Sunday, October 28, 2012

ಮದುವೆ -ಎರಡು ಕುಟುಂಬಗಳ ನಡುವೆಯೋ, ಜಾತಿಗಳ ನಡುವೆಯೋ ?

ಎಲ್ಲರು ನನ್ನಂತೆ ಅದೃಷ್ಟರಲ್ಲ. ಆ ಹಳ್ಳಿಯಿಂದ ಸಾಗುತ್ತಾ...ಓದುತ್ತ...ಸಾಗುತ್ತಾ... ಓದುತ್ತ ಇಂದು ಏರ್ ಕಂಡೀಶನ್ ರೂಂ ಗೆ ಬಂದು ಸೇರಿದೆ. ಬಹುಶ ಅದು ದೊಡ್ಡ ಸಾಧನೆಯೇ? ಗೊತ್ತಿಲ್ಲ. ಆದರೆ, ಹಳ್ಳಿಯಿಂದ ಇಲ್ಲಿಯ ತನಕ ನನ್ನ ಬದುಕಿನಲ್ಲಿ ನಡೆದ ಬದಲಾವಣೆ ಇಷ್ಟೇ. ಆದರೆ, ' ಸಾಗುತ್ತಾ...ಓದುತ್ತ...ಸಾಗುತ್ತಾ... ಓದುತ್ತ' ನಡೆದಿರುವ ಹಂತದಲ್ಲಿ ನನ್ನ ಜೊತೆಯಲ್ಲಿ ಎಷ್ಟೋ ಮಂದಿ ಕಳೆದು ಹೋಗಿದ್ದಾರೆ; ಎಷ್ಟೋ ಮಂದಿ ಅಲ್ಲಲ್ಲಿ ಸೇರಿ ಕೊಂಡಿದ್ದಾರೆ. ಸಾಮಾನ್ಯವಾಗಿ ನಮಗೆ ನೆನಪಿರುವುದು ಕೊನೆಯಲ್ಲಿ ಜೊತೆ ಇದ್ದವರು ಅಥವಾ  ಪ್ರೈಮರಿ ಸ್ಕೂಲ್ ನಲ್ಲಿ ಭೇಟಿಯಾದವರು. ಉಳಿದವರ ಬಗ್ಗೆ ಗೊತ್ತಿಲ್ಲ ಅಂತ ಅಲ್ಲ; ಆದರೆ ಹೇಳಿ ಕೊಳ್ಳುವಂತ ಅಟ್ಯಾಚ್ಮೆಂಟ್ ಇಲ್ಲ.

ಹೀಗೆ ಬಂದ ಜೀವನದ ಒಂದು ಘಟದಲ್ಲಿ,  ಸಂಜಯ  ೧೦೦ ಕ್ಕೆ ೩೫ ಮಾರ್ಕ್ಸ್ ಪಡೆಯಲಾಗದೆ  ಪ್ರೈಮರಿ- ಹೈ ಸ್ಕೂಲ್ ಮಧ್ಯೆ ಯಿದ್ದ ಬ್ರಿಜ್ ಕೆಳೆಗೆ ಬಿದ್ದು ಹೋಗಿದ್ದ. ಶಾಲೆ, ಶಿಕ್ಷಣ ಅನ್ನುವ ವಿಷಯದಿಂದ ನಿರ್ಗಮಿಸಿದ್ದ ನಾದರು, ವ್ಯವಹಾರಿಕ ಜ್ಞಾನ ಅವನಿಗೆ ಚೆನ್ನಾಗಿಯೇ ಇತ್ತು. ಅಪ್ಪನ ಅಡಿಕೆ ತೋಟ ಕಡಿಮೆಯೇನು ಇರಲಿಲ್ಲ. ಆ ವಿಚಾರದಲ್ಲಿ ಹೇಳುವುದಾದರೆ ಅವನು ನನಗಿಂತ ೯ ವರ್ಷಗಳಷ್ಟು ಮೊದಲು ಗಳಿಕೆಯಲ್ಲಿ ತೊಡಗಿದ್ದ. ತುಂಬಾ ಹುರುಪಿನ ವಿನಯ ಹುಡುಗ ಸಂಜಯ ಶೈಕ್ಷಣಿಕ  ಬದುಕಿಂದ ದೂರ ಸರಿದರು ನಾನು ಊರಿಗೆ ಹೋಗುವಾಗ/ಬರುವಾಗ ದಾರಿಯಲ್ಲಿ/ಬಸ್ಸಲ್ಲಿ ಅವಾಗವಾಗ ಸಿಗುತಿದ್ದ . ನಮ್ಮಿಬ್ಬರ ನಡುವೆ ಅಂತ ಹೇಳಿ ಕೊಳ್ಳುವ ಗೆಳೆತನವು ಅಲ್ಲ ಹಾಗಂತ ಮಾತನಾಡಿಸದೆ, ಮಾತನಾಡದೆ  ಇರುವಂತ ಸಂಬಂಧವು ಅಲ್ಲ.

ಮೊನ್ನೆ ನವರಾತ್ರಿ ಹಬ್ಬಕ್ಕಾಗಿ ನಾನು ಊರಿಗೆ ಹೋಗುತಿದ್ದಾಗ  ಭೇಟಿಯಾಗಿದ್ದ. ಅವನು ನವರಾತ್ರಿ ಉತ್ಸವಕ್ಕಾಗಿ ಸಾಮಾನು ಖರೀದಿಸಲು ಮಾರ್ಕೆಟ್ ಗೆ ಬಂದಿದ್ದ. ಆದರೆ ಅವನ ಬಾಯಿಯಲ್ಲಿ 'ಉತ್ಸವ'ದ ಕುರಿತಾದ ಮಾತುಗಳಿದ್ದವು ಹೊರತು ಮುಖದಲ್ಲಿ 'ಉತ್ಸಾಹ' ಮಾತ್ರ ಇರಲಿಲ್ಲ. ನಾನು ಸ್ವಲ್ಪ, ಆಶ್ಚರ್ಯಚಕಿತನಾಗಿ ನೋಡಿ, ಹಣ ಏನಾದ್ರು ಸಮಸ್ಯೆ ಇರಬಹುದೇ ಅಂದು ಕೊಂಡು, 'ಹೇಯ್, ಸಂಜಯ ದುಡ್ಡು ಏನಾದ್ರು ಬೇಕಾ ? ಏನೋ ಟೆನ್ಶನ್ ಮಾಡಿಕೊಂಡಿದ್ದಿಯಲ್ಲ..?' . ಆತನ ಉತ್ತರವು ಅಷ್ಟೇ ಸರಾಗ ವಾಗಿ, ' ಇಲ್ಲಯ್ಯ, ಹಬ್ಬ ಹೇಗೆ ನಡಿಬಹುದು ಅಂತ ವಿಚಾರ ಮಾಡ್ತಾ ಇದ್ದೆ.... ಇರಲಿ, ನೀನು ಇಲ್ಲೇ ಇರ್ತಿಯಲ್ಲ, ನಾನು ಎರಡು ಪ್ಯಾಕ್ ಹಾಲು ತರ್ತೇನೆ' ಎಂದು ಹೇಳಿ ನನಗೆ ಅವನ ಸಾಮಾನು ಚೀಲ ಕಾಯಲು ಹೇಳಿ  ಹಾಲು ತರಲು ಸಮೀಪದ ಅಂಗಡಿಗೆ ಹೋದ.

ಅವನೊಬ್ಬ ಹಳ್ಳಿಯ ಹುಡುಗ. ಹಳ್ಳಿಗಳಲ್ಲಿ ಕುಡಿ ಮೀಸೆ ಕಂಡರೆ ಸಾಕು ಮದುವೆ ನಡೆಯಲೇ ಬೇಕು. ಹೀಗಿರುವಾಗ ನಾನು engeering ನ ಮೂರನೇ ವರ್ಷದಲ್ಲಿದ್ದಗಲೇ ಅವನ ಮದುವೆ ನಡೆದಿತ್ತು. ಆದರೆ ಅವನ ಮದುವೆ ಸ್ವಲ್ಪ ವಿಚಿತ್ರ. ಅವನು ಇಂದಿನ ಜಾತಿ ಪದ್ಧತಿಯಲ್ಲಿ ಉತ್ತಮ ಜಾತಿಗೆ ಸೇರಿದವನು.ಅವನು ತನ್ನ ಜಾತಿ ಉತ್ತಮತೆಯನ್ನು ನನ್ನಲ್ಲಿ ಯಾವತ್ತೂ ಹೇಳಿಕೊಂಡಿರದಿದ್ದರೂ ಅವನ ಪುರ್ವಾಪರಗಳು ನನಗೆ ಗೊತ್ತಿದ್ದವು. ಹೀಗಾಗಿ ನಾವೆಲ್ಲ ಆ ಪ್ರದೇಶದ ಚೌಕಟ್ಟಿನಲ್ಲಿ ನಡೆಯ ಬೇಕಾದ ಸಹಜವಾಗಿ ಪಾಲಿಸಿಕೊಂಡು ಬಂದ ನಿಯಮಗಳು- ಮಡಿ ಮೈಲಿಗೆ ಪಾಲಿಸಿ ಕೊಂಡೆ ಬಂದಿದ್ದೆವು. ದೂರದೃಷ್ಟ ವಶಾತ್ ಅವನಿಗೆ ಅವನ ಜಾತಿಯಲ್ಲಿ ಹುಡುಗಿಯೇ ಸಿಗಲಿಲ್ಲ. ಸೆಕ್ಸ್ ರೇಶಿಯೋ ಉಲ್ಟಾ ಹೊಡೆದಿರುವಾಗ ಯಾರಿಗೆ ತಾನೇ ಹೆಣ್ಣು? ಓದದೇ ಇರುವ ಇವನಿಗಂತೂ ಅಸಾಧ್ಯವೇ ಆಗಿ ಹೋಗಿತ್ತು. ಅಂತು- ಇಂತೂ  ತಂದೆ-ತಾಯಿಗೆ ಒಪ್ಪಿಸಿ ಬೇರೆ ಜಾತಿಯ ಹೆಣ್ಣು ಆದರು  ಸರಿ ಎಂದು,  ಕೆಳವರ್ಗದ (ಹಾಗೆ ಹೇಳಲು ಮನಸಿಲ್ಲ. ಆದರೆ ಕತೆ? ) ಹೆಣ್ಣು ಮದುವೆ ಯಾದ. ಇಂತ ಮದುವೆ ಸಮಾಜದಲ್ಲಿ ಉತ್ಪ್ರೇಕ್ಷೆಗೆ ಒಳಗಾಗುವುದರಿಂದ ಅವನು ಬೇರೆಳನಿಕೆಯಷ್ಟು ಬಂಧು-ಬಾಂಧವರನ್ನು ಕರೆಸಿ ಸಪ್ತಪದಿ ತುಳಿದಿದ್ದ. ಅವನ ಮದುವೆ ನಡೆದಿದ್ದು ನನಗೂ ಗೊತ್ತಿರಲಿಲ್ಲ. ಅಂತರ್ಜಾತೀಯ ವಿವಾಹವೊಂದು ನಡೆದಿದೆ ಎಂದು ಊರಿಗೆ ಹೋದಾಗ ನನಗೆ ಯಾರೋ ಹೇಳಿದ್ದರು.  ಅವನ ತಂದೆ-ತಾಯಿ ಮದುವೆ ಸಮಸ್ಯೆ ಅರಿತಿದ್ದರಿಂದ ಮಗನ ಬಗ್ಗೆ, ಸೊಸೆಯ ಬಗ್ಗೆ ಗೌರವನ್ನು ಹೊಂದಿ ಒಳ್ಳೆಯ ಸಂಸಾರ ಸಾಗಿಸುತ್ತಿದರು. ಆದರೆ  ಅವನ ಬದುಕು ಹಬ್ಬ-ಹರಿದಿನಗಳಲ್ಲಿ  ನಾಯಿಗೂ ಬೇಡ ಅನಿಸುವ ಕತೆ ಅವನ ಬಾಯಿಂದಲೇ ಕೇಳಿ.

