Monday, December 15, 2014

ಲಾ ಲಾ ಲೈಲಾ... ಮದುವೆ ಶೀಲಾ

ಶೈಲಾ ಮತ್ತು  ಲೀಲಾ SSLC ತನಕ ಸಹಪಾಠಿಗಳು. ಆದರೆ SSLC  ನಂತರ ಲೀಲಾ ವಾಣಿಜ್ಯ ವಿಭಾಗ ಆಯ್ಕೆ ಮಾಡಿಕೊಂಡರೆ ಶೈಲಾ ವಿಜ್ಞಾನವನ್ನು ಆಯ್ಕೆ ಮಾಡಿಕೊಂಡಳು.

ಲೀಲಾ ಬಡ ಹುಡುಗಿ. ಅದೇ ಕಾಲೇಜ್ ನಲ್ಲಿ PUC  ಮುಗಿಸಿ, ಅಲ್ಲಿಯೇ ಬಿಕಾಂ ಮುಗಿಸಿ, ತನ್ನ ೨೩ ನೇ ವಯಸ್ಸಿನಲ್ಲಿ ಬಿಸಿನೆಸ್ ಒಂದರಲ್ಲಿ ಕೆಲಸ ಮಾಡುತ್ತ ಇದ್ದ ಹುಡುಗನನ್ನು ತನ್ನ ತಂದೆ ತಾಯಿಗಳ ಆಶಿರ್ವಾದದಿಂದ ಕೈ ಹಿಡುದು, ತನ್ನ ೨೬ ನೇ ವಯಸ್ಸಿನಲ್ಲಿ ಕೀರ್ತಿಗೊಬ್ಬ ಮಗ, ಅರತಿಗೊಬ್ಬಳು ಮಗಳನ್ನು ಪಡೆದು ಹಳ್ಳಿಯು ಅಲ್ಲ, ನಗರವು ಅಲ್ಲದ ಪ್ರದೇಶದಲ್ಲಿ ಜೀವನ ಮಾಡುತ್ತಾ ಇದ್ದಾಳೆ.

ಶೈಲಾ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುವ ಗುಮಾಸ್ತೆಯ ಮಗಳು. ಅಪ್ಪನ ಬಗ್ಗೆ ನನಗೆ ಗೊತ್ತಿಲ್ಲ. PUC ಯಲ್ಲಿ ವಿಜ್ಞಾನ ಓದಿ, ೬೫ ರಷ್ಟು ಅಂಕ ಪಡೆದು, ಆ ಕೆಟಗರಿ, ಈ ಕನ್ನಡ ಕೃಪಾಂಕ ಇತ್ಯಾದಿ  ಆಧಾರದ ಮೇಲೆ  ಬೆಂಗಳೂರಿನ ಇಂಜಿನಿಯರಿಂಗ್ ಕಾಲೇಜ್ ಒಂದರಲಿ ಸೀಟ್ ಪಡೆದು, ನಾಲ್ಕು ವರ್ಷ ಇಂಜಿನಿಯರಿಂಗ್ ಮುಗಿಸಿದಳು. ಇಂಜಿನಿಯರಿಂಗ್ ಕೂಡ  ಬಿಕಾಂ ಹಾಗೆ ಒಂದು ಡಿಗ್ರಿ ಆದರೂ ವೃತ್ತಿಪರತೆ ಇದರಲ್ಲಿ ಇರುವುದರಿಂದಲೂ, ಸಾಫ್ಟ್ವೇರ್ ಎಂಬ ಮೋಹ ಜನ ಮಾನಸದಲ್ಲಿರುವುದರಿಂದಲೂ ಇಂಜಿನಿಯರಿಂಗ್ ಅಂದರೆ ಕಲಿತವರು ಎಂಬ ಭಾವ ಜನ ತೋರಿಸುತ್ತಾರೆ. ಏನೇ ಇರಲಿ.

ದುರದೃಷ್ಟವೆಂದರೆ, ಶೈಲಾ ಓದಿ ಹೊರ ಬರುವ ಹೊತ್ತಿಗೆ, ಸಾಫ್ಟ್ವೇರ್ ಲೋಕದಲ್ಲಿ ಎಲ್ಲಿಲ್ಲದ ಅರ್ಥಿಕ ಸಂಕಟ(ರಿಸೆಶನ್). ಅವಳು ಸಾಮಾನ್ಯ ಹುಡುಗಿ. ಹೇಳಿಕೊಳ್ಳುವಂತ ಪರ್ಸಂಟೇಜ್ ಕೂಡ ಅವಳದಲ್ಲ. ಕೆಲವು ಸಹಪಾಟಿಗಳು TCS , ಇನ್ಫೋಸಿಸ್ , accenture  ಮೊದಲಾದ ಕಂಪನಿಗಳಿಗೆ ಕ್ಯಾಂಪಸ್ ನಲ್ಲೆ ಸೇರಿದರು.ಆದರೆ ಅವಳಿಗೆ ಸಾಧ್ಯವಾಗಲಿಲ್ಲ. ನಂತರ ಅವಳು ಪ್ರಯತ್ನ ಮಾಡಿ, ಮೂರೂ ತಿಂಗಳು ತಿರುಗಾಡಿ ಒಂದು ಸಣ್ಣ ಸಾಫ್ಟ್ವೇರ್ ಕಂಪನಿಯಲ್ಲಿ ಡೆವೆಲಪರ್ ಆಗಿ ೮೦೦೦/- ಗೆ ಸೇರಿಕೊಂಡಳು.

ಬೆಂಗಳೂರಿಗೆ ಬಂದ ಅವಳು ಮನಸ್ಸು ಜಾಗತಿಕ ಬದಲಾವಣೆಗಳಿಗೆ ಸ್ಪಂದಿಸತೊಡಗಿತು. ಅವಳ ಗೆಳತಿಯರು TCS , ಇನ್ಫೋಸಿಸ್ ದಂತಹ  ಕಂಪೆನಿಗಳಿಂದ ಜರ್ಮನಿ, ಸಿಂಗಪುರ್ ಕಡೆ ಹೋದ ಫೇಸ್ಬುಕ್ ಫೋಟೋ ನೋಡಿ ತನಗೂ ಹೋಗಬೇಕು ಅನ್ನುವ ಆಕಾಂಕ್ಷೆ. ಆದರೆ ಬೆಂಗಳೂರಿನಲ್ಲಿ ಹುಟ್ಟಿಕೊಂಡಿರುವ ಸಣ್ಣದಾದ ಅವಳ ಕಂಪನಿಯಲ್ಲಿ ಅಂತ ಅವಕಾಶಗಳೇನು ಇರಲಿಲ್ಲ. ಅವಳಿಗೆ ಬಹಳ ಬೇಸರವಾಗಿತ್ತು. ಆದರೆ, ಅವಳಿಗೆ ನಿಜವಾದ ಆತಂಕವಾದುದ್ದು-ಇಬ್ಬರು ಅವಳ  ಇಂಜಿನಿಯರಿಂಗ್  ಕ್ಲಾಸ್ ಮೇಟ್ ಗಳು ಅಮೆರಿಕದಲ್ಲಿರುವ ಹುಡುಗರನ್ನು ಮದುವೆಯಾಗಿ ಹೋಗುತ್ತಾರೆ ಎಂಬುದನ್ನು ಕೇಳಿ ತಿಳಿದಾಗ.  ಸಹಜವಾಗಿ ಹಳ್ಳಿಯವರಿಗೆ ಬೆಂಗಳೂರು ಹುಡುಗರು, ಬೆಂಗಳೂರಿನವರಿಗೆ ಅಮೆರಿಕಯ ಹುಡುಗರು ಅಂದರೆ ಒಂದು ರೀತಿಯ  ಸಮಾಧಾನ.

ಹೀಗಿರುವಾಗ ಶೈಲಾ ತಾನು ಅಮೆರಿಕೆಯಲ್ಲಿರುವ ಹುಡುಗನನ್ನೇ ಮದುವೆಯಾಗಬೇಕು ಎಂದು ಬಯಸಿದಳು. ತನಗೆ ಹಾಗೆ ಹೋಗಲು ಸಾಧ್ಯವಾಗಿಲ್ಲ, ಅಮೆರಿಕೆಯ ಹುಡುಗ ಸಿಕ್ಕಿದರೆ ಸಾಕು ಎಂದು  ದೇವರ ಮೊರೆ ಹೋದಳು. ಅವಳಿಗೆ ಬೆಂಗಳೂರಿನ ಸಣ್ಣ ನೌಕರಿ ಯಾವ ಖರ್ಚಿಗೂ ಸಾಲುತ್ತಿರಲಿಲ್ಲ . ಆದರೆ ಒಂದೊಮ್ಮೆ ಜಾಬ್ ಬಿಟ್ಟರೆ ಅಮೆರಿಕೆಯ ಹುಡುಗ ಅವಳ ಹಳ್ಳಿಗೆ ಬಂದು ನೋಡಲಾರ ಅನ್ನುವ ಭಯ ಅವಳಿಗಿತ್ತು. ಹೀಗಾಗಿ ಗೆಳೆಯರ ಮಧ್ಯೆ ಅಂತು ಇಂತೂ ಜೀವನ ದೂಡುತ್ತಲೇ  ಇದ್ದಳು.

ವಯಸ್ಸು ಅನ್ನುದೆ ಹಾಗೆ... ಪ್ರತಿಕ್ಷಣ ೨೧ ಕಳೆಯಿತು; ೨೨ ಕಳೆಯಿತು.... ೨೪ ಕಳೆಯಿತು ....೨೬ ಕಳೆಯಿತು..!  ಬೇಡ...ಯಾವ ಹಳ್ಳಿಯ ಹುಡುಗ ಬೇಡ..!... ಬೆಂಗಳೂರಿನ ಹುಡುಗ ಬೇಡ...!. ಈ ಬದುಕಿನ ಸಾಧನೆ ಅಂತಿದ್ದರೆ ಅದು ಅಮೆರಿಕೆಯ ಹುಡುಗನನ್ನು ಪಡೆಯುವುದು. ಮಗಳ ಮದುಯೇ ಆತಂಕ ಅಮ್ಮನಿಗೆ ಎಷ್ಟಾದರೂ ದುಖದ ವಿಷಯ. ಇವಳಿಗೆ ಇದಾವುದು ಅರ್ಥವೇ ಆಗುತ್ತಿಲ್ಲ.

ಕೊನಗೆ ೨೭..!  ಅದೊಂದು ದಿನ, ಅಣ್ಣ ಶೈಲಾಳಿಗೆ ಹೇಳಿದ, " ನೋಡಮ್ಮ ನಿಂಗೆ ೨೭ ವರ್ಷ. ನೀನು ಮದುವೆಯಾಗದೆ ನಮ್ಮನೆಲ್ಲ ಸತಾಯಿಸ್ತ ಇದ್ದೀಯ? ನಿನಗೆ ಒಳ್ಳೆಯ ಹುಡುಗರು ಬಂದರು ....ಅಮೇರಿಕ ....ಅಮೇರಿಕ ಅಂತ ಕೂಗ್ತಾ ಇರ್ತಿಯ... ನೀನು ಏನು ಮಾಡ್ತಿಯಾ ಗೂತ್ತಿಲ್ಲ... ಆರು ತಿಂಗಳು ಅವಕಾಶ ಅಷ್ಟೇ" ಎಂದು ಬಹಳ ನೋವಿನಿಂದ...೨೫ ಯುವಕರನ್ನು ಇವಳ ಮುಂದೆ ತಂದು ನಿಲ್ಲಿಸಿದ ಅಣ್ಣ ಹೇಳಿದ್ದ. ಇವಳಿಗೆ ಮನಸ್ಸು ಮುರಿದಿತ್ತು. ಜೋಬನ್ನು ಬಿಟ್ಟು ಬೆಂಗಳೂರಿಂದ ಊರಿಗೆ ಮರುಳಿದಳು. ಮದುವೆಯ ಚಿಂತೆಯಲ್ಲಿ ಮನೆಯಲ್ಲಿ ಎಲ್ಲರು ದೂರುವವರೇ...! ಹಳೆಯ ಗೆಳತಿ ಲೀಲಾ ಮಾತಾಡಿಸೋಣ ಎಂದು ಅವಳ ಊರಿಗೆ ಹೋಗುತ್ತಾಳೆ...! ಎರಡು ಮಕ್ಕಳ ತಾಯಿ ಲೀಲಾ, ಒಳ್ಳೆಯ ಗಂಡ..ತುಂಬಿದ ಮನೆಯ ಕತೆ ಹೇಳಿದಾಗ ಮದುವೆಯ ಕಲ್ಪನೆಯಲ್ಲಿ ಅವಳಿಗೆ ಜ್ಞಾನೋದಯವಾಗುತ್ತದೆ.

ಮೂರೂ ತಿಂಗಳೊಳಗೆ, ಲೀಲಾಳ   ಗಂಡನ  ಸಂಬಂಧದಲ್ಲಿ ಪೋಲಿಸ್ ಒಬ್ಬನನ್ನು ಮದುವೆಯಾಗಿ, ಕೇರಳಕ್ಕೆ ಹನಿಮೂನ್ ಗೆ ಹೋಗಿದ್ದಾಳೆ ನಮ್ಮ ಶೈಲಾ..!

ಯಾಕೆ ಹೇಳಿದೆ ಅಂದರೆ, ಇದೆ ಶೈಲಾ ನಾನು ಒಂದು ವರ್ಷದ ಹಿಂದೆ ಮಾತಾಡುವಾಗ, ನೀವು ಅಮೇರಿಕಾದಲ್ಲಿ ಸೆಟ್ಲ್ ಆಗ್ತೀರಾ  ಅಂತ ಆರು ಭಾರಿ ಕೇಳಿ, ನಾನು ಉತ್ತರ ಕೊಡದೆ ಇದ್ದಾಗ whatsapp ನಲ್ಲಿ ನನ್ನ ಬ್ಲಾಕ್ ಮಾಡಿ ಹೋಗಿದ್ದಳು.

Sunday, October 12, 2014

ಕನಸಿನ ಹುಡುಗಿ -ಸಿಂಚನಾ : Read All Part Once

ಕತೆಯ ಕಾಲ-2010. ಈ ಸಮಯದಲ್ಲಿ ನಾನು ಮಣಿಪಾಲದಲ್ಲಿ ನಾನು ಕೆಲಸದಲ್ಲಿದ್ದೆ.
ನನಗೆ ೨೫೦ ಜನ ಸಹೋದ್ಯೋಗಿಗಳು, ಅದರಲ್ಲಿ ೭೦ ಜನ ನನ್ನ ಜೂನಿಯರ್ ಗಳು ಇದ್ದರು. ಈ ಕತೆ ನನ್ನ ಸುತ್ತಲೇ ಕಟ್ಟಿದ್ದೇನೆ. ಯಾವುದೇ ವ್ಯಕ್ತಿಯ ಬದುಕನ್ನು, ಅಥವಾ ಹಿಂದಿನ ನನ್ನ ಕಂಪನಿಯ ಯಾವುದೇ ವಿಷಯವನ್ನು ನಾನು ಬಳೆಸುತ್ತಿಲ್ಲ. 


  1. ಕನಸಿನ ಹುಡುಗಿ -ಸಿಂಚನಾ ::ಭಾಗ-೧ (ಮಣಿಪಾಲದಲ್ಲಿ ಬಸ್ಸು ಹತ
  2. ಕನಸಿನ ಹುಡುಗಿ -ಸಿಂಚನಾ ::ಭಾಗ-೨ (ಮಣಿಪಾಲದಿಂದ ಪಿರಂಜೆಯ ತ...
  3. ಕನಸಿನ ಹುಡುಗಿ -ಸಿಂಚನಾ ::ಭಾಗ-೩( ಮೂಡುಬಿದರೆಯಲ್ಲಿ ಸಿಂಚನ... 
  4. ಕನಸಿನ ಹುಡುಗಿ -ಸಿಂಚನಾ ::ಭಾಗ-೪(ಪಿರಂಜೆಯಲ್ಲಿ ಸಿಂಚನಾ ಹಿ... 
  5. ಕನಸಿನ ಹುಡುಗಿ -ಸಿಂಚನಾ ::ಭಾಗ-೫(ಪಿರಂಜೆಯಿಂದ ಧರ್ಮಸ್ಥಳಕ್... 
  6. ಕನಸಿನ ಹುಡುಗಿ -ಸಿಂಚನಾ ::ಭಾಗ-೬(ಮಣಿಪಾಲದಲ್ಲಿ ದಿನಗಳು-ಸಿ... 
  7. ಕನಸಿನ ಹುಡುಗಿ -ಸಿಂಚನಾ ::ಭಾಗ-೭ (ಸರಳಾ ಹೆಸರಿಗೆ ಬಂತು ಕಾ...
  8. <wait for next part> 



ಕನಸಿನ ಹುಡುಗಿ -ಸಿಂಚನಾ ::ಭಾಗ-೭ (ಸರಳಾ ಹೆಸರಿಗೆ ಬಂತು ಕಾಲ )

ಮರುದಿನ ಬೆಳಿಗ್ಗೆ ಏಳುವಾಗ ಆನಂದ ಭರಿತ ಮನಸು ಹಾಯಾಗಿತ್ತು. ಚಳಿ ಇರಲಿಲ್ಲ. ಸಂತೋಷವಾದಾಗ ನಿಸರ್ಗ ಅದೆಷ್ಟು ಬೆರಗು ಹುಟ್ಟಿಸುತ್ತದೆ! ಎದ್ದವನು ಶೂ ಧರಿಸಿ, ಮಣಿಪಾಲದ ಟಾಪ್ಮಿಯತ್ತ ನಡೆಯಲಾರಂಭಿಸಿದೆ. ಸೂರ್ಯನ ಆಗಮನ  ಆಗಲೇ ಆಗಿತ್ತು. ಮಣಿಪಾಲದಲ್ಲಿ ಚಳಿಗಾಲ ಅನ್ನುದೆ ಇಲ್ಲ. ನಿಮಗೆ ಚಳಿಗಾಲದ ಅನುಭವ ಆಗಬೇಕಾದರೆ ಬೆಳಿಗಿನ ಜಾವದಲ್ಲಿ ಬೈಕ್ ನ್ನು ೬೦ ಕೀ ಮಿ/ಗಂಟೆ ಓಡಿಸಬೇಕು. ಬೆಟ್ಟ-ಗುಡ್ಡಗಳಿಂದ ಆಗಲೇ ಸೂರ್ಯನ ಕಿರಣಗಳು ಮಂಜಿನ ಮೂಲಕ ಹಾದು ಬರುತ್ತಿದ್ದವು. ಹಾಲು-ಪೇಪರ್ ಹಾಕುವ ಹುಡುಗರು ಸೈಕಲ್ ಮೂಲಕ ಎದುರುಗೊಂಡಿದರು. ಶಾಲೆಗಳಿಗೆ ಯುನಿಫಾರ್ಮ್ ಮಕ್ಕಳು ಅಲ್ಲಿ-ಇಲ್ಲಿ ಎದುರಾಗಿದ್ದರು. KMC ಯಲ್ಲಿ  ಕೆಲಸಕ್ಕೆ ಸೇರುವ ನರ್ಸಗಳು ಆಗಲೇ ಬಸ್ಸಿಗೆ ಕಾಯುತ್ತಿರುವುದು ಅವರ ಸಮವಸ್ತ್ರದ ಮೂಲಕ ಗುರಿತಿಸಿದ್ದೆ.

ನಿಸರ್ಗದ ಸೌಂದರ್ಯದ ಮುಂದೆ ಯಾವ ಪೇಂಟೆಡ್(ಬಣ್ಣ ಬಳಿದ) ಚಿತ್ರ ಕೂಡ ಗೆಲ್ಲಲಾರದು. ನೋಡದೆ ಇರುವುದನ್ನು ನೋಡಿದಾಗ ಮನಸ್ಸಿಗೆ ಆಶ್ಚರ್ಯವಾಗುವುದು ಸಹಜ. ಸೂರ್ಯೋದಯ, ಸೂರ್ಯಸ್ತಮಾನ, ಹುಣ್ಣಿಮೆಯ ಚಂದ್ರ, ಮಂಜಿನ ಆವರಣ, ಬೆಟ್ಟಗಳ ಸಾಲು ಇವೆಲ್ಲ ನಿತ್ಯ ನೋಡಬಹುದಾದ ನಿತ್ಯ ನಿಸರ್ಗದ ಕೌತುಕಗಳಾದರು, ಅವನ್ನು ಗಮನಿಸುವ ಮನಸ್ಸು ಅವಗಳತ್ತ ಸೆಳೆದಾಗ ಸಿಗುವ ಮನಸ್ಸಿನ ಸಂತೋಷ ಅವರ್ಣನೀಯ.ಅವುಗಳನ್ನು ನೋಡುತ್ತಾ ನಮ್ಮವರು ಎಂಬುವವರ ಜೊತೆ ಕಾಫಿ ಸೇವಿಸುತ್ತ ಇದಿದ್ದೆ ಆದರೆ ಅದು ಸ್ವರ್ಗ ಸುಖವೇ..!

ನಾನು ಅದೆಷ್ಟು ದಿನ ಮಣಿಪಾಲದ ಗುಡ್ಡ-ಬೆಟ್ಟಗಳ ಮಧ್ಯೆ ಏಕಾಂಗಿಯಾಗಿ ನಡೆದಾಡಿದ್ದೇನೆ; ಅದೆಷ್ಟು ಸಾರಿ ಟಾಪ್ಮಿ, ಅರ್ಬಿ ಕೊಡ್ಲಿ, ಶಾಂತಿ ನಗರದ ಕೆಳಸ್ತರದ ಬೆಟ್ಟಗಳ ಮಧ್ಯೆ ಸಾಗಿ ಬಂದಿದ್ದೇನೆ. ಗರಿ ಬಿಚ್ಚಿ ಕುಣಿದ ನವಿಲುಗಳನ್ನು ನೋಡಿದ್ದೇನೆ. ಮನಸ್ಸಿಗೆ ಸಂತೋಷವಾದಗೆಲ್ಲ ಯಾರು ಇಲ್ಲದ ಬೆಟ್ಟದ ಮಧ್ಯೆ ಯಕ್ಷಗಾನ ಸಂಭಾಷಣೆ ಮಾಡಿದ್ದೇನೆ. ಕಾಡಿನ ಹೂವುಗಳನ್ನು ಕಿತ್ತಿದ್ದೇನೆ; ಫೋಟೋ ತೆಗೆಸಿದ್ದೇನೆ. ಹಳ್ಳಿಯ ಹುಡುಗನಾದ ನಾನು ವಿವಿಧ ಬಗೆಯ ಕಾಡಿನ ಹಣ್ಣು ಕಿತ್ತು ತಿಂದಿದ್ದೇನೆ. ಕೆಲವೊಮ್ಮೆ ಯಾವುದೋ  ಮನೆಯ ಮುಂದೆ ಹೋಗಿ ನಾಯಿಗಳ  ಕರ್ಕಸ ಸ್ವಾಗತವನ್ನು ಪಡೆದು ಕೊಂಡು ಭಯ ಪಿಡಿತನಾಗಿದ್ದು ಇದೆ.

ಇವತ್ತು, ನಾನು ಭೌತಿಕವಾಗಿ ಏಕಾಂಗಿ. ನನ್ನ ಜೊತೆ ಕೈ ಹಿಡಿದು ನಡೆಯುತ್ತಿದ್ದಂತೆ ಭಾಸವಗುತ್ತಿದ್ದಾಳೆ ನನ್ನ ಸಿಂಚನಾ. ಅವಳಿಗೆ ಹೂವುಗಳನ್ನು ಕಿತ್ತು ಕೊಟ್ಟಂತೆ, ಅವಳು ನಗುತ್ತಲೇ ಸ್ವಿಕರಿಸಿದಂತೆ ಎಲ್ಲವು ಮನಸ್ಸಿನ ಮೂಲೆಗಳಲ್ಲಿ ಆಗುತ್ತಿದೆ. ಎಲ್ಲವು ಭಾವ ಮಾತ್ರ. ಅಲ್ಲಿ ನಾನು-ನಿಸರ್ಗದ ಜೊತೆ ಇರುವ ಸಂಹವನ ಹೊರತು ಬೇರೆಯ  ಯಾವ ಕಾರಣವೂ ಇರಲಿಲ್ಲ. ಸಿಂಚನಾ ಎಲ್ಲೆಲ್ಲು ನನ್ನ ಆವರಿಸಿಕೊಂಡಿದ್ದಾಳೆ.

ಬೆಳಿಗ್ಗಿನ ವಾಕ್ ನಿಂದ ಮನೆಗೆ ಮರುಳಿ ಬಂದು, ಸ್ನಾನ-ಪೂಜೆ ಮುಗಿಸಿ, ೯:೦೦ ಕ್ಕೆ ಸರಿಯಾಗಿ ಕೀ ಚೈನ್ ಇರುವ   ಬೈಕ್ ಕೀ ಹಾಕಿ ಬೈಕ್  ರೈಡ್ ಮಾಡುತ್ತಾ ರೋಮ್ಯಾಂಟಿಕ್ ಮೂಡನಲ್ಲೇ ಆಫೀಸ್ ಸೇರಿದೆ (ಎಲ್ಲವು ಕಂಗ್ಲಿಷ್ ಪದಗಳು ). ಆಗಲೇ ಕಚೇರಿಯ ಊಟದ ಮನೆಯಲ್ಲಿ(cafteria ) ದಲ್ಲಿ ಸೇರಿದ  ನಾಲ್ಕಾರು ಸಹೋದ್ಯೋಗಿಗಳ ಜತೆಯಲ್ಲಿ ನಾನು ಸೇರಿದೆ. ಮೇಜಿನ ಮೇಲೆ ಕುಳಿತುಕೊಳ್ಳುವಾಗ, ಅದ್ಭುತ ಹಿರೋ ಬಾಡಿ ಲ್ಯಾಂಗ್ವೇಜ್ ನಲ್ಲೆ  ಬಂದ ನಾನು ಕೀ ಚೈನ್ ಇಟ್ಟುದ್ದನು ನೋಡಿದರು ನನ್ನ ಸುತ್ತಲಿನ ಸಹೋದ್ಯೋಗಿಗಳು.

ಕೀ ಚೈನ್ ಆಕರ್ಷಣೆಯ ಕೇಂದ್ರವಾಗಿ ಎಲ್ಲರು ಎತ್ತಿ ನೋಡಿದರು. ಕೀ ಚೈನ್ ಗೆ ಲೆಟರ್-ಗಳು ಇದ್ದರೆ ಅದು ಖಂಡಿತ ಹುಡುಗ-ಹುಡುಗಿಯ ಹೆಸರು ಇದ್ದೆ ಇರುತ್ತದೆ ಅನ್ನುದು ಒಂದು ಸಹಜ ನಿಯಮವೇ ಆಗಿದೆ. ಬಹುಶ: ಪ್ರೀತಿಯ ಒಂದು ಬಗೆಯ ಆನಂದದ ತೋರ್ಪಡಿಕೆಗಾಗಿ ಹೀಗೆಲ್ಲ ಮಾಡುತ್ತಾರೋ ನಾ ಕಾಣೆ. ಆದರೆ, ಸಿಂಚನಾ ಎಂಬ ಸೌಂದರ್ಯದ ಮಧ್ಯೆ ನಾನು ಹಲವು ಬಗೆಯ ಸಂತೋಷದ ತುಡಿತದಲ್ಲಿ ಕೀ ಚೈನ್ ಎತ್ತಿಕೊಂಡುದ್ದು ಹೌದು. ಕೀ ಚೈನ್ ಎತ್ತಿಕೊಂಡಿದ್ದ ಸಹೋದ್ಯೋಗಿಗಳಲ್ಲಿ ಒಬ್ಬನಾದ ರಾಜು, "ಎನಲೇ ವೆಂಕಿ, ಕೀ ಚೈನ್ ಯಾವಾಗ ಬಂತ್ತು ?  'S ' ಲೆಟರ್ ಯಾರದಪ್ಪ?" ನಾಲ್ಕಾರು ಜನರ ಮಧ್ಯ ಒಂದು ಪ್ರಶ್ನೆ ಎಲ್ಲರನ್ನು ಆಕರ್ಷಿತರಾಗಿ, " ಯಾವುದಾದರು ಹುಡುಗಿಯ ಹೆಸರೇ ಇರುತ್ತೆ ಬಿಡು..!" ಎಂದ ಸುಧೀಶ. ಮಾತು ಎಲ್ಲೆಲೋ ಹೊರಟು, ಆಫೀಸ್ ನ   'S ' ನಿಂದ ಆರಂಭವಾಗುವ ಎಲ್ಲ ಹುಡುಗಿಯರ  ಹೆಸರಿಗೂ ಅದು ತಳಕು ಹಾಕಲು ಆರಂಭಿಸಿತ್ತು. ಒಬ್ಬರು ಒಂದು ಹೆಸರನ್ನು ಹೇಳಿ, 'ಇವಳದೇ' ಎಂದು ಹೇಳಲು ಹೊರಟರೆ ಇನ್ನೊಬ್ಬರು  ಇನ್ನೊಬ್ಬಳ ಹೆಸರು ಹೇಳ ತೊಡಗಿದರು. ಹೀಗೆ   ಟೇಬಲ್ ಮೇಲೆ ಎಲ್ಲ ಹುಡುಗಿಯರ ಹೆಸರು  ನನ್ನ ಹೆಸರ ಮುಂದೆ ಜೋಡಿಸಿ ಸಮಾಧಾನ ಪಟ್ಟರು. ನಾನು ಯಾರ ಹೆಸರು ಹೇಳದೆ, "ಅದು ಹುಡುಗಿಯ ಹೆಸರೇ ಅಲ್ಲ ; S  stands  for  single " ಎಂದು ಹೇಳಿ ತಪ್ಪಿಸಲು ಯತ್ನಿಸಿದೆ. ಆದರೆ, ಒಂದು ವರ್ಷದ ಹಿಂದೆ, ಕ್ವಿಜ ಪ್ರೊಗ್ರಾಮ್ ಒಂದರಲ್ಲಿ ನನ್ನ ಜೊತೆಯಲ್ಲಿ ಸಾಥ್ ನೀಡಿದ್ದ  ಸರಳಾ ಳ  ಹೆಸರು  ನನ್ನ ಕೀ ಚೈನ್ ಮೂಲಕ ನನ್ನ ಹೆಸರಿಗೆ ತಳುಕಿ ಕೊಂಡಿತ್ತು. ಬ್ರೇಕ್ಫಾಸ್ಟ್  ಮುಗಿಯುವ ಹೊತ್ತಿಗೆ, 'ವೆಂಕಟ್ & ಸರಳಾ' ಎಂಬ ಹೆಸರು ಎಲ್ಲ ಟೇಬಲ್  ಜೊತೆಗಾರರು ಒಪ್ಪಿಕೊಂಡು, ಹಾಸ್ಯ ಚತಾಕಿಗಳೊಂದಿಗೆ  ಮಾತು ಮುಗಿಸಿ ನಡೆದರು.

