ಬ ಸಾಹಿತಿ ಅಂದಾಗ ಒಳ್ಳೆಯ ನಡತೆ, ಗಾಂಭಿರ್ಯತೆ, ನೈತಿಕ ಸ್ವಚತೆ  ಓದಾಗ ಅಪೇಕ್ಷೆ ಪಡುತ್ತಲಿರುತ್ತಾನೆ. ಇದಕ್ಕೆ ಭಂಗವಾದಾಗ ನೋವು ಸಹಜವೇ.

Tuesday, September 3, 2013

ಹುಬ್ಬಳ್ಳಿ-ಗಿರ್ಮಿಟ್ ಇಲ್ಲದ ಮಾಲ್..!

ಕಳೆದ ತಿಂಗಳು ನಾನು ಹುಬ್ಬಳ್ಳಿಯಲ್ಲಿದ್ದೆ. ನನ್ನ ಗೆಳೆಯನೊಬ್ಬನನ್ನು ಕರೆದುಕೊಂಡು,ಓಯಸಿಸ್  mall ಗೆ ಹೋಗಿದ್ದೆ. ಹುಬ್ಬಳ್ಳಿಯಲ್ಲೇ ಇದು ಮೊದಲ mall ಅನಿಸುತ್ತೆ . ಒಂದೊಂದೇ ಶೋ ರೂಂ ಗಳನ್ನೂ ನೋಡುತ್ತಾ, ಯಾವ ವಸ್ತುವನ್ನು ಕೊಂಡುಕೊಳ್ಳುವ ಆಸಕ್ತಿ ನಮಗಿಲ್ಲದಿದ್ದರು ಪ್ರತಿಯೊಂದು ವಸ್ತುವು ನಮ್ಮದೇ ಅನ್ನುವಂತೆ ನಟಿಸಿದೆವು. ಪ್ಯಾಂಟ್-ಶರ್ಟ್ ಹಾಕಿದೆವು, ಟ್ಯಾಬ್ಲೆಟ್ ಮುಟ್ಟಿ ನೋಡಿ cost  ಎಷ್ಟು? ಬ್ಯಾಟರಿ ಎಷ್ಟು ದಿನ ಬರುತ್ತೆ? ಕ್ರೆಡಿಟ್  ಕಾರ್ಡ್ ಓಕೆ ನಾ ? ಹೀಗೆ ಸುಮ್ಮನೆ ಕೇಳುತ್ತ ಸಾಗಿದುದ್ದು  mall  ಗಳಲ್ಲಿ ಶಾಪಿಂಗ್ ಮಾಡುವ ಸಂಸ್ಕೃತಿಯ ಒಂದು ಭಾಗ. ಅದರಲ್ಲಿ ತಪ್ಪೇನು ಇಲ್ಲ..!

ಆದರೆ, ಹಲವಾರು ಅಂಗಡಿಗಲ್ಲಿ ಹೊಕ್ಕಿ ಹೊರಬರುವಾಗ ನಮ್ಮ ಕೈಯಲ್ಲಿ ಇದ್ದಿದ್ದು ಕೇವಲ ನಮ್ಮದೇ ಮೊಬೈಲ್ ಹಾಗು ಕರ್ಚಿಫ್ ಮಾತ್ರ. ಆದರೆ ಗದ್ದಲ, ಪ್ರತಿ ಮಾತು, ಬೇಡವಾದ ಮ್ಯೂಸಿಕ್, AC  ರೂಂ ನಲ್ಲಿ ಎಡೆಬಿಡದ ನಡೆದಾಟ ಇವುಗಳಿಂದಾಗಿ ಸಂಜೆಯ ಸಮಯದಲ್ಲಿ ಸ್ನಾಕ್ ಬೇಕು ಎಂಬ ಹಂಬಲವಾಗಿ ಸ್ನಾಕ್ ಕಾರ್ನರ್  ನತ್ತ ಹೆಜ್ಜೆ ಹಾಕಿದೆವು.