ಬಸ್ಸಿನಲ್ಲಿ ಕುಳಿತ ಕೂಡಲೇ(ನಾವಿಬ್ಬರು ಒಂದೇ ಕಡೆ ಹೋಗುವವರು)  ಏನು ಕತೆ ಎಂದು ವಿಚಾರಿಸಿದಾಗ ಅವನು ಹೇಳಿದ ಕತೆ ಹೀಗಿತ್ತು: " ನಾನು ಮದುವೆ ಯಾದುದ್ದು  ಗೊತಲ್ಲ?, ಬೇರೆ ಜಾತಿ ಹುಡುಗಿ..? ಸಂಸಾರ ಚೆನ್ನಾಗಿದೆ ..." ಹೀಗೆ ಮುಂದುವರಿಯುವಾಗಲೇ ನನಗೆ ಏನು ಗೊತ್ತಿಲ್ಲ ಅನ್ನುವ ರೀತಿಯಲ್ಲಿ " ಮಗಾ, ಹಳ್ಳಿಯಲ್ಲಿದ್ದು ಲವ್  ಮಾಡಿದೆನೋ? ಈಗ ಅಪ್ಪ- ಅಮ್ಮ ?". ಅವನು ಮತ್ತೆ,  ಹುಡುಗಿಯರು ಜಾತಿಯಲ್ಲಿ ಸಿಕ್ತಾ ಇಲ್ಲ.....ಅಪ್ಪ ಅಮ್ಮ ಒಪ್ಪಿದರು ...ಯಾರಿಗೂ ಕರೆಯಲಿಲ್ಲ ...ಹೀಗೆ ನನಗೆ ಗೊತ್ತಿರುವ ವಿಷಯಗಳನ್ನೂ ಹೇಳಿ "....ಹಬ್ಬಗಿಬ್ಬ ಬಂದರೆ ಬಹಳ ಜನ ಅಕ್ಕಂದಿರು, ಸಂಬಂಧಿಕರು ಬರುತ್ತಾರೆ... ಹೇಳಿ ಕೇಳಿ ನಾವೆಲ್ಲ ದೇವರ ಕೆಲಸಗಳಲ್ಲಿ ಇರುವುದೇ ಹೆಚ್ಚು ನೋಡು.....ಆದರೆ, ನನ್ನ ಹೆಂಡತಿ ಕೆಳವರ್ಗದಳು ಅನ್ನುವ ಕಾರಣಕ್ಕಾಗಿ ಕುಟುಂಬದ ಮುಖ್ಯ ಪೂಜೆ-ಭೋಜನಾದಿಗಳಿಗೆ ನಮಗೆ ಪ್ರವೇಶ ಇರುವುದಿಲ್ಲ. ನಾನು ಮದುವೆ ಆದಮೇಲೆ, ಬೇರೆ ಯಾರಾದರು ಇದ್ದರೆ ಮನೆಯ ದೇವರ ಕೋಣೆ ಪ್ರವೇಶ ಮಾಡುವುದೇ ಇಲ್ಲ. ಹೀಗಾಗಿ ನಮ್ಮ ಮನೆಯಲ್ಲಿ ನಾನೇ ಬಾಹ್ಯ ನಾಗಿ ಕಾಣುವ ದಿನ ಬಂತಲ್ಲ ಅಂತ ಸ್ವಲ್ಪ ದುಃಖ ಆಗ್ತಾ ಇದೆ " ಹೇಳುತ್ತಲೇ ಓಂದು ಕಣ್ಣಿನ ಹನಿಯನ್ನು ವರೆಸಿ ಕೈ ಬೆರಳನ್ನು ಬಸ್ಸಿನ ಕನ್ನಡಿಗೆ ಹೊರೆಸಿದ. ನಾನು, ಇಂತದೊಂದು ದುಃಖಿತ ವಿಷಯವೇ? ಆಶ್ಚರ್ಯ ಪಟ್ಟು, " ಅವರು ಹಾಗೆ ಮಾಡಿದ್ರೆ...ನೀನು ಯಾಕೆ ತಲೆ ಕೆಡಿಸಿ ಕೊಳ್ತಿಯಾ?  ದೇವರಿಗೆ ಎಲ್ಲ ತಿಳಿಯುತ್ತೆ" ಎಂದು ಸಮಾಧಾನ ಪಡಿಸಲು ಹೊರಟಾಗ  ಮತ್ತೆ ಮುಂದೆ ವರಿಸಿದ ," ನನಗೆ ಏನು ಅಂತ ಸಮಸ್ಯೆ ಇಲ್ಲ... ಆದರೆ, ಅವಳು(ಹೆಂಡತಿ) ಬಹಳ ಮನಸ್ಸಿಗೆ ಹಚ್ಚಿಕೊಳ್ಳುತ್ತಾಳೆ... ಅವಳು ತಿಂಗಳು ಇದ್ದಾಳೆ (ಹಳ್ಳಿ ಭಾಷೆ)...ಹೊಟ್ಟೆಯಲ್ಲಿನ ಮಗುವಿಗೂ  ತೊಂದರೆ ಅಲ್ವಾ? ಇವತ್ತು ಹೋಗಿ ಹೇಗೆ ಸಮಾಧಾನ ಮಾಡ್ಲಿ ಅಂತ ಯೋಚಿಸ್ತಾ ಇದ್ದೇನೆ". ನಾನು ಬಹಳ ಹೊತ್ತು ಮೌನ ವಹಿಸಿದೆ.
ಕೊನೆಗೆ ಅವನಿಗೆ ಹೇಳಿ ಕಳಿಸಿದ್ದು ಹೀಗೆ: " ನೋಡು, ಯಾರು ಮೇಲು ಕೀಳು ಅಂತ ಇರಲ್ಲ. ಇವೆಲ್ಲ ಜನ ಮಾಡಿದ ಪದ್ಧತಿ. ಉಡುಪಿಯಲ್ಲಿನ ಕನಕನ ಕಿಂಡಿಯ ಕತೆ ಗೊತ್ತಲ್ಲ...!?. ಕೆಳವರ್ಗದವನಾಗಿದ್ದ ಕನಕದಾಸರಿಗೆ ಶ್ರೀ ಕೃಷ್ಣಾ ದರ್ಶನ ಭಾಗ್ಯ ನೀಡಿಲ್ಲವೇ? " . ಆತ ಒಮ್ಮೇ ಸಂತೋಷದ ನಗೆ ಚೆಲ್ಲಿದ್ದ. ಅವನು ನವರಾತ್ರಿ ಹೇಗೆ ಕಳೆದನು ಗೊತ್ತಿಲ್ಲ. ಆದರೆ ನಾನು ಮಾತ್ರ 'ನವರಾತ್ರಿ'  ಕಳೆದೂ ನಂತರದ 'ರಾತ್ರಿ'ಗಳಲ್ಲೂ ಅವನ್ನ ದುಃಖದ ಕುರಿತಾಗಿ ವಿಮರ್ಶೆ ಮಾಡುತ್ತಲಿದ್ದೇನೆ. ದೇವರೇ ಗತಿ.
'ಮದುವೆ ಕೇವಲ ಗಂಡು ಹೆಣ್ಣಿನ ನಡುವೆ ಅಲ್ಲ; ಎರಡು ಕುಟುಂಬಗಳ ನಡುವೆ ' ಅನ್ನುವ ನಮ್ಮವರು ಯಾವಾಗ '...ಎರಡು ಜಾತಿಗಳ ನಡುವೆ' ಎಂಬುದನ್ನೂ ಸೇರಿಸುತ್ತರೋ ಗೊತ್ತಿಲ್ಲ? ಆದರೆ ಅದು ಇಂದಿನ ಅನಿವಾರ್ಯತೆ ಅಂತು ಹೌದು.

Wednesday, October 10, 2012

ಆಸ್ಪತ್ರೆಯಲ್ಲಿ ಜಾತಿಯಿಲ್ಲದ ಆಂಟಿ, ಮದುವೆಯಲ್ಲಿ ?

ಇದೊಂದು ಕಾಲ್ಪನಿಕ ಕತೆ . ಪಾತ್ರಗಳ ಹೆಸರು ಕೂಡ ಕೇವಲ ಕಾಲ್ಪನಿಕ.ಯಾರು ಕೂಡ ತಮ್ಮ ಹೆಸರು ಬಳಸಲಾಗಿದೆ ಎಂದು ನೊಂದು ಕೊಳ್ಳಬಾರದು. ತಮ್ಮ ಸಲಹೆ -ಸೂಚನೆಗಳೇನಿದ್ದರು ನನ್ನ ಗಮನಕ್ಕೆ ತರಬಹುದು. ನಾನು ಗೂಗಲ್ transliterate ಬಳಿಸಿ ಕನ್ನಡ ಬರೆಯುತ್ತಿದ್ದೇನೆ. ಅಕ್ಷರ ತಪ್ಪುಗಳಿಗೆ ಕ್ಷಮೆ ಇರಲಿ.

ಕತೆ ಹೀಗಿದೆ:
'frendz, my mom admitted in kims.urgently needed o+ve blood 10 bottles.Pleeeease help....meenakshi'   9:57 am  sender +91-99168xxxxx .

Lab ನಲ್ಲಿ VHDL programming ಮಾಡುತ್ತಿದ್ದಾಗ ನಮ್ಮ ಮೊಬೈಲ್ ಗಳಿಗೆ ಇಂತದೊಂದು sms ಬಂದು ಸೇರಿತ್ತು. lab ನಲ್ಲಿ ಮೊಬೈಲ್ ಗಳು ತರುವುದು ನಿಯಮ ಬಾಹಿರವಾದುದ್ದರಿಂದ  ಕಂಪ್ಯೂಟರ್ ಗಳ ಮರೆಯಲ್ಲಿ sms  ಓದಿದ್ದೆವು. ಮೀನಾಕ್ಷಿ ನಂಬರ್ ನನ್ನ ಹತ್ತಿರವಿಲ್ಲದಿದ್ದರು sms ನಲ್ಲಿ 'ಮೀನಾಕ್ಷಿ' ಎಂದು ಸೇರಿಸಿದ್ದರಿಂದ, ನಮ್ಮ ಕ್ಲಾಸ್-ಮೆಟ್ ಮಾಡಿದ sms  ಎಂದು ಕುರುಹು ನೀಡಿತ್ತು.

ಮೀನಾಕ್ಷಿ , ನಮ್ಮ  ಕ್ಲಾಸ್ ನ ಸುಂದರ ಹಾಗು ಎಲ್ಲರೊಂದಿಗೂ ಸಲುಗೆಯಿಂದ ಹೊಂದುಕೊಂಡು ಹೋಗುವ ಕೂಲ್ ಹುಡುಗಿ. ಒಮ್ಮೆ ನೋಡಿದರೆ  ಮತ್ತೊಮ್ಮೆ ನೋಡಬೇಕು, ಮತ್ತೊಮ್ಮೆ ಮಾತನಾಡಬೇಕು ಅನ್ನಿಸುವಂತ ಆಕರ್ಷಣೆಯುಳ್ಳ ಹುಡುಗಿ. ನಾನೇ ಎಷ್ಟೋ ಸರಿ ಅವಳ ಜತೆ ಮಾತನಾಡುತ್ತಲೇ ಇರಬೇಕೆಂದು ಬಯಸಿದ್ದು ಇದೆ. ಕ್ಯಾಂಟೀನ್ ಗೆ  ಹೋದಗಂತೂ ಅವಳ ಮುಂದಿನ ಚೇರ್ ನನಗೆ ಸಿಗಲೇ ಬೇಕು ಎಂಬ ಪ್ರಯತ್ನ ಯಾವತ್ತು ಮಾಡುತಿದ್ದೆ. ಕೇವಲ ದೇಹದ ಸೌಂದರ್ಯ ಅಷ್ಟೇಯಾಗಿದ್ದಾರೆ ನಾನು ಇಷ್ಟೆಲ್ಲಾ ಹೇಳುತ್ತಿರಲಿಲ್ಲವೇನೋ...ಆದರೆ ಅವಳ ಹೆಚ್ಚು-ಕಡಿಮೆ ಅನಿಸದ, ವೇಗ-ನಿರ್ದಿಷ್ಟತೆ ತಪ್ಪದ ಮಾತುಗಳು ಬಹುವಾಗಿ ಆಕರ್ಷಿಸುವಂತೆ ಮಾಡುತಿತ್ತು. ಹೀಗೆ ಅವಳ ಸಾನಿಧ್ಯಕ್ಕೆ ಇಷ್ಟೊಂದು ಪೈಪೋಟಿ ಇರುವಾಗ ನನ್ನಂತವನಿಗೆ ಮುಂದಿಯ ಚೇರ್  ಸಿಗುವುದು ಸುಲಭ ಅಂತು ಆಗಿರಲಿಲ್ಲ. ಆದರೆ, ನಿಜವಾಗಿ ಅದೃಷ್ಟ ಶಾಲಿ ಅಂದರೆ ನಮ್ಮ ಸಂಜಯ. ಇಂಜಿನಿಯರಿಂಗ್ ನ ಎರಡನೇ ವರ್ಷದ, ಎರಡನೇ ತಿಂಗಳ, ಎರಡನೇ ವಾರದ, ಎರಡನೇ ದಿನ propose  ಮಾಡಿದ್ದ. ಅವಳು ಒಪ್ಪಿದ್ದಳು. ಇಬ್ಬರು ಹುಬ್ಬಳ್ಳಿಯ ಅಕ್ಷಯ ಕಾಲೋನಿ ಹಾಗು ನವರಂಗ ಕ್ಕೆ ಸೇರಿದವರು. ಹೇಳಿ-ಕೇಳಿ ಅನುರೂಪವಾಗಿದ್ದ ಅವರ ನಡುವಳಿಕೆ ಹಾಗು ಆಚಾರ-ವಿಚಾರಗಳು ನೋಡಿದ ನಮಗೆ ಸರಿ ಅನಿಸಿತ್ತು.  ನಾವು ಯಾರು ಸೊಪ್ಪು ಹಾಕಿಲ್ಲ.