ಸರಳಾ... ಒಂದು ಸರಳ ಹುಡುಗಿಯೇ. ಉತ್ತರಕರ್ನಾಟಕದ  ಹುಡುಗಿ. ಒಂದು ವರ್ಷದ ಹಿಂದೆ ನಮ್ಮ ಕಂಪನಿ ಗೆ ಇಂಟರ್ವ್ಯೂ ಕೊಟ್ಟಿದ್ದಳು. ನಾನೇ ಅವಳಿಗೆ ಪ್ರಶ್ನೆಗಳನ್ನು ಕೇಳಿದ್ದೆ. ತುಂಬಾ ರೂಪವತಿ ಅಲ್ಲದಿದ್ದರೂ ಬಹಳ ಬುದ್ಧಿವಂತೆ ಹುಡುಗಿ. ಈ ಬುದ್ಧಿವಂತಿಕೆಯನ್ನು  ಗುರುತಿಸಿದ ನಾನು ಕ್ವಿಜ್ ಪ್ರೊಗ್ರಾಮ್ ಒಂದಕ್ಕೆ ಅವಳನ್ನು ಸಾಥ್ ನೀಡುವಂತೆ ಕೇಳಿಕೊಂಡಿದ್ದೆ. ಅವಳು ದೈನ್ಯತೆಯಿಂದಲೇ ' ಓಕೆ ಸರ್' ಎಂದು ಹೇಳಿ ಪ್ರೊಫೆಷನಲ್ ಸಂಬಂಧದಲ್ಲಿಯೇ  ನನ್ನ ಜೊತೆ ಕಾರ್ಯ ಕ್ರಮಕ್ಕೆ ಜೊತೆಯಾಗಿದ್ದಳು. ಅವಳಿಗೆ ನಾನು ಹಿರಿಯ ಸಹೋದ್ಯೋಗಿ, ಇಂಟರ್ವ್ಯೂ ತೆಗೆದುಕೊಂಡವರು ಎನ್ನುವ ಕಾರಣದಿಂದ ಸಹಜವಾಗಿ 'ಸರ್' ಎಂದು ಗೌರವದಿಂದಲೇ ನಡೆದು ಕೊಂಡಿದ್ದಳು. ಇಷ್ಟು ಬಿಟ್ಟರೆ ನಮ್ಮಿಬ್ಬರ ನಡುವೆ ಯಾವ ವಿಷಯಗಳು ಇರಲಿಲ್ಲ.

ಆದರೆ ಗಮನಿಸುವರು ಅದೆಷ್ಟು ಸೂಕ್ಷ್ಮವಾಗಿ ಗಮನಿಸುತ್ತಾರೆ ನೋಡಿ!. ಒಂದು ವರ್ಷದ ಹಿಂದೆ  ಕ್ವಿಜ್ ಪ್ರೊಗ್ರಾಮ್ ಗೆ ನನ್ನ ಜೊತೆ ಯಾದ ಸರಳಾ ನನ್ನ ಪ್ರೇಯಸಿಯಾಗಿಸಿದರು ನನ್ನ ಕಲಿಗ್ ಗಳು. ಅದು ಹಾಸ್ಯದ, ಕುತೂಹಲದ ವಿಷಯವಾಗಿ ಒಂದು ಮಾತು ಆ ಸಂದಭದಲ್ಲಿ ಅವರು ಹೇಳಿದ್ದರು. ಸರಳಾಳ ಕುರಿತಾಗಿ ಒಂದು ಕ್ಷಣ ಕೂಡ  ಸಿಂಚನಾಳ  ಕುರಿತಾಗಿ ಯೋಚಿಸಿದಂತೆ ವಿಚಾರ ಮಾಡಿದವನೇ ಅಲ್ಲ. ನಾನು ಇವರ ಈ ಮಾತುಗಳು ತಲೆಗೆ ಹಾಕಿಕೊಳ್ಳಲೇ ಇಲ್ಲ.

ಆದರೆ, ಕಿಡಿ ಹಚ್ಚಿದ ಮೇಲೆ ಬೆಂಕಿ ಹತ್ತಿ ಉರಿಯಲು ಬಹಳ ಸಮಯ ಬೇಡ. ಅದು ಕಾಡನ್ನು ನಾಶ ಮಾಡಲು ಕ್ಷಣಗಳೇ ಸಾಕು.! 'ವೆಂಕಟ್-ಸರಳಾ ಎಂಬ ಹೆಸರು  ಮಧ್ಯಾಹ್ನದ ಟೀ ವೇಳೆಗೆ ಪ್ರತಿಯೊಂದು ಟೇಬಲ್ ಮೇಲೆ ಪ್ರತಿಧ್ವನಿಸ ತೊಡಗಿತ್ತು. ಸರಳಾ  ಕುರಿತಾಗಿ ಯಾರಾರು ಕಣ್ಣಿಟ್ಟಿದ್ದರು, ಅವಳು ಹಾಗೆ-ಹೀಗೆ ಅಂತೆಲ್ಲ ಕತೆ ವಿಚಿತ್ರವಾಗಿ ನಾನು ಮತ್ತೊಬ್ಬರಿಂದ ಕೇಳುವವಾಗ ಅದು ವಿಪರ್ಯಾಸವಾಗಿ ನನಗೆ ಕಾಡಲು ಕಾರಣವಾಗಿತ್ತು.

ಹಾಗೆ ಸರಳಾ ಕತೆ ಅಷ್ಟೊಂದು ಹರಡಲು ಕಾರಣವಿತ್ತು. ಮನುಷ್ಯನ ಒಂದು ಸಹಜ ಮತ್ತು ಕ್ರೂರ ಆಸೆ ಗಾಸಿಪ್. ಸಾಮಾಜಿಕವಾಗಿ ಒಪ್ಪುವ ವಿಷಯಗಳು ವಾರ್ತೆಯಾದರೆ, ಮತ್ತೊಬ್ಬರ ವಯಕ್ತಿಕ ವಿಷಯಗಳು ಅನಾವಶ್ಯಕವಾಗಿ ಹರಡುವುದಕ್ಕೆ ಗಾಸಿಪ್ ಅನ್ನಬಹುದು. ಹಳ್ಳಿಗಳಲ್ಲಿ ರಾಮಣ್ಣ ಮನೆಯಲ್ಲಿ ಆಕಳು ಕರು ಹಾಕಿರುವುದು ನ್ಯೂಸ್... ಆದರೆ ರಾಮಣ್ಣ ಮತ್ತು ಅವನ ಹೆಂಡತಿಗೆ ಬಾಯಿ-ಬಾಯಿ ಅದುದ್ದು ಗಾಸಿಪ್. ಹಾಗೆಯ ಆಫೀಸ್ ನಲ್ಲಿ ಕಡಿಮೆ ಜನರಿರುವಾಗ ಮಾತನಾಡಲು ಪೇಟೆಂಟ್, ಪೇಪರ್, ಪ್ರಾಜೆಕ್ಟ್ ದಂತ ನ್ಯೂಸ್ ಗಳ ಜೊತೆ  ಸರಳಾ-ವೆಂಕಟ್ ಎಂಬ ಜೊತೆಯೂ ಗಾಸಿಪ್ ಆಗಲು ಸಾಧ್ಯತೆ ಇತ್ತು. ಅದು ಗಾಸಿಪ್ ಚಟಕ್ಕೆ ಬಿದ್ದವರ  ಹಸಿವು ತಣಿಸಲು ಅವಕಾಶ ನೀಡಿತ್ತು.

ಗಾಸಿಪ್ ಚಟದ ದುರಂತವೆಂದರೆ-ಅದು ಯಾವತ್ತು ಅಧಿಕೃತ ವಿಷಯವಲ್ಲ. ಆದರೆ ಕೇಳಿದವರೆಲ್ಲ ಅದನ್ನು ಅಧಿಕೃತ ವಿಷಯವೆಂದೇ ಭಾವಿಸುತ್ತಾರೆ.  ಗಾಸಿಪ್ ಹರಡುವಾಗ ಬರಿ  ಕೀ ಚೈನ್ ನಲ್ಲಿ 'S ' ಮತ್ತು 'V ' ಇರುವುದರಿಂದ ಸರಳಾ-ವೆಂಕಟ್ ಎಂಬುದು ಜೊತೆಯಾಗಿದೆ ಎಂದು ಹೇಳಿದರೆ  ಯಾರು ಬೆಲೆ ಕೊಡಲಾರರು. ಆ ಸುದ್ಧಿ ಹೇಳುವ ಅನಧಿಕೃತ ಪಶುವಿಗೆ ವಿಷಯ ಅಧಿಕೃತವಾಗಿ ಕೇಳುಗನ ಮೇಲೆ ಮುಡಿಸಬೇಕಾದರೆ  'ಬಿಳಿಯ ಕಾಗೆಯನ್ನು, ಒಂದು ಕಾಲಿನ ಹಸುವನ್ನು, ಕಾಲಿರುವ ಹಾವನ್ನು, ಕೊಂಬು ಇರುವ ಕುದುರೆಯನ್ನು' ಸೃಷ್ಟಿಸಿ ಬಿಡುತ್ತಾನೆ.  ಕೇಳುಗ 'ಮತ್ತೆ.. ಮತ್ತೆ...!" ಎಂದು ಉತ್ಸಾಹ ತೋರಿದ ಅಂದರೆ ಗಾಸಿಪ್ ವಿಷಯದಲ್ಲಿನ ವ್ಯಕ್ತಿಯ(ಇಲ್ಲಿ ನಾನು ಮತ್ತು ಸರಳಾ) ಸಮಾಧಿ ಖಂಡಿತ ಆಗಿತ್ತದೆ. ಸರಳಾ  ಹುಟ್ಟು ಹಬ್ಬಕ್ಕೆ ನಾನು ಗಿಫ್ಟ್ ಕೊಟ್ಟೆಯೆಂದು... ನಾವಿಬ್ಬರು ಬೈಕ್ ಮೇಲೆ ಹೋಗಿದ್ದೆವು ಎಂದು.... ನಾನೇ ಅವಳ ಬಸ್ ಟಿಕೆಟ್  ಬುಕ್ ಮಾಡಿರುವುದಾಗಿ .... ಅವಳು ನಾನು ಟೈಗರ್ ಸರ್ಕಲ್ ನಲ್ಲಿ ಒಂದೇ ಕಪ್ ನಲ್ಲಿ ಜ್ಯೂಸು ಕುಡಿದಿರುವುದನ್ನು ನೋಡಿರುವುದಾಗಿ  ವಿಚಿತ್ರ ವಿಷಯಗಳು ಹೊರಬಂದುದ್ದನ್ನು  ನಾನು ದಿನದ ಕೊನೆಯಲ್ಲಿ ಕೇಳಿ ಕಂಗಾಲಾದೆ. ನನಗೆ ಅಸಹ್ಯವಾಗ ತೊಡಗಿತ್ತು. ಸರಳಾ ಸೀದಾ-ಸದಾ ಹುಡುಗಿ ಕೇಳಿ ಏನು ತಿಳಿದಲೋ ಏನೋ ?

ನಾನಂತೂ ಎಲ್ಲವನ್ನು ಮರೆತು ಸಿಂಚನಾ ಕುರಿತಾಗಿ ಯೋಚಿಸುತ್ತಲೇ  ಆಫೀಸ್ ನಿಂದ ಹೊರ ಬಂದೆ.

ಭಾಗ ೮ ರಲ್ಲಿ ಮುಂದುವರಿಯಲಿದೆ ಮುಂದಿನ ಕತೆ.

Sunday, October 5, 2014

ಕನಸಿನ ಹುಡುಗಿ -ಸಿಂಚನಾ ::ಭಾಗ-೬(ಮಣಿಪಾಲದಲ್ಲಿ ದಿನಗಳು-ಸಿಂಚನಾ ನೆನಪಲ್ಲಿ)

ಯಾವತ್ತೂ ಇಲ್ಲದ ಸಂತೋಷ, ಸ್ವರ್ಗ ಲೋಕದ ಆನಂದ  ಮನಸಲ್ಲಿ ಜನಸಿತ್ತು. ಯಾರಿಗೂ ಹೇಳಲಾಗದ ಭಾವನೆಗಳ ಅಲೆ ಮನಸ್ಸಿನಲ್ಲಿ  ವಿವಿಧ ರೀತಿಯಲ್ಲಿ ಅಪ್ಪಳಿಸಿದಾಗ, ಕಣ್ಣು ಮುಚ್ಚಿ ಒಳಗೊಳಗೇ ನಗುತ್ತಿದ್ದೆ . ಹತ್ತಾರು ಸಹೋದ್ಯೋಗಿಗಳ ಮಧ್ಯೆ ಊಟ-ತಿಂಡಿಗೆ ಕುಳಿತಾಗಲು ಸಿಂಚನಾಳ ಭಾವುಕ ಜಗತ್ತು,  ನನ್ನನು ಮೇಜಿನ ಮೇಲೆ ನಡೆಯುವ ಚರ್ಚೆಗಳಿಂದ ದೂರವಾಗಿಸುತ್ತಿದ್ದವು. New  android  ಫೋನ್ ಬಗ್ಗೆ ಮಾತನಾಡಲಿ, ಪೇಟೆಂಟ್ ಗಳ ಕುರಿತಾಗಿ ವಿವರಿಸುತ್ತಿರಲಿ, ನಾಳೆಯ ಕೆಲಸದ  ಕುರಿತಾಗಿ ಚರ್ಚೆ ನಡೆಯಲಿ, ಸಾಲರಿಯ ಕುರಿತಾದ ವಾಖ್ಯನಗಳು ಗುಲ್ಲೆಬ್ಬಿಸಲಿ ನನಗೆ ಯಾವುದು ಸಂಬಂಧವಿಲ್ಲದಂತೆ ನಾನು ಮುಕ್ತ ಮನಸ್ಸಿನಿಂದ ಸಿಂಚನಾ ಕುರಿತಾಗಿ ಭಾವುಕ ಜಗತ್ತಿನಲ್ಲಿ ವಿಹರಿಸುತ್ತಿದ್ದೆ. ಆದರೆ, ನಿದ್ದೆಯಿಂದ ಎಚ್ಚೆತಾಗ ನೈಜತೆ ಅರ್ಥವಾಗುವಂತೆ, 'ಅವಳು ನನಗೆ ಸಿಗಲು ಸಾಧ್ಯವೇ?' ಅನ್ನುವ ಪ್ರಶ್ನೆಗೆ ಬಂದು ನಿಂತಾಗ ಮಾತ್ರ, ಏನು ಕಳೆದುಕೊಂಡವನ ಹಾಗೆ ಗಾಬರಿಯಾಗುತ್ತಿದ್ದೆ.

ನಾನು ಯಾವತ್ತು ಮೌನಿಯಲ್ಲ. ಮಾತು ಇಲ್ಲದೆ ನನ್ನ ದಿನವೇ ನಡೆಯದು. ಎಲ್ಲರನ್ನು ಮಾತನಾಡಿಸುತ್ತಲೇ ಧನಾತ್ಮಕವಾಗಿ ಕಾಲೆಳೆಯುತ್ತಾ ಸಾಗುವುದು ನನ್ನ ದಿನಚರಿಯೇ ಅಂದರೆ ತಪ್ಪಲ್ಲ.ಆದರೆ ಇದು ಅತಿಯಾಗಿ ಕೆಲವೊಮ್ಮೆ ಅಸಹ್ಯವಾಗುತ್ತದೆಯಾದರು ಅದು  ಬಿಡಲು ಮನಸ್ಸಿಲ್ಲ. ಹೊಸಬರು-ಹಳೆಬರು ಎಂದು ಬೇಧವಿಲ್ಲದೆ ಯಾರನ್ನಾದರು ಮಾತನಾಡಿಸುವ ತವಕ. ಆ ಗುಣದಿಂದಲೇ ಯಾವ ಬಸ್ಸು-ಜನ ಜನ್ಗುಲಿಯಿಲ್ಲದ ಹಳ್ಳಿಯಿಂದ ನಾನು ಬೆಂಗಳೂರಿಗೆ ಬಂದೆ. ನನಗೆ ಹೆದರಿಕೆಯೇ ಇಲ್ಲ. ಈ ಗುಣ ಒಳ್ಳೆಯದು, ಕೆಟ್ಟದು ಅನ್ನುವುದು ಆಯಾ ವಿಷಯ ಹಾಗೂ ವಕ್ತಿಗಳ ಮೇಲೆ ಅವಲಂಬಿತವಾಗಿರುತ್ತದೆ.

ನನ್ನ ಮೌನ  ಕಚೇರಿಯಲ್ಲಿ ಹೊಸ ಬದಲಾವಣೆಗೆ ಕಾರಣವಾಯಿತು. ಯಾವ ತಲೆ ಹರಟೆ ಇಲ್ಲದೆ ಸೀದಾ ನನ್ನ ಡೆಸ್ಕ್ ಗೆ ಬಂದು ಕೆಲಸ ಮಾಡುತ್ತಿದ್ದೆ. ಪ್ರತಿದಿನ ಮೊದಲು ಡೆಸ್ಕ್ ಸಮೀಪಿಸುವಾಗ ದೇವರ ಧ್ಯಾನ ಮಾಡುವುದು ರೂಢಿ. ಆದರೆ ಸಿಂಚನಾ ಧ್ಯಾನವಾಗಿದೆ. ಕಂಪ್ಯೂಟರ್ ನ ವಾಲ್ ಪೇಪರ್ ಸಿಂಚನಾ ನಂತ ಹುಡುಗಿಯ ಫೋಟೋ ಹಾಕಿದೆ(ಸಿಂಚನಾ ಫೋಟೋ ಇರಲಿಲ್ಲ). ಇದನ್ನು ಗೂಗಲ್ ನಲ್ಲಿ ಹುಡುಕಲು ಎರಡು ತಾಸು ವ್ಯಯಿಸಿದ್ದೆ. ನಾನು ಸಿನೆಮಾಗಳನ್ನು ನೋಡುತ್ತೆನಾದರು ಯಾವತ್ತೂ ಯಾವ ನಟಿಯನ್ನು, ನಟನ್ನು ರೋಲ್ ಮಾಡೆಲ್ ಎಂದು ಕಂಪ್ಯೂಟರ್ ಸ್ಕ್ರೀನ್ ಗಾಗಲಿ ಮನೆಯ ಗೋಡೆಗಾಗಲಿ ತಂದವನಲ್ಲ. ಆದರೆ, ಸಿಂಚನಾಳ ಫೋಟೋ ಒಂದು ಸಿಗಬಾರದೇ ಎಂದು ಅದೆಷ್ಟೋ ಬಾರಿ ಅಂದು ಕೊಂಡೆ. ಕಂಪ್ಯೂಟರ್ ಸ್ಕ್ರೀನ್ ಗೆ  ಹುಡುಗಿಯನ್ನು ಬದಲಾಯಿಸುತ್ತಲೇ ಹೋದೆ ಹೊರತು ಸಿಂಚನಾಳ ಯಾವ ಚೆಲುವು ಅವಳಲ್ಲಿ ಕಾಣಲಿಲ್ಲ. ಸಿಂಚು ಎಂಬ ಹೆಸರಿಂದ ಕಂಪ್ಯೂಟರ್ ಗೆ ಬೇಕಾದ ಪಾಸ್ವರ್ಡ್ ಗಳು ಬದಲಾದವು. ಸಿಂಚು ಎಂಬ ಹೆಸರು ಎಲ್ಲದಕ್ಕೂ  ಮೌಲ್ಯಯುತವಾಗಿತ್ತು.

ಕಚೆರಿಯಲ್ಲಿ  ಅದೆಷ್ಟೋ ಕೆಲಸಗಳು ಸಮಯಕ್ಕೆ ಸರಿಯಾಗಿ ಮಾಡಬೇಕಾಗಿರುತ್ತವೆ. ಇಲ್ಲದೆ ಹೋದರೆ ನಮ್ಮ ತಲೆಯ ಮೇಲೆ ಕುಳಿತುಕೊಳ್ಳಲು ಸಾಕಷ್ಟು ಜನ ಇದ್ದೆ ಇರುತ್ತಾರೆ. ಒಂದೊಮ್ಮೆ ನಮಗಿಂತ ಕಿರಿಯರು ನಮ್ಮ ತಲೆ ಮೇಲೆ ಕುಳಿತುಕೊಳ್ಳುವ ಪ್ರಸಂಗ ಬಂದಾಗ ಬದುಕು ಖಂಡಿತ ಅಸಹನಿಯವಾಗಿ ಬಿಡುತ್ತದೆ. ಸಣ್ಣವರಿಂದ ಕಲಿಯಬೇಕಾದ ವಿಷಯಗಳಿದ್ದಾಗ  ಕಲಿಯುವುದು ಒಳ್ಳೆಯ ಗುಣ. ಆದರೆ ಸಣ್ಣವರು ನಮ್ಮ ನಿರ್ಲಕ್ಷ್ಯತನವನ್ನು ನೋಡಿ-ನಮ್ಮ ಮೇಲೆ ಅಧಿಕಾರ ನಡೆಸಲು ಮುಂದೆ ಬಂದರೆ ಅಸಹ್ಯವಾಗುವುದು ಸಹಜ. ನಾನು ಸಿಂಚನಾಳ ಮೋಹ ಪಾಶದಲ್ಲಿ ಸಿಲುಕುತಿದ್ದಂತೆ ಕೆಲಸದಲ್ಲಿ ಏರುಪೆರು ಆದವು. ಸಮಯಕ್ಕೆ ಸರಿಯಾಗಿ ಇಮೇಲ್ ಮಾಡುತ್ತಿರಲಿಲ್ಲ, ಸಮಯಕ್ಕೆ ಸರಿಯಾಗಿ ಬೇರೆಯವರಿಗೆ ಉತ್ತರಿಸಲಿಲ್ಲ. ಆದರೆ ಜೊತೆಗೆ ಪ್ರೊಫೆಷನಲ್ ಆಗಿರಬೇಕಾದ ಇಮೇಲ್ ಗಳು  ಪ್ರೀತಿ-ಪ್ರೇಮ ಭಾವದ ಕಲ್ಪಿತ ಶಬ್ಧಗಳು ತೂರಿ ಬಂದವು. ಹಾಗೆಂದು ಕೆಲಸದಲ್ಲಿ ತೊಂದರೆ ಯಾಗಲಿಲ್ಲ.  ಭಾವದ ತುಡಿತಗಳು ತಳಹಬಂದಿಗೆ ಬಂದು 'ಅವಳು ಸಿಗುವಳೇ?' ಎಂಬ ಪ್ರಶ್ನೆ ಎದುರಾದಾಗ ಮಾತ್ರ ೧೫ ನಿಮಿಷ ನಾನು ವಿಚಲಿತನಾಗಿ, ಕಂಪ್ಯೂಟರ್ ನ ಹ್ಯಾಂಗ್ ಆದ ಮಾನಿಟರ್ ತರಹ ಕುಳಿತಿರುತ್ತಿದ್ದೆ.

ಆಲೋಚನೆಗಳ ಸರಣಿಯಲ್ಲಿ ಹಾಯಾಗಿದ್ದ ನಾನು ೫.೩೦ ಕ್ಕೆ ಆಫೀಸ್ ಬಿಟ್ಟು, ಬೈಕ್ ಹತ್ತಿ ಮೊದಲ ಭಾರಿ ನಾನೇ ನನ್ನನ್ನು ಹೀರೋ ಅಂದು ಕೊಂಡು ಬೈಕ್ ಹತ್ತಿ ಟೈಗರ್ ಸರ್ಕಲ್ ಗೆ ಹೋದೆ. ಯಾವ ಹುಡುಗಿಯನ್ನು ನೋಡಲಿಲ್ಲ. ನನಗೆ ಮನಸ್ಸು ಇಲ್ಲ. ನನಗೆ ಒಬ್ಬಳು ಸಿಕ್ಕಿದ್ದಳಲ್ಲವೇ? ಎಷ್ಟೊಂದು ಶುದ್ಧ ಭಾವನೆಗಳು...!. ಒಬ್ಬನೇ ಕುಳಿತು ಹೋಟೆಲ್ ಪಾಂಗಳಕ್ಕೆ ಬಂದು ಟೀ ಕುಡಿದೆ. ಹಾಗೆ  ತಿರುಗಿ ಬರುವಾಗ ದಾರಿಯಲ್ಲಿ ಕೀ ಚೈನ್ ಮಾರುತ್ತಿರುವುದನ್ನು ನೋಡಿದೆ. ಅಂತು ಹುಡುಕಾಡಿ 'S '(ಸಿಂಚು) ಮತ್ತು 'V ' (ವೆಂಕಟ್) ಎಂದು ಎರಡು ಅಕ್ಷರಗಳ ಜೊತೆಯನ್ನು ಮಾಡಿ ಕೀ ಚೈನ್ ರೆಡಿ ಮಾಡಿ ಮನೆಗೆ ಬಂದೆ. ನಾನು ಯಾವತ್ತು ಬೈಕ್ ಕೀ ಗೆ ಚೈನ್ ಹಾಕಿಸಿದವನಲ್ಲ.

ಮನೆಗೆ ಬಂದವನು ಜೀವನದಲ್ಲಿ ಇಂಜಿನಿಯರಿಂಗ್ ಗೆ ಸಂಬಂಧ ಪಡದ ಮೊದಲ ಚಿತ್ರ ಬಿಡಿಸಲು ಕುಳಿತುಕೊಂಡೆ. ಸಿಂಚನಾ ಚಿತ್ರ ಸಿಗದೇ ಇದ್ದರಿಂದ ನಾನೇ ಬಿಡಿಸಬೇಕು ಎಂಬ ಅಭಿಮತ. ಆದರೆ ಚಿತ್ರ ಕುರೂಪಿಯಾಗುತ್ತಲೇ ಇತ್ತು. ಜಡೆ ಬಿಡಿಸದರೆ ಕಿವಿಯ ಓಲೆ ಕಾಣಿಸುತ್ತಿರಲಿಲ್ಲ. ಮೂಗು ಬಿಡಿಸಿದರೆ ತುಟಿಗಳ ಅಂದ ಕೆಡುತ್ತಿತ್ತು. ಗಲ್ಲದ ಎತ್ತರ ತಗ್ಗುಗಳು ಎದ್ದು ಬರುತ್ತಲೇ ಇರಲಿಲ್ಲ. ಕಣ್ಣಿನ ರೆಪ್ಪೆಗಳು ಮೂಡಿಸುವುದು ಸಾಧವೇ ಆಗುತ್ತಿರಲಿಲ್ಲ.ಯಾಕಾದರೂ ನಾನು ಚಿತ್ರಕಲೆ ಕಲಿಯಲಿಲ್ಲ ಎಂದು ಶಪಿಸಿಕೊಂಡೆ.

ನನ್ನ ಕೈ ಯಲ್ಲಿ ಸ್ಮಾರ್ಟ್ ಫೋನ್ ಇತ್ತು. ಆದರೆ ಅವಳ ಚಿತ್ರ ತೆಗೆಯ ಬೇಕೆಂದು ಬಸ್ಸಿನಲ್ಲಿ ಸಾಧ್ಯವಾಗಲಿಲ್ಲ. ಅದು ಸಾಮಾಜಿಕವಾಗಿ ಸರಿಯೂ ಆಗುತ್ತಿರಲಿಲ್ಲ. ಅಂತು...ಚಿತ್ರಕಲೆ ಗೆ ಮೊದಲ ಬಾರಿ ಪ್ರಯತ್ನ ಮಾಡಿ, ನನಗೆ ಒಲಿಯದ ಕಲೆಯೆಂದು ಪೇಪರ್ ಹರಿದು ಹಾಕಿ, ಹಾಡು ಬರೆಯಲು ಪ್ರಯತ್ನ ಮಾಡಿದೆ.

ಹಾಡು ಸುಲಭವೇ? ಚಿತ್ರ ಕಲೆಯಾದರೂ ಕೈಯಿಂದ ಗೆರೆ ಎಳೆಯುವುದು...! ಹಾಡು ತಲೆಯಿಂದ ಬರಬೇಕು..! ಭಾವ ಇದ್ದರೇನಂತೆ ಅದನ್ನು ವ್ಯಕ್ತ ಪಡಿಸಲು ಶಬ್ಧಗಳು ಬೇಕು;ಅಚ್ಚುಕಟ್ಟಾದ ಆದಿ-ಅಂತ್ಯ ಪ್ರಾಸಗಳು ಬೇಕು! ಎಲ್ಲೋ ಕೇಳಿದ ಯಕ್ಷಗಾನ ಹಾಡುಗಳ ಶಬ್ಧಗಳೇ ನನ್ನ ಹಾಡುಗಳಾಗಿ ಬರುತ್ತಿದ್ದವು. ಏನೇ ಪ್ರಯತ್ನ ಮಾಡಿದರು ನನ್ನ ಸ್ವಂತ ಹಾಡು ಎದ್ದು ಬರಲೇ ಇಲ್ಲ. ಎಷ್ಟೇ ಪ್ರಯತ್ನ ಮಾಡಿದರು
     'ಸಿಂಚು ನಿನ್ನ ನೋಡಿದೆ....
      ನಿ ಎನ್ನ ಕಾಡಿದೆ'
 ಎಂದು ಬರೆದು ಸಾಕಾಗಿ ಮಲಗಿದೆ.

ಇದನ್ನು ಎಷ್ಟು ಜನ ಸತ್ಯವೆಂದು ಭಾವಿಸುತ್ತಿರೋ ಗೊತ್ತಿಲ್ಲ. ಗಂಡು ಜಾತಿಗೆ ಏನಾದರು ಒಂದು ಸಾಧನೆ  ಮಾಡಬೇಕು ಎಂಬ  ಉತ್ಸಾಹ ಇರಬೇಕು ಅಂದರೆ : ಒಂದು ಅವರು ಹೆಣ್ಣಿನ ಭಾವದ ಸಮಿಪ್ಪಕ್ಕೆ ಬಂದಿರಲೇಬಾರದು  ಅಥವಾ ಭಾವದ ಅಲೆಗಳ ಅಪ್ಪಳಿಸುವಿಕೆ ನಿತ್ಯವೂ ಆಗುತ್ತಿರಬೇಕು. ಯಾಕೆ ಹೇಳಿದೆ ಅಂದರೆ ಸಿಂಚನಾ ಭೇಟಿಯಾಗದೆ ಹೋಗಿದ್ದಾರೆ ಯಾವತ್ತು ನನ್ನಿಂದ ಚಿತ್ರ ಕಲೆ ಸಾಧ್ಯವೇ ಎಂದು ಒಂದು  ನಿಮಿಷ ಕೂಡ ನಾನು ಯೋಚಿಸುತ್ತಿರಲಿಲ್ಲವೋ ಏನೋ!.

ಹೆಣ್ಣು ಉತ್ಸದ ಚಿಲುಮೆ. ಹೆಣ್ಣು ಭಾವದ ಸೃಜನಾತ್ಮಕ ಕ್ರಿಯೆಯ ಮೇಲೆ ಪ್ರಭಾವ ಬಿರುವ ವಿಶೇಷ ಗುಣ ಹೊಂದಿದ್ದಾಳೆ. ಬಹುಶ: ಈ ಕಾರಣದಿಂದಲೇ ಹೆಣ್ಣು ವಿವಿಧ ಭಂಗಿಗಳಿಂದ ಶಿಲಾಬಾಲಿಕೆಯಾರಾಗಿ ನಿರ್ಮಿಸಿರಬೇಕು.ಶಿಲಾಬಾಲಿಕೆಯರ ದೇಹ ರಚನೆಯಿಂದ ನೋಡುವ ದೃಷ್ಟಿಯಿಂದ ಕಾಮ ಭಾವ ಸ್ಪೂರಣ ಗೊಳ್ಳಬಹುದು; ಆದರೆ ಕಾಲ್ಪನಿಕ ಜಗತ್ತಿನ ಸೌಂದರ್ಯ ಭಾವದಿಂದ ನೋಡಿದಾಗ ಅದೊಂದು ಬದುಕಿನ ಉತ್ತೇಜಕ ಶಕ್ತಿ. ಭರತ ನಾಟ್ಯದಲ್ಲೂ ಇದೆ ಭಾವ.  ದೇಹದ ಆಂಗಿಕ ರಚನೆಯ ಸೌಂದರ್ಯಗಿಂತಲೂ  ಅಂಗ-ಸೌಷ್ಟವಗಳ ಭಾವ ಪೂರಿತ ಚಲನ ವಲನ ಅಸಕ್ತಿಯಾಗಿರುತ್ತದೆ. ಹೀಗಾಗಿ ಎಲ್ಲ ಹೆಣ್ಣುಗಳು ಒಂದೇ, ಆದರೆ ನಾವು ನೋಡುವ ದೃಷ್ಟಿ ನಮ್ಮ ಭಾನೆಗಳನ್ನು ನಿರ್ಮಿಸುತ್ತಾ ಸಾಗುತ್ತದೆ.