ಇಂತ mall ವೊಂದು ಇರುವುದು ಹುಬ್ಬಳ್ಳಿಯಲ್ಲಾದರು ಅದರ ವ್ಯವಹಾರ, ಸಿಗುವ ವಸ್ತುಗಳು, ಎಲ್ಲವು ಬೆಂಗಳೂರಿನ mall ಗಳಂತೆ ಇತ್ತು. ಸ್ನ್ಯಾಕ್ ಕಾರ್ನರ್ ಗೆ ಬಂದಾಗ, ಮೆನ್ಯು  ನೋಡಿದರೆ ಅದೇ ಪಿಜ್ಜಾ, ಅದೇ ಕೋಕ್, ಅದೇ ಬ್ರೆಡ್...! ಅದೇ ಮೆನ್ಯು ಮೂರೂ ಬಾರಿ ಓದಿದೆ. ಗೆಳೆಯನಿಗೆ, ಬೆಂಗಳೂರ ಹುಡುಗನ mall  ಒಂದರಲ್ಲಿ  ಸ್ನಾಕ್ಸ್ ಒಂದನ್ನು ಆರ್ಡರ್ ಮಾಡಲಾಗದ ಪರಿಸ್ಥಿತಿಗೆ ನಾಚಿಕೆಯಾಗಿರಬೇಕು.ಅದಕ್ಕೆ, ಅವನು ನನ್ನತ್ತ ತಿರುಗಿ, " ಎನಲೇ, ಒಂದು ಸ್ನಾಕ್ ಆರ್ಡರ್ ಮಾಡಕ್ ಬ್ಯಾಂಕ್ ಅಗ್ರಿಮೆಂಟ್ ಒಂದರ terms and conditions ಕಾಗದ ಓದಿದ ಹಾಗೆ ಒದತ್ತ ಇದ್ದೀಯಲ್ಲ? ಪಿಜ್ಜಾ ಆರ್ಡರ್ ಮಾಡನವ?" ಎಂದ.

ನಾನು ಮೆನ್ಯುನಲ್ಲಿ ಹುಡುಕುತಿದ್ದದ್ದು ಗಿರ್ಮಿಟ್..! ಮೆನ್ಯುನ ಕೊನೆಯ ಹಾಳೆಯ ತನಕ ತಲುಪಿದರು ಗಿರ್ಮಿಟ್ ಇರಲೇ ಇಲ್ಲ.  ಆಮೇಲೆ, ಸ್ನಾಕ್ಸ್ ಕೊಡುವವರನ್ನೇ ಗಿರ್ಮಿಟ್ ಕೊಡಿ ಎಂದು ಬೇಡಿಕೆಯನ್ನೇ ಇಟ್ಟೆ. ಹುಚ್ಚು ಮಂಗ್ಯ ಪೇಟೆಗೆ ಬಂದಿದೆ ಎನ್ನುವಂತೆ, " ಇದು mall ಸರ್ ... ಇಲ್ಲಿ ಗಿರ್ಮಿಟ್ ಇಡಲಿಕ್ಕೆ ಆಗತ್ತಾ..?!...ಪಿಜ್ಜಾ ಇದೆ ನೋಡಿ ಸರ್.." ಎಂದು ತಮ್ಮ ಬರದ ಇಂಗ್ಲಿಷ್-ಫ್ರೆಂಚ್ ಹೆಸರುಗಳನ್ನು ದಡ-ದಡ ಎಂದು ಒಸೆರಿದರು. ನನಗೆ ಅವರ ಮಾತು ಕೇಳಿ ನಗುಬಂತು... " ನೋಡಿ, ಪಿಜ್ಜಾ ಬೆಂಗಳೂರಿನಲ್ಲೂ ಸಿಗುತ್ತೆ, ಮಂಗಳೂರಿನಲ್ಲೂ ಸಿಗುತ್ತೆ...ಆದರೆ ಗಿರ್ಮಿಟ್ ಇಲ್ಲೇ ಸಿಗುದು... ಕರಾವಳಿಯಲ್ಲಿ ಮೀನು, ದಾವಣಗೆರೆಯಲ್ಲಿ ಬೆಣ್ಣೆ ದೋಸೆ, ಮಂಡ್ಯದಲ್ಲಿ ಮುದ್ದೆ,  ಧಾರವಾಡದಲ್ಲಿ ಪೇಡ, ಬೆಳಗಾಂ ದಲ್ಲಿ ಕುಂದ, ಗೋಕಾಕದಲ್ಲಿ ಕರದಂಟು..ಇರಲೇ ಬೇಕು. ಅದು ಲೋಕಲ್ ಐಟಂ ಅಂತ ನೀವು  ಮಾಲ್ ದಲ್ಲಿ ಇಡ್ತಾ ಇಲ್ಲ ಅಷ್ಟೇ? ಆದರೆ ನೀವು ಲೋಕಲ್ ಜನ ತಾನೇ?"  ಇಷ್ಟು ಹೇಳಿದ ಮೇಲೆ, ಅವನ ಬಾಯಿ ಸಣ್ಣದಾಯಿತು..."ಆದರೂ.. ರೂಲ್ ಪ್ರಕಾರ ಇಡಲಿಕ್ಕೆ ಆಗಲ್ಲ ಸರ್..." ಎಂದಾಗ ಎಲ್ಲಿಲ್ಲದ ಅಸಹನೆ ಮೂಡಿತ್ತು. "ನೀವು ಲೋಕಲ್ ಮಂದಿಯಾಗಿ...ಲೋಕಲ್ ಪ್ರಾಡಕ್ಟ್ ಪ್ರೋತ್ಸಾಹ ಕೊಡದಿರುವುದು ಸರಿಯಲ್ಲ.ನಿಮಗೆ ಅಭಿಮಾನವಿರಬೇಕಿತ್ತು" ಎಂದಾಗ , "next  ಟೈಮ್ ಟ್ರೈ ಮಾಡ್ತಿವಿ ಸರ್" ಎಂದು ಹೇಳಿದ. ಗೆಳೆಯನ ಸಲಹೆಯ ಮೇರೆಗೆ ಪಿಜ್ಜಾ ತಿಂದು, ಕೊಕ್ ಕುಡಿದು ಹೊರಬಂದೆ.