ಲ್ಯಾಬ್ ನಲ್ಲಿದ್ದ ಸಂಜಯ ಮೊಬೈಲ್ ತೆಗೆಯುವ ಮುನ್ನ ಬೇರೆಯರು ಮೊಬೈಲ್ ನೋಡಿ, ಅವನಿಗೆ ಮೀನಾಕ್ಷಿಯ sms  ಬಗ್ಗೆ ಹೇಳಿದ್ದಾಗ, "ಹಾ..! ಏನಾಯಿತಂತೆ...?" ಎನ್ನುತ ಎದ್ದೆ ಬಿಟ್ಟ. ಕಂಪ್ಯೂಟರ್ ನ mouse , ಪೆನ್ ಹಾಗು notebook ಕೆಳಗೆ ಬಿತ್ತು. ಇಡಿ ಲ್ಯಾಬ್ ಗೊಂದಲಮಯವಾಗಿತ್ತು. ಎಲ್ಲರು O +ve ಗ್ರೂಪ್ ಹುಡುಗ/ಹುಡುಗಿಯರಿಗಾಗಿ  ಹುಡುಕಲು sms -call  ಲ್ಯಾಬ್ ನಲ್ಲೇ ಸುರುಮಾಡಿದರು. ಇದನ್ನೆಲ ನೋಡುತಿದ್ದ , lecturer  ' ಲ್ಯಾಬ್ ನಲ್ಲಿ ಏನು ನಡಿಸಿದ್ದಿರಿ' ಎಂದು ಗದರಿಸಲು ಮುಂದಾಗುತ್ತಿದ್ದಂತೆ, ವಿಷಯವನ್ನು ಸಂಜಯ ನಿವೇದಿಸಿ ಕೊಂಡಾಗ, lecturer   ಲ್ಯಾಬ್ ನ ಟೇಬಲ್ ಮೇಲೆ ಒಮ್ಮೆ ಕೈ ಬಡಿದು:' silent ..! Just  now  I  came  to know through  sanjaya that  meenakshi's  mother  is  admitted . Please, irrespective  caste -creeds of human  being  you  can  donate  the  blood . I  will  continue  lab  afternoon  ...ok ."  ಸುಮಾರು ಹದನೈದು ಜನ ರೆಡಿ..! Lecturer  moral  ಸಪೋರ್ಟ್ ಕೂಡ ಕಾರಣವಾಗಿತ್ತು.

ಅರ್ಧ ತಾಸಿನಲ್ಲೇ ಕಿಮ್ಸ್ ನ  ward  ಗೆ ಬಂದು ಸೇರಿದೆವು. ನಾನಂತು ಇದೆ ಮೊದಲ ಬಾರಿಗೆ ಹತಾಶ ಸ್ಥಿತಿಯಲ್ಲಿದ ಮೀನಾಕ್ಷಿಯನ್ನು ನೋಡಿದೆ. ಯಾವುದೊ ಒಂದು ಆಪರೇಷನ್ ಗೆ ಒಳಗಾಗಿದ್ದ ಮೀನಾಕ್ಷಿಯ ಅಮ್ಮನಿಗೆ ವೈದ್ಯರು ೧೦ bottle  ರಕ್ತ ಬೇಕು ಎಂದು ಹಳಿದ್ದರಂತೆ. ತನ್ನ ಪ್ರೀಯಕರ, ಸಂಜಯ ಸಾಲಿನಲ್ಲಿ ಬಂದವರ ಮುಂಚೂಣಿಯಲ್ಲಿದುದ್ದನ್ನು ಕಂಡು ಖುಷಿಯಾದ ಮೀನಾಕ್ಷಿ ಪ್ರೀತಿಗೆ ಸಾರ್ಥಕ್ಯ ಒದಗಿಸಿದೆಯಲ್ಲೋ ಪುಣ್ಯಾತ್ಮ ಅನ್ನುವಂತೆ ಮೆಲ್ಲನೆ ಅವನಿಗೆ ಮಂದಹಾಸ ನೀಡಿದಳು. ಆದರೆ, ಮೊದಲ ಬಾರಿಗೆ ಭಾವಿ ಅತ್ತೆಯ ಮುಂದೆ ನಿಂತ ಸಂಜಯ ಏನು ಹೇಳಬೇಕು, ಎಷ್ಟು ಹೇಳಬೇಕು, ಹೇಗೆ ಹೇಳಬೇಕು ಅನ್ನುವ  ತ್ರಿಶಂಕು ಸ್ಥಿಯಲ್ಲಿದ್ದ...!; ನಕ್ಕು ಸುಮ್ಮನಾದ. ಗೆಳತಿಯ ಮಂದಹಾಸವೇ ಅವನ ದುಗುಡ ಬಗೆ ಹರಿಸಿತು.
ಮೀನಾಕ್ಷಿಯ ಅಮ್ಮ ಅನಾರೋಗ್ಯದಿಂದಾಗಿ ಸ್ವಲ್ಪ ಬಳಲಿದ್ದಾರೆ ಅನ್ನುದು ಬಿಟ್ಟರೆ ಥೇಟ್  ಮೀನಾಕ್ಷಿಯನ್ನೇ ಹೋಲುತಿದ್ದರು. ನಮ್ಮ ಜೊತೆ ಬಂದಿದ್ದ ವೃಂದಾ ಜೋರಾಗಿಯೇ  " ಹೇಯ್ ಮೀನು..! , ನಿನಂತು ಆಮ್ಮನ xerox  copy  ಯಂತೆ ಇದ್ದೀಯಾ..!?' ಎಂದು ಬಿಟ್ಟಳು. ದುಃಖಿತ ಸನ್ನಿವೇಶದಲ್ಲೂ ಈ ಒಂದು ಮಾತು ಹಲವರನ್ನು ನಿರಾಳವಾಗಿಸಿತ್ತು. ವೃಂದಾಳಿಗೆ ಪ್ರತಿ ಉತ್ತರವಾಗಿ ಮೀನಾಕ್ಷಿಯ ಅಮ್ಮ , " ಹೌದು, ಹಾಗೇ ಕಾಣ್ತಾಳೆ ಆಕೆ, ಓಂದು ಸ್ವಲ್ಪನೂ ಅಪ್ಪನ ರೂಪ ಬಂದಿಲ್ಲ...." ಹೀಗೆ ಅನ್ನುತ್ತಿರುವಾಗಲೇ ಅಮ್ಮ ನ ಮಾತು ಗಡಿ ದಾಟಿ ಹೋಗಿ, ಅಪಹಾಸ್ಯ ಆದೀತು  ಅಂತಲೋ ಏನು-' ಅಮ್ಮ ಸುಮ್ಮನಿರಪ್ಪ , doctor  ಮಾತಾಡಬೇಡ ಅಂತ ಹೇಳಿಲ್ಲೇನು?' ಅಂದಳು. ಕೊನೆಗೆ, ಎಲ್ಲರನ್ನು ಕುರಿತಾಗಿ, 'ಥ್ಯಾಂಕ್ಸ್' ಎಂದು ಹೇಳುತ್ತಾ , 'ಇವರೆನೆಲ್ಲ ಒಂದಿನಾ ನಮೆಗೆ ಕರ್ಕೊಂಡು  ಬಾ' ಎಂದು ಮಗಳಿಗೆ ಹೇಳಿ ತಿರುಗಿ ಮಲಗಿದರು. ಎಲ್ಲರು ಕಾಲೇಜ್ ಗೆ ವಾಪಾಸದೆವು.

ತನ್ನ ಭಾವಿ ಅತ್ತೆಯನ್ನು ನೋಡಿದ ಸಂಜಯ...ದೇವರಿಗೆ ಮೊರೆ ಇಟ್ಟುದ್ದು ಹೀಗೆ : ' ದೇವರೇ, ನನ್ನ ಅತ್ತೆಯ ಅರೋಗ್ಯ ಬೇಗನೆ ಮರಳಲಿ ...ನಿನಗೆ ದೊಡ ನಮಸ್ಕಾರ'. ಕೈಯ ರಕ್ತ ತೆಗೆದ ಜಾಗದಲ್ಲಿ ಒಸರುತಿದ್ದ ರಕ್ತದಿಂದ , 'ಮೀನಾಕ್ಷಿ' ಎಂದು ಬರೆದುದ್ದನ್ನು  ವೃಂದಾ ನೋಡಿ , ' ಹೇಯ್ ಸಂಜು, ಸಾಯ್ಕೋ ಆಗಬೇಡ....ಅವಳು ನಿನಗೆ ಸಿಗ್ತಾಳೆ ಕಣೋ...!" ಅಂದಳು. ಮೀನಾಕ್ಷಿಯ ಕುರಿತಾಗಿ ಸಂಜಯಗಿರುವ ಗೌರವ,ಅಭಿಮಾನ enc  ಡಿಪಾರ್ಟ್ಮೆಂಟ್ ನ ೧೨೦ ವಿದ್ಯಾರ್ಥಿಗಳಿಗೆ ಇಷ್ಟೊತ್ತಿಗೆ ಮನವರಿಕೆ ಯಾಗಿಬಿಟ್ಟಿದೆ . ಕೆಲವರಂತೂ ನಮ್ಮ batch ನ ಮೊದಲ ಮದುವೆ -' ಮೀನಾಕ್ಷಿ ವೆಡ್ಸ್  ಸಂಜಯ' ಎಂದು  ಸಾರಿಯೇ ಬಿಟ್ಟಿದ್ದರು. ಇವತ್ತು ಮೀನಾಕ್ಷಿಯ ಅಮ್ಮ ಅಳಿಯನನ್ನು ಕಣ್ಣಾರೆ ನೋಡಿದ್ದಾರೆ  ಆದರೆ 'ಅಳಿಯತನ' ಗುರಿತಿಸಿದ್ದರೋ-ಇಲ್ಲವೋ ಗೊತ್ತಿಲ್ಲ.
 ಮೀನಾಕ್ಷಿಯ ಅಮ್ಮ ಓಂದು ವಾರದಲ್ಲೇ ಆಸ್ಪತ್ರೆಯಿಂದ ಮನೆಗೆ ನಡೆದರು. ಹದನೈದು ದಿನಗಳಲ್ಲಿ ಸಂಪೂರ್ಣ ಅರೋಗ್ಯ ಹೊಂದಿದರು.ಅ ಬಳಿಕ ಓಂದು ದಿನ ಮಗಳಿಗೆ ರಕ್ತವನ್ನು ಕೊಟ್ಟ ಎಲ್ಲ ಗೆಳೆಯ-ಗೆಳತಿಯರನ್ನು ಕರೆದು ಬರುವಂತೆ ಹೇಳಿದರು. ಮೀನಾಕ್ಷಿಯಷ್ಟೇ ಸಲುಗೆಯಿಂದ ಆಸ್ಪತ್ರೆಯಲ್ಲಿ  ಮಾತನಾಡಿದ ಅವಳ ಅಮ್ಮನ ಮನೆಯ ಕರೆಯನ್ನೇ ನಾವೆಲ್ಲ ಕಾಯುತಿದ್ದೆವು. ಸಂಜಯ ಅಂತೂ ಮಾವನ ಮನೆಯ ಪ್ರವೇಶ ಮಾಡುವ ಕಾಲ ತಾನಾಗಿಯೇ ಬಂದಿದೆ ಅನ್ನುತ  ಕಳೆದ ಹಲವಾರು ದಿನಗಳಿಂದ ಕನಸಿನ ಲೋಕದಲ್ಲಿದ್ದ.  ಮೀನಾಕ್ಷಿಯ ಮನೆಗೆ ಹೋಗುದು ಓಂದು ಸಂಭ್ರಮವಾಗಿ ಉಳಿದಿತ್ತು. ವೃಂದಾ  ಧೈರ್ಯವಾಗಿ ಮುಲಾಜಿಲ್ಲದೆ ಮಾತನಾಡುವುದರಿಂದ, ಮೀನಾಕ್ಷಿ ಮತ್ತು ಸಂಜಯ ಅವಳಿಗೆ, ನಮ್ಮ ಮನೆಗೆ ಬಂದಾಗ  ನಮ್ಮಿಬ್ಬರ ಪ್ರೀತಿಯ ಕುರಿತಾಗಿ ಯಾವುದೇ ಮಾತನಾಡುವುದು, ಜೋಕು ಹೊಡೆಯುವುದು ಬೇಡ ವೆಂದು ಎಚ್ಚರಿಕೆಯನ್ನು ನೀಡಿದರು. ಓಂದು ದಿನ sunday  ೧೫ ಜನ ಸಹಾಪಟಿಗಳೊಂದಿಗೆ, ಸಂಜಯ ತನ್ನ ಹುಡುಗಿಯ ಮನೆಯಲ್ಲಿ ಪಾದವುರಿದ. ಪ್ರವೇಶ ಮಾಡಿದ ತಕ್ಷಣ ಅಲ್ಲೊಂದು ಮೌನ ಆವರಿಸಿತ್ತು....ಸಂಜಯನೇ ಮೊದಲು ಮಾತು ಆರಂಭಿಸಲಿ ಅನ್ನುವುದು ನಮ್ಮೆಲ್ಲರ ಬಯಕೆಯಾಗಿತ್ತು. ಮೀನಾಕ್ಷಿಗೆ ಸಂತೋಷದ ಶಿಖರವನ್ನು ತಲುಪಿದ ಹಂತದಲ್ಲಿದ್ದಳು. ಅವಳಲ್ಲಿ ಸಂಜಯನ ಮೇಲೆ ಕಣ್ಣಿನ ನೋಟ ವಿತ್ತೆ ಹೊರತು ಶಬ್ಧಗಳಿರಲಿಲ್ಲ. ಮನೆಯ ಕೋಣೆಯಿಂದ ಸಾವಕಾಶವಾಗಿ ಹೊರಬಂದ ಮೀನಾಕ್ಷಿಯ ಅಮ್ಮ :" ಬನ್ನಿಯಪ್ಪ, ನೀರು ಬೇಕೆನಪ್ಪ.. ಥ್ಯಾಂಕ್ಸ್ ನಿಮ್ಮಗೆಲ್ಲ...ಜೀವ ಹೋಗುತ್ತೋ ಅನ್ನು ಸ್ಥಿತ್ತಿಯಲ್ಲಿದ್ದೆ...ಅಂತೂ ಆರಂ  ಆಗಿ ಬಂದೆ..." ಎಂದರು. 'ಅಮ್ಮ, ಇವಳು ವೃಂದಾ' ಎನ್ನುತ್ತಾ ವೃಂದಾಳನ್ನು ತೋರಿಸಿದಳು ಮೀನಾಕ್ಷಿ. ನಮ್ಮಗೆ ಗ್ರೂಪ್ ನಲ್ಲಿ ಒಬ್ಬರು ಪರಿಚಯ ಹೇಳಿದ ಕೂಡಲೇ ಉಳಿದವರು ಕುರಿಗಳಂತೆ ಸಹಜವಾಗಿಯೇ ಸುರುವಿಟ್ಟುಕೊಂಡೆವು.