ಇಷ್ಟೊಂದು ಆಲೋಚನೆಯ ಮಧ್ಯೆ ಸ್ನಾನ-ಊಟ ಮುಗಿಸಿ, ಹಾಸಿಗೆಯ ಮೇಲೆ ಹೊರಳಾಡುತ್ತಿದ್ದೆ. ನಿದ್ದೆಯ ಸಮಯ ಗೊತ್ತಿಲ್ಲ.

ಮುಂದಿನ ಭಾಗದಲ್ಲಿ ಸಿಂಚನಾ ಕತೆ ಮುಂದುವರಿಯುತ್ತದೆ.
 
 

Friday, August 15, 2014

ಕನಸಿನ ಹುಡುಗಿ -ಸಿಂಚನಾ ::ಭಾಗ-೫(ಪಿರಂಜೆಯಿಂದ ಧರ್ಮಸ್ಥಳಕ್ಕೆ ಹೊದುದ್ದು)


ಭಾಗ -೫ (ಪಿರಂಜೆಯಿಂದ ಧರ್ಮಸ್ಥಳಕ್ಕೆ ಹೊದುದ್ದು)
ಮಳೆಯಲ್ಲಿ ಬೆವತು ನಿಂತೆ. ಒಂದಿಷ್ಟು ರೈತ ಮಹಿಳೆಯರು ನನ್ನ ಮುಂದೆ ಹಾಡು ಹೊದುದ್ದು ಬಿಟ್ಟರೆ ಪಿರಂಜೆಯ ಯಾವ ಜೀವಿಯು ಬರಲಿಲ್ಲ. ಬಸ್ಸಿಗೆ ಕಾಯುತ್ತ, ವಿವಿಧ ವಿಚಾರ ಲಹರಿಯಲ್ಲಿ ಮುಳುಗಿದೆ.

ದೇವರ ದರ್ಶನಕ್ಕಾಗಿ ಬಂದು ಹುಡುಗಿಯ ಹಿಂದೆ ಬಿದ್ದು ಪಾಪವನ್ನು ಕಟ್ಟಿಕೊಂಡೆ ಎಂಬ ಪಾಪ ಪ್ರಜ್ಞೆ ಒಂದೆಡೆಯಾದರೆ,ಸೌಂದರ್ಯದ ಮಹಾನ್ ಚಲುವೆಯನ್ನು ಕಣ್ಣಲ್ಲಿ ಕಣ್ಣಿಟ್ಟು, ಕೊನೆಗೂ ಕೈಗೆ  ಸಿಗಲಾರದು ಎಂಬ ಹತಾಶ ಭಾವ ಇನೊಂದೆಡೆ. ಇತ್ತ ಅಳುವು ಇಲ್ಲ, ಹಾಗೆಂದು ನಗುವು ಇಲ್ಲ. ಆದರೆ ಏನು ಇಲ್ಲದ ಸಮ ಸ್ಥಿತಿಯೂ ಅಲ್ಲ. ಒಂದಿಷ್ಟು ದುಗುಡ, ಒಂದಿಷ್ಟು ಸಂತೋಷ, ಒಂದಿಷ್ಟು ಭಯ, ಒಂದಿಷ್ಟು ಕುತೂಹಲ ಎಲ್ಲ ಸೇರಿದ  ಮನಸ್ಸಿನ ಭಾವಗಳ ಮಸಾಲಾ ಪುರಿ.

ಹುಡುಗರು ಅಂದರೆ ಎಷ್ಟೊಂದು ಪಡಪೋಸಿಗಳುಗಳು ಅನಿಸಿತು. ಕೇವಲ ನೋಡಿದ ಹುಡುಗಿಗಾಗಿ ಬಸ್ಸಿಳಿದು ಬಂದೆ ಎಂಬ ವಿಷಯ ಯಾರಿಗಾದರು ಹೇಳಿದರೆ, ಅಥವಾ  ಯಾರಾದರು ನೋಡಿದ್ದರೆ ನನ್ನನ್ನು ಏನೆಂದು ಕರೆದಾರು?  ಎಂದೆಲ್ಲ ಚಿಂತಿಸುತ್ತಲೇ, ಇನ್ನೊಮ್ಮೆ ನಾನು ಯಾಕೆ ಹೆದರಬೇಕು? ನನಗೇನು ಬೇಕು ನಾನು ಮಾಡಿದ್ದೇನೆ, ಅದೆಲ್ಲ ಜನ ತಿಳಿದು ಮಾಡುವುದೇನಿದೆ ಎನ್ನುವ ಇನ್ನೊಂದು ಉತ್ತರವೂ ಸಿದ್ಧಗೊಂಡಿತ್ತು. ಹೀಗೆ ವಾದ-ಪ್ರತಿವಾದಗಳು ನನ್ನ ಮನಸ್ಸಲ್ಲೇ ಉಂಟಾಗಿ ನಾನು ಮಾತ್ರ ಬಳಲುತ್ತಲೇ ಇದೆ. ಇತ್ತ, ಬಸ್ಸುಗಳ ಸಂಖ್ಯೆ ಕೂಡ ಕಡಿಮೆ. ಛತ್ರಿ ಹಿಡಿದುಕೊಂಡು, ನಿಂತಲ್ಲಿ  ನಿಲ್ಲಲಾಗದೆ ಹಿಂದೆ ಮುಂದೆ ರಸ್ತೆಯ ಪಕ್ಕದಲ್ಲೇ ನಡೆದಾಡಿದೆ. ಸಮಯ ಸುಮಾರು ಹನ್ನೆಂದು ಆಗುತ್ತಲಿತ್ತು.

ಅಂತು ಕೊನೆಗೂ ಬಸ್ಸು ಬಂತು. ಅದು ಕೆಂಪು ಬಸ್ಸು;ಹುಬ್ಬಳಿ-ಧರ್ಮಸ್ಥಳ ಬೋರ್ಡ್;ಹತ್ತಿ ಕುಳಿತೆ.ಎಲ್ಲವನ್ನು ಮರೆತು 'ಸಿಂಚು'(ಬಸ್ಸಿನಲ್ಲಿ ಆ ಹುಡುಗಿಯರು ಮಾತನಾಡುವಾಗ ಕೇಳಿದ್ದು) ಎಂಬ ಒಂದೇ ಶಬ್ದ ನನ್ನ ಹೃದಯದಲ್ಲಿ  ಮತ್ತೆ ವಿವಿಧ ಕನಸ್ಸುಗಳನ್ನು ಕಲ್ಪಿಸುತ್ತಲಿತ್ತು. ಮಣಿಪಾಲದಲ್ಲಿ ಬಸ್ಸು ಹತ್ತಿದಾಗ, ದೇವರಲ್ಲಿ ಹುಡುಗಿಯನ್ನು ಕೇಳಬೇಕು ಅಂದುಕೊಂಡಿದ್ದ ನಾನು, ಪಿರಂಜೆಯ ನಂತರದ ಪ್ರಯಾಣದಲ್ಲಿ 'ಸಿಂಚು' ನನ್ನ ಹೆಂಡತಿಯಾಗಬೇಕು ಎಂಬ ಭ್ರಮಿತ ಭಾವ ನನ್ನ ಕಾಡತೊಡಗಿತ್ತು. ಹಾಗೆಂದು ಮತ್ತೊಮ್ಮೆ ನನ್ನ ಜೀವನದಲ್ಲಿ 'ಸಿಂಚು'ನಾ ನೋಡುತ್ತೇನೆ ಎನ್ನುವ ಕಲ್ಪನೆ ಯಾಗಲಿ, ಸಾಧ್ಯತೆಯಾಗಲಿ ನನಗೆ ಉಳಿದಿರಲಿಲ್ಲ.

ಪ್ರಪಂಚದಲ್ಲಿ ಕಠಿಣ(ಹಾರ್ಡ್ ವರ್ಕ್) ಮೂಲಕ ಹಣವನ್ನು, ಹೆಸರನ್ನು, ಶಿಕ್ಷಣವನ್ನು, ಸ್ಥಾನ-ಮಾನಗಳನ್ನು ಗಳಿಸಬಹುದು. ಆದರೆ ಹುಡುಗಿಯನ್ನು ಪಡೆಯುವುದು ಹಾರ್ಡ್ ವರ್ಕ್ ಮೂಲಕ ಖಂಡಿತ ಅಲ್ಲ. ಅದು ಹಣೆ ಬರಹ. ಅದು ದೇವರ ನಿರ್ಧಾರ. ದೇವರಿಗೂ ಒಂದು ಚಟ ಇದೆ. ಅವನು ಎಲ್ಲವನ್ನು ದುಡಿದು ಗಳಿಸಬೇಕೆಂದು ಭಾವಿಸುತ್ತಾನೆ. ಆದರೆ ಹುಡುಗಿ ಮಾತ್ರ ಯಾರು ಎಂದು ಸ್ವರ್ಗದಲ್ಲೇ ನಿರ್ಧರಿಸಿ ಬಿಡುತ್ತಾನೆ. ಈ ದೇವರಿಗೆ ಹುಡುಗಿ ಹುಡುಕಿಕೊಳ್ಳುವ ಕೆಲಸದಲ್ಲಿ ಮಾತ್ರ ತನ್ನ ತೊಡಗಿಸಿ ನಮ್ಮ ಆಟ ಅಡಿಸುತ್ತನಲ್ಲ ಅನಿಸಿತು. ಆದರೂ ದೇವರಲ್ಲವೇ ? "ದೇವರೇ, ಮುಂದೇನು ನನಗೊತ್ತಿಲ್ಲ, ನನಗೆ 'ಸಿಂಚು' ಬೇಕು" ಎಂದು ಭಾವ ಪರವಶನಾಗಿ ನನ್ನ ತೊಡೆಯ ಮೇಲಿದ ಬ್ಯಾಗ್ ನನ್ನು ಒತ್ತಿಕೊಂಡು  ಒಂದಿಷ್ಟು ಕ್ಷಣ ಕುಳಿತುಬಿಟ್ಟೆ. ಅವಳು ಸಿಗಲ್ಲ ಆದರು ನನಗೆ ಆಶವಾದಿತನ ಮರೆಯಾಗಲಿಲ್ಲ.

ಭಾವನೆಗಳ ಸರಮಾಲೆಯಲ್ಲಿ ಮುಳುಗಿದ ನಾನು, ನೇತ್ರಾವತಿಯ ತೀರಕ್ಕೆ ಬಂದು ಇಳಿದೆ. ನದಿಯಲ್ಲಿ ಮುಳಿಗಿದೆ. ನಾನು ದೇವರದರ್ಶನಕ್ಕೆ ಬಂದು ಹುಡುಗಿಯ ಹಿಂದೆ ಹೋದ ಪಾಪಕ್ಕೆ ಪರಿಹಾರ ಕೊಡು ಎಂದು ಐದು ಭಾರಿ ಮುಳುಗಿ,ಮಡಿ ಬಟ್ಟೆಯಲ್ಲಿ ದೇವರದರ್ಶನಕ್ಕೆ ಸಾಗಿದೆ. ಸ್ನಾನದಿಂದ ಪಿರಂಜೆಯ ಮಣ್ಣು ತೊಳೆದಿದ್ದರು, ಮನಸ್ಸಿನಿಂದ  ಪಿರಂಜೆಯ ಹುಡುಗಿಯ ಚಿತ್ರ ಮಾತ್ರ ಹಾಗೆ ಇತ್ತು. ನನ್ನ ಮನಸ್ಸಿನೋಳಗಿದ್ದ ಸಿಂಚು ಚಿತ್ರ ಒಂದು ಕ್ಷಣವೂ ಮರೆ ಮಾಚಲು ಸಾಧ್ಯವಾಗಿಲ್ಲ. ದೇವರ ದರ್ಶನದುದ್ದಕ್ಕು 'ಸಿಂಚು' ನನಗೆ ಬೇಕು ಎಂದು ಮೊರೆ ಇಡುತ್ತಲೇ ಇದೆ. 'ಸಿಂಚು' ಹೆಸರಿನಲ್ಲಿ ಒಂದು ಮಂಗಲಾರತಿಯನ್ನು ಮಾಡಿಸಿದೆ. ಕೊನೆಗೂ ದೇವರ ದರ್ಶನ ಮುಗಿಸಿ, ಊಟ ಮಾಡಿ, ಧನಾತ್ಮಕ ವಿಚಾರಗಳಿಂದ  ಗೊಮ್ಮಟೇಶ್ವರ ಗುಡ್ಡದ ಮುಂದೆ ಸಾಗಿದೆ.

ನಾನು ಒಬ್ಬನೇ. ಸಿಂಚು ಹೃದಯದ ಒಳಗೆ ಇದ್ದರು ಹೊರಗೆ ಬಂದು ಮಾತನಾಡುತ್ತಿರಲಿಲ್ಲ. ಹೀಗಾಗಿ ಭೌತಿಕವಾದ ಏಕಾಂತತೆ ನನಗೆ ಕಾಡುತ್ತಲೇ ಇತ್ತು. ಹೀಗಿರುವಾಗ, ಬೆಟ್ಟದ ಮೇಲೆ  ಆರು ಗಂಟೆಯ ಸಮಯದಲ್ಲಿ ತುಂಬಾ ಜನರು ತಿರುಗಾಡುತ್ತಿದ್ದರು. ಸಾವಿರಾರು ಜನರು ತಮ್ಮ ಮಕ್ಕಳ ಜೊತೆ, ಹೆಂಡತಿಯ ಜೊತೆ, ಗೆಳೆಯರ ಜೊತೆ ಹರಟುತ್ತ ಸಾಗುತ್ತಿದ್ದರು. ನಾನು ಹುಲ್ಲುಗಾವಲಿನ ಒಂದು ಬದಿಯಲ್ಲಿ ಕುಳಿತು ಏಕಾಂತತೆಯ ನಡುವೆ, ಸಿಂಚು ಎಂಬ ಒಳಗಿರುವ ವಿಷಯವನ್ನೇ ಮೆಲಕು ಹಾಕುತ್ತ ಒಂದಾದರೂ ದಾರಿ  ಸಿಗಬಹುದೇ? ಹಣಬರಹದಲ್ಲಿ ಏನಿದೆ ಅಂತೆಲ್ಲ ಯೋಚಿಸತೊಡಗಿದೆ.

ಹೀಗೆ ಹುಲ್ಲುಗಾವಲಿನ ಮೇಲೆ ಕುಳಿತಿರುವಾಗ, ನನ್ನ ಪಕ್ಕದಲ್ಲಿ ಕುಳಿತಿರುವ ದಂಪತಿಗಳು ತಮ್ಮ ಮೂರು ವರ್ಷದ ಹೆಣ್ಣು ಮಗುವಿನೊಂದಿಗೆ ಸಂತೋಷದ ಕ್ಷಣಗಳನ್ನು ಕಳೆಯುತ್ತಲಿದ್ದರು. ಮಗುವು ಪುಟ್ಟ ಹೆಜ್ಜೆಗಳನ್ನು ಇಡುತ್ತ, ಆ ಕಡೆ ಈ ಕಡೆ ಓಡಾಡುತ್ತ ಇತ್ತು. ಹೀಗೆ ಓಡುವ ತವಕದಲ್ಲಿ ಮಗುವು ಒಮ್ಮೆ ನನ್ನ ಬ್ಯಾಗ್ ಗೆ ಸಿಕ್ಕಿ ಬಿದ್ದು ಬಿಟ್ಟಿತ್ತು. ನಾನು ಮಗುವನ್ನು ಎತ್ತಿದೆ; ಅವಳ ಗಲ್ಲವನ್ನು ಹಿಡಿದು, ಅವಳ ನಗುವನ್ನು ನೋಡಲು ಉತ್ಸುಕನಾಗುತ್ತಿದ್ದಂತೆ,  ಅವಳ ಅಮ್ಮ ತಿರುಗಿ ನೋಡಿದ್ದೇ ರಂಪಾಟ ಮಾಡಿಬಿಟ್ಟರು. ನಾನು ಹೆದರಲಿಲ್ಲ. ಮಗುವನ್ನು ಬಿಟ್ಟೆ; ಅದು ನನ್ನ ನೋಡಿ ನಗುತ್ತಲೇ ಇತ್ತು. ಆದರೆ ಅಮ್ಮ ಮಾತ್ರ, ನಿಂತ ಭಂಗಿಯಲ್ಲೇ, ಕಣ್ಣು ಮಿಟಿಕಿಸದೆ ನೋಡಿದಾಗ ನನ್ನ ಹೃದಯ ತಲ್ಲಣ ಗೊಂಡಿತು. ಇವತ್ತಿನ ಪರಿಸ್ಥಿತಿಯಲ್ಲಿ ಈ ಅಮ್ಮಂದಿರಿಗೆ ಯಾರನ್ನು ನಂಬಲು ಸಾಧ್ಯವಾಗುತ್ತಿಲ್ಲ, ಮಕ್ಕಳು ಸಣ್ಣವರು ಮುಗ್ದರು ಎನ್ನುವ ಅರಿವಿಲ್ಲದ  ಮೃಗೀಯ ಜನರ ಮಧ್ಯೆ ನಮ್ಮಂತವರಿಗೆ  ಮಕ್ಕಳ ಮುಗ್ದ ನಗುವನ್ನು ಕಾಣುವ ಅವಕಾಶ ಕಳೆದಿದೆ ಎಂದು ಭಾವಿಸಿ ನಾನೇ ಶಪಿಸಿ ಕೊಂಡೆ. ಆದಿನದಿಂದ ಎಷ್ಟೇ ಮುಗ್ದ ಮಕ್ಕಳು ಕಂಡರೂ ದೂರದಿಂದ ನೋಡಿ, ನಗುವಿಗೆ ಪ್ರತಿ ನಗು ಕೊಟ್ಟು ಬೈ ಬೇ ಎಂದು ಹೇಳಿ ಹೋಗುತ್ತೇನೆ.

ಹೀಗೆಲ್ಲ ನಡೆದು, ಪ್ರತಿಯೊಂದು ಎದುರಾದ ಕಲ್ಲಿಗೂ 'ಸಿಂಚು' ಬೇಕು ಎಂದು ಮೊರೆಯಿಡುತ್ತ, ಶನಿವಾರ ರಾತ್ರಿ ಧರ್ಮಸ್ಥಳದಲ್ಲಿ  ಕಳೆದು ಬೆಳಿಗೆ ಅಲ್ಲಿಂದ ಹೊರಟು, ಮಂಗಳೊರು ಮೂಲಕ ಮಣಿಪಾಲ ಸೇರಿದೆ. ಮಣಿಪಾಲ ಸೇರಿದಾಗ ಸಂಜೆ ೪ ಗಂಟೆಯಾಗಿತ್ತು. ಮನಸ್ಸು ಖಾಲಿಯಾದ  ಭಾವವಿತ್ತು.ದೇಹ ಬಳಲಿತ್ತು; ಸ್ನಾನ ಮಾಡಿ ಎರಡು ತಾಸು ಮಲಗಿದೆ. ಏಳುಗಂಟೆಗೆ ಸರಿಯಾಗಿ ನಿತ್ಯ ಕ್ರಮದಂತೆ ದೇವರಿಗೆ ದೀಪ ಹಚ್ಚಿ, ಮಂಗಳೂರು ಆಕಾಶವಾಣಿ ಕೇಳುತ್ತ, ಸಿಂಚು ಮರೆಯ ಬೇಕು ಎಂದು ಪ್ರಯತ್ನ ಪಡುತ್ತಿದ್ದೆ. ಮರೆತರು ಮರೆಯಲಾಗದ ಸಿಂಚು ಮತ್ತೆ ಮತ್ತೆ ಬರುತ್ತಲಿದ್ದಳು.

ಭಾಗ ೬: (ಮಣಿಪಾಲದಲ್ಲಿ ಚಿಂತೆಗಳು) ಕಾಡು ನೋಡಿ.

Monday, August 11, 2014

ಕನಸಿನ ಹುಡುಗಿ -ಸಿಂಚನಾ ::ಭಾಗ-೪(ಪಿರಂಜೆಯಲ್ಲಿ ಸಿಂಚನಾ ಹಿಂದೆ ಹೊದುದ್ದು)

In order to understand the story you need to read previous parts. You can read the earlier parts  in   
-------------------------------------------------------
http://heartwaves4u.blogspot.in/ 
-------------------------------------------------------

ಭಾಗ-೪:
ನಾನು ಪಿರಂಜೆ ಎಂಬ ಊರಿನ ಬಗ್ಗೆಯಾಗಲಿ ಅಥವಾ ಯಾವುದೇ ತುಳು ಭಾಷೆಯ ಪದವಾಗಲಿ ಕೇಳಿದ ನೆನಪಿಲ್ಲ. ನನಗೆ ಗೊತ್ತಿರುವ ಎಲ್ಲ ಯಕ್ಷಗಾನ ದಿಗ್ಗಜರ ಹೆಸರಗಳ ಸುತ್ತ 'ಪಿರಂಜೆ' ಎಂಬ ಶಬ್ದ ಇದೆಯೇ ಎಂದು ಹುಡುಕಾಡಿದೆ. ಯಾವ ಪ್ರಯೋಜನವಾಗಲಿಲ್ಲ. ನನ್ನ ಪಕ್ಕದಲ್ಲಿ ಕುಳಿತ ಅಜ್ಜನಿಗೆ ವಿಷಯ ಕೇಳಬೇಕು ಎಂದು ಮಾತಿನಲ್ಲಿ ತೊಡಗಿದೆ.
' ಇಲ್ಲಿಂದ ಬೆಳ್ತಗಂಗಡಿ ಎಷ್ಟು ದೂರ ಉಂಟು?".
'ಇಲ್ಲಿಂದ ಸುಮಾರು ೨೦ ಮೈಲಿ ದೂರ ಇದೆ' ಎಂದ.
ನಾವೆಲ್ಲ ಹೊಸ ಜಮಾನದ ಹುಡುಗರು. ಅಮೆರಿಕನ್ ಪದ್ಧತಿಯಿಂದ ಪ್ರಭಾವಿತರೆ ಹೊರತು ಬ್ರಿಟನ್ ಮೈಲಿ ನಮಗೆ ಅರ್ಥವಾಗುವುದಿಲ್ಲ. ಆದರೆ ನನಗೆ ಕೆಲಬೇಕಾದುದ್ದು ಬೆಳ್ತಂಗಡಿಯ ದೂರ ಅಲ್ಲ. ಬದಲಾಗಿ 'ಪಿರಂಜೆ' ಒಂದು ಊರೇ? ಅದು ಎಲ್ಲಿದೆ ಅನ್ನುವುದು. ಅದಕ್ಕಾಗಿ ಇದು ಪ್ರಾರಂಭಿಕ ಮಾತು ಮಾತ್ರ. ಮತ್ತೆ ಅವನ ಕಡೆ ತಿರುಗಿ,
'ಮುಂದಿನ ಊರುಗಳು ಯಾವುವು? ಇಲ್ಲಯ ಊರುಗಳು ಚೆನಾಗಿವೆ".
'ತುಂಬಾ  ಊರುಗಳುಂಟು. ಮುಂದಿನದು ಪಿರಂಜೆ. ನೀವು ಎಲ್ಲಿಗೆ ಹೋಗುವುದು ಮಹಾರಾಯರೇ?".  ಎಂದು ಮುದುಕ ಮಾತನಾಡಿದ. ನನ್ನ ಉತ್ತರ ಸಿಕ್ಕಿತು. ಮುದುಕನ ಪ್ರಶ್ನೆಗೆ ಉತ್ತರಿಸಬೇಕೆಂಬ ಕನಿಷ್ಠ ಸೌಜನ್ಯ ನನಗೆ ಉಳಿಯಲಿಲ್ಲ. ನನ್ನ ಹುಡುಗಿಯ ಕುರಿತಾದ ಗಣಿತವೆ ನನ್ನ ಪ್ರಪಂಚ.

ಊರು-ಕೇರಿ-ಪಟ್ಟಣ ಸುತ್ತುವರಿಗೆ ಇಂಥ ದಾರಿಹೊಕರೆ ನಮಗೆ ನಿಜವಾದ ದಾರಿ ತೋರಿಸುವರು.ನಾವೆಲ್ಲಾ 'ಇಂಟರ್ನೆಟ್ ನಿಂದ ಗ್ಲೋಬ್ ಇಸ್  ವಿಲೇಜ್' ಎಂಬ ವಾಕ್ಯವನ್ನು ಹೇಳುತ್ತಾ ಜಿಪಿಎಸ್ ನಲ್ಲಿ ಎಲ್ಲವು ಇರುತ್ತೆ ಎಂದು ಮೊಬೈಲ್ ನ್ನು ಹಿಡಿದು ತಿರುಗುತ್ತಿದ್ದರೂ, ಮತ್ತೆ ಮೊಬೈಲ್ ಸರಿಯಾಗಿ  ತೋರಿಸುತ್ತದೋ ಇಲ್ಲವೋ ಎಂದು ಸಂದೇಹಕ್ಕೆ ಒಳಗಾಗಿ ಇಲ್ಲವೇ, ನಕ್ಷೆ ಹಾಗೂ ಇರುವ ಸ್ಥಿತಿಗಳು ಸಂಬಂಧಗಳೇ ಇರದೇ ದಾರಿಹೋಕರನ್ನು ಆಶ್ರಯಿಸುವುದು ಅನಿವಾರ್ಯವಾಗಿ ಬಿಡುತ್ತದೆ. ಇಂಥ ದಾರಿಹೋಕರು ನಮ್ಮ ತಂತ್ರಜ್ಞಾನಕ್ಕಿಂತಲೂ ಹೆಚ್ಚು  ನಂಬಿಕಾರ್ಹರು. ಕೆಲವೊಮ್ಮೆ ನಾವು 'ಥ್ಯಾಂಕ್ಸ್' ಎಂದು ಹೇಳಲು ಕೂಡ ಮರೆತು ಬಿಡುತ್ತೇವೆ.

ನನಗೆ ಉಳಿದಿರುವ ಸಮಯ ಬಹಳ ಕಡಿಮೆ. ಇಂಜಿನಿಯರಿಂಗ್ ನ  ಪರೀಕ್ಷೆಯ ಕೊನೆಯ 'ಐದು ನಿಮಿಷ ಇದೆ' ಇಂದು ಮೇಲ್ವಿಚಾರಕ ಹೇಳಿದಾಗ, ಉಂಟಾಗುವ ಉದ್ವೇಗ ನನಗಾಗುತ್ತಿದೆ. 'ಲವ್ ಆಟ್ ಫಸ್ಟ್ ಸೈಟ್' ಎಂಬ ನಿಯಮವನ್ನು  ನಿಜವಾಗಿ ಸತ್ಯವೆಂದು ತೋರಿಸಬೇಕಾದ  ಜವಾಬ್ಧಾರಿ ನನ್ನ ಮೇಲಿದೆ. ಇಷ್ಟೊಂದು ಹೊತ್ತು ಬಸ್ಸಿನಲ್ಲಿ  ಹುಡುಗಿಯ  ಮುಖವನ್ನು ನೋಡುತ್ತಾ, ರೋಮಾಂಚನ ಗೊಂಡಿರುವ ನಾನು ಮುಂದೇನು ಎಂದು ಯೋಚಿಸದೆ ಹೋದರೆ, ಅರ್ಜಿಯಯೊಂದನ್ನು ಬರೆದು ಸಹಿ ಮಾಡದ ಹಾಗಾಗುವುದಿಲ್ಲವೇ? ದೇವರು ಕೊಟ್ಟರೂ, ಸ್ವೀಕರಿಸುವ ಮನಸ್ಥಿತಿಯಿಲ್ಲದ ದರಿದ್ರ ನಾರಾಯಣ ನಾನಗುವುದಿಲ್ಲವೇ? ಮುಂದಿಂಗ ಜನಾಂಗಕ್ಕೆ 'ಪ್ರೀತಿಯಲ್ಲಿ ಬಿಳುವುದಕ್ಕೆ ಬಸ್ಸಾದರೂ ಅದೀತು' ಎಂಬ ಸಂದೇಶವನ್ನು ನನ್ನಿಂದ ಸಾಧ್ಯವಾಗುವ ಅವಕಾಶ ಬಂದಿರುವಾಗ ಕಳೆದುಕೊಳ್ಳಬೇಕೆ ? ಸಾವಿರಾರು ಪ್ರಶ್ನೆಗಳು! ಒಮ್ಮೆ ಹುಡುಗಿ ಇಳಿದು ಹೋದಳೆಂದರೆ ನನ್ನ ಮುಂದೆ ಇರುವುದು ಕೇವಲ ಅವಳು ಕುಳಿತ ಸೀಟ್ ಹಾಗೂ ಮನದ ಆಳದಲ್ಲಿ ಇವರೆಗೆ ನಾನು ಒತ್ತಿಕೊಂಡ ಅವಳ ಚಿತ್ರಣ ಮಾತ್ರ.

ಹೋಗಿ ಮಾತನಾಡಿಸಲೇ? ದಾರಿ ಹೋಕನ ಮುಖವನ್ನು ನೋಡದ ಸಭ್ಯ ಹುಡುಗಿ ನನ್ನನ್ನು ಎಂದು ತಿಳಿದಾಳು? ಸಮಾಜದ ಮಧ್ಯೆ  ಯಾರೆಂದು ಗೊತ್ತೇ ಇರದವಳ ಮುಂದೆ ಹೇಗೆ ನಿಲ್ಲಲಿ ? ಏನು ಹೇಳಲಿ ? ಧೈರ್ಯವಾದರೂ ಇರಬೇಕಲ್ಲ? ಪ್ರೀತಿಯಂದರೆ  ನಾನೇನು ಸೌಂದರ್ಯ ಕಂಡೆ ಎಂದು ತಲೆ ತಗ್ಗಿಸಿ 'ಆಯ್ ಲವ್ ಯು' ಎಂದು ಬಾಯಿ ಕಿಸಿಯುವ  ಮಂತ್ರವೇ ? ಇಂಥ ಸಂದರ್ಭವೊಂದು ನನ್ನ ಜೀವನದಲ್ಲಿ ಬರುವುದು ಎಂದು ನಾನು ಯಾವ ಪೂರ್ವ ನಿರೀಕ್ಷೆಯನ್ನು ಇಟ್ಟುಕೊಂಡಿರಲಿಲ್ಲ. ನೂರಾರು ರೀತಿಯಲ್ಲಿ ಆಲೋಚಿಸುವಾಗಲೇ, ಹಿಂದಿನ ಡೋರ್ ನಿಂದ "ಪಿರಂಜೆ" ಎಂದು ಕ್ಲೀನರ್  ಒದರಿ ಬಿಟ್ಟ.  ಹುಡುಗಿಯರು ಇಳಿಯಲಾರಂಭಿಸಿದರು. ನಾನು  ಮುಂದಿನ ಸೀಟ್ ನಿಂದ, ಜನಗಳನ್ನು ದೂರು ಸರಿಸುತ್ತ ಹಿಂದಿನ ಬಾಗಿಲಿಗೆ ಬಂದೆ. "ನೀವು ಬೆಳ್ತಂಗಡಿಗೆಯಲ್ವಾ? " ಎಂದು ಕ್ಲೀನರ್ ಹೇಳುತಿದ್ದರು ಇಳಿದು ಬಿಟ್ಟೆ. ನಾನು ಅವನಿಗೂ ಉತ್ತರಿಸಲಿಲ್ಲ. ನೂರಾರು ರುಪಾಯಿ ಕೊಟ್ಟು ಟಿಕೆಟ್ ತಗೆಸಿದ ನಾನು ತಲೆ ಕೆಡಿಸಿಕೊಂದಿರದಿದ್ದರು, ಟಿಕೆಟ್ ಕೊಟ್ಟ ಆತನಿಗೆ ನಾನು ಸೇರಬೇಕಾದ ಜಾಗಕ್ಕೆ ಸೇರಿಸಬೇಕಾದ ಜವಾಬ್ಧಾರಿಯಿತ್ತು.

