Thursday, May 1, 2014

ಮರ್ಯಾದಿ ಇಲ್ಲದವರಿಂದ ಮರ್ಯಾದ ಹತ್ಯೆಗಳು!


ಕಳೆದ ಎರಡು ವಾರಗಳಿಂದ ಅಲ್ಲಲ್ಲಿ  ಮರ್ಯಾದ  ಹತ್ಯ ಪ್ರಕರಣಗಳನ್ನು ಪತ್ರಿಕೆಯಲ್ಲಿ ಓದಿದೆ.

ಯಾರೊಬ್ಬರು ಆತ್ಮ ಹತ್ಯೆ ಮಾಡಿಕೊಂಡರು ಅಂದರೆ ನನಗೆ ಅಷ್ಟೊಂದು ಬೇಸರ ಆಗುವುದಿಲ್ಲ. ಆದರೆ, ಯಾರಾದರು ಒಬ್ಬರು ಮರ್ಯದ ಹತ್ಯೆಗೆ ಜೀವ ಕೊಟ್ಟರು ಎಂದರೆ ನನ್ನ ಹೃದಯ  ತೀವ್ರವಾಗಿ ಬಡಿಯುತ್ತದೆ. ಆ ನೋವು, ಕೇವಲ ಶಬ್ಧಗಳಲ್ಲಿ ನಾನು ವ್ಯಕ್ತ ಪಡಿಸಬಹುದೆ ಹೊರತು  ಮರ್ಯಾದಾ ಹತ್ಯ ವಿರುದ್ಧ ಒಂದು  ಕ್ರಮ ಕೈಗೊಳ್ಳಲು ನಾನು ವಿಫಲ ಎಂದು ಬೇಸರವಾಗುತ್ತಿದೆ.

ಮರ್ಯಾದ ಹತ್ಯಗಳ  ಹಿಂದೆ ಇರುವ ಬದುದೊಡ್ಡ ಕಾರಣ 'ಜಾತಿ'. ಪ್ರತಿಯೊಬ್ಬರಿಗೂ ಜಾತಿ ಇದ್ದೀತು; ಸಂಪ್ರದಾಯ ಇದ್ದೀತು; ಆಚರಣೆಗಳು ಇದ್ದಾವು. ಆದರೆ ೧೮ ವರ್ಷ ಮೀರಿದ ಮೇಲೆ, ನಾನು ಯಾವುದನ್ನೂ ಬಿಡಬೇಕು; ಯಾವುದನ್ನೂ ಒಪ್ಪಬೇಕು ಎಂದು ತಿಳಿಯುವ ಅಧಿಕಾರ ಪ್ರತಿಯೊಬ್ಬ ಯುವಕ-ಯುವತಿಗೆ ಇದೆ. ಯಾರಿಗೆ ತಮ್ಮವರು ಎಂದು ಮಮತೆ ಇರುತ್ತದೋ(ಉದಾಹರಣೆಗೆ ಅಪ್ಪ, ಅಮ್ಮ, ಅಣ್ಣ ಅಕ್ಕ...ಸಂಬಂಧಿಕರು) ಅಂತವರು  ಕೇವಲ ತಮ್ಮ ಅಮೂಲ್ಯವಾದ ಸಲಹೆ ನೀಡಬಹುದೇ ಹೊರತು ತಮ್ಮ ಹುಡುಗಿ/ಹುಡುಗ  ತಮ್ಮ ಅಧಿಕಾರದ ಮಾತು ಕೇಳಿಲ್ಲ ಅನ್ನುವ ಕಾರಣಕ್ಕಾಗಿ ಜೀವವನ್ನೇ ತಿನ್ನುವ ಅಧಿಕಾರ ಖಂಡಿತ ಇಲ್ಲ.

ಭಾರತೀಯ secularism /ಜಾತ್ಯತಿತತೆಯಲ್ಲಿ ಒಂದು ದುರಂತ ಇದೆ. ಹೊರಜಗತ್ತಿನಲ್ಲಿ- ಟಿವಿ ಕಾರ್ಯಕ್ರಮಗಳಲ್ಲಿ, ಸಾರ್ವಜನಿಕ ಸಭೆಗಳಲ್ಲಿ ಎಲ್ಲರು ಅದ್ಭುತ  ಜಾತ್ಯತಿತರು. ಉಡುಪಿಯಲ್ಲಿ, ರಾಜಾಂಗಣದಲ್ಲಿ 'ವಸುದೇವ ಕುಟುಂಬಕಂ' ಎಂದು ಹೇಳಿದ ಪ್ರವಚನ ಕೇಳಿದ ನೀವು ಊಟದ ಸಾಲಿಗೆ ಹೋಗುತ್ತಿರುವಾಗ ಅದನ್ನು ಮರೆತಿರಲೇ ಬೇಕು..! ಇಲ್ಲದೆ ಹೋದರೆ ನಿಮ್ಮನ್ನು ಅಡ್ಡಗಟ್ಟುವರು ಇದ್ದೆ ಇರುತ್ತಾರೆ..! ಹೀಗಾಗಿ ಬದುಕುವುದಕ್ಕಾಗಿ, ಸ್ವ-ಶ್ರೇಷ್ಠತೆಯನ್ನು ಸಾರಲು ಇಂತ ಮಾತುಗಳು ಕೇಳುತ್ತಲೇ ಇರುತ್ತವೆ.  ಒಳಗೊಳಗೇ ಎಲ್ಲರಿಗು ಜಾತಿ ಇದ್ದೆ ಇರುತ್ತದೆ. ಅದು ಬಿಡಲಾರರು. ಅದು ಬಿಡಲಾಗದ ನಂಟು ಮನೆಗಳು ಕಳಿಸಿ ಕೊಟ್ಟಿರುತ್ತವೆ. ಹೀಗೆ ಮನೆಯಲ್ಲಿ ಕಳಿಸಿ ಕೊಡುವ ಜಾತಿಯ ಬಗೆಗಿನ ಅನಾಚಾರವನ್ನು ಸಂಸ್ಕಾರವೆಂದು(ಈ ಸಂಸ್ಕಾರದಲ್ಲಿನ  ಎಲ್ಲವು ಕೆಟ್ಟದ್ದು ಎಂದು ನನ್ನ ಅಭಿಪ್ರಾಯ ಅಲ್ಲ) ಭಾವಿಸಿ, ಶಾಲೆಯ ಶಿಕ್ಷಣವನ್ನು ವೃತ್ತಿ ನಿಮ್ಮಿತ ಜ್ಞಾನವೆಂದು ಭಾವಿಸಲಾಗುತ್ತದೆ. ಸತತ ೨೫ ವರ್ಷ ಶಾಲೆಯಲ್ಲಿ ಜಾತ್ಯತೀತ ಪಾಠ ಮಾಡಿದ ಶಿಕ್ಷಕ ಕೂಡ ತನ್ನ ಮಗನಿಗೆ ಅಂತರ್ಜಾತೀಯ ಮದುವೆಗೆ ಒಪ್ಪಲಾರ.