ನನ್ನ ಪರಿಚಯದ ಸಮಯ ಬಂದಾಗ 'ನಾನು ವೆಂಕಟ್, ಅಂಕೋಲಾ' ಎಂದೆ. ಅದಕ್ಕೆ ವೃಂದಾ ,' circuit  ವೆಂಕಟ್'  ಎಂದು ತನ್ನ ಸಹಜ ಚಾಳಿ ಮುಂದುವರಿಸಿದ್ದಳು. ನಕ್ಕಿದ್ದೆ ಬಂತು. ಕೊನೆಯದಾಗಿ ನಮ್ಮ ಹಿರೋ  ಸಂಜಯ. ಏನು ಹೇಳುತ್ತಾನೆ ? ಒಂದುರೀತಿಯ ಗಾಂಭೀರ್ಯ ಅಲ್ಲಿತ್ತು. ' ಇಲ್ಲೇss  ?!...ಅಕ್ಷಯ ಕಾಲೋನಿ ....!' ಎಂದು ತಡವರಿಸುತ್ತಲೇ ಹೇಳಿದ್ದ. ಪರಿಚಯ ಹೇಳುವಲ್ಲಿ ಬಹಳ ಎಡುವಿದವನೆ ಸಂಜಯ. ಎಲ್ಲರು ಚಪ್ಪಾಳೆ ಗಲಾಟೆ ಗಳೊಂದಿಗೆ ಸಂಜಯನ  'ಅಳಿಯತನ' ಶ್ಲಾಘಿಸಲು ಹೊರಟರೆ, ಆಂಟಿಗೆ  ಈತನ ತಡವರಿಸಿದ ಪರಿಚಯದ ಮಾತುಗಳಿಗೆ ಇವರು ಕೂಗುತಿದ್ದಾರೆ ಅಂದು ಕೊಂಡರು. ಪರಿಚಯ ಮುಗಿಯುತ್ತಿದ್ದಂತೆ, ಅಲ್ಲಿಗೆ ಮನೆಯ ಪರಿಚಾರಿಕೆ, ವಿವಿಧ ಬಗೆಯ ಸ್ವೀಟ್ , ಪಾನೀಯಗಳು ಗಳನ್ನು ತಂದಿರಿಸಿದಳು. ವೃಂದಾ ಮತ್ತೆ  'ಸಂಜು  ತಗೋ ಪಾ' ಎಂದು ತಿನುವುದರಲ್ಲೂ ಸಂಜಯನಿಗೆ ಆದ್ಯತೆಯನ್ನು ಪ್ರಕಟಿಸಿದಳು. ಯಾವತ್ತು ಮೌನಿಯಾಗಿ ಅಲ್ಲಿ-ಇಲ್ಲಿ ಒಂದೋ-ಎರಡೋ ಮಾತನಾಡುತಿದ್ದ  ಅಬ್ದುಲ್ : ' ನಮಗ್ ಪಾಸ್ ಮಾಡಬೇ...ಅವ್ ಹೆಂಗೂ ಮುಂದೆ ಕುಡಿಯುವುದೇ ಇದೆಯಲ್ಲ ಈ ಮನೆಯಲ್ಲಿ....!?'  ಎಂದಾಗ  ಮೀನಾಕ್ಷಿ ಒಳಗೆ ನಡೆಳು.....ವೃಂದಾ ತನಗೆ ನೀಡಿದ ಎಚ್ಚರಿಕೆ ನೆನಪಾಗಿ ಒಮ್ಮೆ ಕೈ ಅಲುಗಾಡಿ ಓಂದು ಗ್ಲಾಸು ಕೆಳಗೆ ಬಿತ್ತು. ಅಬ್ದುಲ್ ಹೇಳಿದ ಮಾತಿಗೆ ಉಳಿದವರು ನಗಲು ಪ್ರಾರಂಭಿಸಿದರೆ...ಆಂಟಿ, ಓಂದು glass  ಬಿದ್ದರು ಈ ಹುಡುಗರು ನಗುತ್ತಾರಲ್ಲ ಅಂದು ಕೊಂಡಿರಬೇಕು. ಸಂಜಯನಿಗೆ ಓಂದು ತರಹ ಅಪಮಾನವಾಗಿ, glass  ಬಿದ್ದುದ್ದು ಅಪಶಕುನವೆಂದೆ ಭಾವಿಸಿದ್ದ. 'ಜೋರಾಗಿ, ಸುಮ್ನಿರೋ' ಅಂದ.  ಹೀಗೆ ಜೋಕು ಮುಗಿದ ಮೇಲೆ, ' ಆಂಟಿ, ಅಂಕಲ್ ಎಲ್ಲಿ' ಎಂದು ನಾನು ಕೇಳಿದೆ. ಅದಕ್ಕವರು- " ಅವರು ಬರಲಿಕ್ಕೆ ಲೇಟ  ಆಗ್ತದ...ಅವ್ರು ಗದಗ ದಾಗ್ ರೈಲ್ವೆ ಆಫೀಸ್ ನಾಗ ಕೆಲಸ ಮಾಡ್ತಾರ .' ಅಂದರು. ಉತ್ತರ ಕರ್ನಾಟಕದ ಭಾಷೆ ಅಷ್ಟಾಗಿ ತಿಳಿಯದ ಕರಾವಳಿಯ ಹುಡುಗ ನಾಗಿದ್ದರಿಂದ ಮಾತು ಮುಂದುವರಿಸಲು ನನಗೆ ಸಾಧ್ಯವಗಿಲ್ಲಿಲ್ಲ.ಹೀಗೆ ಹಲವಾರು ಜೋಕು-ಮಾತು-ಗೀತು ಎಲ್ಲ ಮುಗಿಯವ ಹೊತ್ತಿಗೆ ೧ ತಾಸು ಮುಗಿದಿತ್ತು. ತುಂಬಾ active  ಆಗಿ ನಮ್ಮ ಜೊತೆ ಮಾತನಾಡಿದ ಆಂಟಿ ನಮ್ಮ ಗ್ರೂಪ್ ನ ಓಂದು ಸದಸ್ಯೆ ಅನ್ನುವಂತೆ ಭಾಸವಗುತ್ತಿದ್ದರು.
ಮನೆಗೆ ಮರುಳಿದ ಮೇಲೆ, ಲ್ಯಾಬ್ ನ breadboard  ಮೇಲೆ timer  ciruit  ಹಾಕುತಿದ್ದ ನನಗೆ ಕಾಡುವ ಪ್ರಶ್ನೆ circuit  design  ಆಗಿರಲಿಲ್ಲ; ಬದಲಾಗಿ, ಸುಮಾರು ಎರಡು ವರ್ಷದಷ್ಟು ಬೆಳೆದು ನಿಂತಿರುವ ಪ್ರೀತಿಯನ್ನು ಸಂಜಯ-ಮೀನಾಕ್ಷಿ ಯಾಕೆ  ಮನೆಯಲ್ಲಿ ಇದುವರೆಗೆ ಹೇಳಿಕೊಂಡಿಲ್ಲ? ಮೀನಾಕ್ಷಿಯ ಜೊತೆ ಗೆಳತಿಯಂತೆ ವರ್ತಿಸುವ ಅವಳ ಅಮ್ಮ ಕಲಿತ ಹೆಂಗಸು-ಬ್ಯಾಂಕ್ ಉದ್ಯೋಗಿ -ಮಾತ್ರವಲ್ಲ ಸಹಜವಾಗಿಯೇ  ಮೀನಾಕ್ಷಿಯಂತೆ ಎಲ್ಲರೊಂದಿಗೂ ಬೆರೆಯುವ ಸಾಮರ್ಥ್ಯವುಳ್ಳವರು. ಒಬ್ಬಳೇ ಮಗಳಿರುವುದರಿಂದ, ಅದೇ ಅವರ ಸರ್ವಸ್ವ. ಮಗಳು ಏನು ಹೇಳಿದರು 'ನೋ' ಅನ್ನುವರಲ್ಲ. ಹೀಗಿದ್ದರೂ ಮೀನಾಕ್ಷಿ ಈ ವಿಷಯ ಅಡಗಿಸಿ ಇಡಬೇಕೆ? ಇಷ್ಟು ದಿನಗಳೆದರು ಇವಳ್ಯಾಕೆ ಅಮ್ಮನಿಂದ ಅಡಗಿಸಿದ್ದಾಳೆ? ಇಂಥ ಪ್ರಶ್ನೆ ಗಳು ಬಹುವಾಗಿ ಕಾಡ ತೊಡಗಿದ್ದವು. ಪ್ರೀತಿಯ ಬಗ್ಗೆ  ಏನು ತಿಳಿಯದ ನಾನು ಯಾಕೆ ಈ ಜಿಜ್ಞಾಷೆಗೆ ಒಳಗಾಗುವುದು ಎಂದು ನನ್ನನ್ನೇ ಶಪಿಸಿ ಕೊಂಡೆ.