ಇಳಿದ ಮೇಲೆ, ಇಬ್ಬರು ಹುಡುಗಿರಯರು ಛತ್ರಿಗಳನ್ನು ಹಿಡಿದು ತಮ್ಮದೇ ಲೋಕದ ಸಂಭಾಷಣೆಯಲ್ಲಿ ಪೋಸ್ಟ್ ಆಫೀಸ್ ಹತಿರದ ರಸ್ತೆಯಲ್ಲಿ ಸಾಗುತಿದ್ದರು. ಮೊದಲು ಪಿರಂಜೆಯಲ್ಲಿ ಇಳಿಯಲು ಹುಡುಗಿಯರು ಕಾರಣವಾಗಿದ್ದರು, ಇಳಿದ ಮೇಲೆ ಏನು ಉದೇಶ ಇರಲಿಲ್ಲ. ಚಂದ್ರನ ಮೇಲೆ ಇಳಿದ ನಿರ್ಲ ಆರ್ಮ್ ಸ್ಟ್ರಾಂಗ್ ನಿಗೂ ಚಂದ್ರನ ಮೇಲೆ ಇಳಿದ ಮೇಲೆ ನನ್ನ ಹಾಗೆ 'ಏನು' ಎನ್ನುವ ಪ್ರಶ್ನೆ ಕಾಡಿಯೇ ಇರಬೇಕು. ಹೀಗೆ ಯೋಚಿಸುತ್ತಲೇ ದೂರದಿಂದಲೇ ಅವರ ನಿರ್ಗಮನವನ್ನು ಅತ್ಯಂತ ಕಹಿ ಮನಸ್ಸಿನಿಂದ ನಿಂತು ನೋಡುತ್ತಾ ನಿಂತೇ. ಅವರೊಮ್ಮೆ ಸೂರ್ಯಾಸ್ತದ ಹಾಗೆ ತಿರುವಿನ ರಸ್ತೆಯಲ್ಲಿ ಮರೆಯಾದ ಹಾಗೆ ನಾನು ಹಿಂಬಾಲಿಸ ತೊಡಗಿದೆ. ಅದಾವ ಉದ್ದೇಶ ನನಗಿತ್ತೋ ಗೊತ್ತಿಲ್ಲ. ಹೀಗೆ ಅವರನ್ನು ಹಿಂಬಾಲಿಸುವ ಉದ್ದೇಶ ನನ್ನ ಮನಸ್ಸಿನ ನಿರ್ಧಾರವಲ್ಲ. ಅಲ್ಲಿ 'ಏನು ಮಾಡ್ಬೇಕು'  ಪ್ರಶ್ನೆಗೆ ಕಾಣದ ಸಾವಿರಾರು ಬಗೆಯ ಯೋಚನೆಗಳು ನನ್ನ ಭೌತಿಕ ದೇಹವನ್ನು ಅವರನ್ನು ಹಿಂಬಾಲಿಸುವಂತೆ ಪಿಡಿಸಿತು. ಹಾಗೆ ಸಾಗುವಾಗ, ಒಂದು ಸುಂದರ ಮನೆಯನ್ನು  ಪ್ರವೇಶ ಮಾಡಿದರು. ಅವರು ನನ್ನ ನೋಡಿಲ್ಲ.

ನಾನು ಪಿರೆಂಜೆಗೆ ಅನಗತ್ಯವಾಗಿ ಬಂದಿರುವುದು ಆ ಬಸ್ಸಿನ ಕ್ಲೀನರ್ ಗೆ ಗೊತ್ತು ಹಾಗೂ ಅಲ್ಲಿದ ನಿಸರ್ಗದತ್ತ ಮರ ಗಿಡಗಳಿಗೆ ಗೊತ್ತಿರಬೇಕು. ಹುಡುಗಿಯರು ಮರೆಯಾಗಿ ಮನೆಯನ್ನು ಸೇರಿದ ಮೇಲೆ ನನ್ನ ಬಳಿ ಏನು ಉಳಿದಿಲ್ಲ. ಕಿಸಿಗೆ ಕೈ ಹಾಗಿದಾಗ, ನೂರಾರು ರುಪಾಯಿ ಟಿಕೆಟ್ ಹಾಲು ಮಾಡಿರುವುದು ಗಮನಕ್ಕೆ ಬಂತು. ಆದರೆ, ಸಂಸ್ಕೃತಿಯೆಂಬ ಪದಕ್ಕೆ, ಸೌಂದರ್ಯ ಎಂಬ ಪದಕ್ಕೆ ವಿರುದ್ಧವಾಗಿರುವ  ಸಿನೆಮಾದ ಹುಡುಗಿಯರ ಅರಬತ್ತಲೇ ಡಾನ್ಸ್ ನ್ನು ಸಿನೆಮಾಗಳಲ್ಲಿ ನೋಡಲು ನಾವು ನೂರಾರು ರುಪಾಯಿ ತೆತ್ತುವಾಗ, ನಮ್ಮ ಸಂಸ್ಕೃತಿಯ, ಸೌಂದರ್ಯದ ಚಿಲುಮೆಯನ್ನು ನೋಡಲು ನಾನು ದುಡ್ಡು ಕಳೆದುಕೊಂಡುದ್ದರಲ್ಲಿ  ಏನು ಮಹಾ..! ಎಂದು ಸಮಾಧಾನಿಸಿಕೊಂಡೆ. ದೇವರನ್ನು ಕಾಣಲು ಬಂದ ನಾನು, ವಿಶ್ವಾಮಿತ್ರನ ಹಾಗೆ, ಹೆಣ್ಣಿನತ್ತ  ಆಕರ್ಷಿತನಾಗಿ ಮೂಲೋದ್ದೇಶ ಮರೆತುದ್ದು ನೋವು ತರಿಸಿತು. ರಸ್ತೆಯಲ್ಲಿ, ಚಪ್ಪಲಿ ಎಸೆದು ಕಣ್ಣು ಮುಚ್ಚಿ ದೇವರಿಗೆ 'ದೇವರೇ ಕ್ಷಮಿಸು' ಎಂದು ಬೇಡಿಕೆ ಇಟ್ಟೆ. ಮತ್ತೆ, ಬಸ್ಸು ಇಳಿದ ಸ್ಥಳಕ್ಕೆ ಬಂದು, ಧರ್ಮಸ್ಥಳದ ಬಸ್ಸಿಗೆ ಕಾಯುತ್ತ ನಿಂತೇ.


ಮುಂದಿನ ಭಾಗ:೫ ರಲ್ಲಿ  ಮುಂದಿನ ಕತೆ ನಿರೀಕ್ಷಿಸಿ.

Saturday, August 9, 2014

ಕನಸಿನ ಹುಡುಗಿ -ಸಿಂಚನಾ ::ಭಾಗ-೩( ಮೂಡುಬಿದರೆಯಲ್ಲಿ ಸಿಂಚನಾ ಭೇಟಿ )

ಭಾಗ-೩:
 ಒಂದೂವರೆ ತಾಸಿನ ಸುದೀರ್ಘ ಬಸ್ಸಿನ ಪಯಣದಲ್ಲಿ ಹಾಯಾಗಿ ಮಲಗಿದ್ದೆ. ನಿದ್ರಾ ಲೋಕ ಅದ್ಭುತ. ಅಲ್ಲಿ ತಿರೋಕನೊಬ್ಬ ರಾಜನಾಗಿ, ಮೊದಲ ರಾಜನ ಮಗಳನ್ನೇ ಮದುವೆಯಾಗಿ ಮಕ್ಕಳನ್ನು ಪಡೆದ ಸುಂದರ ಹಾಡು ನೀವು ಶಾಲೆಯ ದಿನಗಳಲ್ಲಿ 'ತಿರುಕನ ಕನಸು'[೧] ಎಂದು ಓದಿರಬಹುದು. ಆದರೆ ನಾನು ಇಂಜಿನಿಯರ್ ವೃತ್ತಿಯಾದ್ದರಿಂದ ನನ್ನ ಕನಸನ್ನು 'ಇಂಜಿನಿಯರ್ ಕನಸು'ಎಂದು ಹೇಳಿ ಕೊಳ್ಳಬಹುದಷ್ಟೇ. ಆದರೆ ಇಲ್ಲಿ ಕನಸ್ಸಿಗೆ ಗೌರವ ಸಿಗುವುದು ಕನಸಿನ  ವಿಷಯದ ಮೇಲೆ ಹೊರತು  ಯಾರು ಕಂಡದ್ದು ಅಂತ ಅಲ್ಲ ಅಲ್ಲವೇ ? ಏನೇನೋ ಕನಸುಗಳು ಬಿದ್ದವು. ಕನಸಗಳು ಒಳ್ಳೆಯದ್ದಾಗಿದರೆ, ನಿದ್ದೆಯಿಂದ ಎದ್ದ ಬಳಿಕ ಆ ಕನಸಿನ ಕುತೂಹಲಕಾರಿ ಅಂಶಗಳು ಮತ್ತೆ ಮೆಲುಕು ಹಾಕಿ ವಿಚಿತ್ರವಾದ ವಿನೋದವನ್ನು, ಧನಾತ್ಮಕಭಾವನ್ನು ನೀಡುವುದಂತು ಸತ್ಯ.

ಕನಸ್ಸು ಯಾವ ಘಟ್ಟದಲ್ಲಿತ್ತೋ ಗೊತ್ತಿಲ್ಲ, ಆದರೆ ಮೂಡುಬಿದರಿಯ ಹತ್ತಿರ ಬಂದಾಗ, ಬಸ್ಸು ನೇರವಾಗಿ ಸಾಗದೆ  ಚಿಕ್ಕದಾದ ರಸ್ತೆಯಲ್ಲಿ ವಾಲುವಿಕೆ ಬಹಳವಾಗಿತ್ತು. ಬಸ್ಸಿನ ಯಾವ ವಾಲುವಿಕೆ ನನ್ನನ್ನು ನಿದ್ದೆಗೆ ಆಹ್ವಾನಿಸಿತ್ತೋ ಅದೇ ವಾಲುವಿಕೆ ನಿದ್ದೆಯಿಂದ ಎಚ್ಚರಿಸಿತ್ತು. ಕನಸು ಅಪೂರ್ಣವಾಗಿತ್ತು. ಆದರೆ ಕನಸ್ಸಿನ ಪರಿಣಾಮ ಮನಸ್ಸಿಗೆ ಹಿತವಾದ ಮುದವನ್ನು ನೀಡುತ್ತಿತ್ತು. ಕಣ್ಣುಗಳು ಕೈ ವಸ್ತ್ರದಿಂದ ವರೆಸಿದೆ; ಜಾರಿ-ಸರಿದು ಹೋಗಿದ್ದ  ಬಟ್ಟೆಗಳನ್ನು ಸರಿಸಿಕೊಂಡೆ; ಕೂದಲನ್ನು ನಿಳವಾಗಿಸಿದೆ. ಜಿಟಿ-ಜಿಟಿ ಮಳೆಯ ಮಧ್ಯೆ ತಂಗಾಳಿಯಲ್ಲಿ ಸಂತೋಷದ  ಪ್ರಯಾಣವಾಗಿತ್ತು.

ಮೂಡುಬಿದರಿ ಬಸ್ ಸ್ಟಾಂಡ್ ಬಂದಾಗ, ಸಮಯ ೯ ಗಂಟೆ ಆಗಿರಬಹುದು. ಮತ್ತೆ ವಾಹನ ಸಹಾಯಕ(ಕ್ಲೀನರ್), ಬೆಳ್ತಂಗಡಿ ಎಂದು ಕೂಗಿದ. ಹಿಂದಿನ ಬಾಗಿಲಿಂದ ಕೆಲವು ಮಂದಿ ಮುಂದಿನ ಬಾಗಿಲಿನಿಂದ ಕೆಲವು ಮಂದಿ ಬಸ್ಸು ಏರಿದರು. ಬಸ್ಸು ಹತ್ತುವ ವಿಷಯದಲ್ಲಿ ಹೇಗೆ  ಸಾಲಾಗಿ, ನೂಕು-ನುಗ್ಗಲು ಇಲ್ಲದೆ ಹತ್ತಬೇಕು ಅಂದರೆ ನೀವು ಕರವಾಳಿಯಲ್ಲೇ ನೋಡಬೇಕು. ಬಸ್ಸು ಹತ್ತುವುದು-ಗೂಳಿ ನುಗ್ಗುವುದು  ಸರಿಸಮಾನವಾದುದ್ದು ಎಂದು ಬೈಲಹೊಂಗಲದಲ್ಲಿ ಜನ ಭಾವಿಸುತ್ತಾರೆ.ಅಲ್ಲಿಯ ಜನ ಒಬ್ಬರು ಹೋಗುವ ದಾರಿಯಲ್ಲಿ ನೂರು ಜನ ಕೂಡ ಒಳಪ್ರವೇಶ ಮಾಡಬಹುದು ಎಂದು ಸಾಧಿಸಿ ತೋರಿಸುತ್ತಾರೆ. ಅಲ್ಲಿ ಅಜ್ಜಿ-ಅಜ್ಜ, ಹೆಣ್ಣು-ಗಂಡು ಎಂಬ ಯಾವ ತಾರತಮ್ಯವು ಇಲ್ಲದೆ ನೂರಾರು ವರ್ಷ ಅದೇ ಸೀಟ್ ನಲ್ಲಿ ಕುಳಿತುಕೊಳ್ಳುವವರಂತೆ ಸೀಟ್ ಗೆ  ಜಗಳ ಕಾಯುತ್ತಾರೆ. ಒಮ್ಮೆ ಬೈಲಹೊಂಗಲದಲ್ಲಿ ಬಸ್ಸು ಹತ್ತುವ ವಿಷಯ ನೋಡಿ ನಾಚಿಕೆ ಅನಿಸಿತ್ತು.

ಕರಾವಳಿಯಲ್ಲಿ ಯಾರು ಸೀಟ್ ಗೆ ಓಡುವುದಿಲ್ಲ. ಸೀಟ್ ತಮ್ಮದು ಎಂದು ಅಧಿಕಾರ ಸ್ಥಾಪಿಸುವುದು ಬಹಳ ಕಡಿಮೆ. ಒಂದೊಮ್ಮೆ ಯಾರಾದರು ಕರವಸ್ತ್ರ-ಬಟ್ಟೆ-ಚೀಲಗಳಿಂದ ಸೀಟ್ ನ್ನು ಕಾಯ್ದಿರಿಸಿದ್ದಲ್ಲಿ ಅದನ್ನು ಯಾರು ಮುಟ್ಟಲಾರರು.ನಿಧಾನವಾಗಿ ಸೀಟ್ ಸಿಕ್ಕರೆ ಕುಳಿತಾರು, ಇಲ್ಲವೆಂದರೆ ನಿಂತಾರು. ಹಿಂದಿನಿಂದ ಬಂದವರಿಗೆ ಕೆಲವರಿಗೆ ಸೀಟ್ ಸಿಕ್ಕಿತ್ತು. ಇನ್ನುಳಿದವರಿಗೆ ಸಿಗಲಿಲ್ಲ.

ವಾಹನ ಚಾಲಕನ (ಡ್ರೈವರ್ ) ಹಿಂದಿನ ನಾಲ್ಕು ಸೀಟ್ ಗಳು ಮಹಿಳೆಯರಿಗೆ ಮಿಸಿಲು. ಇದು ಉಡುಪಿ RTO  ನಿಯಮವೆಂದು ಡ್ರೈವರ್ ಹಿಂದಿನ ಗೋಡೆಯ ಮೇಲೆ ಎದ್ದು ಕಾಣುತ್ತದೆ. ಈ ಬಸ್ಸಿನಲ್ಲಿ ಡ್ರೈವರ್ ಹಿಂದಿನ ಮೊದಲ ಎರಡು ಸೀಟ್ ಗಳು ಎದುರು-ಬದರು. ಇನ್ನೇನೋ ವಾಹನ ಬಿಡಬೇಕು ಅನ್ನುವಷ್ಟರಲ್ಲಿ, ಬಸ್ಸಿನ ಮುಂದಿನ ಭಾಗದಿಂದ ಎರಡು ಛತ್ರಿಗಳು ಬಸ್ಸು ಹತ್ತಲು ಬರಲಾರಂಭಿಸಿದವು. ಒಂದು ಛತ್ರಿ ತುಂಬಾ ಹೂವು-ಬಣ್ಣಗಳಿಂದ ಕೂಡಿದ್ದರಿಂದ 'ಹೆಣ್ಣು ಛತ್ರಿ' ಎಂದು ಮೊದಲೇ ಗುರುತಿಸಿದ್ದೆ. ಆದರೆ ಇನ್ನೊಂದು  ಬ್ಲಾಕ್ ಛತ್ರಿಯ ಲಿಂಗ ಶೋಧನೆ ಅಷ್ಟು ಸುಲಭ ಅಲ್ಲ. ಮುಂದಿನ ದ್ವಾರದ ಕ್ಲೀನರ್ ಸೀಟ್ ನ ಹಿಂದಿನ ಸೀಟ್ ನಲ್ಲಿದ್ದ ನಾನು, ಹತ್ತುತ್ತಿರುವ ಜೀವಿಗಳು ಮಾನವ ಹೆಣ್ಣು ಜೀವಿಗಳು ಎನ್ನುವುದನ್ನು ಅರ್ಥೈಸಿಕೊಂಡೆ.

ಛತ್ರಿಗಳು ಮುದುಡಿದವು.ಇಬ್ಬರು ಅದ್ಭುತ ಸುಂದರಿಯರು ಬಸ್ಸನ್ನು ಏರಿ, ಡ್ರೈವರ್ ಹಿಂದಿನ ಸೀಟ್ ನಲ್ಲಿ ಕುಳಿತರು. ಅವರಿಬ್ಬರೂ ಎದುರು ಬದುರು ಕುಳಿತರು. ಬಸ್ಸು ಹೊರಟಿತ್ತು.ಬಸ್ಸನ್ನು ಏರಿದ ಏರಿದ ರೀತಿ, ಛತ್ರಿಗಳನ್ನು ಮುದುಡಿ ಕೆಳಗಿರಿಸಿದ ರೀತಿ, ಸಲ್ವಾರ್ ಕಮೀಜ್ ಗಳನ್ನು ಸರಿಸಿ-ಸಿಲುಕಿಸಿದ  ರೀತಿ, ಮಳೆಯ ಹನಿಗಳಿಂದ ಕುಡಿದ ಮುಖವನ್ನು  ಕರವಸ್ತ್ರದಿಂದಲೂ, ಸಲ್ವಾರ್ನಿಂದಳು ವರೆಸಿಕೊಂಡ ರೀತಿ ಎಲ್ಲವು ನಾನು ಗಮನಿಸುತ್ತಿದ್ದೆ. ಒಂದುಕ್ಷಣ ಎಲ್ಲವು ಸರಿ ಎಣಿಸುತ್ತಿರುವಾಗಲೇ ನೀಳವಾದ ಕೇಶರಾಶಿಯನ್ನು ಮುಂದಕ್ಕೆ ತಿರುಗಿಸಿ, ಕೆನ್ನೆಯ ಮೇಲಿನ ಕೂದಲನ್ನು ಓರಣವಾಗಿಸಿ, ಬಿಂದಿಯ ಮೇಲೆ ಕೈ ಯಾಡಿಸಿ, ಎಲ್ಲವವು ಸರಿ ಎಂದು ಖಚಿತ ಪಡಿಸಿದ ನಂತರ ಇಬ್ಬರು ಮಾತಿಗೆ ತೊಡಗಿದರು.

ಇಷ್ಟೊತ್ತಿಗಾಗಲೇ, ದೇವರ ದರ್ಶನಕ್ಕೆ ಹೋರಾಟ ನಾನು ಹುಡುಗಿಯರನ್ನು ನೋಡಬಾರದು ಅನ್ನುವ ವಿಷಯವನ್ನು ಮರೆತುಬಿಟ್ಟೆ.ನೀಳವಾದ ಕೇಶ ರಾಶಿ, ಬಿಳಿಯಾದ ಮುಖ, ಕೆನ್ನೆಯ ಸುತ್ತಲಿನ ಗುಂಗುರು ಕೂದಲು, ಕಿವಿಗೆ ಜೋಕಲಿಯಾಡುತ್ತಿರುವ ಆಭರಣ, ಕೆಂಪಾದ ತುಟಿಗಳು,ಗಿಣಿಯ ಕೊಕ್ಕಿನಂತಿರುವ ಮೂಗು,ಸೂರ್ಯ ತೆಜ್ಜಸ್ಸಿನ ಕಣ್ಣುಗಳು, ಕೊರಳಲ್ಲಿ ಸುತ್ತುವರಿದಿರುವ ಚಿನ್ನದ ಸರಪಳಿ(ಚೈನ್),ದೇಹಕ್ಕೆ ಅಚ್ಚು ಮೆಚ್ಚುಗೆಯ ಅಪ್ಪಿ ಕೊಂಡಿರುವ ಸುಂದರ ಸಲ್ವಾರ್ ಕಮೀಜ್, ಎಡ ಗೈ ಯಲ್ಲಿರುವ ಒಂದು ಸಣ್ಣ ಗಡಿಯಾರ,ಉದ್ದವಾದ ಉಗುರುಗಳು-ಕೆಂಪು ಬಣ್ಣದ ನೈಲ್ ಪೋಲಿಷ್ ಎಲ್ಲವು ನಾನು ಗಮನಿಸಿದ್ದೆ. ಹುಡುಗಿಯೊಬ್ಬಳನ್ನು ಈ ಪರಿ ನಾನು ನೋಡಿದ್ದು ಇದೆ ಮೊದಲು. ಒಂದೊಮ್ಮೆ  ಅವಳ ಚಿತ್ರ ನನ್ನಿಂದ ಬಿಡಿಸುವುದಕ್ಕೆ ಸಾಧ್ಯವಾಗುವುದಾದರೆ, ಅವಳ ಒಂದು ಕೂದಲು ಕೂಡ ಅದಲು ಬದಲಾಗದ ಹಾಗೆ ಚಿತ್ರ ಬಿಡಿಸುವಷ್ಟು ಸೂಕ್ಷ್ಮವಾಗಿ ಅವಳನ್ನು ನೋಡಿದ್ದೇನೆ. ಸೌಂದರ್ಯದ ರಾಶಿ ಇಲ್ಲಿಯೇ ಬಂದು ನಿಂತಿದೆ ಅನ್ನುವುದರಲ್ಲಿ ಸಂದೇಹ ಇರಲಿಲ್ಲ.  ಅತ್ತ-ಇತ್ತ ಬಸ್ಸು ಅಲಗಾಡುತಿದ್ದರು, ನನ್ನ ದೃಷ್ಟಿ ರೇಖೆಗಳು ಅವಳ ಮುಖವನ್ನು ಛೇದಿಸುತ್ತಿದ್ದವು. ಅವಳು ನನ್ನ ಗಮನಿಸಿದಳೋ-ಇಲವೋ ಗೊತ್ತಿಲ್ಲ.

ಹಾಗೆಂದು ನಾನು ಹುಡುಗಿಯರನ್ನು ನೋಡಿಯೇ ಇಲ್ಲ ಅಂದರೆ ತಪ್ಪಾಗಿತ್ತು. ಬಾರಿನಲ್ಲಿ ಕುಳಿತು ಕುಡಿಯಲಿಲ್ಲ ಅನ್ನುವುದು; ಮಣಿಪಾಲದಲ್ಲಿದ್ದು ಹುಡುಗಿಯರನ್ನು ನೋಡಿಯೇ ಇಲ್ಲವೆನ್ನುವುದು  ಯಾರು ಒಪ್ಪಲಾರರು. ನೋಡುವಿಕೆಯಲ್ಲಿ ಬಹಳ ವಿಧಗಳಿವೆ. ಭರತನಾಟ್ಯದಲ್ಲಿ ತೊಡಗಿರುವ ಹುಡುಗಿಯ ಅಂಗ-ಸೌಷ್ಟವಗಳನ್ನು ನೋಡುತ್ತಿದ್ದರು ಅದು ಕಲೆಯ ಒಂದು ಭಾಗವಾಗಿ, 'ಹುಡುಗಿಯನ್ನು ನೋಡುತ್ತೇವೆ' ಎಂದು ಹೇಳಲಾಗದು. ದಾರಿಯಲ್ಲಿ ಸಾಗುವಾಗ  ಸಹಜವಾಗಿ ಕಲ್ಲು-ಮಣ್ಣು-ಅಂಗಡಿ-ಬಸ್ಸು ನೋಡುವಂತೆ ಒಂದು ಹುಡುಗಿಯನ್ನು ನೋಡಿ ಮರೆತು ಬಿಟ್ಟಿರುತ್ತೇವೆ. ಇನ್ನು ಕೆಲವೊಮ್ಮೆ ಮುಖ ನೋಡಿದಾಗ, ಏನೋ ವಿಶೇಷ ಹುಡುಗಿ ಅನಿಸಿ ಒಂದೆರಡು ಸಾರಿ ನೋಡುತ್ತಾ ನೋಡುತ್ತಾ  ಹೋಗುತ್ತೇವೆ. ಆದರೆ, ಕೆಲವು ಹುಡುಗಿಯರು ಸೌಂದರ್ಯವೆಂಬುದನ್ನು ತಪ್ಪಾಗಿ ಅರ್ಥೈಸಿ, ದೇಹಕ್ಕೆ ಬೇಕಾದಷ್ಟು ಧರಿಸಬೇಕದಷ್ಟು ಬಟ್ಟೆಯನ್ನು ಧರಿಸದೆ ವಿಚಿತ್ರವಾಗಿ ಬೀದಿಗೆ ಇಳಿದು ಬಿಡುತ್ತಾರೆ. ಹುಡುಗಿಯರು ಬೇಕಾದನ್ನು ಧರಿಸದೆ ಹೋದಾಗ ಸೌಂದರ್ಯ ಮರೆಯಾಗಿ ಮೋಹಕತೆ ಉಂಟಾಗಿ, ನೊಡುವಿಕೆ ಬದಲಾಗಿ ದಿಟ್ಟಿಸುವ ಗುಣ ಹುಟ್ಟಿಕೊಳ್ಳುತ್ತದೆ. ಕೆಲವರು ಅದೆಷ್ಟು ವಿಚಿತ್ರವೆಂದರೆ ಸ್ನಾನ ಗೃಹದಿಂದ ಬೀದಿಗೆ ಬಂದು ಬಿಟ್ಟರೋ ಏನು ಎಂಬಂತೆ..!

ಹುಡುಗಿಯರು ಒಂದು ನೆನಪಿನಲ್ಲಿಡಬೇಕು. ಹೆಣ್ಣಿನ ದೇಹದಲ್ಲಿ ವಕ್ರತೆ ಇದೆ; ಸೌಂದರ್ಯವಿದೆ; ಸೂಕ್ಷ್ಮತೆ ಇದೆ;ಅದು ನಿಸರ್ಗದ ಕೂಡುಗೆ. ಅದನ್ನು ಸಂಸ್ಕೃತಿಯೆಂಬ ನಿಯಮದ ಒಳಗೆ ಓದನ್ನು ಪೋಸಿಸಿದರೆ ಅದಕ್ಕೆ ಬೆಲೆ. ನಿಮ್ಮ ಸ್ವಾತಂತ್ರ್ಯವನ್ನು ಖಂಡಿತ ನಾನು ಅರ್ಥೈಸಿ ಕೊಳ್ಳಬಲ್ಲೆ.ತುಂಬು ಹೃದಯದಿಂದ ನಿಮ್ಮನ್ನು ಗೌರವಿಸುತ್ತೇನೆ. ಆದರೆ ಡ್ರೆಸ್ ಎಂಬ ವಿಷಯದಲ್ಲಿ ಯಾಕೋ ಏನೋ ತಮ್ಮ ಬದುಕಿಗೆ  ಮಾರಕವಾಗುವುದನ್ನು  ದೂರವಿಡಬೇಕು ಎಂಬ ಸಲಹೆ ನಗಣ್ಯವಾಗಿ ಕಾಣುತ್ತಾರೆ. ಆದರೆ ನಿಮ್ಮ ಕಡೆ  ಗಂಡು ಜಾತಿ ನೋಡುವ ರೀತಿ, ನಿಮ್ಮ ಡ್ರೆಸ್ ಕೂಡ ನಿರ್ಧರಿಸುತ್ತದೆ. ಅದು ನಿಸರ್ಗದ ನಿಯಮವೇ..!

ಅಂದಹಾಗೆ, ನನ್ನ ಮುಂದೆ ಕುಳಿತುಕೊಂಡಿರುವ ಹುಡುಗಿ ಡ್ರೆಸ್ ಎಂಬ ವಿಷಯದಲ್ಲಿ ತುಂಬಾ ನಾಜುಕುತನವಿದೆ. ನೋಡುವಿಕೆಯಲ್ಲಿ ಯಾವ ಮೋಹಕ ಭಾವ ಇಲ್ಲ. ದೇವತೆಯೆಂಬ ಭಾವ ನನಗಾಗುತ್ತಿದೆ. ಸೌಂದರ್ಯದ ವಿಷಯದಲ್ಲಿ ನಾನು ಸೋತು ಬಿಟ್ಟೆ. ಕೆಲವೊಮ್ಮೆ ಸುತ್ತಲು ತಿರುಗಿ ಯಾರಾದರು ನನ್ನ ಕಡೆ ನೋಡುತ್ತಾರೋ ಎಂದು ನೋಡುತ್ತಾ, ಹುಡುಗಿಯ ಮುಖವನ್ನು ನೋಡುತ್ತಾ   ಕುಳಿತಿದ್ದೆ. ಅವಳು ಮಾತನಾಡುವಾಗ ಅವಳ ತುಟಿಗಳ ಕಂಪನ, ಗಂಟಲಿನಲ್ಲಿ ಧ್ವನಿ ನಾಳಗಳಗಳ ಚಲನ, ಅತ್ತಿತ್ತ ಕೈ ಯಿಂದ ಡ್ರೆಸ್ ನ್ನು ಕಾಪಿಟ್ಟುಕೊಳ್ಳುವ ಪರಿ ನೋಡುತ್ತಾ ನಾನು ಕಲ್ಪನಾ ಲೋಕದಲ್ಲಿ ವಿಹರಿಸುತ್ತಾ ಕುಳಿತೆ.  ಹೀಗಿರುವಾಗ, ನಾನು ನೋಡುತ್ತಿರುವ ಹುಡುಗಿಗೆ ಎದುರಾಗಿ ಕುಳಿತಿರುವ ಹುಡುಗಿ ಅವಳನ್ನು ಉದ್ದರಿಸುತ್ತ,
" ಸಿಂಚು , ಯಾನ್ ಆಗಲ್ ಪಂಡ್ಲ್ಕಾ  ನಲ್ಪೋಲಿಯಾ ?(ಸಂಚು, ನಾನು ಅವರು ಹೇಳಿದ ಹಾಗೆ
ಹೆಜ್ಜೆ ಹಾಕಬಹುದಾ?)

ಸೌಂದರ್ಯದ ಚಿಲುಮೆ ಬಾಯಿ ತೆರಿಯಿತು, ವಾಕ್ಯಗಳು  ತುಳುವಿನಲ್ಲಿ  ನನ್ನ ಕಿವಿಗೆ ಅಪ್ಪಳಿಸಿದ್ದು  ಹೀಗೆ  " ಯಾನ್, .... ಪ್ರಾಕ್ಟೀಸ್ ಮಲ್ಪೆರ್ ..... ಬೊಕ ....  ಮುಂಜಿ ಸ್ಟೆಪ್ .... ಶಂಕರಾಭರಣ ತಾಳ ಉಂಡು.............". 