ಅಂತರ್ಜಾತೀಯ ಮದುವೆಗಳು ನೀವು ಮಾಡಿ ಎಂದು ನಾನು ಯಾರಿಗೂ ಹೇಳುತ್ತಿಲ್ಲ. ಯಾವುದನ್ನು ಯಾರಿಗೂ ಒತ್ತಾಯ ಪೂರ್ವಕವಾಗಿ ಹೇರುವುದು ಪ್ರಜಾಪ್ರಭುತ್ವದ ಲಕ್ಷಣವಲ್ಲ. ಆದರೆ, ನಿಮ್ಮ ಮಗಳು/ಮಗನು  ಕಾಲಕ್ಕೆ ಅನುಕೂಲವಾಗಿ ತನಗೆ ಸರಿಯನಿಸಿದ ಸಂಗಾತಿಯನ್ನು ಆರಿಸಿ ತಂದಾಗ ಜಾತಿಯ ಕ್ಯಾತೆ  ಯಾಕೆ ತೆಗೆಯುತ್ತಿರಿ?. ನಿಮ್ಮಗೆ ಒಪ್ಪಿಗೆ ಇಲ್ಲದಿದ್ದರೆ ಸಲಹೆ ಕೊಡಿ; ಎಲ್ಲ ನಿಮ್ಮ ಮಗಳು/ಮಗನ ಸಂಬಂಧದಿಂದ ದೂರಕ್ಕೆ ಸರಿಯಿರಿ. ಇದು ಹಾಯ್ ಕೋರ್ಟ್ ಕೂಡ ಹೇಳಿದ ವಾಕ್ಯ.

ಪ್ರೇಮಲೋಕದಲ್ಲಿ ನಲಿಯುತ್ತಿದ್ದ  ಕ್ರೌಂಚ ಹಕ್ಕಿಗಳನ್ನು ಬೇಟೆಗಾರ ಕೊಂದು ಕೆಡವಿದಾಗ ಮಹಾನ್ ಕವಿ, ರಾಮಾಯಣದ ಕೃತ್ರು ವಾಲ್ಮೀಕಿ ಮಹಿರ್ಷಿ  ಕೊಪೋದ್ರಿಕ್ತನಾಗಿ ಬೇಟೆಗಾರನಿಗೆ, "ನಿನಗೆ ಯಾವತ್ತು ಮೋಕ್ಷ ಸಿಗೆದೆ ಇರಲಿ" ಎನ್ನುತ್ತಾನೆ.
       (मां निषाद प्रतिष्ठां त्वमगमः शाश्वतीः समाः।
         यत्क्रौंचमिथुनादेकम् अवधीः काममोहितम्॥‘)
ಹೀಗೆ ಇರುವ ನಮ್ಮ ಧಾರ್ಮಿಕ ಗ್ರಂಥಗಳ ಉಚ್ಚಾರಣೆ ಯಾಕೆ ನಮ್ಮಗೆ ಸಂಸ್ಕಾರ ರೂಪದಲ್ಲಿ ಬಂದಿಲ್ಲ ? ಜಾತಿಗಾಗಿ ಕೊಲೆಗೈಯುವ ಧೂರ್ತರಿಗೆ ಯಾವ ಬೆಲೆ ಕೊಡಬೇಕು ?

ಬದುಕುವ ಸಾವಿರಾರು ಕನಸುಗಳನ್ನು ಹೊತ್ತು, ಕಾಲ, ಪ್ರದೇಶ, ತನ್ನ ಅವಶ್ಯಕತೆಗಳಿಗನುಗುಣವಾಗಿ ಪ್ರೀತಿಯೆಂಬ ಭಾವ ದಿಂದ ಬದುಕೆಂಬ ಅಮೃತವನ್ನು  ಉಣ್ಣಲು ಬಂದವರಿಗೆ ಯಾಕೆ ನಿಮ್ಮ ತಿರಸ್ಕಾರ?

ಮರ್ಯಾದ ಹತ್ಯಗಳು ೨೧ನೆ ಶತಮಾನದಲ್ಲಿ ಅಸ್ತಿತ್ವ ಪಡೆಯುತ್ತವೆ ಅಂದರೆ ನಾವು ಓದುವ ವಿಜ್ಞಾನ, ನಮ್ಮ ವೈಚಾರಿಕತೆಗೆ ಗ್ರಹಣ ಇದೆ ಅಂತಾನೆ ಅರ್ಥ..!