ಸಂಜಯ-ಮೀನಾಕ್ಷಿ ಯವರದು combined  study . ಐದು ಕೋಟಿಯ ಆ C -LITE  ಬಿಲ್ಡಿಂಗ್ ನ ಓಂದು ಟೇಬಲ್ ವಾರದ ೬ ದಿನ ಇವರಿಬ್ಬರಿಗೂ ಮೀಸಲು. ಅಮ್ಮನ ಆದೇಶ ದಂತೆ  ೭ ಗಂಟೆಗೆ ಮನೆ ಸೇರುತ್ತಿದ್ದಳು. ಕೆಲವೊಮ್ಮೆ workshop , seminar  ಗಳಿದ್ದಾಗ ಮಾತ್ರ ಅಮ್ಮನ ವಿಶೇಷ ಪರವಾನಿಗೆಯೇ ಮೇರೆಗೆ campus ನಲ್ಲಿ   ಮೀನಾಕ್ಷಿಗೆ  ಇರಲು ಅವಕಾಶವಿರುತ್ತಿತ್ತು. ಎರಡು ತಾಸು ಹೇಗೂ ಓದಿದ ಬಳಿಕ ಉದಾಸಿನತೆ ತೋರುತಿದ್ದ ಸಂಜಯಗೆ ಬಹಳಷ್ಟು  ಸಾರಿ ಓದಿಸಿದವಳೇ ಅವಳು. ಕೆಲವೊಮ್ಮೆ ಅವನಿಗೆ ಬಯುತ್ತಿದ್ದಳು: ' ಹೇಯ್ ಕೋತಿ , ಯಾಕೆ ನೀನು ಓದಲ್ಲ ....! ನಿನಗೇನು ಬೇಕು...ತಕೋ ಕಂಟ್ರೋಲ್ ಸಿಸ್ಟಮ್ ಮುಗಿಸು ಇವತ್ತು... ಇಲ್ಲಾಂದರೆ ...!'.  ಅದಕ್ಕೆ ಅಷ್ಟೇ ತಿಕ್ಷಣ ವಾಗಿ , ' ಮೀನು, ಸ್ವಲ್ಪ ಸುಮ್ನೆ ಇರ್ರ್ತಿಯಾ...? ನಂಗೆ ಯಾಕೋ   mood  off  ಆಗಿದೆ. ನಿನ್ನೆ  ಕ್ರಿಕೆಟ್ ನಲ್ಲಿ  ಇಂಡಿಯಾ ಬರಿ ಮೂರೂ ರನ್ನ ನಲ್ಲಿ ಆಸ್ಟ್ರೇಲಿಯಾ ಜೊತೆ  ಸೋತು ಹೊಯುತು ಗೊತ್ತ...!?" .
 'ಡುಮ್ಮಾ, ನೋಡು ನಿನ್ನ ತಲೆ ಪೂರ್ತಿ ಕೆಟ್ಟು ಹೋಗಿದೆ. ಈಗ semester  ಮುಗಿಯುವತನಕ  ಕ್ರಿಕೆಟ್ ಗೆ by  ಹೇಳೋ....! ಓದ್ದುದನ್ನೇ ಮರೆತು... ಏನೇನು ಆಲೋಚನೆ  ಮಾಡ್ತಾ ಇರ್ತಿಯಾ...?'  ಪ್ರೀತಿಯಿಂದ ಹೇಳಿದ ಮಾತುಗಳಿಗೆ ಎದುರು ಉತ್ತರ ನೀಡುವುದು ಕಷ್ಟ ಅಂತ ಎಲ್ಲರಿಗು ಗೊತ್ತು. ಸುಮ್ಮನೆ ಪುಸ್ತಕ ತೆರದ. ಹಾಗೆಂದು ಅವನೇನು ದಡ್ಡ ವಿದ್ಯಾರ್ಥಿಯಲ್ಲ. ಆದರೆ, ಎಲ್ಲದಕ್ಕೂ ಮೀನಾಕ್ಷಿಯ ಬಾಯಿಂದ ಪ್ರೀತಿಯ ಅದೆಶವಾಗಿ ಬಂದಾಗಲೇ ಬೆಲೆ..!. ಸೆಮಿನಾರ್ ಗೆ ನೋ ಎನ್ನುತಿದ್ದ  ಸಂಜಯ, ಮೀನಾಕ್ಷಿಯ ಬೇಡಿಕೆಗೆ ಸೆಮಿನಾರ್ ನೀಡಿದ್ದ. ಅಚ್ಚುಕಟ್ಟಿನ ಸಿಪಾಯಿಯಂತಿದ್ದ ಅವಳು, ಇವನ ಲ್ಯಾಬ್ ನ ಜರ್ನಲ್ ಎಷ್ಟೋ ಸಾರಿ ತಿದ್ದಿದ್ದಾಳೆ;ಚಿತ್ರ ಗಳನ್ನೂ ಮರು ಬಿಡಿಸುವಂತೆ ಆದೇಶಿಸಿದ್ದಾಳೆ. ಸಂಜಯ ಮೊದಲ ದಿನಗಳ ವ್ಯವಹಾರ ನೋಡಿದ್ದರೆ, ಮೀನಾಕ್ಷಿಯ ಪ್ರೀತಿಯ ಲೋಕದಲ್ಲಿ  ಸಂಪೂರ್ಣವಾಗಿ ಬದಲಾಗಿದ್ದಾನೆ. ಜೀವನದಲ್ಲಿ ಆಕಾಂಕ್ಷೆ, ಗಾಂಭೀರ್ಯ, ಉತ್ಸಾಹ, technical  growth  ಬಗ್ಗೆ ಬಹಳ ಗಮನ ಕೊಟ್ಟಿದ್ದಾನೆ. ಓಂದು ಹಂತದಲ್ಲಿ ಪರಿಪೂರ್ಣ ವಿದ್ಯಾರ್ಥಿಯಾಗಿ, ಪರಿಪೂರ್ಣ ಪ್ರೇಮಿಯಾಗಿ ಕಾಣಿಸಿಕೊಳ್ಳುತ್ತಿದ್ದಾನೆ.

ಯಾವಾಗ ಆಸ್ಪತ್ರೆ ರಕ್ತ ದಾನ  ನಡಿಯಿತೋ, ಅಲ್ಲಿಯಿಂದ ಮೀನಾಕ್ಷಿ ಯ ಅಮ್ಮ ಸಿನೆಮಾ ನೋಡುವ  ಮೀನಾಕ್ಷಿಯ ಗೆಳೆಯ-ಗೆಳತಿಯರ  ಗ್ರೂಪ್ ನ ಪರ್ಮನೆಂಟ್ ಸದಸ್ಯೆ. ಎಷ್ಟೋ  ಬಾರಿ ಈ ಹುಡುಗರು- ಹುಡುಗಿಯರು ಸಿನೆಮಾ ನೋಡಲು ಹೋಗಿದ್ದಾರೆ ನನಗೆ ಗೊತ್ತಿಲ್ಲ. ಯಾಕಂದರೆ, ಸಿನೆಮಾ ನೋಡುವ ವಿಷಯದಲ್ಲಿ ನಾನೊಬ್ಬ ಅತಿಥಿ ಕಲಾವಿದರ ಹಾಗೆ ಆಗೊಮ್ಮೆ-ಈಗೊಮ್ಮೆ ಕಾಣಿಸಿಕೊಳ್ಳುತ್ತಿದ್ದೆ. ನಾನು ಸಿನೆಮಾ ಕ್ಕೆ ಹೋಗಲು ಕಾರಣ ಎರಡೇ ಇರುತಿದ್ದವು-ಓಂದು ಗ್ರೂಪ್ ನ ಜೊತೆ ಒಂದಿಷ್ಟು ಮೋಜು-ಮಸ್ತಿ, ಎರಡನೇ ದಾಗಿ ಎಲ್ಲೊಂದಿಷ್ಟು ತಿನ್ನಲು ಸೀಗುವ ಪಾನೀಯಗಳು, junk  foodಗಾಗಿ.  ಒಂದು ಕಾಲದಲ್ಲಿ ಹಿಂದಿ ನನಗೆ ಸ್ವಲ್ಪವೂ ಅರ್ಥವಾಗುತಿರಲಿಲ್ಲ, ಹೀಗುರುವಾಗ bluff  master  ಹಿಂದಿ ಫಿಲಂ ನೋಡಲು ಹೋಗಿದ್ದೆ.  ಈ ಕಡೆ ಅರ್ಥವಾಗದ ಸಿನೆಮಾ-ಇನ್ನೊಂದೆಡೆ ಅಭಿಷೇಕ್ ಬಚ್ಚನನ್ನು ಗುರುತಿಸಲಾಗದ ನನ್ನ ಅಜ್ಞಾನ ನನಗೆ ಯಾಕಪ್ಪ ಈ ಫಿಲಂ ಎಂದು ಇಂಟರ್ವಲ್ ಟೈಮ್ ನಲ್ಲಿ ಹೊರಬಂದವನು ಸಿನೆಮಾಕ್ಕೆ ಗುಡ್ ಬೈ ಹೇಳಿ ಮನೆ ಸೇರಿದ್ದೆ. ಆದರೆ, ೨೦೦೭, ಇಂಜಿನಿಯರಿಂಗ್ ನ 'ಕೊನೆ'ಯ ವರ್ಷ, ಗೆಳೆಯರ ಜೊತೆ ನೋಡಲಿರುವ 'ಕೊನೆ'ಯ ಸಿನೆಮಾ, ಹುಬ್ಬಳಿಯಲ್ಲಿ ನೋಡಲಿರುವ 'ಕೊನೆ'ಯ ಸಿನೆಮಾ ಎನ್ನುವಂತ ಭಾವದಿಂದಾಗಿ ಮೀನಾಕ್ಷಿ ಮತ್ತು ಅವಳ  ಗ್ರೂಪ್ ಫಿಲಂ ಬಗ್ಗೆ ತಿಳಿಸಿದಾಗ, 'ನಾನು ಬರ್ತೇನೆ' ಅಂದೆ. ಆದರೆ ನನಗೆ ಸಿನೆಮಾ ಎಲ್ಲಿ, ಯಾವುದು ಏನು ಗೊತ್ತಿರಲಿಲ್ಲ. ಕೇವಲ 'ಕೊನೆಯದು' ಅನ್ನುವ ಭಾವವೇ ನನ್ನನು ಇಷ್ಟವಿಲ್ಲದ ಜಾಗದಲ್ಲಿ ೩ ತಾಸು, ಫಿಲಂ ಎಂಬ ನೆಪದಲ್ಲಿ  ಕಳೆಯುವಂತೆ ಮಾಡುವಂತಿತ್ತು ಆ ಸನ್ನಿವೇಶ. ಆದರೆ, "ಕನ್ನಡ ಸಿನೆಮಾ, ತುಂಬಾನೇ ಚಲೋ ಅಂತ .... ಕಾಮಿಡಿ ಟೈಮ್ ಗಣೇಶ್ ದಂತೆ....ಮುಂಗಾರು ಮಳೆ .... ಸುಜಾತ takis  ದಾಗ್ ಅದ " ಎಂದು ಹೇಳುತಿದ್ದ ವೃಂದಾಳ ಮಾತು ಕೇಳಿದಾಗ, ಕನ್ನಡ ಫಿಲಂ ಅನ್ನುವುದಕ್ಕೆ ಸ್ವಲ್ಪ ಸಂತೋಷವಾಗಿತ್ತು.

ಅಂತು ಮಧ್ಯಾಹ್ನ ಮೂರು ಗಂಟೆಗೆ ವಿದ್ಯಾ ನಗರದಿಂದ ಬೇಂದ್ರೆಬಸ್ಸಿನಲ್ಲಿ ಸುಜಾತ theatre  ಹತ್ತಿರ ಇಳಿದು ಕೊಂಡೆವು.ಸಿನೇಮಾ ನೋಡಲು ಬಹಳ ಜನ ಹೊರಗೆ ಕಾಯುತ್ತಿದ್ದರು. ಟಿಕೆಟ್ ಸಿಗುತ್ತೋ-ಇಲ್ಲವೋ ಎನ್ನುವ ಅಂತಕ ನಮ್ಮ ವರಿಗೆಲ್ಲರಿಗೂ ಇತ್ತು . ಆದರೆ ಅಂತು-ಇಂತೂ ಸಂಜಯ ಪ್ರಯತ್ನ ಮಾಡಿ ಟಿಕೆಟ್ ತಂದಿದ್ದ. ಟಿಕೆಟ್ ತರುವುದು  ಅವನಿಗೆ ಕೇವಲ ಟಿಕೆಟ್ ಪ್ರಶ್ನೆ ಯಾಗಿರಲಿಲ್ಲ, ಜೊತೆಗೆ ತನ್ನ ಅತ್ತೆ, ತನ್ನ ಹುಡುಗಿಯ ಸಿನೆಮಾದ ಆಸೆಯನ್ನು ಈಡೇರಿಸಬೇಕಾಗಿತ್ತು. ತಿಯೇಟರ್ ಪ್ರವೇಶಿಸುವವರ ಗಲಾಟೆ ಜೋರಾಗಿಯೇ ಇತ್ತು.ಕೆಲವರು director  ಯೋಗರಾಜ ಭಟ್ ಒಳ್ಳೆ ಫಿಲಂ ಕೊಟ್ಟಿದ್ದಾನೆ ಅಂದರೆ, ಇನ್ನೂ ಕೆಲವರು ಜೋಗ ಸೀನ್  ಚೆನ್ನಾಗಿದೆ ಅಂತೆ ಅಂದರೆ, ಪೂಜಾ ಗಾಂಧಿ ಅಷ್ಟು ಚೆನ್ನಾಗಿಲ್ಲ ಆದರೆ ಸಕತ್ ಆಗಿ act ಮಾಡಿದ್ದಾಳೆ ಅಂತೆ ಮಗ.... ಎನ್ನುವ review  ಕೇಳಿ ಸಿನೆಮಾದ ಬಗ್ಗೆ ಸಾಕಷ್ಟು ಮಾಹತಿ ಕಲೆಹಾಕಿದ್ದೆ. ಅದೇ ದಿನ ಏನಾದರು ಸಿನೇಮಾದ ಬಗ್ಗೆ quize  compitition  ಇದ್ದರೆ ನಾನೇ ಗೆಲ್ಲುತ್ತಿದೇನೋ ಏನೋ ...!?  ಸುಮಾರು ಒಂದು ತಾಸು ಹೊರಗಡೆ ಕಾದು ನಿಂತ ಬಳಿಕ, ಒಳಗೆ ಶೋ ನೋಡಿದವರೆಲ್ಲ ಹೊರ ಬರಲಾರಂಭಿಸಿದರು. ಜನ ಫುಲ್ ಸೈಲೆಂಟ್...! ಚೆನ್ನಾಗಿರುವ ಹುಡುಗಿಯ ಮುಖ ನೋಡೋಣ ಅಂದರೆ ಅವರ ಮುಖಕ್ಕೆ ಕರ್ಚಿಫ್  ಹಿಡಿದ್ದಿದ್ದಾರೆ.  ನಾಲ್ಕು ವರ್ಷಗಳಲ್ಲಿ ಅಪರೂಪಕ್ಕೆಂದು ನಾನು Theatre  ಗಳಿಗೆ ಹೋಗಿದ್ದರು, ಈ ರೀತಿ ಗಲಾಟೆ ಇಲ್ಲದೆ ಜನ ಹೊರ ಬರುತ್ತಿರುವುದನ್ನು ಮೊದಲ ಬಾರಿಗೆ ನಾನು ನೋಡುತ್ತಾ ಇದ್ದೆ. ನಿರವ ಮೌನ ಕಂಡು, ನಾನು ಹುಬ್ಬಲ್ಲಿಯಲ್ಲೇ ಇದ್ದೇನೆ ತಾನೆ ಎಂದು ಪ್ರಶ್ನಿಸಿ ಕೊಂಡೆ.