ತುಳು ನಾಡಿನಲ್ಲಿ ಕೆಲವು ವರ್ಷಗಳು ಕಳೆದಿದ್ದರು ನನಗೆ ಭಾಷೆಯ ಹಿಡಿತವಿರಲಿಲ್ಲ. ಯಾರು ಕೂಡ ತುಳು ನಾಡಿನ ಗೆಳೆಯರಿರಲಿಲ್ಲ; ಅವಶ್ಯಕತೆಯೂ ಬಂದಿರಲಿಲ್ಲ. ಆದರೆ ಅಂಗಡಿಯಲ್ಲಿ, ಬಸ್ಸನಲ್ಲಿ ಕೇಳಿದ ತುಳುವೆ ನನಗೆ ಕೆಲವು ಶಬ್ಧಗಳನ್ನು ಅರ್ಥೈಸಲು ಸಾಧ್ಯವಾಗಿತ್ತು. ಯಾವುದೋ ಡಾನ್ಸ್ ಬಗ್ಗೆ ಇವರು ಮಾತನಾಡುತ್ತಿರುವುದು ನನಗೆ ಅರ್ಥವಾಯಿತು. ಆ ಹುಡುಗಿಯ ಹೆಸರು 'ಸಿಂಚು' ಎಂದು ತಿಳಿಯಿತು.ಆದರೆ 'ಸಿಂಚು' ಎಂದು ಹೆಸರು ಇರಲು ಸಾಧ್ಯವಾ ?  ಇವರ ಸಂಭಾಷಣೆಯಿಂದ ಇವರಿಬ್ಬರು ತುಳು ನಾಡಿನ ಕುವರಿಯರು ಎಂಬುದು ಪಕ್ವವಾಯಿತು.

ಅಷ್ಟು ಹೊತ್ತಿಗೆ, ಹಿಂದಿನಿಂದ ಟಿಕೆಟ್(ಚಲನ ರಶೀದಿ) ಕೊಡುತ್ತ ಬಂದ ಕಂಡಕ್ಟರ್ (ನಿರ್ವಾಹಕ), "ವೋಡೆಗ್ ಟಿಕೆಟ್
?" ಎಂದು ಕೇಳಿದ. ಇವರ ಉತ್ತರ: "ರಡ್ಡ್ ಪಿರಂಜೆಗ".  ನಾನು ಗೊಂದಲಕ್ಕೆ ಒಳಗಾದೆ. ಪಿರಂಜೆ  ಊರಿನ ಹೆಸರೇ ? ಬೆಳ್ತಂಗಡಿ ನಂತರವೋ ಅಥವಾ ಮೊದಲೋ ? ನನಗೆ ಏನಾಗಿದೆ ? ಏನು ಗೊಂದಲ ? ಹೃದಯ ಬಡಿತ ಹೆಚ್ಚಾಗಿದೆ. 

ಮುಂದೇನಾಯಿತು ?  ಭಾಗ-೪
       ಹುಡುಗಿ ಎದ್ದು ಬಂದು ಕಪಾಳಕ್ಕೆ ಬಾರಿಸಿದಳೆ?  ಸುಮ್ಮನೆ ಇಳಿದು ಹೊಗುವುದನ್ನು ನೋಡುತ್ತಾ ನಾನು ಸುಮ್ಮನೆ ಇದ್ದೆನೇ?
Reference: 
Tirukana kanasu haadu :http://goo.gl/ICsF9J
My sincere thanks to the writer in above link. 

Thursday, August 7, 2014

ಕನಸಿನ ಹುಡುಗಿ -ಸಿಂಚನಾ ::ಭಾಗ-೨ (ಮಣಿಪಾಲದಿಂದ ಪಿರಂಜೆಯ ತನಕ)

ಅಂತು ಬಸ್ಸು ಏರಿದೆ. ಬಸ್ಸಿನ ಸಹಾಯಕ ದುಂಬ ಪೋಲೇ(ತುಳು:ಮುಂದೆ ಹೋಗು) ,ಮಿಥ್ ಪೋಲೆ (ತುಳು:ಮೇಲೆ ಹೋಗು) ಅನ್ನುತ್ತಲಿದ್ದ. ಮುಂದಿನ ಬಾಗಿಲ ಹತ್ತಿರದ ಎಡಭಾಗದ ಸೀಟ್ ನಲ್ಲಿ ಕುಳಿತು ಕೊಂಡೆ.

ಅದು HMT ಬಸ್ಸು. ಅವಿಭಜಿತ ದಕ್ಷಿಣ ಕನ್ನಡದಲ್ಲಿ ಸರ್ಕಾರಿ ಬಸ್ಸು ವ್ಯವಸ್ಥೆಯಿಲ್ಲ. ಆದರು ಈಗ ಮಂಗಳೂರು ಹಾಗೂ ಮಣಿಪಾಲದ ನಡುವೆ ಕೆಲವು ಸರ್ಕಾರಿ ವೋಲ್ವೋ ಬಸ್ಸುಗಳ ಓಡಾಟ ಇದೆ. ಈ ಬಸ್ಸುಗಳ ವಿಶೇಷ ಅಂದರೆ ಪರಿ ಪೂರ್ಣವಾಗಿ ಸ್ಥಳೀಯ ಉದ್ಯಮಿಗಳೇ ನಡೆಸುತ್ತಾರೆ. ಬಹುತೇಕ ಬಸ್ಸುಗಳ ಕಿಡಕಿಗಳಿಗೆ ಗ್ಲಾಸ್ಸು ಇರುವುದಿಲ್ಲ. ಮಳೆಯಿಂದ ರಕ್ಷಿಸಿಕೊಳ್ಳಲು ದಪ್ಪನೆಯ ಪರದೆಯನ್ನು ಕಿಡಕಿಗಳಿಗೆ ಕಟ್ಟಲಾಗುತ್ತದೆ. ರಸ್ತೆಗಳು ಕಿರಿದಾಗಿರುವುದರಿಂದ ಬಸ್ಸುಗಳ ಉದ್ದ ಕೂಡ ಕಡಿಮೆ. ಅದರ ಸ್ಪೀಡ್ ಹಾಗೂ ಓವರ್ ಟೇಕಿಂಗ್ ಮಾತ್ರ ಕೆಲವೊಮ್ಮೆ ಅನಾಹುತಕಾರಿ ಎಂದು ನನಗೆ ಅನಿಸಿದೆ.

ಮಳೆಗಾಲದ ಚಳಿಗೆ, ಬೆಳಿಗ್ಗೆಯ ಗಾಳಿ 'ಸಖತ್ ಹೊಟ್ ಮಗಾ' ಎಂಬ ರೇಡಿಯೋ ಮಿರ್ಚಿಯ ವಾಕ್ಯ ಬದಲಿಸಿ 'ಸಖತ್ ಚಳಿ ಮಗಾ' ಅನ್ನುವಷ್ಟು ಖಡಕ್ ಆಗಿತ್ತು. ಈ ಚಳಿ-ಮಳೆಯ ಬಗ್ಗೆ ಯೋಚಿಸುತ್ತಿರುವಾಗ, ಹಾಲು ಹಾಕುವ ಹುಡುಗರು, ಪೇಪರ್ ಹಾಕುವ ಹುಡುಗರು, ಆಫೀಸ್ ಗೆ ಏಳು ಗಂಟೆಯೊಳಗೆ ಬಂದು ಹೌಸ್ ಕೀಪಿಂಗ್ ಮಾಡುವರ ನೆನಪು ನನ್ನ ಮನಸ್ಸಿನಲ್ಲಿ ನಡೆದಾಡಿತು. ಒಂದು ಒಳ್ಳೆಯ ಅಂಗಿ ಕೂಡ ಕೊಂಡು ಕೊಳ್ಳಲಾರದ ಬಡ ಹುಡುಗರು ಈ ಬೆಳಿಗ್ಗೆಯ ಚಳಿಯಲ್ಲಿ ಹೇಗೆ ಪೇಪರ್, ಹಾಲು ಹೋಗುತಾರೋ ದೇವರೇ ಬಲ್ಲ. ನಾವು ಯಾವತ್ತು ಮುಖವು ಕೂಡ ನೋಡಿರುವುದಿಲ್ಲ. ಒಂದೊಮ್ಮೆ ಸಕಾಲಕ್ಕೆ ನಮ್ಮ ಅಗತ್ಯತೆ ಬರದಿದ್ದರೆ ನಾವು ಓದಾರಡಿ ಬಿಟ್ಟಿರುತ್ತೇವೆ. ಆದರೆ, ರಾತ್ರಿಯೆಲ್ಲ ಇಂಟರ್ನೆಟ್ ಕೇಬಲ್ ಗೆ ಜೋತು ಬಿದ್ದು ಬೆಳಿಗ್ಗೆ ಸೂರ್ಯ ಬಂದುದ್ದು ಎಲ್ಲಿಂದ ಎಂದು ತಿಳಿಯಲು ಕೂಡ ಗೂಗಲ್ ಉಪಯೋಗಿಸುವ ಪರಿಸ್ಥಿತಿ ಇಂಜಿನಿಯರಿಂಗ್ ಹುಡುಗರದ್ದು. ನಾವು ಸುಖ ಜೀವಿಗಳೋ ಅಥವಾ ಬೆಳಿಗಿನ ಜಾವದಲ್ಲಿ ಏನು ನಡೆಯುತ್ತದೆ ತಿಳಿಯದ ಅಜ್ಞಾತ ಜೀವಿಗಳೋ ಎನ್ನುವ ಪ್ರಶ್ನೆಗಳು ಮೂಡಿದವು.

ಇಷ್ಟು ಯೋಚಿಸುವಾಗ ಬಸ್ಸು ಮಣಿಪಾಲದಿಂದ ಪರ್ಕಳ ದಾಟಿತ್ತು. ಬಸ್ಸಿನ ಪ್ರತಿ ವಾಲುವಿಕೆಯೂ ನನ್ನ ವಿಚಾರದ ದಾರಿಯನ್ನು ಬದಲಿಸುತ್ತಲಿತ್ತು. ಅದೆಷ್ಟೋ ವಿಚಾರಗಳು-ಬಸ್ಸು ಬಿದ್ದರೆ, ಯಾವ ಮರ, ಯಾವ ಬೋರ್ಡ್ ಹೀಗೆ ಏನೇನೋ ವಿಚಾರಗಳು ತಲೆಯಲ್ಲಿ ನಡೆಯುತ್ತಲೇ ಇರುತ್ತವೆ. ಒಂದೊಮ್ಮೆ ಮನುಷ್ಯನ ತಲೆ ಎಲೆಕ್ಟ್ರಾನಿಕ್ಸ್ ಚಿಪ್ ನಿಂದ ಮಾಡಿದ್ದಾಗಿದ್ದರೆ, ಅದರಿಂದ ಉಂಟಾದ ಬಿಸಿಯನ್ನು ಒಬ್ಬನಿಗೆ ಸ್ನಾನ ಮಾಡಲು ಸಾಕಾಗುವಷ್ಟು ನೀರು ಹದನೈದು ನಿಮಿಷದಲ್ಲಿಯೇ ಕಾಯಿಸಬಹುದೋ ಏನು..!

ದೇವರ ದರ್ಶನಕ್ಕೆ ಹೊರಟಿದ್ದರಿಂದ ದೇವರ ಕುರಿತಾಗಿ ವಿಶೇಷ ದೇವರ ಧ್ಯಾನ ಕೂಡ ಮನಸ್ಸಿನಲ್ಲಿ ಉಂಟಾಗಿತ್ತು.ನಾನು ಅಮ್ಮನ ಆದೇಶದ ಮೇರೆಗೆ ದೇವರ ದರ್ಶನಕ್ಕೆ ತೆರಳುತ್ತಿದ್ದರು ದೇವರಲ್ಲಿ ಏನಾದರು ಬೇಡಿಕೆ ಇಡಬೇಕಲ್ಲವೇ ಅನ್ನುವ ಸಣ್ಣದೊಂದು ಪ್ರಶ್ನೆ ಕೂಡ ಹುಟ್ಟಿಕೊಂಡಿತ್ತು. ಅರೋಗ್ಯ ಇದೆ;ಹಣ ಇದೆ;ಉದ್ಯೋಗ ಇದೆ; ನೆಚ್ಚಿನ ಗೆಳೆಯರಿದ್ದಾರೆ. ಎಲ್ಲವು ಇದೆ ಅಂದುಕೊಳ್ಳುತ್ತಲೇ 'ಒಂದು ಹುಡುಗಿಯನ್ನು ಕೇಳಿದರೆ ತಪ್ಪೇ?' ಎಂದು ಪ್ರಶ್ನಿಸಿ ಕೊಂಡು ಹೇಗೆ ಕೇಳುವುದು ಎಂದು ವಾಕ್ಯಗಳನ್ನು ಸರಿ ಹೊಂದಿಸುತ್ತಲೇ ಸೀಟ್ ಗೆ ಒರಗಿ ಕುಳಿತುಕೊಂಡೆ. ಕಣ್ಣು ಮುಚ್ಚಿದವು. ವಾಕ್ಯಗಳು ದೇವರ ಮುಂದಿಡ ಬಹುದಾದ ಪರಿಪೂರ್ಣ ಬೇಡಿಕೆಯಾಗಿ ಮನಸ್ಸಿನಲ್ಲಿ ನುಸುಳಿದವು. ಭಕ್ತಿಯ ಪರಾಕಾಷ್ಟತೆಯೇಮ್ಬಂತೆ, ದೇವರ ಪರಿ ಸಾನಿಧ್ಯದ ಮುಂದೆ ನಿಂತಂತೆ ಭಾಸವಾಯಿತು.ಆದರೆ, ಮುಂದೇನಾಯಿತು ತಿಳಿಯಲಿಲ್ಲ. ಬಸ್ಸಿನ ವಾಲುವಿಕೆ ಜೋಕಾಲಿಯಾಗಿ, ಮಿತ್ತ ಪೋಲೆ-ದುಂಬ ಪೋಲೆ ಗಳು ಜೋಗುಲಾವಾಗಿ, ಬಸ್ಸಿನ ಸೀಟ್ ತೊಟ್ಟಿಲು ಎಂಬಂತೆ ಸುಖ ನಿದ್ರೆಗೆ ಜಾರಿದೆ.

ಮುಂದಿನ ಭಾಗ -೩.

ಕಂಚಿನ ಕಂಠದ ಸಿಂಚನಾ ಕಾಣಲು
ವಂಚನೆಯಿಲ್ಲದ ಭಾವವ ಜನಿಸಲು
ಕೊಂಚ ನಾಚಿಕೆಯೋಳಂದೆ ' ಇಂಚಿನ ಪೋನ್ನು' ಮಹಾರಾಯರೇ??
ಮಿಂಚಿನ ಕಣ್ಣಗಳು, ಸೂರ್ಯ ತೇಜಸ್ಸು
ಮಂಚದ ಮೇಲಿನ ರಾಣಿಯ ಹಾಗೆ
ಮಿಂಚಿದ ಸಿಂಚನಾ ನೋಡಿ, ಭಕ್ತಿಗಾಯಿತು ವಿರುಕ್ತಿ ಭಾವದ ಸೋಲು .

ಕನಸಿನ ಹುಡುಗಿ -ಸಿಂಚನಾ ::ಭಾಗ-೧ (ಮಣಿಪಾಲದಲ್ಲಿ ಬಸ್ಸು ಹತ್ತಿದ್ದು)

ಕತೆಯ ಕಾಲ-2010. ಈ ಸಮಯದಲ್ಲಿ ನಾನು ಮಣಿಪಾಲದಲ್ಲಿ ನಾನು ಕೆಲಸದಲ್ಲಿದ್ದೆ.
ನನಗೆ ೨೫೦ ಜನ ಸಹೋದ್ಯೋಗಿಗಳು, ಅದರಲ್ಲಿ ೭೦ ಜನ ನನ್ನ ಜೂನಿಯರ್ ಗಳು ಇದ್ದರು. ಈ ಕತೆ ನನ್ನ ಸುತ್ತಲೇ ಕಟ್ಟಿದ್ದೇನೆ. ಯಾವುದೇ ವ್ಯಕ್ತಿಯ ಬದುಕನ್ನು, ಅಥವಾ ಹಿಂದಿನ ನನ್ನ ಕಂಪನಿಯ ಯಾವುದೇ ವಿಷಯವನ್ನು ನಾನು ಬಳೆಸುತ್ತಿಲ್ಲ.


ಭಾಗ-೧ :

ಶ್ರಾವಣ ಮಾಸ. ಹಬ್ಬಗಳ ಆರಂಭದ ದಿನಗಳು. ಮಣಿಪಾಲದಲ್ಲಿ ಭಾರಿ ಮಳೆಯೂ ಪ್ರಾರಂಭವಾಗಿ ಹಲವು ದಿನಗಳು ಕಳೆದಿದ್ದವು .

ಮಣಿಪಾಲದಲ್ಲಿ ಮಳೆ ಅಂದರೆ ಮೂರೂ ನಾಲ್ಕು ತಿಂಗಳು ಗೃಹ ಬಂಧನ ಇದ್ದಹಾಗೆ. ಎಷ್ಟು ಹೊತ್ತಿಗೆ 'ಎಂಥಾ' ಮಳೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಒಂದೇ ಕ್ಷಣ ಮಾತ್ರದಲ್ಲಿ ರಸ್ತೆ, ಕಾಲುವೆ, ಹಳ್ಳಗಳು ತುಂಬಿ ಹೋಗುತ್ತವೆ.ರಭಸದಿಂದ ಗಾಳಿ ಬೀಸುತ್ತದೆ. ಛತ್ರಿ ಗಟ್ಟಿಯಾಗಿದ್ದರೆ ಮಾತ್ರ ಗಾಳಿಗೆ-ಮಳೆಗೆ ನಿಮ್ಮ ರಕ್ಷಿಸೀತು! ಆದರೆ ಒಮ್ಮೆ ಮಳೆ ನಿಂತಿದೆಯಂದರೆ ಎಲ್ಲವು ಸ್ವಚ್ಚ. ಇರು ಇಲ್ಲ; ಗಾಳಿಯು ಇಲ್ಲ. ನಿರಾಳವಾಗಿ ಹೆಜ್ಜೆ ಹಾಕ ಬಹುದು. ಒಂದೊಮ್ಮೆ ಮಣಿಪಾಲದ ಹಾಗೆ ಹುಬ್ಬಳಿಯಲ್ಲೆನಾದರು ಮಳೆ ಬಿದ್ದರೆ ಹತ್ತು ವರ್ಷ ಹುಬ್ಬಳಿ ನೀರಿನ ಕೆರೆಯೇ ಆಗಿ ಬಿಡಬಹುದು. ಮಳೆ ಆರಂಭವಾಗುತ್ತಿದ್ದನತೆ ಎಲ್ಲವು ಹಸಿರು. ಸುತ್ತಲು ಗಿಡ-ಪೊದೆಗಳು ಹಬ್ಬಿ ಎಲ್ಲವು 'ಗ್ರೀನ್ ವ್ಯೂ' ಅಥವಾ ಎಸಿ ರೂಂ ನಲ್ಲಿ ಕೊಳೆಯುತ್ತಿದವರಿಗೆ 'ನ್ಯಾಚುರಲ್ ಸೀನ್'.

ಮಣಿಪಾಲಕ್ಕೆ ಹೊರಗಿನಿಂದ ಬಂದವರಿಗೆ ಮಣಿಪಾಲದ ಮಳೆ ಒಂದು ರೀತಿಯ ಶಾಪ. ಅದರಲ್ಲೂ ಉತ್ತರ ಕರ್ನಾಟಕದ ಯಾವುದೊ ಪ್ರದೇಶದಲ್ಲಿ ಮಣಿಪಾಲದಲ್ಲಿ ಬೇಸಿಗೆಯಲ್ಲಿ ಬೀಳುವ ಇಬ್ಬನಿಯಷ್ಟು ಮಳೆಯನ್ನೂ ನೋಡಿದವರಿಗೆ ಮಣಿಪಾಲದಲ್ಲಿ ಅವರಿಗೆ ಪ್ರವಾಹ ಅನಿಸುವುದು ಸಹಜವಾಗಿತ್ತು. ಯಾರಿಗಾದರು ಹೊರಗಡೆ ಹೋಗೋಣ ಅಂದರೆ, " ಸಾಕಲೇ...ಈ ಮಳೆ ಕೊಲ್ತಾ ಇದೆ ಲೇ " ಎಂದು ಕೊರಗುತ್ತಲೇ ಕಚೇರಿಯತ್ತ ತೆರಳುವರೆ ಜಾಸ್ತಿ. 'ಇಂಚಿನ ಸಾವು ಮಹರಾಯ !'.

ಅದು ಶ್ರಾವಣ ಮಾಸದ ಮೊದಲ ಶುಕ್ರವಾರ. "ವೀಕೆಂಡ್ ಪ್ಲಾನ್ ?" ಎನ್ನುತ್ತಲೇ ಎಲ್ಲರು ಕೇಳುತ್ತಲಿದ್ದರು. ಎಲ್ಲರು ಒಂದೊಂದು ಸಬೂಬು. ಮಳೆ ಬೇರೆ. ಹೀಗಿರುವಾಗ ನಾನು ಧರ್ಮಸ್ಥಳಕ್ಕೆ ಹೋಗಬೇಕು, ಶ್ರಾವಣ ಮಾಸದ ಪೂಜೆ ಸಲ್ಲಿಸಬೇಕು ಎಂದು ನನ್ನ ಮನೆಯಿಂದ ಆದೇಶ ಬಂತು. ಶನಿವಾರ ಬೆಳಿಗ್ಗೆ ನಾನು ಧರ್ಮಸ್ತಳಕ್ಕೆ ತೆರಳಲು ನಾನು ನಿರ್ಧಾರ ಮಾಡಿ, ಬದುಕಿನ ಏಕಾಂಗಿತನದ ಜೊತೆಯಲ್ಲೂ ನನ್ನ ಜೊತೆಯಿದ್ದ ಗೆಳತಿ ಆಕಾಶವಾಣಿ ಯನ್ನು ಕೇಳುತ್ತ, ಉಡುಪಿಯ ಬಗ್ಗೆ ಕನಸುಗಳನ್ನು ಕಾಣುತ್ತ, ಭರತನಾಟ್ಯ, ಸಂಗೀತ, ರಾಜಾಂಗಣ, ಯಕ್ಷಗಾನ, ಆಭರಣ, ಡಯಾನಾ ಚಿತ್ರಗಳನ್ನು ಕಾಣುತ್ತ ಮಲಗಿದ್ದೆ. ಕೆಲವೊಮ್ಮೆ ಮಳೆಯ ತಪ-ತಪ ಎನ್ನುವ ಹನಿಗಳ ಸದ್ದು , ಗಡಿಯಾರದ ಟಿಕ್ ಟಿಕ್ ಶಬ್ಧವು ಕೂಡ ನನ್ನ ಕನಸ್ಸಿಗ್ಗೆ ತೊಂದರರೆ ಕೊಡುತ್ತಿತ್ತು. ಎಲ್ಲವು ಕನಸಿನೊಳಗೆ ಕನಸಾಗಿ, ನಿದ್ದೆಯೇ ಮುಗಿಯದ ಕಾಲದಲ್ಲಿ ಬೆಳಿಗ್ಗೆ ೬ ಗಂಟೆಗೆ ಅಲರಾಮ ನನ್ನ ಏಳಿಸಿತು...!

ತಣ್ಣೀರಿನ ಸ್ನಾನ ಮಾಡಿ, ಬೆಳಿಗ್ಗಿನ ಜಾವದಲ್ಲಿ ಟೈಗರ್ ಸರ್ಕಲ್(ಹುಲಿ ವೃತ್ತ) ಕ್ಕೆ ಬಂದೆ. ದೇವರ ದರ್ಶನಕ್ಕೆ ಹೊರಟಾಗ ದೇವರ ಭಕ್ತಿ ರೋಮ-ರೋಮ ಗಳಲ್ಲೂ ಸಂಚರಿಸುತ್ತಿತ್ತು. ಬೆಳಿಗಿನ ಜಾವದಲ್ಲಿ ಯಾವ ಹುಡುಗಿಯು ವೃತ್ತದಲ್ಲಿ ಇದ್ದಿರಲಿಲ್ಲ, ಜೊತೆಗೆ ದೇವಲಾಯಕ್ಕೆ ಹೋಗುವಾಗ ಯಾರನ್ನು ನೋಡಬಾರದು ಎಂದು ಕೊಂಡೆ ಬಸ್ಸಿಗೆ ಕಾಯುತ್ತ ಬಸ್ ಸ್ಟಾಂಡ್ ನಲ್ಲಿ ನಿಂತು ಕೊಂಡೆ. ಮಳೆಯ ಮಧ್ಯೆ, ಬೆಳಿಗಿನ ಛಳಿಯ ಕಾಟದಿಂದ ಮೈ ಮನಸ್ಸು ನಡುಕುತ್ತಲಿತ್ತು.

ಸೋಮೆಂದ್ರ( ನನ್ನ ಕಿರಿಯ ಸಹೋದ್ಯೋಗಿ ) KMC ಯ ಯೋಗ ತರಬೇತಿ ಮುಗಿಸಿ, ಹಂಗ್ಯೋ ಸೈಬಾ(ಹೋಟೆಲ್) ಮುಂದೆ ಹಾಸಿ ನನ್ನ ಮುಂದೆ ನಿಂತು,

"ಹಾಯ್ ಗುಡ್ ಮಾರ್ನಿಂಗ್ ವೆಂಕಟ್ ಸರ್, ಏನು ಇಷ್ಟು ಬೆಳಿಗ್ಗೆ ?? "

"ಏನಿಲ್ಲಪ್ಪ ಸೋಮೆಂದು... ಧರ್ಮಸ್ಥಳ ಕಡೆಗೆ ಹೊರೆತಿದ್ದೇನೆ. ನೀನೇನು ಇಲ್ಲಿ ?" ಎಂದು ಪ್ರಶ್ನಿಸಿ. ಅವನ ಹಿಂದೆ ನಿಂತ ಪಡೆಯಲ್ಲಿ, ರೋಶನ್, ದಿವ್ಯ , ಶ್ರಾವ್ಯ, ಕಂಚಿಕಾ, ರೋಶನಿ...ಎಲ್ಲರನ್ನು ನೋಡಿ. ಅಂತು ದೇವರ ದರ್ಶನದಲ್ಲೂ ಸೌಂದರ್ಯದ ಪಿಂಡಗಳು ಮುಂದೆ ಬಂದವಲ್ಲ; ನನ್ನ ಭಕ್ತಿ ಮಾರ್ಗಕ್ಕೆ ತಡೆ ಅಂದು ಕೊಂಡೆ. ಜೊತೆಗೆ, ಸೂರ್ಯೋದಯವನ್ನು ಎಂದು ನೋಡಿಯೇ ಇರಲಾರದ ಸೋಮೆಂದು ನಂತಹ ಪಿಂಡ ಮಳೆಗಾಲದ ಚಳಿಯಲ್ಲಿ ಯೋಗವೆಂದು ೫ ಗಂಟೆಗೆ ಎದ್ದು ಬರುತ್ತಾನೆ ಎಂದರೆ ಹೆಣ್ಣು ಉತ್ಸಾಹದ ಮೂರ್ತಿಯೇ ಇರಬೇಕು ಅನ್ನುವುದು ಕಂಚಿಕಾಳ ಮುಖ ಒಮ್ಮೆ ನೋಡಿದಾಗಲೇ ನನಗೆ ಅನಿಸಿತ್ತು. ಇವರಿಂದಾಗಿ ಯೋಗದ ಬಗ್ಗೆ ನನಗೂ ಆಸಕ್ತಿ ಹುಟ್ಟಿತ್ತು. ಆದರೆ ಇವರಲ್ಲಿ ನೋಡಿದ ಮುಖ ಯಾವುದು ಕೂಡ ಉಡುಪಿಯದಲ್ಲ; ಕರಾವಳಿಯದಲ್ಲ. ನನ್ನ ಗುರಿ ಏನಿದ್ದರು ಉಡುಪಿ. ನೋ ಯೋಗ..! ಎಂದು ಸಮಾಧಾನಿಸಿ ಕೊಂಡು, ಕಣ್ಣುಗಳನ್ನು ಬಸ್ಸಿನ ಅಗಮನದತ್ತ ನೋಡಿದೆ.
"ಬೈ ಸರ್" ಎನುತ್ತಲೆ ಎಲ್ಲರು ಹೊರಟರು. ನೋಡ ಬಾರದು ಅಂದುಕೊಂಡರು ಮತ್ತೆ ಅವರತ್ತ ನೋಡಿದೆ. ನಾವು ಏನೇ ಮಾಡಿದರು ಹುಡುಗರೇ ಬಿಡಿ!

ಬಸ್ಸು ಬಂತು. ಕರ್ಕರ (ಕಾರ್ಕಳ), ಬಿದ್ರೆ( ಮೂಡುಬಿದರೆ), ಬೆಳ್ತಂಗಡಿ ಎನ್ನುತ್ತಾ ವಾಹನ ಸಹಾಯಕ ಕೂಗಿದ ಧ್ವನಿ ಕೇಳಿ ಬಸ್ಸು ಏರಿ ಕುಳಿತೆ. (ಭಾಗ -೨ ರಲ್ಲಿ ಮುಂದಿನ ಕತೆ ಇದೆ)

Thursday, May 1, 2014

ಮರ್ಯಾದಿ ಇಲ್ಲದವರಿಂದ ಮರ್ಯಾದ ಹತ್ಯೆಗಳು!


ಕಳೆದ ಎರಡು ವಾರಗಳಿಂದ ಅಲ್ಲಲ್ಲಿ  ಮರ್ಯಾದ  ಹತ್ಯ ಪ್ರಕರಣಗಳನ್ನು ಪತ್ರಿಕೆಯಲ್ಲಿ ಓದಿದೆ.

ಯಾರೊಬ್ಬರು ಆತ್ಮ ಹತ್ಯೆ ಮಾಡಿಕೊಂಡರು ಅಂದರೆ ನನಗೆ ಅಷ್ಟೊಂದು ಬೇಸರ ಆಗುವುದಿಲ್ಲ. ಆದರೆ, ಯಾರಾದರು ಒಬ್ಬರು ಮರ್ಯದ ಹತ್ಯೆಗೆ ಜೀವ ಕೊಟ್ಟರು ಎಂದರೆ ನನ್ನ ಹೃದಯ  ತೀವ್ರವಾಗಿ ಬಡಿಯುತ್ತದೆ. ಆ ನೋವು, ಕೇವಲ ಶಬ್ಧಗಳಲ್ಲಿ ನಾನು ವ್ಯಕ್ತ ಪಡಿಸಬಹುದೆ ಹೊರತು  ಮರ್ಯಾದಾ ಹತ್ಯ ವಿರುದ್ಧ ಒಂದು  ಕ್ರಮ ಕೈಗೊಳ್ಳಲು ನಾನು ವಿಫಲ ಎಂದು ಬೇಸರವಾಗುತ್ತಿದೆ.

ಮರ್ಯಾದ ಹತ್ಯಗಳ  ಹಿಂದೆ ಇರುವ ಬದುದೊಡ್ಡ ಕಾರಣ 'ಜಾತಿ'. ಪ್ರತಿಯೊಬ್ಬರಿಗೂ ಜಾತಿ ಇದ್ದೀತು; ಸಂಪ್ರದಾಯ ಇದ್ದೀತು; ಆಚರಣೆಗಳು ಇದ್ದಾವು. ಆದರೆ ೧೮ ವರ್ಷ ಮೀರಿದ ಮೇಲೆ, ನಾನು ಯಾವುದನ್ನೂ ಬಿಡಬೇಕು; ಯಾವುದನ್ನೂ ಒಪ್ಪಬೇಕು ಎಂದು ತಿಳಿಯುವ ಅಧಿಕಾರ ಪ್ರತಿಯೊಬ್ಬ ಯುವಕ-ಯುವತಿಗೆ ಇದೆ. ಯಾರಿಗೆ ತಮ್ಮವರು ಎಂದು ಮಮತೆ ಇರುತ್ತದೋ(ಉದಾಹರಣೆಗೆ ಅಪ್ಪ, ಅಮ್ಮ, ಅಣ್ಣ ಅಕ್ಕ...ಸಂಬಂಧಿಕರು) ಅಂತವರು  ಕೇವಲ ತಮ್ಮ ಅಮೂಲ್ಯವಾದ ಸಲಹೆ ನೀಡಬಹುದೇ ಹೊರತು ತಮ್ಮ ಹುಡುಗಿ/ಹುಡುಗ  ತಮ್ಮ ಅಧಿಕಾರದ ಮಾತು ಕೇಳಿಲ್ಲ ಅನ್ನುವ ಕಾರಣಕ್ಕಾಗಿ ಜೀವವನ್ನೇ ತಿನ್ನುವ ಅಧಿಕಾರ ಖಂಡಿತ ಇಲ್ಲ.