ಆದರೆ, ಇಲ್ಲಿ ಪ್ರಶ್ನೆ " ನಾನು ಹೀಗೆ ಪ್ರಶ್ನೆ ಮಾಡಿದೆ" ಅನ್ನುವುದಲ್ಲ. ಬದಲಾಗಿ ನಮ್ಮ ಲೋಕಲ್ ಅನಿಸಿಕೊಂಡಿರುವ ವಸ್ತು ಸ್ಥಿತಿಗಳ ಬಗ್ಗೆ ನಮ್ಮ ಜನಕ್ಕೆ ಸ್ವಲ್ಪವೂ ಅಭಿಮಾನ ಇಲ್ಲ ಯಾಕೆ? ಬೇರೆ ದೇಶದಿಂದ ಬಂದದೆಲ್ಲ ಅಮೃತ ಅಂತ ಭಾವಿಸುತ್ತರಲ್ಲ? ಗಿರ್ಮಿಟ್ ಏನು ಪಿಜ್ಜಾ ಗಿಂತ ಕಡಿಮೆಯೇ? ಒಂದು ನೆನಪಿಟ್ಟು ಕೊಳ್ಳಿ...."ಒಂದು ಕಡಿಮೆಯ ಬೆಲೆಯ ಪಿಜ್ಜಾ ಬೆಲೆಯಿಂದ ೧೦ ಜನ ಗಿರ್ಮಿಟ್ ತಿನ್ನಬಹುದು". ದೇಶಿಯ ಮಾರುಕಟ್ಟೆಗೆ ಉತ್ತೇಜನ ನಿಡದಿರುವ ಪರಿಣಾಮವಾಗಿಯೇ ಎಂದು ರುಪಾಯಿ ಕುಸಿಯುತ್ತಿರುವುದು. ವಿದೇಶಿ ವಸ್ತುಗಳ ಹಿಂದೆ ನಾವು ಹೋಗುವುದರಿಂದ ನಮ್ಮ ಹಣ ವಿದೇಶಿಗರ ಹಿಂದೆ ಹೋಗುತಿದೆ.