ಒಳಗೆ ಪ್ರವೇಶ  ಮಾಡಿದೆವು. ಮುಂಗಾರು ಮಳೆ ಸಿನೇಮಾ ಪ್ರಾರಂಭವಾಯಿತು. ಒಂದು ಮಗುವಿನಂತೆ ಫಿಲಂ ನೋಡಿದೆ. ಕತ್ತಲೆಯ ಕೋಣೆಯಲ್ಲಿ ಕುಳಿತಿದ್ದರಿಂದ ಯಾರು-ಏನು ಮಾಡುತ್ತಿದ್ದಾರೆ ನನಗೆ ಗೊತ್ತಿರಲಿಲ್ಲ. ಆದರೆ ಸಿನೇಮಾ ಮುಗಿದು, ಸ್ಕ್ರೀನ್ ಮೇಲೆ  ' ಪ್ರೀತಿ ಮಧುರ...ತ್ಯಾಗ ಅಮರ...!' ಕೊನೆಯ ವಾಕ್ಯ ಓದಿದ ಮೇಲೆ ಎಲ್ಲರು ಹೊರ ನಡೆದರು. ಸಂಜಯ ಒಂದು ರೀತಿಯ ಆತಂಕದಲ್ಲಿದ್ದ; ಮೀನಾಕ್ಷಿಯ ಕಣ್ಣುಗಳು Theatre  ಒಳಗಡೆ ಅತ್ತಿದ್ದಾಳೆ ಅನ್ನುದನ್ನು ಸಾಬಿತು ಮಾಡುತಿದ್ದವು. ಆದರೆ ಮೀನಾಕ್ಷಿಯ ಅಮ್ಮ ಮಾತ್ರ ಒತ್ತರಿಸಿ ಬರುವ ಕಣ್ಣಿರಿಗೆ ತಮ್ಮ ಕರ್ಚಿಫ್ ಒತ್ತಿ ಹಿಡಿದ್ದಿದ್ದರು. "ಅಮ್ಮ, ಅದು ಸಿನೇಮಾ ..!" ಎಂದು ಮೀನಾಕ್ಷಿ ಸಮಾಧಾನ ಪಡಿಸಲು ಮುಂದಾದರೆ, 'ಹೌದು,ಸಿನೇಮಾ ಸ್ವಲ್ಪ ಭಾವನಾತ್ಮಕವಾಗಿ ಶಾಕ್ ಕೊಡುವಂತಿದೆ... ಸವಕಾಶ್ ಅವರನ್ನು ಕೆಳಗೆ ಕರ್ಕೊಂಡು ಬಾ'  ಎಂದು ನಾನು ಅವಳಿಗೆ ಹೇಳಿದೆ. ನಾವೆಲ್ಲರು ಅವರು ಕೆಳಗೆ ಬರುವ ತನಕ ಅಲ್ಲೇ ನಿಂತೇ ಸಿನೆಮಾದ review - pros -cons  ಬಗ್ಗೆ ತಿಳಿಯಲು ಆರಂಭಿಸಿದ್ದೆವು. ಅಲ್ಲಿಗೆ ಬಂದ ಮೀನಾಕ್ಷಿ ಅಮ್ಮ ಮೊದಲಿಗಿಂತ ಸ್ವಲ್ಪ ಸಮಾಧಾನವಾಗಿದ್ದಂತೆ  ಕಾಣುತಿದ್ದರು. ಆದರೆ ಅವರು ಸಿನೇಮಾದ ಕುರಿತಾಗಿ ಭಾವುಕರಾಗಿಯೇ ಇದ್ದರು. " ಗಣೇಶ್ ಗೆ  ಹಾಗೆ ಆಗ ಬಾರದಿತ್ತು....ಪ್ರೀತಿಸಿದ ಹುಡುಗಿ ಅವನಿಗೆ ಸಿಕ್ಕಿದ್ದರೇನೆ ಖುಷಿಯಾಗ್ತಿತು...ಪಾಪ..". ಎಂದು ಎಲ್ಲರನ್ನು ಉದ್ದರಿಸಿ ತಮ್ಮ review  ಪಾಯಿಂಟ್ ಹೇಳಿದ್ದರು. ಪ್ರೀತಿಯ ಪರೀಕ್ಷೆಯ ದಿನಗಳಲ್ಲಿದ್ದ ಸಂಜಯನಿಗೆ , ಮೀನಾಕ್ಷಿಯ ಅಮ್ಮನ ಈ review  ಪಾಯಿಂಟ್ ನೂರಕ್ಕೆ ೯೦%  ಅಂಕ ತಂದು ಕೊಟ್ಟಂತೆ ಭಾಸವಾಗಿತ್ತು. ಸಂತೋಷದ ನಗೆ ಬಿರಿದ್ದ. ವೃಂದಾ ತನ್ನ ಬಾಯಿಂದ ಹೊರಬರಲಿದ್ದ ಅದ್ಭುತ-ಭಯಾನಕ ವಾಕ್ಯವನ್ನು ತಡೆ ಹಿಡಿದ್ದುದ್ದು ಅವತ್ತಿನ ಅವಳ ಅದ್ಭುತ ಸಾಧನೆಯೇ ಆಗಿತ್ತು.
                                                                                           ----ಮುಂದುವರಿಯುವುದು 

(ಮುಂದಿನ ಭಾಗದಲ್ಲಿ ನಿರಕ್ಷಿಸಿ:ಮೀನಾಕ್ಷಿ ಮತ್ತು ಸಂಜಯ ಮದುವೆಯಾದರೆ ? ಮುಂದಿನ ಅವರ ಸಾಧನೆ ಏನು ? ಪ್ರೀತಿ ಇಲ್ಲದೇನೆ  ಬದುಕ ಬಹುದೇ ? )

Saturday, October 6, 2012

ನನಗೆ ಅವನ ಬಗ್ಗೆ ಅಂತ ಭಾವನೆಗಳೇ ಇಲ್ಲ ಕಣೇ...!

ಇಂಥದೊಂದು ಕತೆ ನಡೆದಿದೆಯೋ- ಇಲ್ವೋ ನಾನು ಬಾಯಿ ಬಿಡಲಾರೆ. ಆದರೆ, ಕವಿಯಲ್ಲದ ವ್ಯಕ್ತಿ, ಒಂದು ಕಟ್ಟು ಕತೆ ಕಟ್ಟುವುದು ಅಷ್ಟು ಸುಲಭದ  ಕೆಲಸವೇನು ಅಲ್ಲ ಅನ್ನುದು ನಿಮಗೂ ತಿಲಿದರಲೇಬೇಕು

ಅವರಿಬ್ಬರೂ ಒಮ್ಮೆ ರಾಜಾಂಗಣಕ್ಕೆ ಹೋಗುವ ದಾರಿಯಲ್ಲಿ ಭೇಟಿಯಾಗಿದ್ದರು. ಅವಾಗಲೇ ಇವರಿಬ್ಬರ ನಡುವೆ ಓಂದು ಗಾಢವಾದ ಪ್ರೀತಿಯಿದೆ, ಪ್ರೇಮವಾಗಿಸಲು ತವಕಿಸುತ್ತಿದಾರೆ ಅಂದು ನಾನು ಭಾವಿಸಿ ಕೊಂಡಿದ್ದೆ.ಅವತ್ತೇ ಅವರ ಕತೆ-ಅವರ ಬದುಕು ಓಂದು ರೀತಿಯ ಆಸಕ್ತಿಯ ವಿಷಯವಾಗಿ ತಿಳಿದು ಕೊಳ್ಳಲು ಆರಂಭಿಸಿದೆ. 'ಪ್ರೀತಿಯಂದರೆ ಹೀಗೆ ಇರಬೇಕು' ಅಂತ ನಾನು ಕೂಡ ಇವರೇ ನನ್ನ ಮಾಡೆಲ್ ಲವರ್ಸ್  ಎಂದು ನನ್ನಲ್ಲೇ ಹೇಳಿಕೊಂಡಿದ್ದೆ. ಹಾಗಂತ ನಾನು ಅವರ ಬದುಕಿನ ಯಾವ ಕ್ಷಣಕ್ಕೂ ತೊಂದರೆ ತಂದಿಲ್ಲ, ಅವರಿಗೂ ನಾನು ಇದನೆಲ್ಲ ಗಮನಿಸಿದ್ದೇನೆ ಅಂತನೂ ಗೊತ್ತಿಲ್ಲ. ೪ ವರ್ಷಗಳ ಗಮನ ಹೇಗೆ ಕೊನೆ ಕಂಡಿತು?

ಅಂದು ಅವಳು-ಅವನು ಓಂದೇ ದಿನ ಈ ಕಂಪನಿಗೆ ಸೇರಿದ್ದರು. ಮೊದಮೊದಲ ಸಲುಗೆ-ನಂಬಿಕೆ ಅವರಿಬ್ಬರ ನಡುವೆ ಮಿಡಿದ್ದಿತ್ತು.ಇವನು ದಿನದಿಂದ ದಿನಕ್ಕೆ ಅವಳತ್ತ ವಾಲ ತೊಡಗಿದ್ದ.ಇವಳು ಸುಂದರಿ. ಅಮ್ಮನನ್ನು ಬಿಟ್ಟು ಮೊದಲ ಬಾರಿ ಹೊರಗೆ ಬಂದಿದ್ದಾಳೆ.ಅವಳಿಗೆ ಅಮ್ಮನ ನೆನಪು, ಇಲ್ಲಿರುವ ಎಲ್ಲ ಹೊಸ ಮುಖಗಳ ಮಧ್ಯೆ ಅವಳಿಗೊಂದು ತರದ homesickness . ಹುಡುಗಿಯರಿಗೆ ಕೇವಲ ಇಂತ ವಿಷಯ ಹೇಳಿಕೊಂಡರೆ ಸಮಸ್ಯೆ ಬಗೆಹರಿಯುವುದಿಲ್ಲ.ಅವರಿಗೆ ಅದಕ್ಕೆ ಅವರಷ್ಟೇ ತಿಕ್ಷಣವಾಗಿ ಪ್ರತಿಕ್ರಿಯೆ ನೀಡುವ ಮನಸ್ಸು ಅಗತ್ಯ. ಪಾಪ ಇವನು ಅವಳ ಮಾನಸಿಕ ಅಸಮತೋಲನ ಅರಿತೋ ಅಥವಾ ಪ್ರೀತಿಸುತ್ತಿದ್ದಾಳೆ ಎಂಬ ಗೊಂದಲದೊಳಗೋ ಅವಳನ್ನು ಅತಿ ಹತ್ತಿರದಿಂದ ನೋಡಲು ಆರಂಭಿಸಿದ. ಕೆಲವೇದಿನಗಳಲ್ಲಿ ಅವಳ ಮುಖದ ಮೇಲಿನ ಭಾವನೆಗಳು/ನಿರೀಗೆಗಳು ಇವನ ಮುಖದಲ್ಲೂ ಪ್ರತಿಬಿಂಬಿತವಾಗಲು ಆರಂಭಿಸಿದ್ದವು. ಎಲ್ಲರು ಅವನಿಗೆ ಅಂತು ಜಾಬ್  ಜೊತೆಯಲ್ಲಿ ಹುಡುಗಿಯನ್ನು ಪಡಕೊಂಡ ಧೀರ ಎಂಬಂತೆ ವರ್ಣಿಸಲು ತೊಡಗಿದ್ದರು.