ಭಾರತೀಯ secularism /ಜಾತ್ಯತಿತತೆಯಲ್ಲಿ ಒಂದು ದುರಂತ ಇದೆ. ಹೊರಜಗತ್ತಿನಲ್ಲಿ- ಟಿವಿ ಕಾರ್ಯಕ್ರಮಗಳಲ್ಲಿ, ಸಾರ್ವಜನಿಕ ಸಭೆಗಳಲ್ಲಿ ಎಲ್ಲರು ಅದ್ಭುತ  ಜಾತ್ಯತಿತರು. ಉಡುಪಿಯಲ್ಲಿ, ರಾಜಾಂಗಣದಲ್ಲಿ 'ವಸುದೇವ ಕುಟುಂಬಕಂ' ಎಂದು ಹೇಳಿದ ಪ್ರವಚನ ಕೇಳಿದ ನೀವು ಊಟದ ಸಾಲಿಗೆ ಹೋಗುತ್ತಿರುವಾಗ ಅದನ್ನು ಮರೆತಿರಲೇ ಬೇಕು..! ಇಲ್ಲದೆ ಹೋದರೆ ನಿಮ್ಮನ್ನು ಅಡ್ಡಗಟ್ಟುವರು ಇದ್ದೆ ಇರುತ್ತಾರೆ..! ಹೀಗಾಗಿ ಬದುಕುವುದಕ್ಕಾಗಿ, ಸ್ವ-ಶ್ರೇಷ್ಠತೆಯನ್ನು ಸಾರಲು ಇಂತ ಮಾತುಗಳು ಕೇಳುತ್ತಲೇ ಇರುತ್ತವೆ.  ಒಳಗೊಳಗೇ ಎಲ್ಲರಿಗು ಜಾತಿ ಇದ್ದೆ ಇರುತ್ತದೆ. ಅದು ಬಿಡಲಾರರು. ಅದು ಬಿಡಲಾಗದ ನಂಟು ಮನೆಗಳು ಕಳಿಸಿ ಕೊಟ್ಟಿರುತ್ತವೆ. ಹೀಗೆ ಮನೆಯಲ್ಲಿ ಕಳಿಸಿ ಕೊಡುವ ಜಾತಿಯ ಬಗೆಗಿನ ಅನಾಚಾರವನ್ನು ಸಂಸ್ಕಾರವೆಂದು(ಈ ಸಂಸ್ಕಾರದಲ್ಲಿನ  ಎಲ್ಲವು ಕೆಟ್ಟದ್ದು ಎಂದು ನನ್ನ ಅಭಿಪ್ರಾಯ ಅಲ್ಲ) ಭಾವಿಸಿ, ಶಾಲೆಯ ಶಿಕ್ಷಣವನ್ನು ವೃತ್ತಿ ನಿಮ್ಮಿತ ಜ್ಞಾನವೆಂದು ಭಾವಿಸಲಾಗುತ್ತದೆ. ಸತತ ೨೫ ವರ್ಷ ಶಾಲೆಯಲ್ಲಿ ಜಾತ್ಯತೀತ ಪಾಠ ಮಾಡಿದ ಶಿಕ್ಷಕ ಕೂಡ ತನ್ನ ಮಗನಿಗೆ ಅಂತರ್ಜಾತೀಯ ಮದುವೆಗೆ ಒಪ್ಪಲಾರ.

ಅಂತರ್ಜಾತೀಯ ಮದುವೆಗಳು ನೀವು ಮಾಡಿ ಎಂದು ನಾನು ಯಾರಿಗೂ ಹೇಳುತ್ತಿಲ್ಲ. ಯಾವುದನ್ನು ಯಾರಿಗೂ ಒತ್ತಾಯ ಪೂರ್ವಕವಾಗಿ ಹೇರುವುದು ಪ್ರಜಾಪ್ರಭುತ್ವದ ಲಕ್ಷಣವಲ್ಲ. ಆದರೆ, ನಿಮ್ಮ ಮಗಳು/ಮಗನು  ಕಾಲಕ್ಕೆ ಅನುಕೂಲವಾಗಿ ತನಗೆ ಸರಿಯನಿಸಿದ ಸಂಗಾತಿಯನ್ನು ಆರಿಸಿ ತಂದಾಗ ಜಾತಿಯ ಕ್ಯಾತೆ  ಯಾಕೆ ತೆಗೆಯುತ್ತಿರಿ?. ನಿಮ್ಮಗೆ ಒಪ್ಪಿಗೆ ಇಲ್ಲದಿದ್ದರೆ ಸಲಹೆ ಕೊಡಿ; ಎಲ್ಲ ನಿಮ್ಮ ಮಗಳು/ಮಗನ ಸಂಬಂಧದಿಂದ ದೂರಕ್ಕೆ ಸರಿಯಿರಿ. ಇದು ಹಾಯ್ ಕೋರ್ಟ್ ಕೂಡ ಹೇಳಿದ ವಾಕ್ಯ.

ಪ್ರೇಮಲೋಕದಲ್ಲಿ ನಲಿಯುತ್ತಿದ್ದ  ಕ್ರೌಂಚ ಹಕ್ಕಿಗಳನ್ನು ಬೇಟೆಗಾರ ಕೊಂದು ಕೆಡವಿದಾಗ ಮಹಾನ್ ಕವಿ, ರಾಮಾಯಣದ ಕೃತ್ರು ವಾಲ್ಮೀಕಿ ಮಹಿರ್ಷಿ  ಕೊಪೋದ್ರಿಕ್ತನಾಗಿ ಬೇಟೆಗಾರನಿಗೆ, "ನಿನಗೆ ಯಾವತ್ತು ಮೋಕ್ಷ ಸಿಗೆದೆ ಇರಲಿ" ಎನ್ನುತ್ತಾನೆ.
       (मां निषाद प्रतिष्ठां त्वमगमः शाश्वतीः समाः।
         यत्क्रौंचमिथुनादेकम् अवधीः काममोहितम्॥‘)
ಹೀಗೆ ಇರುವ ನಮ್ಮ ಧಾರ್ಮಿಕ ಗ್ರಂಥಗಳ ಉಚ್ಚಾರಣೆ ಯಾಕೆ ನಮ್ಮಗೆ ಸಂಸ್ಕಾರ ರೂಪದಲ್ಲಿ ಬಂದಿಲ್ಲ ? ಜಾತಿಗಾಗಿ ಕೊಲೆಗೈಯುವ ಧೂರ್ತರಿಗೆ ಯಾವ ಬೆಲೆ ಕೊಡಬೇಕು ?

ಬದುಕುವ ಸಾವಿರಾರು ಕನಸುಗಳನ್ನು ಹೊತ್ತು, ಕಾಲ, ಪ್ರದೇಶ, ತನ್ನ ಅವಶ್ಯಕತೆಗಳಿಗನುಗುಣವಾಗಿ ಪ್ರೀತಿಯೆಂಬ ಭಾವ ದಿಂದ ಬದುಕೆಂಬ ಅಮೃತವನ್ನು  ಉಣ್ಣಲು ಬಂದವರಿಗೆ ಯಾಕೆ ನಿಮ್ಮ ತಿರಸ್ಕಾರ?

ಮರ್ಯಾದ ಹತ್ಯಗಳು ೨೧ನೆ ಶತಮಾನದಲ್ಲಿ ಅಸ್ತಿತ್ವ ಪಡೆಯುತ್ತವೆ ಅಂದರೆ ನಾವು ಓದುವ ವಿಜ್ಞಾನ, ನಮ್ಮ ವೈಚಾರಿಕತೆಗೆ ಗ್ರಹಣ ಇದೆ ಅಂತಾನೆ ಅರ್ಥ..!

Thursday, February 13, 2014

ಫೆಬ್ರುವರಿ ೧೪-ಪ್ರೇಮಿಗಳ ದಿನ..!

ಇದು  ಹುಚ್ಚುರ ದಿನವೇ ಅನ್ನು ತರ ಸಾಂಪ್ರದಾಯಿಕ  ಜಗತ್ತಿನ ಹಲವು ಮಂದಿ ಫೇಸ್ಬುಕ್, ಪತ್ರಿಕೆ ಅಂಕಣ ಗಳಲ್ಲಿ ಬರೆದುದ್ದನು  ಓದಿದ್ದೇನೆ. ಕೆಲವು ಸಂಘಟನೆಗಳು  ಈ  ದಿನದ ಆಚಾರಣೆಯನ್ನೇ ಬಹಿಸ್ಕಾರ ಕೂಡ ಹಾಕಿವೆ. ಆದರೆ, ಪ್ರೇಮದ ಲೋಕದಲ್ಲಿ ವಿವಹರಿಸುತ್ತಿರುವವರು ಮಾತ್ರ ಯಾವುದು ಸಂಬಂಧವಿಲ್ಲದೆ ಕೆಂಪು ಗುಲಾಬಿ ಖರಿದಿಸುತ್ತಿದ್ದಾರೆ; ಆಫೀಸ್ ಗೆ ರಜೆ ಹಾಕುತ್ತಿದ್ದಾರೆ . ಏನ್ ಕತೆಯೋ ಗೊತ್ತಿಲ್ಲ..! ಎಲ್ಲ ಪ್ರೇಮ ರೀ !

ಅಂದಹಾಗೆ ಪ್ರೀತಿ ಅಂದ್ರೆ ಏನು ? ಎಲ್ಲರು ಕೇಳುವ ಪ್ರಶ್ನೆ ಮಾತ್ರವೊಂದೇ.. ಆದರೆ, ಭೂಮಿಯ ಮೇಲಿರುವ ಪ್ರತಿಯೊಂದು ವ್ಯಕ್ತಿಯ ವಾಖ್ಯನ ಬೇರೆ ಬೇರೆನೆ. ಅದಕ್ಕಾಗಿಯೆ ಸಾವಿರಾರು ಲವ್ ಫಿಲ್ಮ್ಸ್ ಬಂದರು, ಸಾವಿರಾರು ಪುಸ್ತಕಗಳನ್ನು ಪ್ರೀತಿಯ ಕುರಿತಾಗಿ ಬರೆದರೂ ಇವತ್ತಿಗೂ ಪ್ರೀತಿ ಹೀಗೆ ಎಂದು ತಿರ್ಮಾನಕ್ಕೆ ಬಂದವರಿಲ್ಲ. ಪ್ರೇಮಿಗಳ ದಿನಾಚರಣೆ ಸರಿಯೋ ತಪ್ಪೋ ಅನ್ನುವ ಜಿಜ್ಞಾಷೆಗಿಂತಲೂ, ಭಾರತೀಯ ಸಂಸ್ಕೃತಿಯಲ್ಲಿ ಇಂತದೊಂದು ದಿನ ಕೆಟ್ಟದ್ದು ಎಂದು ಹೇಳುವ ವಸ್ತು ಸ್ಥಿತಿ ನನಗೆ ಕಾಣುವುದಿಲ್ಲ. ದೇವರ ದೇವ ಶ್ರೀ ಕೃಷ್ಣನಿಗೆ ರುಕ್ಮಿಣಿ ದೇವಿ ಪ್ರೇಮ ಪತ್ರ ಬರೆದು ಪ್ರೀತಿಯನ್ನು ನಿವೇದನೆ ಮಾಡಿಕೊಂಡ ಭೂಮಿ ಇದು. ಸಮಾಜದಲ್ಲಿ, ನ್ಯಾಯುತವಾದ  ಆಸೆ, ಪ್ರೀತಿ, ಕಾಮ (ವಾತ್ಸಾಯನ ಕಾಮಸೂತ್ರ ಬರೆದುದ್ದು ಇದೆ ಭೂಮಿಯಲ್ಲಿ) ಅಪರಾಧವಲ್ಲ. ಎಲ್ಲವು ಮಿತಿಯೊಳಗೆ ಇದ್ದರೆ ಆರೋಗ್ಯಕ್ಕೆ ಒಳ್ಳೆಯದೇ...!

ಸರಿ, ನಮ್ಮ-ನಿಮ್ಮ ನಡುವೆ ಇರುವ ಒಬ್ಬ ಹುಡುಗನ ಕತೆ ಹೇಳುತ್ತೇನೆ ಕೇಳಿ. ಅವನೊಬ್ಬ ಬುದ್ಧಿವಂತ ಹುಡುಗ.  ಎಂ ಬಿ ಎ  ಓದುವಾಗ, ಜೆರಾಕ್ಸ್ ಅಂಗಡಿಯೊಂದರಲ್ಲಿ ಇವನು ನಿಂತಾಗ ಅವಳು ಇವನಿಗೆ ಪರಿಚಯವಾಗಿದ್ದಳು. ಅವಳು ಅಲ್ಲಿಯೇ ಸಮೀಪದ ಕಾಲೇಜ್ ನಲ್ಲಿ  ಪಿ ಯು ಸಿ  ಓದುತಿದ್ದಳು. ನೂರಾರು ಪೇಜ್ ಜೆರಾಕ್ಸ್ ಮಾಡುತ್ತಿರುವಾಗ, ಸುಮ್ಮನ್ನೆ ನಿಂತಲೇ ನೋಟ, ಭಾವ, ಮಾತು ಸುರುವಾಗಿ, ಪ್ರೀತಿಗೆ ನಾಂದಿಯಾಗಿತ್ತು.ಅವರ ಜಾತಿ ಬೇರೆ; ಮನೆ-ಊರು-ಕೇರಿ ಬೇರೆ ಬೇರೇನೆ, ಭಾಷೆ ಬೇರೆ; ಆದರೆ ಹೃದಯದ ಕೂಗು ಒಂದೇ ಆಗಿತ್ತು. ದಿನದಿಂದ ದಿನಕ್ಕೆ ಅವರ ಪ್ರೀತಿ ಗಾಢವಾಗುತ್ತ ಹೋಯಿತು.ಬಡತನದಲ್ಲಿದ್ದ ಹುಡುಗಿಯ ಓದನ್ನು  ಎಂ ಎಸ್ ಸಿ ಗೆ ತಂದ ಆ ಪುಣ್ಯಾತ್ಮ. ಹುಟ್ಟು ಕುಡಕನ ಮಗಳು ಇವನ ಸಾಂಗತ್ಯದಲ್ಲಿ ಪಿ ಯು ಸಿ ಗಿಂತ  ಮುಂದಿನ ಶಿಕ್ಷಣ ಸಾಧ್ಯವಾಗಿತ್ತು. ಬದುಕಿನ ನಿರ್ಧಾರವಾಗಿ , ಅವಳೇ ತನ್ನ ಹೆಂಡತಿಯೆಂದುಕೊಂಡ ಅವನು ತನಗೆ ನೌಕರಿ ಸಿಗುವ ತನಕ, ಮನೆಯಲ್ಲಿ ಯಾವ ವಿಷಯವನ್ನು ಹೇಳಲಿಲ್ಲ. ತಂಗಿಯ ಮದುವೆ ಮಾಡಿಸಿದ; ಅಪ್ಪನ ಸಾಲ ತಿರಿಸಿದ. ಒಂದು ದಿನ ಅಪ್ಪ-ಅಮ್ಮ ತನ್ನ ಮದುವೆಯ ಕುರಿತಾಗಿ ಹೇಳುವಾಗ, ಮನೆಯಲ್ಲಿ ಶಾಂತವಾಗಿ ಕುಳಿತು ತನ್ನ ಪ್ರೀತಿಯನ್ನು ಹೇಳಿದ.

ಮದುವೆಯಾದ ತಂಗಿಯನ್ನು ಭಾವನೊನ್ದಿಗೆ ಕರೆಸಿದ. ಅಪ್ಪ-ಅಮ್ಮನಿಗೆ ಸಾವಧಾನದಿಂದ ಮಾತಿಗೆ ತಂದ. ವಿಷಯ ಹೀಗೆ ಹೇಳಿದ, " ಅಪ್ಪ, ನಾನು ನಮ್ಮ ಜಾತಿಗಿಂತ ಕೆಳಗಿನ ಹುಡುಗಿಯನ್ನು ಪ್ರೀತಿಸಿದ್ದೇನೆ. ಅವಳು ತುಂಬಾ ಒಳ್ಳೆಯವಳು. ಕಳೆದ ನಾಲ್ಕು ವರ್ಷಗಳಿಂದ ನಾವು ಪ್ರೇತಿಯಲ್ಲಿದ್ದೆವೆ. ಆದರು ನಾನು ನನ್ನ ಯಾವ ಕರ್ತವ್ಯವನ್ನು ಮರೆತಿಲ್ಲ.ಅವಳು ನಂಬಿಕೆಯ ಹಾಗೂ ಪ್ರೀತಿಯಿಂದ ನೋಡಿಕೊಂಡು ಹೋಗುವ ಹುಡುಗಿ ಎಂಬ ಭರವಸೆ ಇದೆ. ಅವಳಲ್ಲದೆ ಬೇರೆಯವರನ್ನು ನಾನು ಒಪುವುದಿಲ್ಲ" ಎಂದು ಹೇಳಿದ. ಅದೊಂದು ಕಾಲದಲ್ಲಿ ಜಬ್ಧಾರಿಯಿಲ್ಲದ ಹುಡುಗ, ಹುಡುಗಿಯಿಂದಾಗಿ ಒಳ್ಳೆಯ ಸಭ್ಯ ವ್ಯಕ್ತಿಯಾಗಿದ್ದ. ಅವನ ಪ್ರೀತಿಯ ಗಿಂತಲೂ, ಜಾತಿಯ ಪ್ರಶ್ನೆ ಕಾಡಿತ್ತು. ನಾಲ್ಕಾರು ಬಾರಿ ತಿಳಿ ಹೇಳಿ, ಜಾತಿ ಹೊರಗಿನ ಮದುವೆಗೆ ಒಪ್ಪಸಲಾಗದೆ, ಒಂದು ದಿನ ಪೋಲೀಸರ ಮುಂದೆ ಮದುವೆ ಮಾಡಿಕೊಂಡರು.

ಮದುವೆಯಾದ ನಂತರ, ಮುಂದಿನ ಒಂದು ವರ್ಷ ಮನೆಯಿಂದ ಹೊರಗೆ ಉಳಿಯಬೇಕಾಯಿತು. ತನ್ನ ತಂದೆ-ತಾಯಿಗೆ ಯತಾವತ್ತಾಗಿ ಹಣವನ್ನು ಕೊಟ್ಟು, ಹೊರಗಿನವರಿಂದ ಮನೆಯ ಸ್ಥಿತಿಗತಿಗಳನ್ನು ತಿಳಿದುಕೊಳ್ಳುತ್ತಾ  ಇರಲು, ಒಂದು ದಿನ ಕಾಲ ಬದಲಾಗಿತ್ತು. ಮೊಮ್ಮಗನ ಕಾಣುವ ಬಯಕೆಯಿಂದ, ಜಾತಿ ಹೀನ ಸೊಸೆಯ ಮನೆಗೆ ಅಪ್ಪ-ಅಮ್ಮ ಬಂದಿದ್ದರು. ಜಾತಿ ಮರೆಗೆ ಸರಿದಿತ್ತು. ಅತುತ್ತಮ ಸಂಸಾರವಾಗಿ, ಸಾರವಾಗಿ ನಡೆಯುತ್ತಿದೆ ಆ ಬದುಕು.

ಹೀಗಿರುವಾಗ, ಕಾಲಗಟ್ಟದಲ್ಲಿ ಉಂಟಾದ ಪ್ರೀತಿ ಹುಡುಗಿಯ ಕನಸುಗಳು, ಹುಡುಗನ ಬವಣೆಗಳನ್ನು ದೂರಿಕರಿಸುವಲ್ಲಿ ಸಹಕಾರಿಯಾಯಿತು. ಜಾತಕ ನೋಡಲಿಲ್ಲ ;ವರದಕ್ಷಿಣೆ ತೆರಲಿಲ್ಲ. ವಾದ್ಯ ಬಾರಿಸಿ ನಾಲ್ಕು ಜನರಿಗೆ ಊಟ ಬಡಿಸಲಿಲ್ಲ ಅನ್ನುವ ಕಾರಣಕ್ಕೆ ಇಂತ ಮದುವೆ ತಪ್ಪು ಎಂದು ಯಾವತ್ತು ಹೇಳುತ್ತಲೇ ಇರಬೇಕೆ? ಆದರೆ ಒಪ್ಪಿದ ಹೃದಯಗಳು ಕೂಡಿದಾಗ, ಜೀವನದ ಗುರಿ ಸಾಧಿಸಿದಂತಲೇ ಅಲ್ಲವೇ?

ಪ್ರೀತಿ ಬದುಕಿನ ನಿಜವಾದ ಆಶವಾದದ ಕಿರಣ. ಮನುಷ್ಯ ಕೇವಲ ಹೊಟ್ಟೆಗಾಗಿ ಮಾತ್ರ ದುಡಿಯುತ್ತಿಲ್ಲ; ಭಾವನಾತ್ಮಕವಾದ ಆಕಾಂಕ್ಷೆಗಳು ಮುಖ್ಯ. ಪ್ರೀತಿಯಾರಲ್ಲಿ ಹುಟ್ಟುತದ್ದೋ ಅವರೇ ಪ್ರೀತಿಯನ್ನು ತುಂಬಬಲ್ಲರು. ತಮ್ಮ ಮಗಳು/ಮಗ   ತಮ್ಮದೇ ಜಾತಿಯ ಹುಡುಗ/ಹುಡುಗಿ ಪ್ರೀತಿಸಿಲ್ಲ ಅನ್ನುವ ಕಾರಣದಿಂದ ನಿಮ್ಮ ಮನಸ್ಸಿಗೆ ಬಂದವರನ್ನು ಬದಲಿಸಿ ಮದುವೆ ಮಾಡುವ ವಿಕೃತ ವ್ಯವಹಾರ  ಸರಿಯಲ್ಲ. ಅದಕ್ಕಾಗಿ, ಪ್ರೀತಿಸಿದವರನ್ನೇ ಕೈ ಹಿಡಿಯಬೇಕು  ಎನ್ನುವ ಸಂದೇಶವನ್ನು ಸಾರುವುದೇ ಪ್ರೇಮಿಗಳ ದಿನವಾಗಲಿ ಅನ್ನುವುದು ನನ್ನ ಉದ್ದೇಶ.

ಪ್ರೇಮಕ್ಕೂ ಮಿತಿ ಇದೆ ಅನ್ನುವುದನ್ನು ತಿಳಿದಿರಬೇಕಾದ ಸತ್ಯ. ಇಲ್ಲವಾದರೆ, ಒಳ್ಳೆಯದಾಗುವ ಬದಲು ಇನ್ನೇನೋ ನಡೆದು, ಏನೇನೋ ಆಗಿ ಜೀವನ ಕಷ್ಟವಾದೀತು. ಏನೇನೋ ಆಗುವ ಆಚರಣೆಗಳು ಬೇಡ. ಬದಲಾಗಿ, ತಮ್ಮ ಪ್ರೇಯಸಿ/ಪ್ರಿಯಕರಿಂದ ಜೀವನದ ಕುರಿತಾಗಿ ವಿಶಾಲ ಚರ್ಚೆಗೆ ಇಂಥ ದಿನ ವಿಶ್ವಾಶ ಪೂರ್ವಕವಾಗಿ ಬಳಸಿಕೊಂಡರೆ  ಉತ್ತಮ.

ಜಾತಿವ್ಯವಸ್ಥೆಯ ವಿರುದ್ಧ ಹೊರಡಲು ನೀವು ಮಾತ್ರ ಸಕ್ತರು; ನಿಮಗೆ ನಾನು ಹಾರ್ದಿಕವಾಗಿ ಅಭಿನಂದಿಸುತ್ತೇನೆ.

Saturday, January 18, 2014

ಪ್ರೇಮ ಪತ್ರ...!

ಪ್ರೇಮ ಪತ್ರ ಇವತ್ತು ಅಪ್ರಸ್ತುತ ವಸ್ತು. ಬಹುಶ ನನ್ನ ಜಮಾನದ ಯಾವ ಹುಡುಗ-ಹುಡುಗಿ ಪ್ರೀತಿಯನ್ನು  ಪತ್ರದ ಮೂಲಕ ನಿವೇದನೆ ಮಾಡಿರುತ್ತಾರೆ ಅನಿಸುವುದೇ ಇಲ್ಲ. ಆದರೆ ನಾನು ಪ್ರೇಮ ಪತ್ರ ಬರೆದಿದ್ದೇನೆ... ಒಂದಲ್ಲ, ಎರಡಲ್ಲ..ಸುಮಾರು ಐದಕ್ಕು ಹೆಚ್ಚು..! ಆದರೆ ನಾನು ಪ್ರೇಮ ಪತ್ರ ಬರೆದಾಗ ನನ್ನ ವಯಸ್ಸು ಕೇವಲ ೧೪ ಇರಬಹುದು... ಆದರೆ ಇವತ್ತು, ೨೮ರ ಹರೆಯಕ್ಕೆ ಕಾಲಿಡುತ್ತಿರುವಾಗ ನಾನೊಂದು ಪ್ರೇಮ ಪತ್ರವನ್ನು ಬರೆಯಲು    ಸಾಧ್ಯವಿಲ್ಲದ ಕಾಲದಲ್ಲಿ ನಾನು ಬದುಕುತ್ತಿದ್ದೇನೆ ಅಂದುಕೊಂಡಾಗ ನನಗೆ ನೋವು ಇದೆ..! ಈ ಬದಲಾವಣೆ ಒಪ್ಪಿಕೊಳ್ಳುವುದು ನನಗೆ ಸಾಧ್ಯವಾಗುತ್ತಿಲ್ಲ.

ನಾನು ಹಳ್ಳಿಯ ಹುಡುಗ. ಹಳ್ಳಿಯಲ್ಲಿ ಕಲಿತ್ತುರವರ ಸಂಖ್ಯೆ  ತುಂಬಾ ಕಡಿಮೆ. ಬಡತನ ಅಥವಾ ಇನ್ನಾವುದೋ ಕಾರಣದಿಂದ ಓದುವ ಮಕ್ಕಳ ಸಂಖ್ಯೆ ಕಡಿಮೆ ಮಾತ್ರವಲ್ಲ; ಶಿಕ್ಷಣದ ಗುಣ ಮಟ್ಟ ತುಂಬಾ ಕಡಿಮೆಯೂ ಆಗಿರುತ್ತದೆ. ಆದರೆ ನಾನು ಯಕ್ಷಗಾನದ ಪ್ರಭಾವದಿಂದಗಾಗಿ, ರಾಮಾಯಣ-ಮಹಾಭಾರತ  ಕತೆ ಓದಲು ಉತ್ಸುನಾಗಿ ಬಿಟ್ಟಿದ್ದೆ.ಯಾವುದೇ ವ್ಯಕ್ತಿ ಹೇಳಿದ ಶಬ್ಧಗಳನ್ನು ವಾಕ್ಯಗಳಾಗಿ ಬರೆಯುವ ಸಾಮರ್ಥ್ಯ ನನಗಿತ್ತು ಆ ದಿನಗಳಲ್ಲಿ...(ಹಳ್ಳಿಯಲ್ಲಿ ಇದು ಅದ್ಭುತ ..! ಆ ಕಾಲದಲ್ಲಿ).  ಹೀಗಾಗಿ ಹಳ್ಳಿ ಮಂದಿಯ ತಲೆಯಲ್ಲಿ ನಾನೊಬ್ಬ ಓದುವ-ಬುದ್ದಿವಂತ ಹುಡುಗ.

ಪ್ರೀತಿ ಪ್ರೇಮಗಳೇನು ಕೇವಲ ಕಾಲೇಜು ಮೆಟ್ಟಿಲು ಹತ್ತಿ, ಆಂಗ್ಲ ಭಾಷೆಯಲ್ಲಿ, "I LOVE YOU" ಅನ್ನಲು ಬರುವವರಿಗೆ ಮಾತ್ರ ಅಂದು ಕೊಂಡಿದ್ದಿರಾ? ಖಂಡಿತ ಇಲ್ಲ. ಮನುಷ್ಯನಾಗಿ ಹುಟ್ಟಿದ, ಶಿಕ್ಷಣ ಪಡೆಯದ ಹಳ್ಳಿಯ ಮುಗ್ದ ಜನರಲ್ಲೂ ಪ್ರೀತಿಯ ಕುರಿತಾಗಿ ನವಿರಾದ ಭಾವನೆಗಳಿರುತ್ತವೆ. ಆದರೆ ಮೊಬೈಲ್, ಲ್ಯಾಂಡ್ ಲೈನ್ ಗಳೇ ಇಲ್ಲದ ಕಾಲದಲ್ಲಿ ನಂಬಿಕಸ್ತ ವ್ಯಕ್ತಿಯ ಮೂಲಕ ಪ್ರೀತಿಯ ನಿವೇದನೆ ಹೇಳಿಕೊಳ್ಳುವುದು ಇಲ್ಲವೇ ಪ್ರೇಮ ಪತ್ರ ಮಾತ್ರ ದಾರಿ. ಆದರೆ ವ್ಯಕ್ತಿಯ ಮೂಲಕ ಇಷ್ಟ-ಕಷ್ಟಗಳನ್ನೂ ಹೇಳಿ ಕಳಿಹಿಸಬಹುದೇ ಹೊರತು ಭಾವನೆಗಳನ್ನು ತೆರೆದಿಡಲು ಸಾಧ್ಯವಿಲ್ಲ. ಹೀಗಾಗಿ ಪ್ರೇಮ ಪತ್ರಗಳೇ ಕೊನೆಯ ದಾರಿ. ಆದರೆ ದೂರದ ಹೃದಯದ ಬಾಗಿಲು ಬಡಿಯಲು ಅಕ್ಷರ ಬೇಕೇ ಬೇಕು!

ಹೀಗಾಗಿ, ನಾನು ೫-೬-೭ ನೆ ತರಗತಿಗಳಲ್ಲಿ ಓದುತ್ತಿದಾಗ ನೆರೆಯ ಹೆಣ್ಣುಮಕ್ಕಳು, ಗಂಡುಮಕ್ಕಳು ನನ್ನಿಂದ ಪ್ರೇಮ ಪತ್ರ ಬರೆಸಿಕೊಳ್ಳಲು ಬಂದಿದ್ದರು;ನನ್ನನು ತಮ್ಮ ಮನೆಗೂ ಕರಿಸಿ ಕೊಂಡಿದ್ದರು.ಒಂದು ದುರದೃಷ್ಟ ಅಂದರೆ ಒಂದು ಕಡೆ ಒಬ್ಬರಿಗಾಗಿ ಪ್ರೇಮ ಪತ್ರ ಬರೆದು ಕೊಟ್ಟ ಮೇಲೆ, ಅದು ಇನ್ನೊಬ್ಬರಿಗೆ ತಲುಪಿದ ಮೇಲೆ ನಾನೇ ಓದಿ ಹೇಳಿದ ಪ್ರಸಂಗವು ಇದೆ.  ಆ ಪತ್ರಗಳು ಹಳ್ಳಿಯಲ್ಲಿ ಸಿಗುತ್ತಿದ ಉದುಬತ್ತಿಯ ಬಾಕ್ಸ್ ನ ಪೇಪರ್ ಆದರು ಸರಿ, ಇಲ್ಲ ಹಳೆಯ ನೋಟ್ಬುಕ್ ಆದರು ಸರಿ..ಇಲ್ಲ ನನ್ನ ನೋಟ್ ಬುಕ್ ನ ಒಂದು ಹಾಳೆ ಆದರು ಸರಿ.. ಒಂದು ಪತ್ರದ ಸಾಧಾರಣ ವಿಷಯ ಹೀಗೆ ಇರುತ್ತಿತ್ತು:

ಶ್ರೀ ಮನೋಜನಿಗೆ ನಮಸ್ಕಾರಗಳು.
      ನಾನು  ಆರಂ ಇದ್ದೇನೆ. ನೀವು ಆರಂ ಇದ್ದಿರೆಂದು ಭಾವಿಸುತ್ತೇನೆ.
ನಾನು ಮುಂದಿನ ಹುಣ್ಣಿಮೆಯ  ನಂತರದ  ಪಾಡ್ಯದ ದಿನ, ಹೂವಿನತೋಟದಲ್ಲಿ ನಡುಯುವ ಸತ್ಯ ನಾರಾಯಣ ವೃತಕ್ಕೆ ಬರುತ್ತೇನೆ. ನೀವು ಬನ್ನಿ. ಮುದ್ದಾಂ ಬನ್ನಿ. ಉತ್ತರ ಬರೆದು ತಿಳಿಸಿ.

ಆಕಾಶಕ್ಕೆ ಚಂದ್ರಮ ಚಂದ, ಕೆರೆಗೆ ತಾವರೆ ಚಂದ, ನನಗೆ ನೀನೆ ಚಂದ.
ಗುಡಿ ಇಲ್ಲದ ನಾಡು, ನೀನಿಲ್ಲದ ಬಾಳು ಎರಡು ಹಾಳು...!
ಆಕಳು ಕಪ್ಪಾದರೆ ಹಾಲೂ ಕಪ್ಪಲ್ಲ.....
......

                                                                 ನಿನ್ನ ಪ್ರೀತಿಯ (ಮನೋಜಾಕ್ಷಿ).

ಪತ್ರ ಮುಗಿಯಿತು. ಈ ಪತ್ರಕ್ಕೆ ತಾರಿಖು ಹಾಕಿದ್ದು ನನಗಂತೂ ನೆನಪಿಲ್ಲ. ಅವರ ಸಹಿಯಂತು ಇಲ್ಲವೇ ಇಲ್ಲ . ಆದರು ಇವು ಜೀವಂತ ಪ್ರೇಮ ಪತ್ರಗಳು. ಈ ಪತ್ರಗಳು ಒಂದು ಕಡೆಯಿಂದ ಹೊರತು ಇನ್ನೊಂದು ಕಡೆ ಸೇರಲು ವಾರಗಳೇ ಬೇಕಾಗಿದ್ದವು. ಇಂತ ಪತ್ರವನ್ನು ನಂಬಿದ ಆ ಪ್ರೇಮಿಗಳ ಪ್ರೀತಿ ಅದೆಷ್ಟು ಮುಗ್ಧ ಹಾಗೂ ಭಾವುಕತೆಯಿಂದ ಕೂಡಿದ್ದು ಅನಿಸುವುದಿಲ್ಲವೇ? ಅಂತ ಪತ್ರಗಳನ್ನು ಬರೆದು ಪ್ರೀತಿಸಿ ಮದುವೆಯಾದವರ ಮಕ್ಕಳು ಇವತ್ತು ಕಾಲೇಜಿನ ಮೆಟ್ಟಿಲು ಏರಿದರೂ....ಮೊಬೈಲ್ ನಿಂದ ದಿವಾಳಿಯೆದ್ದು...ಪ್ರೇಮ ಪತ್ರದ ಮೂಲಕ ಪ್ರೀತಿಯ ನಿವೇದನೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ.

ದೇಶ ಭಾಷೆಗಳರಿಯದ, ಕುಡಿ ಮಿಸೆಯೇ ಇರದ
ಮೋಸ ವಂಚನೆ ತಿಳಿಯದ ಬಾಲ್ಯದಲ್ಲೊಂದು
ವಿಷಯ ಭರಿತ ಪ್ರೇಮ ಪತ್ರವನು ಬರೆದು
ಅಸಮ ಸಾಹಸಿ ನಾನೆಂದರೆ  ನಿವೋಪ್ಪುವಿರೆನು?

ನನ್ನ ಕನ್ನಡ ಉಪಾಧ್ಯಾಯರು ಒಮ್ಮೆ ಕಾಳಿದಾಸನ 'ಮೇಘದೂತ ' ಪ್ರೇಮಿಗಳ ವಿರಹ ಅಗ್ನಿಯ ಪ್ರೇಮ ಒಡಲಿಂದ ಸಿಳಿದು ಬಂದ ಭಾವನೆಗಳ ಸಮಗ್ರ ಕಥನ ಎಂದು ಹೇಳಿದ್ದರು. ಪ್ರೇಮದ ಹಿಂದೆ ಮಧುರ ಭಾವನೆಗಳಿವೆ, ಅದರಲ್ಲಿ ಅಪಾರ ಶಕ್ತಿಯಿದೆ ಎಂದು ಅವರು ಹೇಳಿದ್ದರು. ಆದರೆ ಅವರೆಂದೂ ನೀವು ಪ್ರೇಮ ಪತ್ರ ಬರೀರಿ ಎಂದು ಹೇಳಿಯೇ ಇಲ್ಲ ಅಂತ ನನಗೆ ಇವತ್ತು ಬೇಸರವಾಗುತ್ತಿದೆ. 'ಮೇಘದೂತ' ಇಂದಿಗೂ ನಾನು ಓದಿಲ್ಲ..

ತಂತ್ರಜ್ಞಾನ ಬೆಳೆಯಿತು.. ಕುಳಿತಲ್ಲೇ ಪ್ರೇಮಿಗೆ ಸಂದೇಶವನ್ನು ಕಳಿಸಬಹುದಾದ ಮಾತ್ರವಲ್ಲ ನೋಡಬಹುದಾದ ಸಾಧನಗಳು ಬಂದವು. ಆದರೆ ಇಂದಿನ ಪ್ರೇಮದ ಅತಿದೊಡ್ಡ  ಪ್ರೇಮ ಸಂದೇಶದಲ್ಲಿ ಇರಬಹುದಾದ  ಅಕ್ಷರಗಳ ಸಂಖ್ಯೆ ೮ ಮಾತ್ರ (I LOVE YOU )... ಅಥವಾ ಇನ್ನು ಕೆಲವರು ಅದನ್ನೂ ಕೂಡ ILY  ಎನ್ನುವವರಿದ್ದಾರೆ. ಎಷ್ಟು ಸಣ್ಣದಾಗಿ ಹೇಳಬಹುದು? ಸಮಯ ಉಳಿದಿದೆ ಎಂದು ನಾವು ಭಾವಿಸಿ ಸಮಧಾನ ಪಡಿಸಿಕೊಳ್ಳಬಹುದಾದರು ಇಲ್ಲೊಂದು ದುರಂತ ಸಂಭವಿಸಿದೆ.

ಅದೇನೆಂದರೆ, ಯಾವುದಕ್ಕೂ ಅಭ್ಯಾಸ ಬೇಕು. ಅದಕ್ಕಾಗಿಯೆ "ಪ್ರಾಕ್ಟೀಸ್ ಮೇಕ್ಸ್ ಮ್ಯಾನ್ ಪರ್ಫೆಕ್ಟ್" ಎಂದಿದ್ದು. ಪ್ರೇಮ ಪತ್ರಗಳನ್ನು ಬರೆಯುವ ಕಾಲದಲ್ಲಿ, ಹೇಗೆ ಬರೆದರೆ ಸರಿ ? ಎಂಬ ಪ್ರಮೇಯಗಳು ಸಾವಿರಾರು ಬಗೆಯಲ್ಲಿ ಮನಸ್ಸಿಗೆ ಯೋಗ ಅಭ್ಯಾಸ ಮಾಡಿಸುತ್ತಿತ್ತು... ಮನಸ್ಸು ಪ್ರೇಮದ ವಿಷಯದಲ್ಲಿ ಪರಿ ಪಕ್ವತೆಯನ್ನು ಹೊಂದುತ್ತಿತ್ತು. ವಿರಹದ ಬೆಂಕಿ  ಸಾಹಿತ್ಯವನ್ನು, ನವಿರಾದ ಕಲ್ಪನೆಗಳನ್ನು, ಮಾನವೀಯ ದೃಷ್ಟಿಯನ್ನು  ಬೆಳೆಸಲು ಒತ್ತಡ ಹೆರುತಿತ್ತು. ಆದರೆ, ಇಂದು ಒಂದು ಕ್ಷಣದಲಿ ಪ್ರೇಮ ನಿವೇದನೆಯಾಗಿ, ಎರಡು ದಿನದಲ್ಲಿ ಮದುವೆಯಾಗಿ, ಫೇಸ್ಬುಕ್ ನಲ್ಲಿ ಫೋಟೋ ಹಾಕಿಸಿ ... ಒಂಬತ್ತು ತಿಂಗಳು ಕಳೆಯುವದರಲ್ಲಿಯೇ ಡಿವೋರ್ಸ್  ಅಂತ ಅಲೆಯುವ ಮಂದಿ ಕಂಡಾಗ, ನಾನು ಅಂದು ಕೊಳ್ಳುವುದು..."ಒಹ್ ಇವರ ಮನಸ್ಸಿಗೆ ಪ್ರೇಮದ ಕುರಿತಂತೆ ಯೋಗ ಆಗಿಯೇ ಇಲ್ಲ ಅಂತಾ".

ಏನೇ ಆದರು, ನನ್ನ ಕಾಲದಲ್ಲಿ ಪ್ರೇಮ ಪತ್ರ ಬರೆಯುವ ದಿನಗಳೇ ಅಲ್ಲವಲ್ಲ ಅಂತ ತುಂಬಾ ನೋವು ಇದೇ ರೀ ....ನೀವು ಯಾರಾದರು  ಈ ಕಾಲದಲ್ಲೂ ಪ್ರೇಮ ಪತ್ರ ಬರೆದಿದ್ದಿರಾ? ಹೋಗಲಿ ಬಿಡಿ ಒಂದು ಪತ್ರವನ್ನಾದರೂ ಬರೆದಿದ್ದಿರಾ? ಒಟ್ಟಾರೆ ಮೊಬೈಲ್ ಭಾವನೆಗಳನ್ನೇ ಕೊಲೆ ಮಾಡಿದೆ ರೀ ... ಅದಕ್ಕೆ ಮನುಷತ್ವನು ಕೊಲೆಯಾಗಿದೆ ರೀ ...ಮನುಷತ್ವ ಇಲ್ಲದ ಮೇಲೆ ಮನುಷ್ಯ ಒಂದು ರೋಬೋಟ್ ಅಗ್ತನ್ ರೀ... ಅದಕ್ಕೆ ಪತ್ರ ಬರೇರಿ(ನೀವು ನಿಮ್ಮ ಪ್ರೇಮಿಗೆ )

Wednesday, January 15, 2014

ರೈತ..!

'ದೇಶದ ಬೆನ್ನೆಲುಬು ರೈತ' ಎನ್ನುವ ವಾಕ್ಯ ಶಾಲೆಯಲ್ಲಿ ಕಲಿತ ಎಲ್ಲರಿಗು ಗೊತ್ತಿರುವ ಸತ್ಯ. ಆತ ಅನ್ನದಾತ;ನೇಗಿಲ ಯೋಗಿ ಅಂತೆಲ್ಲ ಕರೆದು ಗೌರವ ತೋರಿಸುವುದು ನಿಮಗೂ ತಿಳಿದಿರುವ ವಿಚಾರವೇ!  ಆದರೆ ನಾವು ಯಾರು ರೈತರಾಗಲು ಬಯಸುತ್ತಿಲ್ಲ; ಅಥವಾ ನಮ್ಮ ಮಕ್ಕಳು ಕೂಡ ರೈತರಾಗಲು ನಾವು ಬಿಡುತ್ತಿಲ್ಲ. ಅದೇನಿದ್ದರು ರೈತರು  ಎಂಬ ಹಾಡು ಕಾರ್ಯಕ್ರಮದಲ್ಲಿ ಕೇಳಿ, ಒಂದಿಷ್ಟು ರೈತನ ಇಮೇಜ್ ಗಳು ಫೇಸ್ಬುಕ್ ನಲ್ಲಿ ಹಾಕುವುದಕ್ಕೆ ಮಾತ್ರ ಸೀಮಿತವಾಗುತ್ತಿದೆ ನಮ್ಮ ಬದುಕು.

ರೈತರಾಗುತ್ತಿರುವವರು  ಯಾರು ? ಸರ್ಕಾರದ ಎಲ್ಲ ಶೈಕ್ಷಣಿಕ ಯೋಜನೆಗಳ ನಡುವೆಯೂ  ಶಾಲೆಯಿಂದ ತಪ್ಪಿಸಿಸಿಕೊಂಡು, ನಾಲ್ಕು ಗೋಡೆಗಳ ಮಧ್ಯ ತಮ್ಮ ೧೬ ವರ್ಷ ಕಳೆಯದೆ, ಹುಟ್ಟಿದಾರಭ್ಯ ಸಮಾಜದ ಬದುಕಿನ ಸ್ಥಿತಿಗೆ ತಾವೇ ನುಗ್ಗಿಸಿಕೊಂಡ ಅಥವಾ ತಂದೆ-ತಾಯಿಯರ ಅಜ್ಞಾನ, ಬಡತನ ಮುಂತಾದ ಕಾರಣಗಳಿಂದಾಗಿ ಶಾಲೆಯಿಂದ ಹೊರದಬ್ಬಿದ್ದ ಪರಿಣಾಮವಾಗಿ ಮಕ್ಕಳು ರೈತರಾಗುವುದಕ್ಕೆ ಇರುವ ದಾರಿ. ಅದರ ಹೊರತಾಗಿ ರೈತರನ್ನಾಗಿಸಲು ದಾರಿಗಳೇ ಇಲ್ಲ. ಕೃಷಿ ವಿದ್ಯಾನಿಲಯಗಳಿವೆ ಎಂದು ನೀವು ಹೇಳಬಹುದು...! ಆದರೆ ಕೃಷಿ ತರಬೇತಿ ಹೊಂದಿದವರಾರು ಮಣ್ಣಿನೊಂದಿಗೆ ಸರಸವಾಡುತ್ತಿಲ್ಲ; ಬದಲಾಗಿ ಯಾವುದೊ ಕಚೇರಿಯ ಫ್ಯಾನ್ ಗಳಿಗೆ ತಲೆ ಹಿಡಿದು ತುಕಡಿಸುತ್ತಿದ್ದಾರೆ.

ಕೃಷಿಯನ್ನು ಒಂದು ವೃತ್ತಿಯನ್ನು ಮಾಡಿಕೊಳ್ಳಲು ಇಂದಿನ ಓದಿದ ಜನಾಂಗಕ್ಕೆ ಸಾಧ್ಯವೇ ಇಲ್ಲ. ಅದಕ್ಕೆ ಕಾರಣ ಕೃಷಿ ಒಂದು non -organised  sector  ಮಾತ್ರವಲ್ಲ, ಇದಕ್ಕೆ ಸರಕಾರದ ಕೃಪೆಯು ಇಲ್ಲ. ನಿಸರ್ಗದ ಜೊತೆಯಲ್ಲಿ ಹೋರಾಡಿ ತನ್ನ ಬದುಕು-ಸಾವು ನಿರ್ಧರಿಸಬೇಕಾದ ಪೂರ್ಣ ಜವಾಬ್ಧಾರಿ ರೈತನ ಮೇಲಿದೆ.  ಉದಾಹರಣೆಗೆ, ಯಾವುದೇ ಒಂದು ನೌಕರಿ ತೆಗೆದುಕೊಳ್ಳಿ...ಯಾವ ಬೆಲೆ ಏರಿಕೆ ಸಮ್ಭವಿಸುತ್ತದೊ, ಎಲ್ಲರು ಸೇರಿ ತಮ್ಮ ಸಂಬಳದ ಬೇಡಿಕೆಯನ್ನು ಮುಂದಿಟ್ಟು ಸರ್ಕಾರದಿಂದಲೋ, ಸಂಸ್ಥೆಯಿಂದಲೋ  ಲಾಭ ಮಾಡಿಕೊಳ್ಳುತ್ತಾರೆ. ಯಾವುದೇ ಬಿಸಿನೆಸ್ ದಲ್ಲಿರುವರು ಒಂದು ಕಡೆ ನಷ್ಟವಾದರೆ ಇನ್ನೊಂದು ಕಡೆ ಲಾಭ ಮಾಡಿ ಕೊಳ್ಳುತ್ತಾರೆ; ಅಥವಾ ತಮ್ಮ ನಷ್ಟವನ್ನು ಗ್ರಹಕಾರರ ಮೇಲೆ ಹೊರಿಸಿ ಬಿಡುತ್ತಾರೆ. ಆದರೆ ರೈತರು?

ರೈತರು ತಾವು ಏನು ಬೆಳೆಯುತ್ತಾರೋ ಅಷ್ಟನ್ನೇ ಮಾರಿ ಜೀವನ ಮಾಡಬೇಕು. ಅವರು ಬೆಳೆದ ಬೆಳೆಗೆ ಸರ್ಕಾರ ಬೆಲೆ ನಿಗದಿ ಮಾಡುತ್ತದೆ. ಒಂದೊಮ್ಮೆ ಬೆಲೆಯೆನಾದರು ಏರಿಕೆಯಾಗುತ್ತದೆ ಅಂತಾದರೆ ವಿದೇಶದಿಂದ ಕೃಷಿ ವಸ್ತುಗಳನ್ನು ಆಮದು ಮಾಡಿ ರೈತರನ್ನು ಮಣಿಸುತ್ತದೆ. ಹೀಗಾಗಿ ರೈತರ ಬೆಳೆದ ಬೆಳೆಯ ಬೆಲೆ ಯಾವುತ್ತು ಒಂದೇ ಲೆವೆಲ್ ನಲ್ಲಿ ಇಡಲಾಗುತ್ತದೆ. ಇದನ್ನು ಸರಿ ಹೊಂದಿಸಲು ರೈತರು ಭೂತಾಯಿಯ ಜೊತೆ ಗುದ್ದಾಡಬೇಕು; ಮಳೆಯನ್ನೂ ನಂಬಿ ಬದುಕ ಬೇಕು. ಜೊತೆಗೆ ಭೂತಾಯಿಯ ಜೊತೆಗಿನ ಗುದ್ದಾಟವನ್ನು ಹೆಚ್ಚು ರೋಷ ಭಾರಿತವನಾಗಿಸಿದ್ದು ಯಾರು -ಇದೆ ಕಲಿತ ವರ್ಗ ಹಾಗು ಸರ್ಕಾರಗಳು. ಕಲಿತ ವರ್ಗದ ಆಸೆಗಳಿಗಾಗಿ ವಾಹನ, ac ರೂಂ, ಪ್ಲಾಸ್ಟಿಕ್, ಪೆಟ್ರೋಲ್  ಹೆಚ್ಚು ಬಳಕೆಯಾಗಿ ಮಾಲಿನ್ಯದಿಂದ ಭೂತಾಯಿ ಬಸವಳಿದಾಗ, ನೇರ ಪರಿಣಾಮವಾಗುವುದು ರೈತರ ಮೇಲೆ. ಅಷ್ಟೇ ಅಲ್ಲದೆ ಆಗಾಗ ಸರ್ಕಾರಗಳು ತರುವ ಬೃಹತ್ ಯೋಜನೆಗಳು-ಡಾಮ್ಸ್, ವಿದ್ಯುತ ಯೋಜನೆಗಳು ರೈತರನ್ನು ಒಕ್ಕಲೆಬ್ಬಿಸುತ್ತವೆ.
ಇದರ ಪ್ರಾಕೃತಿಕ ಪರಿಣಾಮಗಳನ್ನು ರೈತನೇ ಮಾತ್ರ ಹೊರಬೇಕು.

ರೈತರಾಗುವುದೇ ಕಲಿಯದಿರುವುದರಿಂದ. ಹೀಗಾಗಿ ರೈತವರ್ಗ ಯಾವತ್ತು ಸರ್ಕಾರದ ವಿರುದ್ಧ ತಲೆ ಎತ್ತಿ ನಿಲ್ಲಲಾರದು. ಹಾಗೆಂದು ಅನಾಯಾಸವಾಗಿ ಸಾಯಲು ಬಿಡಬಾರದು ಎಂದು ಒಂದಿಷ್ಟು ಸಾಲ, ಅಕ್ಕಿ, ಕೊಟ್ಟು ತನ್ನ ಕೈ ತೊಳೆದು ಕೊಳ್ಳುತ್ತದೆ. ರೈತರ ಬದುಕು ಈ   ರೀತಿ  subsidized  ಆಗಿರುವುದರಿಂದಲೇ, ನಾವೆಲ್ಲ AC ರೂಂ ನಲ್ಲಿ ಕುಳಿತು ಸ್ವೀಟ್ ಕಾರ್ನ್ ಸೂಪ್ ಮೇಲ್ಳುವುದಕ್ಕೆ ಸಾಧ್ಯವಾಗಿರುವುದು. ಒಂದೊಮ್ಮೆ, ಹೀಗೆ subsidized  ಆಗಲು ರೈತರೇ ಇಲ್ಲದಿದ್ದರೆ, ಅರ್ಥಾತ್ ಎಲ್ಲರು ಶಿಕ್ಷಣ ಪಡೆದ ಪಂಡಿತರೆ ಆದರೆ,ದೇಶದ ಆಹಾರದ ಸ್ಥಿತಿಗತಿ ಹೇಗಿರಬಹುದು ಎಂದು ನೀವೇ ಊಹಿಸಿ ? ಅಂದ ಮೇಲೆ ಈಗಿರುವ ಶಿಕ್ಷಣ ಪದ್ಧತಿ ಹಾಗೂ ರೈತರನ್ನು non -organised  sector ನಲ್ಲಿ ಉಳಿಸಿಕೊಳ್ಳುವುದು ದೇಶದ ಭವಿಷ್ಯಕ್ಕೆ ಒಳ್ಳೆಯದಾಗುವುದಿಲ್ಲ. ಎಲ್ಲರು ಯೋಚಿಸುವುದು ತಾನು ರೈತನಾಗದಿದ್ದರೆ ಸಾಕೆಂದು ಮಾತ್ರ, ಹೀಗಾಗಿ ಇಂತದೊಂದು ಸಮಸ್ಯೆ ಅರಿವಿಗೆ ಬರುವುದು ಕಷ್ಟ.

ಕೃಷಿ ಕ್ಷೇತ್ರಕ್ಕೆ ಭವ್ಯವಾದ ಭವಿಷ್ಯ ಇರಬೇಕು ಅನ್ನುವುದಾದರೆ-ಕೃಷಿಯ ಬಗ್ಗೆ ತಾತ್ಸಾರ ಮನೋಭಾವ ದೂರವಾಗಬೇಕು. ವಿಜ್ಞಾನ ಕ್ರಾಂತಿಯಿಂದ ಸ್ವಿಚ್ ಒತ್ತಿದರೆ ಕಾಫಿ ತಯಾರಿಸಬಹುದು, ಆದರೆ ಕಾಫಿ ಗಿಡ ರೈತನೇ ಬೆಳೆಯ ಬೇಕು ಅನ್ನುವ ಪರಿಕಲ್ಪನೆ ನಮ್ಮ ಶಿಕ್ಷಣ ಕ್ಷೆತ್ರದಲಿರುವರಿಗೆ ಇರಬೇಕು. ಕೇವಲ ಡಿಗ್ರಿ ಗಳ ಉತ್ಪಾದನ ಕೇಂದ್ರಗಳಾಗಿರುವ ಶಾಲೆಗಳಿಂದ ಕೃಷಿಗೆ ಭವಿಷ್ಯವಿಲ್ಲ.

ಇದುವರೆಗೆ, ಯಾವ ಶಾಲೆಯು, ತನ್ನ ಡ್ರಾಪ್ ಔಟ್ ಅಥಾವ ಪಾಸು ಆದ, ಒಬ್ಬ ರೈತನನ್ನು ಸನ್ಮಾನಿಸಿರುವುದನ್ನು ನಾನು ಓದಿಯೇ ಇಲ್ಲ..! 

Thursday, January 9, 2014

ನಿಮ್ಮ ಹವ್ಯಾಸಗಳೇನು ?

ನಾನು ಯಾರನ್ನಾದರು ಹೊಸದಾಗಿ ಭೇಟಿಯಾದಾಗ ಕೇಳುವ ಪ್ರಶ್ನೆಗಳಲ್ಲಿ ಇದು ಒಂದು. ಕೆಲವರಿಗೆ ಇದು ಬಹಳ ತಲೆ ನೋವಿನ ಪ್ರಶ್ನೆ. ಆದರೆ ಹವ್ಯಾಸಗಳ ಹಿಂದೆ ಏನಿದೆ?

ಹವ್ಯಾಸಗಳು ಯಾವುದೇ ವ್ಯಕ್ತಿಯ ಸೃಜನಶೀಲ ಅಭಿವ್ಯಕ್ತಿಯ ಪದರಗಳು. ಒಂದು ವ್ಯಕ್ತಿಯ ಹವ್ಯಾಸಗಳಿಂದ ಅವನ ಆಸಕ್ತಿ, ಅವನ ವ್ಯಕ್ತಿತ್ವದ ಕೆಲ ಭಾಗಗಳನ್ನೂ ಗಮನಿಸಲು ಸಾಧ್ಯವಿದೆ. ಹಾಗಿರುವುದಕ್ಕು ಕಾರಣವಿದೆ. ಯಾವುದೇ ಹವ್ಯಾಸ ಮನುಷ್ಯನ ಹೃದಯದಲ್ಲಿನ ಸೃಜನ ಶೀಲ ಭಾವದ ತುಡಿತದಿಂದ ಮೇಲೆ ಬಂದಿರುತ್ತದೆ. ಹವ್ಯಾಸಗಳು ಹಣವನ್ನು ತರುವ  ಉದ್ಯೋಗ ಆಗುವುದು ತುಂಬಾ ಕಡಿಮೆ.ಆದರೆ ಇವು ತರುವ ಮಾನಸಿಕ ಸಂತೃಪ್ತಿ ಹೇಳಲಾಗದು. ಯಾವನಿಗೆ ಒಳ್ಳೆಯ ಹವ್ಯಾಸಗಳು ಇರುತ್ತವೋ ಅಂತ ವ್ಯಕ್ತಿ  ಪಾದರಸದಂತೆ ಕೆಲಸದಲ್ಲಿರುತ್ತಾನೆ.

ಆದರೆ ಹವ್ಯಾಸಗಳು ಅಂದರೇನು? ಕೆಲವರಿಗೆ ತಾವು ಏನು ಮಾಡುತ್ತೇವೋ ಅವೆಲ್ಲ ಹವ್ಯಾಸಗಳೇ ಎಂಬ ಭಾವ ವಿದೆ. ಆದರೆ ಅದು ಖಂಡಿತ ಹಾಗಲ್ಲ..! ಹವ್ಯಾಸದಲ್ಲಿ ಗಮನಿಸುವಿಕೆ ಬಹಳ ಮುಖ್ಯ. ಜೊತೆಗೆ ಆ ಗಮನಿಸುವಿಕೆಯಲ್ಲಿ ಒತ್ತಡವಿಲ್ಲ ;ಬದಲಾಗಿ ವಿನೋದವಿದೆ.  ಉದಾಹರಣೆಗೆ TV ನೋಡುವುದು ಹವ್ಯಾಸವಲ್ಲ; ಆದರೆ ನೀವು ಟಿವಿಯಲ್ಲಿ ಬರುವ ಯಾವೊದೋ ಕಾರ್ಯಕ್ರಮ  ಕುರಿತಾಗಿ ಸತತವಾಗಿ ತಿಳಿದು ಕೊಳ್ಳುತ್ತಿರಿ ಅಂದರೆ ನಿಮಗೆ ಆ ವಿಷಯದಲ್ಲಿ ಆಸಕ್ತಿ ಇದೆ ಎಂದರ್ಥ. ಆದರೆ ಸಮಯವನ್ನು ನೀಗಿಸಲು tv  ರಿಮೋಟ್ ಒತ್ತುತ್ತಾ ಚಾನೆಲ್ ಸ್ಕ್ಯಾನ್ ಮಾಡುತ್ತಿರಿ ಅಂದರೆ ನಿಮ್ಮ ಹವ್ಯಾಸ TV  ನೋಡುವುದಾಗಿರುವುದಿಲ್ಲ; ಬದಲಾಗಿ ರಿಮೋಟ್ ಒತ್ತುವ ಹವ್ಯಾಸವೆಂದೆ ಹೇಳಬೇಕು.

ಹವ್ಯಾಸಗಳ ಇನ್ನೊಂದು ವಿಷಯವೆಂದರೆ, consistancy -ನಿರಂತರತೆ. ನೀವು ಯಾವುದೋ ನೋವಿನಲ್ಲಿರಬಹುದು, ನಿದ್ದೆಯ ಗುಂಗಿನಲ್ಲಿರಬಹುದು, ಆದರೆ ನಿಮ್ಮ ಹವ್ಯಾಸದತ್ತ ಕೈ ಹಾಕಿದರೆ ಅವೆಲ್ಲ ಮರೆಗೆ ಸೇರುತ್ತವೆ. ಒಳ್ಳೆಯ ಹವ್ಯಾಸಗಳು ನಿರಂತರತೆ ಹಾಗೂ ಹೊರ ಜಗತ್ತನ್ನು ಮರೆಸಿ ಬಿಡುತ್ತವೆ.

ಹವ್ಯಾಸಗಳು ಹಣ ತರುವುದು ತುಂಬಾ ಕಡಿಮೆ. ಹಾಗೆಂದು ಹವ್ಯಾಸಗಳು ಉದ್ಯಮವಾದಾಗ ಒಳ್ಳೆಯ ಸಾಧನೆಯೇನೋ ಮಾಡಬಹುದು. ಆದರೆ, ಯಾವುದೇ ಹವ್ಯಾಸ ಉದ್ಯಮವಾಗಿಸಲು ಹೊರಟಾಗ, ನಾಲ್ಕಾರು ಜನರನ್ನು ಸೇರಿಸಲೇ ಬೇಕಾಗಿಬರುತ್ತದೆ. ಹೀಗಾಗಿ ಹವ್ಯಾಸದ ನಿಜವಾದ ಕೆಲಸಕ್ಕಿಂತ ನಾಲ್ಕು ಜನರ ಮ್ಯಾನೇಜ್ಮೆಂಟ್ ಹವ್ಯಾಸವಾಗಿ ಮಾನಸಿಕ ನೆಮ್ಮದಿ ದೂರ ಸರಿಯುತ್ತದೋ ಏನೋ  ಜಿಜ್ಞಾಸೆ ನನಗಿದೆ. ಯಾರಾದರು ಹವ್ಯಾಸವನ್ನು  ಬಿಸಿನೆಸ್ ಮಾಡಿಕೊಂಡವರಿಗೆ ಕೇಳಿದರೆ ತಿಳಿಯಬಹುದು ಅಷ್ಟೇ.

ನಾವು ಮಾಡುವ ಪ್ರತಿಯೊಂದು ಕೆಲಸ ಹವ್ಯಾಸವಾಗಿರಲು ಸಾಧ್ಯವಿಲ್ಲ. ಆಫೀಸ್ ನ ಕೆಲಸದಲ್ಲಿ, ಮನೆಯ ಕೆಲಸದಲ್ಲಿ ಅದೆಷ್ಟೋ ವಿಷಯಗಳು ಒತ್ತಡಕ್ಕೆ ಒಳಗಾಗಿ ಮಾಡಬೇಕಾಗಿ ಬರುತ್ತವೆ. ಅದು ಸಹಜ ನಿಯಮ. ಸಮಾಜದ ಜೊತೆಗಿನ ಜೀವನ ಹಾಗೂ ಹಣವನ್ನು ಗಮನಿಸಿ ನಾವು ಕೆಲಸವನ್ನು-ವೃತ್ತಿಯನ್ನು ಮಾಡಬೇಕು. ಆದರೆ ಪ್ರವೃತ್ತಿ ಹಾಗಲ್ಲ; ಅದು ನಮಗಾಗಿ ಮತ್ತು ಕೇವಲ ನಮಗಾಗಿ ಮಾತ್ರ.