ಅವನು ಅವಳು ಹೇಳಿದ, ಇವನು ಕೇಳಿಸಿಕೊಂಡ ಯಾವ ಕತೆಯನ್ನು ಮತ್ತೊಬ್ಬರಿಗೆ ಹೇಳುತ್ತಿರಲಿಲ್ಲ. ಉಳಿದವರು ಕೂಡ ಯಾವ ಪ್ರಶ್ನೆ ಮಾಡುತ್ತಿರಲಿಲ್ಲ.ಇಬ್ಬರು ಪ್ರೇಮಿಗಳ ವಿಷಯದಲ್ಲಿ ಇನ್ನೊಬ್ಬರು ತಲೆ ಹಾಕುವುದು ಯಾಕೆ? ಹಾಗಿದ್ದರೆ ಅವನು ಏನೇನು ಮಾಡುತ್ತಿದ್ದ ? ಅವಳು ಹೇಳುವ ತನ್ನ ಅಮ್ಮನ ಕತೆ, ಅಮ್ಮನಿಲ್ಲದೆ ತಾನಿರುವ ಕತೆ, ಇವನಂತ ಗೆಳೆಯ ತನಗಿರುವುದಾಗಿ ಕಾಣದ  ದೇವರಿಗೆ ಕೇಳುವಂತೆ ಮೊರೆ ಇಡುವ ಸನ್ನಿವೇಶ ಇವೆಲ್ಲದರ ಜೊತೆಗೆ ಸರ್ವೇ-ಸಾಮಾನ್ಯವಾಗಿ ಮಾಡಿಸಿಕೊಳ್ಳುವ ಕೆಲಸಗಳು- 'ನಂಗೆ ಡ್ರಾಪ್ ಮಾಡೋ?', 'ನಂಗೆ ಇವತ್ತು ಬೀಚ್ ಗೆ ಹೋಗಬೇಕು ಅನ್ಸ್ತಾ ಇದೆ ಕಣೋ', 'ಪ್ಲೀಸ್ ನನ್ನ ಟಿಕೆಟ್ ಬುಕ್ ಮಾಡೋ', ' ನಾನು ಲೇಟ್ ಆಗಿ ಎದ್ದೆ, ಪ್ಲೀಸ್ ಆಮೇಲೆ ಬಂದು ನನ್ನ ಆಫೀಸ್ ಗೆ ಕರಕೊಂಡು ಹೋಗೋ', 'ನನ್ನ ಮೊಬೈಲ್ recharge  ಮಾಡಬೇಕು ಕಣೋ, ನಾನು ಊರಲ್ಲಿ ಇದ್ದೀನಿ'.

ಆಗುಂಬೆಯ ಹತ್ತಿರದ ಈ ಮಣಿಪಾಲದಲ್ಲಿ ಮಳೆಯ ವಿವರಣೆ ನೀಡಬೇಕಿಲ್ಲ. ನಾಲ್ಕೈದು ದಿನ ದಿಂದ ಭಾರಿ ಮಳೆ. ಎಲ್ಲೋ ಓಂದು ಹನಿ ಅವಳ ತಲೆ ಮೇಲೆ ಬಿದ್ದು ನೆಗಡಿ ಯಾಗಿತ್ತು. ಆಫೀಸ್ ಗೆ ಬರಲ್ಲ ಅಂದಳು. ಊಟ room -mate ಗಳು ಆಫೀಸ್ mess ದಿಂದ ಕೊಡುತಿದ್ದರು. ಆ ದಿನ ರಾತ್ರಿ ಊಟ ಮಾಡಿಲ್ಲ. ೯ ಗಂಟೆಗೆ  ಫ್ರೆಂಡ್ ವೊರ್ಕಿಂಗ್ ಫಾರ್ her  ಗೆ ಕಾಲ್ ಮಾಡಿದಳು-'ನಿಂದು ಊಟ ಆಯ್ತಾ ? ನಂಗೆ ಆಫೀಸ್ ಊಟ ಸೇರ್ತಾ ಇಲ್ಲ ಕಣೋ..., ತಲೆಯಿಲ್ಲ ಬಿಸಿ ಯಾಗಿದೆ...'. ಪ್ರೀತಿಗಾಗಿ, ಆ ನಂಬಿಕೆಗಾಗಿ ರಾತ್ರಿ-ಮಣಿಪಾಲದ ಮಳೆಯಲ್ಲಿ ಹೋಟೆಲ್ ಊಟ ತಂದು ಕೊಟ್ಟ. 

ಇವನು ತನ್ನ ರೂಮಗೆ ತಿರುಗಿ ಬಂದಾಗ ರಾತ್ರಿ ೧೧ ಆಗಿತ್ತು. ಬಟ್ಟೆಯಲ್ಲ ಚಂಡಿ(ಒದ್ದೆ) ಯಾಗಿತ್ತು.  room-mate ಗಳು  ' ಎನಲೇ ಮಗನೆ, ರಾತ್ರಿ -ಮಳೆಯಲ್ಲಿ, ಏನ್ ನಡೀತಾ ಇದೆ?'. ಸಲ್ಪ ದಿಗಿಲು ಕೊಂಡು,ತನ್ನ ಗೆಳತಿಯ  ಅನಾರೋಗ್ಯದ ಸ್ಥಿತಿಗೆ ಮರುಕ ಪಟ್ಟು, ಅವಳಿಗೆ ಓಂದು tablet  ಬೇಕಾಗಿತ್ತು ಅದಕೆ ಹೋಗಿದ್ದೆ ಅಂದ....'ಗೊತ್ತಲೆ, ಲವ್ ಮಗಂದು..' ಅಣಕಿಸಿ ಮತ್ತೆ ಮೂವಿ ನೋಡಲು ತವಕಿಸಿದ room -mate . ಇವನು ಸುಮ್ಮನೆ ಇರದೆ, ದೊಡ್ಡ ಧ್ವನಿಯಲ್ಲೇ "ಹೌದಲೇ ಏನು ಮಾಡುದು, ಲವ್ ಅಂದರೆ ಕಷ್ಟ-ಸುಖ ಎಲ್ಲ ನೋಡ್ಬೇಕು...ದುಖ- ದುಮ್ಮಾನ ಗಳಿಗೆ ಸ್ಪಂದಿಸಬೇಕು..." ಹೇಳುತ್ತಾ ತನ್ನ ಬಟ್ಟೆ ಬದಲಾಯಿಸಲು ನಡೆದ.

ಹೀಗೆ ಮೂರುವರ್ಷಗಳಲ್ಲಿ ಅವರ ನಡುವೆ ಇಂತ ಎಷ್ಟೋ ಘಟನೆಗಳು ನಡೆದಿರಬಹುದು...ಅವನು ಎಷ್ಟೋ ಬಾರಿ ವಾಕಿಂಗ್...badminton ...ಸಂಜೆಯ snacks ....ಸಿನೆಮಾದ ಮೊದಲ ಶೋ..ಗಳಿಗೆ ಕರೆದು ಕೊಂಡು ಹೋಗಿದ್ದಾನೆ. ಅವರ ನಡುವೆ ಓಂದು ರೀತಿಯ ಒಬ್ಬರನ್ನೊಬ್ಬರನ್ನು ಬಿಟ್ಟಿರಲಾರದ ಸಂಬಂಧವಿತ್ತೆ ವಿನಾ ಇನ್ನಾವ non -ಸೆನ್ಸ್ ಬಗ್ಗೆ ನಾನು ನೋಡಿಲ್ಲ-ಯಾರು ಹೇಳಿದ್ದು ಕೇಳಿಲ್ಲ. ಓಂದು ರೀತಿ ಅವರಿಬ್ಬರೂ model lovers .

ಒಂದು ದಿನ ವಾಕಿಂಗ್ ಹೋಗಿದ್ದರು- 'ಹೇಯ್... ನಾನು ಮೊನ್ನೆ ಊರಿಗೆ  ಹೋದ್ನಲ್ಲಾ....ಅವಾಗ ಅಮ್ಮ ಹುಡಗನ್ ನೋಡು ಅಂತ force  ಮಾಡಿದ್ರು ಕಣೋ... ಅವನು BE ...cute  ಆಗಿದ್ದಾನೆ. ಆದರೆ ನಿನ್ನಂತೆ ಹೆಲ್ಪಿಂಗ್ nature  ಇದ್ದಾರೆ ಸಾಕು..... ಅವನ .....ಊ...ರು........ಮ......ನೆ ........working  ಕಂಪನಿ....................................!" . ಇವನು ಮೌನ ವಹಿಸಿದ್ದ. ಇವಳು ಕತೆ ಹೇಳುತಿದ್ದಲೋ ಅಥವಾ ಓಂದು ನೈಜತೆ ಅನ್ನುದೆ ಅವನಿಗೆ ಅರ್ಥವಾಗಲಿಲ್ಲ. ಇಷ್ಟುದಿನ ತನ್ನವಳು ಅಂದು ಕೊಂಡೆ ಬದುಕಿದ್ದವನಿಗೆ ಮಾತು ಆಡುತ್ತಿರುವಳು ತನ್ನ ಹುಡುಗಿಯೇ ಎಂಬ ಪ್ರಶ್ನೆಯಾಗಿತ್ತು...ಕತ್ತಲಾಯಿತು...ಮನೆಗೆ ಬಂದರು.

ಮನೆಯಲ್ಲಿ ಮೌನ...room -mate ಗಳಿಗೂ ಮೌನದ ಹಿಂದೆ ಪ್ರೀತಿಯ ರಾಡಿ ಇವನ ಮೇಲೆ ಬಿದ್ದಿದೆ ಅಂದುಕೊಂಡರು. ಅವನಿಗೆ ನಿದ್ದೆ ಬರಲಿಲ್ಲ, ಹುಡುಗಿ ತನ್ನ ಪ್ರೀತಿಯ ಕುರಿತಾಗಿ ಏನಾದ್ರೂ ಪರೀಕ್ಷೆ ಮಾಡುತ್ತಿರಬಹುದೇ? ಎಂದು ಕೊಂಡು ನಾಲ್ಕು ದಿನ ಬಿಟ್ಟು ವಿಷಯ ನೋಡೋಣ ಎಂದು ಕೊಂಡ. ಎಂದಿನಂತೆ ಅವಳು ಇವನ ಜತೆ ಬೈಕ್ ಹತ್ತಿ ಸಾಗುತ್ತಿದ್ದಳು-ಆದರೆ ಅವಳು ಇವನ ಜತೆ ಮಾತನಾಡುತ್ತಿರಲಿಲ್ಲ-ಬದಲಾಗಿ ಅವಳ ಭಾವಿ ಗಂಡನಿಗೆ ಫೋನ್ ಮಾಡುತಿದ್ದಳು.