ನಾನು ಬಹಳ ಸಾರಿ ಹವ್ಯಾಸಗಳನ್ನು ಕೇಳಿದಾಗ ಕೆಲವರ ಉತ್ತರಗಳು ಹೇಗಿರುತ್ತವೆ ಗೊತ್ತ ?
"ನನಗೆ ಹವ್ಯಾಸಗಳು ಅಂತ ಏನು ಇಲ್ಲ... tv  ನೋಡ್ತೇನೆ ಅಷ್ಟೇ".
ಇನ್ನು ಕೆಲವರ ಉತ್ತರ ಇನ್ನು ವಿಚಿತ್ರ, " ನಾನು ಚಿತ್ರ ಬಿಡಿಸುತ್ತಿದ್ದೆ, ಡಾನ್ಸ್ ಮಾಡುತ್ತಿದೆ, ಹಾಡುತ್ತಿದೆ,....ಆದರೆ SSLC  ತನಕ ಮಾತ್ರ. ಆದರೆ SSLC  ಓದಬೇಕು ಅಂತ ಅಪ್ಪ-ಅಮ್ಮ ಬೈದು ಎಲ್ಲ ಬಿಡಿಸಿದರು. ಇವಾಗ ಇವಾವುದನ್ನು ನಾನು ಮಾಡುವುದಿಲ್ಲ".

ಈ ಉತ್ತರಗಳನ್ನೂ ಗಮನಿಸಿದಾಗ ಮನುಷ್ಯನ ಒರಿಜಿನಲ್  ಆಸಕ್ತಿಯನ್ನೇ ಶಿಕ್ಷಣಕ್ಕಾಗಿ ಬಲಿಕೊಟ್ಟು ಮತ್ತೆ ಬೇರೆ ಏನೋ ಒಂದನ್ನು ಆಗಬೇಕು ಎಂದು ಅಪೇಕ್ಷೆ ಪಡುತ್ತೇವೆ; ಹಣವನ್ನೇನೋ  ತರುತ್ತೇವೆ;ಆದರೆ ಸಂತೋಷ ಹೊಂದುವುದು ಹೇಗೆಂಬ ಪ್ರಶ್ನೆಯೇ ಹವ್ಯಾಸವಾಗಿರುತ್ತದೆ.

ನಾನು ಹೇಳುವುದಿಷ್ಟೇ. ನಿಮ್ಮ ಹವ್ಯಾಸ ನಿಮ್ಮ ಸಹಿ ಅಷ್ಟೇ ಸತ್ಯ(ಯುನಿಕ್). ಸಾವಿರ ಜನ ಚಿತ್ರ ಬಿಡಿಸಬಹುದು  ಆದರೆ ಪ್ರತಿಯೊಬ್ಬರ ಚಿತ್ರ ಬೇರೆ ಬೇರೆನೆ. ನಿಮ್ಮ ಹವ್ಯಾಸಗಳು ಯಾವತ್ತು ನಿಮ್ಮ ನೆಮ್ಮದಿಯ ಕೇಂದ್ರ ಬಿಂದುಗಳು.ದಿನದ ೨೪ ಗಂಟೆಗಳಲ್ಲಿ, ೮ ತಾಸುಗಳನ್ನು ವೃತ್ತಿಗೆ, ೮ ಗಂಟೆಗಳನ್ನು ಪ್ರವೃತ್ತಿಗೆ, ಹಾಗೂ ಉಳಿದೆಂಟು ಗಂಟೆ ನಿದ್ರೆಗೆ ಮಿಸಲಾಗಿರಿಸಿದರೆ ಉತ್ತಮವಂತೆ. ಒಂದೊಮ್ಮೆ ನೀವು ಈ ವಿಷಯದಲ್ಲಿ ಫೇಲ್ ಆಗಿದ್ದರೆ ಪರವಾಗಿಲ್ಲ, ನಿಮ್ಮ ಮುಂದಿನ ಮಕ್ಕಳಿಗಾದರೂ ಹವ್ಯಾಸಗಳನ್ನು ಬೆಳೆಸಿಕೊಳ್ಳಲು ಅವಕಾಶಕೊಡಿ. 

 ನಿಮ್ಮ ಒಳ್ಳೆಯ ಹವ್ಯಾಸಗಳು ನಮಗೂ ದಾರಿದೀಪವಾಗಬಹುದು.ತಮ್ಮ ಹವ್ಯಾಸಗಳನ್ನು ನಮಗೆ ತಿಳಿಸುತ್ತಿರಾ?

Friday, January 3, 2014

ಸಾವಿರ ಸುಳ್ಳು ಹೇಳಿ ಮದುವೆ ಮಾಡು..!

"ಸಾವಿರ ಸುಳ್ಳು ಹೇಳಿ ಮದುವೆ ಮಾಡು..!" ಎಂಬ ಗಾದೆ ಎಲ್ಲರ ಬಾಯಲ್ಲೂ ಕೇಳಿಯೇ ಇರುತ್ತೀರಿ. ಇದರ ಅರ್ಥ: ಒಂದು ಮದುವೆಯ ನಡೆಯ ಬೇಕಾದರೆ ಒಂದಿಷ್ಟು ಸುಳ್ಳು ಹೇಳಲೇ ಬೇಕು ಎಂಬುದು.ಮದುವೆಯಲ್ಲಿ ಸುಳ್ಳು ಹೇಳಲೇ ಬೇಕೆಂದು ಶಾಸ್ತ್ರವೇನೂ ಇಲ್ಲ.... ಆದರೆ ಹಲವು ಸಮಯದಲ್ಲಿ ಸುಳ್ಳುಗಳು ಅನಿವಾರ್ಯವಾಗಿ ಬಿಡುತ್ತವೆ. ಮತ್ತೊಬ್ಬರಿಗೆ ನೋವು ಆಗಬಾರದು ಅನ್ನುವ ಕಾರಣದಿಂದಲೂ ಸುಳ್ಳುಗಳು ಹೇಳಬೇಕಾಗಿ ಬರುತ್ತವೆ. ಉದಾಹರಣೆಗೆ, ಹುಡುಗಿಗೆ ಹುಡುಗ  ನೋಡಲು ಚೆನ್ನಾಗಿ ಇಲ್ಲ ಅನಿಸರಬಹುದು, ಆದರೆ ಅವಳು, ಹುಡುಗ ಚೆನ್ನಾಗಿ ಇಲ್ಲ ಅನ್ನುವ ವಿಷಯವನ್ನು  ಜಾತಕ ಸರಿಯಿಲ್ಲ ಅಂತಲೋ, ಇನ್ನಾವುದೋ ಸಬೂಬುನಿಂದಲೋ ತಿಳಿಸುತ್ತಾರೆ. ಅದು ಹುಡುಗನ ಕಡೆಯಿಂದಲೂ ಹಾಗೆಯೇ.! ಇಂಥ ಸುಳ್ಳುಗಳು ಕೇವಲ ಅನಿವಾರ್ಯ ಹಾಗೂ ಮತ್ತೊಬ್ಬರ ಮಾನಸಿಕ ನೆಮ್ಮದಿಯನ್ನು ಕಾಪಾಡಲು ಬಳಸುವ ಒಳ್ಳೆಯ ಸುಳ್ಳುಗಳು;ತಪ್ಪಲ್ಲ.

ಮದುವೆಯ ಕುರಿತಾಗಿ ಎಲ್ಲರ ಒಳತಿಗಾಗಿ ಬಳಸುವ ಯಾವ ಸುಳ್ಳು ತಪ್ಪಲ್ಲ. ಆದರೆ ಕೆಲವು ಸುಳ್ಳುಗಳು ಹೇಳಲೇ ಬಾರದು. ಅಂತ ಸುಳ್ಳುಗಳು ಯಾವುದು ಇರಬಹುದು?

ಇಲ್ಲೊಬ್ಬ ಮಹಾಶಯನಿದ್ದ.ಓದ್ದಿದ್ದು ಇಂಜಿನಿಯರಿಂಗ್. ನಾನು ಹೇಳುದಾದರೆ ಅವನು ಒಳ್ಳೆಯ ವ್ಯಕ್ತಿನೇ. ಮದುವೆಯಲ್ಲಿ ಒಂದು ಸಣ್ಣ ಎಡವಟ್ಟು ಮಾಡಿಕೊಂಡಿದ್ದ. ಅವನ ಕತೆ ಹೀಗಿದೆ ಕೇಳಿ: ಅವನು ತನ್ನ ಕುಟುಂಬ ಸಮೇತವಾಗಿ ಹುಡುಗಿಯನ್ನು ನೋಡಲು ಹೋಗಿದ್ದಾನೆ. ಕುಟುಂಬ-ಕುಟುಂಬಗಳ ನೇರಾನೇರ ಮಾತು ಕತೆಯಲ್ಲಿ ಇವನು ಒಂದು ಮೂಲೆಯಲ್ಲಿ, ಅವಳು ಒಂದು ಮೂಲೆಯಲ್ಲಿ ತಲೆ ತಗ್ಗಿಸಿ ಕುಳಿತಿದ್ದರು. ಭಾವಿ ಮಾವ ಕುಡಿತ ಮುಂತಾದ ವಿಷಯಗಳ ಕುರಿತಾಗಿ, ಸ್ಪಷ್ಟವಾಗಿ ಅಲ್ಲದಿದ್ದರೂ,ಕೆಲವು ಪ್ರಶ್ನೆಗಳನ್ನು ಕೇಳಿದ್ದಾನೆ. ಮಾವನ ಮುಂದೆ, ತನ್ನ ಅರ್ಧಾಂಗಿಯಾಗಿ ಸ್ವಿಕರಿಸಲಿರುವ  ನವ್ಯ ತಾರುಣ್ಯದ ಲಲಿತಾಂಗನೆಯ ಎದುರು, 'ತಾನೆಂದು ಕುಡಿದಿಲ್ಲ...ಕುಡಿಯಲ್ಲ' ಎಂತೆಲ್ಲ ಹೇಳಿದ್ದಾನೆ.

ಹಾಗೆಯೇ, ಜೀವನ ಸಂಗಾತಿಯ ನಿರ್ಧಾರಕ್ಕೆಂದು, ಹಿರಿಯರು  ಹುಡುಗಿಯ ಜೊತೆಗೆ ಮಾತುಕತೆಗೆಂದು ನೀಡಿದ ಒಂದು ತಾಸು ಹೇಗೆ ಮಾತನಾಡಲಿ ಎಂದು ಯೋಚಿಸುತ್ತಲೇ ಇದ್ದ ಇವನಿಗೆ, ಇಂಜಿನಿಯರಿಂಗ್ ನ ಒಂದು ಪರೀಕ್ಷೆಗೆ ಮೂರುತಾಸು ಕೊಡುತ್ತಾರೆ, ಅದು ಒಂದು ಸೆಮಿಸ್ಟರ್ ನ ಒಂದು exam ಗೆ ಸೀಮಿತ. ಹೀಗಿರುವಾಗ ಮುಂದಿನ ೭೫ ವರ್ಷ ಜತೆಗಿರುವ ಸಂಗತಿಯ ಜೊತೆ ಏನೆಲ್ಲಾ ಕೇಳಲಿ ಎನ್ನುವ ಪ್ರಶ್ನೆಗೆಳು ದುಗುಡವಾಗಿ ಮುಖದ ಮೇಲೆ ನಿರಿಗೆಯಾಗಿ ಮೂಡಿದವು. ಅಂತು, ಸಮಯ ಬಂತು.....ಹುಡುಗ ಹುಡುಗಿ ಮನೆಯ ತೋಟಕ್ಕೆ ನಡೆದರು. ಯಾರು ಮೊದಲು ಮಾತನಾಡುವರು ಎಂದು ತಿರ್ಮಾನಿಸುವುದರಲ್ಲಿಯೇ ಹದನೈದು ನಿಮಿಷ ಕಳೆದಿದ್ದವು.

ಕೊನೆಗೂ ಮಾತು ಸುರುವಾಯಿತು. ಏನೇನೋ ಮಾತನಾಡಿದರು. ಆದರೆ, ಹುಡುಗಿ ಕರವಾಕ್ ಆಗಿ ಕೇಳಿದ ಒಂದು ಮಾತು ಅಂದರೆ, "ನೀವು ಕುಡಿಯುವುದಿಲ್ಲ ತಾನೇ? ನಮ್ಮ ಮನೆಯಲ್ಲಿ ಯಾರು ಕುಡಿಯಲ್ಲ.. I  can not  even digest  the smell .." ಅಂದಿದ್ದಳು. ಸಣ್ಣ ಸುಳ್ಳು, ಮದುವೆಯಾದ ಮೇಲೆ ಸರಿಯಾಗುತ್ತೆ ಎಂದುಕೊಂಡ ಮಹಾಶಯ... ಸ್ವಲ್ಪವೂ ಸಂದೇಹ ಬರದ ಹಾಗೆ ವಿಷಯ ಮರೆ ಮಾಡಿ..."ಕುಡಿಯುವುದೇ ಇಲ್ಲ" ಎಂದು ಭರವಸೆ ಹುಟ್ಟಿಸಿದ.

ಒಬ್ಬರಿಗೊಬ್ಬರು, ಎರಡು ಕುಟುಂಬಗಳು ಒಂದಾಗುವತ್ತ ನಡೆದವು. ನಿಶ್ಚಿತಾರ್ತ ಇನ್ನೇನು ನಡೆಯಬೇಕು, ಅನ್ನುವಷ್ಟರಲ್ಲಿ  ಅಧಿಕ ಮಾಸ ಪ್ರಾರಂಭವಾಗಿ ಒಂದು ತಿಂಗಳು ಮುಂದೆ ಸರಿಯಿತು. ಆದರೆ ಹುಡುಗ ಹುಡುಗಿ ಎಂದಿನಂತೆ ಮಾತು-ಸರಸ-ವಿರಸ ಭರವಸೆಗಳ ಮೇಲೆ ಮುಂದುವರಿಯಿತು. ಇಬ್ಬರು ಮಾತನಾಡುವುದು ರಾತ್ರಿ ೯ ರಿಂದ ೧೦ ಗಂಟೆಯ ತನಕ. ತಿಂಗಳ ಕಾಲ ಇವರ ಮಾತು ಕತೆ ಸರಿಯಾಗಿ ಇದೆ ಸಮಯದಲ್ಲಿ ನಡೆದಿದೆ.

ದುರದೃಷ್ಟ, ಅದೊಂದು ಶುಕ್ರವಾರ, ವೀಕೆಂಡ್ ಪ್ರಭಾವಕ್ಕೆ ಒಳಗಾದ ಹುಡುಗ, ಅಂತು ಇಂತೂ ೧೦ ಗಂಟೆ ಭರವಸೆಯ ಸರಸದ ಮಾತುಗಳನ್ನು ಮುಗಿಸಿ, ೧೦ರ ನಂತರ ಬಾರ್ ಒಂದರಲ್ಲಿ ಗೆಳೆಯರ ಜೊತೆ ಕುಡಿದು ಕುಪ್ಪಳಿಸಿದ. ಆದರೆ, ಹೇಗೋ ನಾಳೆ ರಜೆ ಎಂದುಕೊಂಡ ಗೆಳತಿ, ೧೧:೧೫ ಕ್ಕೆ ಮತ್ತೆ ಮಾತನಾಡೋಣವೆಂದು ತವಕಿಸಿದ್ದಾಳೆ. ಇವನ ಧ್ವನಿ ಪೆಟ್ಟಿಗೆಯಿಂದ ಹೊರಡುತ್ತಿದ್ದ ಒಂದೊಂದು ಮಾತಿನ ಮುತ್ತುಗಳು... ಹಳೆಯ ಕ್ಯಾಸೆಟ್ ರೆಕಾರ್ಡರ್ ಗೆ ಹಾಕಿದ ಕ್ಯಾಸೆಟ್ ನ ಧ್ವನಿಯನ್ತಿತ್ತು.ಅದೆಷ್ಟು ಜಗಳವು ಆಯಿತು. ಇವನು ಕುಡಿತದ ಅಮಲಿನಲ್ಲಿ "ಕೆಳಕ್ ನಿನ್ ಯಾರ್?" ಎಂದು ಕೇಳುವ ಮೂಲಕ ತಾನೊಬ್ಬ ಉದ್ಧಾರವಾಗದ ಕುಡುಕವೆಂಬುದನ್ನು ಅಕೆಗೆ ಮನವರಿಕೆ ಮಾಡಿದ. ಜೊತೆಗಾರ ಕುಡುಕರು ಮೊಬೈಲ್ ಕಸಿದುಕೊಂಡು ವಿಷಯ ಮುಗಿಸಿದರು  ಬಾರ್ ಕಡೆಯಿಂದ.

ಆದರೆ, ಯಾರಿಗೂ ತಿಳಿಯದೆ ಹಾಗೆ ಮಹಡಿಯನ್ನು ಹತ್ತಿ , ನಂಬಿಕೆಯ ಆಧಾರದ ಮೇಲೆ ಮಾತನಾಡಲು ತವಕಿಸಿದ  ಹುಡುಗಿ ರಾತ್ರಿ ಇಡಿ ಅತ್ತಳು. ಹುಡುಗರೆಲ್ಲ ಹೀಗೆಯ ಎಂದು ತಿರ್ಮಾನಕ್ಕೆ ಬಂದಳು. ನೋವಿನಿಂದ ಬಳಲಿದಳು. ಮರುದಿನ ೧೧ ಗಂಟೆಗೆ  ಹುಡುಗ ಕಾಲ್ ಮಾಡುತ್ತಾನೆ...
" ಸಾರೀ ಡಿಯರ್... ಗೆಳೆಯರಿದ್ದರು ಅದಕ್ಕೆ ಕುಡಿದೆ. ಇವತ್ತು ಒಂದು ದಿನ.. ಪ್ಲೀಸ್.." ಎಂದೆಲ್ಲ ಅವಲತ್ತುಕೊಂಡ.
 "ನೀನು ಕುಡಿದುದ್ದು ತಪ್ಪು ಅಂತ ಹೇಳ್ತಿಲ್ಲ... ನೀವು ಮೊದಲಿಂದಲೂ ಕುಡಿಯಲ್ಲ ಅಂತ ಹೇಳಿದ್ದಿರಿ... ನಿನ್ನೆ ನಾನು ಮೊದಲು ಮಾತನಾಡುವಾಗಲು ಪಾರ್ಟಿ ಕುರಿತಾಗಿ ಹೇಳಿಲ್ಲ. ನೀವು ವಿಷಯ ಮುಚ್ಚಿ ಇಟ್ಟಿದ್ದಿರಿ..! ನೀವು ಹೀಗೇನೆ ಎಷ್ಟು ವಿಷಯ ಮುಚ್ಚಿ ಇಟ್ಟಿದ್ದಿರೋ ಗೊತ್ತಿಲ್ಲ..!!!! ಸಾರೀ ನೀವು ಕಾಲ್ ಮಾಡಬೇಡಿ... ನಂಗೆ ಇಷ್ಟ ಇಲ್ಲ". ಹುಡುಗಿಯ ಮಾತಿನಲ್ಲಿ ಅರ್ಥವಿತ್ತು; ಹುಡುಗನ ಮನಸಿನಲ್ಲಿ ತಪ್ಪಿನ ಅರಿವು ಇತ್ತು; ಆದರೆ ಕಾಲ ಮೀರಿತ್ತು.

ಆದರೆ, ಸಾವಿರಾರು ಪ್ರಯತ್ನ ಮಾಡಿ, ಹುಡುಗಿಯ ಗೆಳತಿಯನ್ನು ಸಂಪರ್ಕಿಸಿ, ಅವಳಿಂದ ಭರವಸೆಯ  ಮಾತುಗಳನ್ನು ಆಡಿಸಿ.. ಮುಂದೆ ಹೀಗೆ ಮಾಡಲ್ಲ ಎಂದು  ಹುಡುಗ "ಎರಡನೆಯ" ಭರವಸೆ ನೀಡಿದ ಮೇಲೆ ಅವಳು ಒಪ್ಪಿದ್ದಳು.

ಒಟ್ಟಾರೆ, ನಾವು ಹುಡುಗರು, ಹೇಗೋ ಇರಬಹುದು; ಹುಡುಗಿಯ ಕುಟುಂಬಕ್ಕೆ  ಏನೋ ಹೇಳಬಹುದು; ಆದರೆ ಜೀವನದ ಅರ್ಧಾಂಗಿಯನ್ನು ನಿರ್ಧರಿಸುವಲ್ಲಿ  ಸಿಗುವ ಒಂದು ತಾಸು, ನಮ್ಮ ನಂಬಿ ಬರುವ ಹುಡುಗಿಗೆ  ನಮ್ಮ ನಿಜ ಜೀವನದ ಸ್ಥಿತಿಯನ್ನು ಮನವರಿಕೆ ಮಾಡಿಕೊಡುವುದೇ ಯಾಗಿರಬೇಕು..! ಒಮ್ಮೆ ಒಡೆದ ಸಂಬಂಧ ಮತ್ತೆ ಕೂಡಿಸಲು ಸಾಧ್ಯವೇ ಇಲ್ಲ... ಮತ್ತೆ ಒಡೆಯುತ್ತಲೇ ಇರುತ್ತದೆ. ಅದೇ ಮದುವೆಯ ದುರಂತ.

Wednesday, January 1, 2014

೨೦೧೩ಕ್ಕೆ ಧನ್ಯವಾದಗಳು;೨೦೧೪ಕ್ಕೆ ಸ್ವಾಗತ.

ಹೊಸ ವರ್ಷ ಬಂದಿದೆ ನಿಜ. ಹೊಸತನ ತಂದಿದೆಯೇ ಎನ್ನುವುದರ ಕುರಿತಾಗಿ ಒಂದು ಸಿಂಹಲೋಕನ ಮಾಡಿದರೆ ೨೦೧೩ ನನ್ನ ಬದುಕಿನಲ್ಲಂತೂ ಕೆಲವೊಂದು ಒಳ್ಳೆಯ ಬೆಳವಣಿಗೆಯನ್ನು ತಂದು ಕೊಟ್ಟಿದ್ದು, ೨೦೧೪ ಅತ್ಯಂತ  ಸಂತೋಷದಿಂದ ಕಳೆಯಬಹುದೆಂಬ ಭರವಷೆ ಇದೆ.

ಎಲ್ಲವು ನನ್ನ ಕನಸಿನಂತೆ, ನನ್ನ ಆಕಾಂಕ್ಷೆಯಂತೆ ನಡೆದಿದ್ದರೆ, ಉಡುಪಿಯ ಒಂದು ಓಣಿಯಲ್ಲಿ ನನ್ನದೇ ಒಂದು ಮನೆ ನಿರ್ಮಾಣ ಮಾಡಿ 'ನಂದನ ವನ' ಅಂತಲೋ, 'ನಂದ ಗೋಕುಲ' ಅಂತಲೋ ಹೆಸರಿಟ್ಟು, ನಿಮಗೆಲ್ಲರಿಗೂ ಕರೆಸಿ, ಒಂದು ಉಡುಪಿಯ ಊಟ ಹಾಕುತಿದ್ದೇನೋ ಏನೋ? ಆಗ  ನೀವೆಲ್ಲ, 'ವೆಂಕಿ ಉಡುಪಿಯಲ್ಲಿ ಸೆಟ್ಲ್' ಎಂದು ಹೇಳುವುದನ್ನು ಕೇಳಿ, ಅಂಗಿಯ ಕಾಲರ್ ಏರಿಸದೆ ಇರುತ್ತಿರಲಿಲ್ಲ.

   'ಕಾಲ'ದ ಪ್ರಭಾವ ಅದೆಷ್ಟು ಕ್ರೂರ ಅನಿಸುತ್ತದೆ ಕೆಲವೊಮ್ಮೆ. ಆದರೆ 'ಕಾಲ'ದ ಮೇಲೆ ನಮಗಾರಿಗೂ ನಿಯಂತ್ರಣ ಇಲ್ಲ. 'ಕಾಲ'ಕ್ಕೆ ಕೈ  ಮುಗಿದು ಮುಂದೆ ಸಾಗುವುದೇ ಬದುಕು; ಅದೇ ಸಾಧನೆ.

೨೦೧೩ರ ಆರಂಭದಲ್ಲಿ ನಾನು ಉಡುಪಿಯಲ್ಲಿದ್ದೆ. ಇತ್ತ ಕಡೆ ಉದುಪಿಯೆಂಬ ಭಾವನಾತ್ಮಕ ಸಾಂಸ್ಕೃತಿಕ ಪ್ರಪಂಚವನ್ನು ಬಿಡಲಾಗದೆ, ಅಲ್ಲಿಯೂ ಇರಲಾಗದ ಸನ್ನಿವೇಶ ನನಗೆ ಎದುರಾಗಿತ್ತು. ನಾನು ಉಡುಪಿಯನ್ ಎಂದು ಬದಲಾಗುತ್ತೇನೆ ಎಂದು ಬಹಳ ದಿನಗಳಿಂದಲೂ ಅಂದುಕೊಂಡಿದ್ದೆ. ಉಡುಪಿಯೇ ನನ್ನ ಕೊನೆಯ ಸ್ಥಾನ ಎಂದೆಲ್ಲ ಗೆಳೆಯರಿಗೆ ಹೇಳಿದ್ದೆ. ನಾನು ಮನೆಯನ್ನೂ ಖರದಿಸುವ ನಿರ್ಧಾರಕ್ಕೂ ಬಂದಿದೆ. ಆದರೆ, ೨೦೧೩ರ ಆರಂಭಿಕ ಕಾಲದ ವೃತ್ತಿಗತ ಘಟನೆಗಳು ನನ್ನನ್ನು ಬೆಂಗಳೂರಿಗೆ ದೂಡಿತು. ಇಷ್ಟ ಇಲ್ಲದ ನಗರದಲ್ಲಿ, ಸಾವಿರ ಜನರನ್ನು, ನನ್ನ ಶಿಕ್ಷಣವನ್ನು, ನನ್ನ ಹಣೆಬರಹವನ್ನು ಶಪಿಸುತ್ತ  ಹೆಜ್ಜೆ ಇಡುತ್ತಿದ್ದೆ. ಆಕಾಲದಲ್ಲಿ ಬಹಳ ದು:ಖದಲ್ಲಿದ್ದೆ.

ಆದರೆ, ಆಗುವುದೆಲ್ಲ ಒಳ್ಳೆಯದಕ್ಕೆ ಅನ್ನುವಂತೆ, ನಾನು ಬಯಸದ ಎದುರಾದ ಕಾಲದ ಬದಲಾವಣೆಗಳು ನನ್ನನ್ನು ಒಂದು ರೀತಿಯಲ್ಲಿ ಹೊಸತನವನ್ನು ತಂದು ಕೊಟ್ಟಿತ್ತು. ಉಡುಪಿ ಎಂಬ ನಗರದ ಜೊತೆ ನಾನು ಹೊಂದಿದ್ದ ಅವಿನಾಭಾವ ಸಂಬಂಧ ವನ್ನು ಕಳೆದು ಕೊಳ್ಳಬೇಕಾಗಿ ನಿರ್ಧಾರಕ್ಕೆ ಬಂದೆ. ನನ್ನನ್ನು ೬ ವರ್ಷ ನೌಕರಿ ನೀಡಿ ,ಸೇವೆಗೆ ಅನುವು ಮಾಡಿಕೊಟ್ಟ  ಕರ್ನಾಟಕ ಮೈಕ್ರೋಎಲೆಕ್ಟ್ರಾನಿಕ್ಸ್  ಸಂಸ್ಥೆಗೆ ಕೊನೆಯ ನಮನ ಸಲ್ಲಿಸಿದೆ. ಆರು ವರ್ಷಗಳಲ್ಲಿ  ಸಹೋದ್ಯೋಗಿಗಳ ಜೊತೆ  ಗಳಿಸಿದ್ದ  ಬಾಂಧವ್ಯಕ್ಕೆ ಪ್ರತಿಯಾಗಿ, 'ಬೈ ಬೆಸ್ಟ್ ಆಫ್ ಲಕ್' ಎಂದು ಕೈ ಕಲುಕಿ ಶುಭ ವಿದಾಯ ಹೇಳಿದೆ. ಯಾವತ್ತು ನನಗೆ ಪುಸ್ತಕಗಳನ್ನು ನೀಡಿ ಸಹಕರಿಸಿದ್ದ,ಮಣಿಪಾಲದ ನೆಹರು ಗ್ರಂಥಲಾಯಕ್ಕೆ ನಮನ ಸಲ್ಲಿಸಿದೆ. ಯಕ್ಷಗಾನ ರೂಪದಲ್ಲಿ ನನ್ನ ಮನಸ್ಸಿನ ಮೇಲೆ ಅಹ್ವನೆಗೆ ಬರುವ ದೇವ ಶ್ರೀ ಕೃಷ್ಣನಿಗೆ ನಮಸ್ಕರಿಸಿದೆ. ಕಲೆ-ಸಂಸ್ಕೃತಿಯ ಸಂಕೇತದಂತಿದ್ದ 'ರಾಜಾಂಗಣ'ಕ್ಕೆ ಅಷ್ಟಾಂಗ ನಮಸ್ಕಾರ ಮಾಡಿದೆ. ಯಕ್ಷಗಾನ ಮತ್ತು ಮಕ್ಕಳ ಶಿಕ್ಷಣಕ್ಕಾಗಿ ದುಡಿಯುತ್ತಿರುವ ಸಂಸ್ಥೆ 'ಕಲಾರಂಗ ' ಕ್ಕೆ ವಿದಾಯ ಹೇಳಿದೆ.ಸಾಕು, ಎಲ್ಲವು ಮುಗಿದಿದೆ.... ಎಂದು  ಹೇಳಿ ಬೃಹತ ನಗರಕ್ಕೆ ಬಂದೆ. ಸಾವಿರ ಜನರ ಮಧ್ಯದಲ್ಲಿ ಒಬ್ಬನಾಗಿ ಬದುಕುತ್ತಿದೇನೆ.

ಇಷ್ಟು ಬದಲಾವಣೆಗಳ ಮಧ್ಯೆ ನನ್ನ ಅನುಭವಕ್ಕೆ ಬಂದಿರುವ ವಿಷಯ ಅಂದರೆ, ಯಾವುದೇ ಪ್ರದೇಶ, ಮನುಷ್ಯನ ಧನಾತ್ಮಕ ಯೋಚನೆ, ಧನಾತ್ಮಕವಾಗಿ ಪ್ರೋತ್ಸಾಹ ನೀಡುವ ಗೆಳೆಯರು, ಅತ್ಮವಿಶ್ವಾಶವನ್ನು  ಕಾಪಿಟ್ಟು ಕೊಳ್ಳುವ ವ್ಯಕ್ತಿತ್ವಕ್ಕಿಂತ  ಶ್ರೇಷ್ಠವಾಗಲಾರದು.

ಹೀಗೆ, ೨೦೧೩ ಒಳಿತನ್ನು, ೨೦೧೪ ಒಳಿತಿನ ಫಲವನ್ನು ಅನುಭವಿಸುವ ಅವಕಾಶ ಕೊಟ್ಟಿದೆ. ಸ್ವಲ್ಪ ಮಜಾ ಮಾಡೋಣ..
ಹ್ಯಾಪಿ ನ್ಯೂ ಇಯರ್... ಹ್ಯಾಪಿ  ನ್ಯೂ ಇಯರ್...
ಹಾಡು ಸಂತೋಷ ಕೆ... ಹಾಡು ಸಂತೋಷ ಕೆ.....!

ನಿಮಗೂ ಒಳ್ಳೆಯ ದಿನಗಳು ಎದುರಾಗಲಿ ಎಂಬ ಹಾರೈಕೆಗಳೊಂದಿಗೆ...
Good  bye  2013 . WELCOME  2014 .