 ಇವನ ಭಾವನೆಯ ಕಟ್ಟೆ ಒಡೆದು ಹೋಯಿತು. ಓಂದು ದಿನ ಅವಳ room -mate ಗೆ  ಕತೆ ವಿವರಿಸಿ, ತನ್ನ ಪ್ರೀತಿಯ ಕುರಿತಾಗಿ ತನ್ನ ಹುಡುಗಿಗೆ  ತಿಳಿ ಹೇಳುವಂತೆ ನಿವೇದಿಸಿ ಕೊಂಡ.... ಅವಳೂ ದಿಗಿಲು ಗೊಂಡಳು. ಆವಳು ಹೀಗೆಲ್ಲ ಮಾಡಬಹುದು ಅಂದು ಕೊಂಡೆ ಇರಲ್ಲಿಲ್ಲ ಎನ್ನುತ್ತಾ ಸಮಾಧಾನ ಹೇಳಿದಳು. ಮರುದಿನ room -mate  ವಿಷಯ ಪ್ರಸ್ತಾಪಿಸಿದಾಗ,

" ಛೆ, ನಂಗೆ ಅವನ ಮೇಲೆ ಅಂತ ಭಾವನೆಗಳೇ ಇಲ್ಲ ಕಣೇ....ಅವನು friend  ಅಷ್ಟೇ...ನೀವೆಲ್ಲ ಯಾಕೆ ಹಾಗೆಲ್ಲ ಅಂದ್ಕೊತ್ತಿರಾ ? ".
ಉತ್ತರ ಕೊಡುವವರು ಯಾರು? ಭಾವನೆಯ ಜಗತ್ತಿನಲ್ಲಿ ನಡೆದು ಹೋದ ಪ್ರಕರಣಕ್ಕೆ ನ್ಯಾಯ ಕೊಡಬಲ್ಲ  ನ್ಯಾಯಧೀಶ ಯಾರು ?
Narrator's opinion : ನನ್ನ ಹತ್ತಿರ ಈ ಕತೆಗೆ ಉತ್ತರ ಇಲ್ಲ. ಇಂತ ಓಂದು ಕತೆಯಿಂದ ಎಲ್ಲ ಹುಡುಗಿಯರು ಹೀಗೆ ಅಂತ ತಿರ್ಮಾನಕ್ಕೆ  ಬರುವುದು ಖಂಡಿತ ಸರಿಯಲ್ಲ. ಪ್ರೀತಿಯಿಂದಲೇ ಮೇಲೆ ಬಂದಿರುವ ನೊಬ್ಬನ ಕತೆ ಕೂಡ ನನ್ನ ಸ್ಮೃತಿ ಪಟಲದಲ್ಲಿದೆ. ನಾನು ಹೇಳುದಿಷ್ಟೇ-ನಿಮಗೆ ಯಾರಾದರು ಇಷ್ಟವಾದರೆ ನೇರವಾಗಿ ಹೇಳಿ ಬಿಡಿ. ನೀವು ಸಮಯ ತೆಗೆದು ಕೊಂಡಂತೆ ಪ್ರೀತಿ ಗಾಢವಾಗಿ ಬೆಳೆದು, ಒಂದೊಮ್ಮೆ ನಿಮ್ಮ ಪಾಲಿಗೆ ದುಖಂತವಾಗುವುದದರೆ, ಅದನ್ನು ಎದುರಿಸುವ ಪರಿಸ್ಥಿತಿ  ಬಹಳ ಕಷ್ಟ ವಾಗಬಹುದು. ಕಳೆದು ಹೋದ ಸಮಯ,ಕೆಳೆದು ಹೋದ  ವ್ಯಕ್ತಿ, ಕಳೆದು ಹೋದ ಮಾನ-ಇಮೇಜ್, ಕಳೆದು ಹೋದ ಆತ್ಮ ವಿಶ್ವಾಸ ಮತ್ತೆ ಪಡೆಯುವುದು ಅಸಾಧ್ಯ ಮಾತ್ರವಲ್ಲ ಬದುಕು ಓಂದು ಮರುಭೂಮಿಯಾಗಿಸಬಹುದು. ಪ್ರೀತಿ ಮನುಷ್ಯ ಜೀವನದ ತಿರುಳು;ಪ್ರೀತಿ ಇದ್ದರೆ, ಪ್ರೀತಿಗಾಗಿಯೇ ಬದುಕು ಅಷ್ಟೇ..!


Tuesday, October 2, 2012

ಹೆಂಡತಿಗೆ ನೌಕರಿ ?

ಹೆಂಡತಿ ಒಂದು ಆಳೇ ?
ಹೆಂಡತಿಗೆ ಸಾಲರಿ ಕೊಡಬೇಕು- read  more  in  http://www.dw.de/dw/article/0,,16253266,00.html .  ನನಗೆ ಆಶ್ಚರ್ಯ ಆಗಿತ್ತು. ಈಗ ಇದು old  ನ್ಯೂಸ್ ಬಿಡಿ. ಆದರೆ ಇದೊಂತರ ಹೇಳಲು ಆಗದ  ಆದರೆ ಸುಮ್ಮನಿರಲು ಸಾಧ್ಯವಿರದ ವಿಷಯ. ಹೆಂಡತಿ ಆಳೆಂದು ಗುರುತಿಸುವ ಯೋಜನೆಯು ಹೆಂಡತಿಯಾಗಿ ಬರುವ ಹೆಣ್ಣು ಮಕ್ಕಳ ಹಣೆಬರಹ ಹೇಗೆ ಬದಲಾಯಿಸಬಲ್ಲದು ಯೋಚಿಸಿದಾಗ ಕೆಲವು ದಿನನಿತ್ಯ ನಡೆಯಬಹುದಾದ ವಿಷಯಗಳು:

೧) ಹೆಂಡತಿ: ರೀ ಏಳ್ರಿ, ಸಮಯ ಆಗ್ತಾ ಇದೆ..!
    ಗಂಡ: ಏಯ್, ನಿನ್ ಯಾರೇ ನಂಗೆ ಹೇಳಕೆ...ನಿನ್ನ ಕೆಲಸ ಎಸ್ಟ್ ಇದೆ ಆಸ್ಟ್ ಮಾಡು..!
೨) ಹೆಂಡತಿ: ರೀ ಮಕ್ಕಳಿಗೆ ನೋಟ್ ಬುಕ್ ಬೇಕ್ರಿ...ಆಫೀಸ್ ನಿಂದ ಬರುವಾಗ ತರ್ತಿರಾ?
      ಗಂಡ: ಅವ್ ಏನ್ ನನ್ನ ಒಬ್ಬಂದೆ  ಮಕ್ಕಳಾ ? ನಿನ್ pay  ಮಾಡಿದ್ನಲ್ಲ...ತರ್ಸ್ಕೋ?
೩) ಹೆಂಡತಿ: ಯಾಕ್ರಿ ನಂಗೆ ಮನೆ ಮುಂದೆ ಎಲ್ಲ ಬಯ್ತೀರಾ? ನಾನು ನಿಮ್ಮ ಹೆಂಡತಿ ರೀ...ನಿಮ್ಮ ಪ್ರೀತಿಯ ...? ....ನಾನು ಅಪ್ಪನ ಮನೆಗೆ ಹೋಗಬೇಕಾಗುತ್ತೆ?
    ಗಂಡ: ಒಹ್, ಹೋಗೆ.... ಹೋಗೆ .... ಆಳಿಗೇನು ಕೊರತೆಯ ? ಮತ್ತೊಬ್ಬಳು ಬರುತ್ತಾಳೆ....
೪) ಹೆಂಡತಿ: ಅವರದು ತಪ್ಪಲ್ಲ... ಎಷ್ಟಂದ್ರು ನಾನು ಆಳೇ.....ನಮ್ಮ ಸರ್ಕಾರ ನೀಡಿದ ಪಟ್ಟ..!(ದುಖಿಸುತ್ತಾಳೆ).

ಗಂಡ ಹೆಂಡತಿ ಎನ್ನುವ ಸಂಬಂಧ -ಹಣಕಾಸಿನ ಸ್ವಲಂಬನೆ ಅನ್ನುವ ಪರಿಕಲ್ಪನೆಯ  ಆಧಾರದ ಮೇಲೆ  ಆಳು-ಒಡೆಯ ಸಂಬಂಧಕ್ಕೆ ಬದಲಾಯಿಸಲು ಹೊರಟಿರುವುದು ಯಾಕೋ ಸರಿ ಬರಲಾರದು. ಹಿಂದೂ ಪುರಾಣ-ಶಾಸ್ತ್ರಗಳಲಂತೂ ಗಂಡ-ಹೆಂಡತಿ ಸಂಬಂಧ ಚೆನ್ನಾಗಿ ವಿವರಿಸಲಾಗಿದೆ-ಉದಾಹರಣೆಗೆ-ವನವಾಸ ವಿದುದ್ದು ರಾಮನಿಗೆ ಹೊರತು ಸೀತೆಗೆ ಅಲ್ಲ,ಆದರು ಸೀತೆ ರಾಮನನ್ನೇ ಅನುಸರಿಸಿ ಗಂಡ-ಹೆಂಡತಿ ಸುಖ-ದುಃಖಗಳಿಗೆ ಸಮಭಾಗಿಗಳು ಎಂಬುದನ್ನು ತೋರಿಸುತ್ತಾಳೆ. ಅರ್ಧನಾರಿಶ್ವರ ಅಂತು ಹೆಣ್ಣು-ಗಂಡುಗಳ ಸಮ್ಮಿಶ್ರಣ.

ಕಾನೂನು ಇಂಥ ಸಂಬಂಧಗಳ ಮಧ್ಯೆ ಪ್ರವೇಶ ಮಾಡುವಂತಾದರೆ, ಭಾರತದಲ್ಲಿಲ್ಲನ ಮುಂದಿನ ಪೀಳಿಗೆಯ ಎಲ್ಲ ಗಂಡ-ಹೆಂಡತಿ ಹನಿಮೂನ್ ಗೆ ಹೋಗುವ ಬದಲಾಗಿ ಕೋರ್ಟ್ ಕಟ್ಟೆ ಏರುವನ್ತಾಗುತ್ತದೋ ಏನೋ ? ಯಾಕಂದರೆ ಗಂಡ-ಹೆಂಡತಿ ಅಂದರೆ ಒಂದು ವಿಚಾರದಲ್ಲಿ ಜಗಳವನ್ನೇ ಹೊತ್ತು ಕೊಂಡು ಬಂದಿರುವ ಪ್ರೇಮಿಗಳು ಮಾತ್ರವಲ್ಲ ಒಂದೇ ಸೂರಿ ನಡಿ ಬದುಕುವ ಜೀವಿಗಳು. ಇಲ್ಲಿ ಜಗಳಗಳು,ನೋವು, ನಲಿವು, ಅಣಕು, ಅನುಬಂಧ ಅನಿವಾರ್ಯವೇ..! ಅಲ್ಲಿ ಸಾಮಾಜಿಕವಾಗಿ  ಪುರುಷ ಪ್ರಧಾನ ಕುಟುಂಬಗಳಿಂದಾಗಿ ಗಂಡಸಿಗೆ ಪ್ರಾಧಾನ್ಯತೆ ನೀಡಿದ್ದರು ಆತನ ಬದುಕಿನ ಪ್ರತಿಕ್ಷಣವು ತನ್ನ ಹೆಂಡತಿಗಾಗಿ, ತನ್ನ ಮಕ್ಕಳಿಗಾಗಿಯೇ ಇರುತ್ತದೆ.  ಆದರೆ ಇಂಥ ವಿಷಯದಲ್ಲಿ ಮೂರನೇ ವ್ಯಕ್ತಿಯ(ಅಂತ ಕಾನೂನು) ಅನಗತ್ಯ ಪ್ರವೇಶಕ್ಕೆ ಎಡೆ ಮಾಡಿ ಕೊಟ್ಟರೆ, ಸರ್ಕಾರವೇ living together ವ್ಯವಸ್ಥೆಯೊಂದನ್ನು ಮದುವೆ ಎಂಬ ಹೆಸರಿನಡಿಯೇ ಒದಗಿಸಿದಂತಾಗುತ್ತದೆ.

ಹಾಗಾದರೆ, ಹೆಣ್ಣು ಮಕ್ಕಳಿಗೆ ಕಾನೂನು ಬೇಡವೇ? ಖಂಡಿತ ಬೇಕು. ಇಂದಿನ ಸುಶಿಕ್ಷಿತ ಸಮಾಜದಲ್ಲಿ ಕಲಿತ ಹಾಗು ಅರ್ಥಿಕವಾಗಿ ಸಬಲೀಕರಣ ಗೊಳ್ಳುತ್ತಿರುವ ಹಂತ ದಲ್ಲಿ ಕಾನೂನು ಎಂಬ ಭಯ ಹುಟ್ಟಿಸುವ ಪರಿಕಲ್ಪನೆಯೇ ಇಲ್ಲದಿದ್ದರೆ ಕೆಲವರಾದರು ಸಂಬಂಧಗಳನ್ನು ಕೆಡಿಸಿ ಬಿಡುತ್ತಾರೆ. ಹಾಗಾಗಿ ಬದುಕಿನ (ಮದುವೆಯ-ದಾಂಪತ್ಯದ) ಹಳಿ ತಪ್ಪಿ ಹೋಗಿದೆ, ಇನ್ನೇನು ಮೂರನೇ ವ್ಯಕ್ತಿಯ ಪ್ರವೇಶ ಇಲ್ಲದಿದ್ದರೆ ಇಲ್ಲಿ ಶತ-ಗತಾಯ ಮುಂದೆ ಸಾಗಲು ಸಾಧ್ಯವಿಲ್ಲ ಎಂದಾಗ ಮಾತ್ರ ಕಾನೂನು-ಕೋರ್ಟು ಗಳು ಮುಖ್ಯ ಅನಿಸುತ್ತವೆ.

ನನಗೊಂದು ಆಶ್ಚರ್ಯ: ಜಾತಿಯಂತ  ಅನಗತ್ಯ ವಿಷಯಗಳನ್ನು ಪಾರಮ್ಪರಿಕವೆಂದು ಸಾರಿ ಇಂತ ಬದಲಾವಣೆಗೆ ತೀಕ್ಷಣವಾಗಿ ಪ್ರತಿಕ್ರಿಯೆ ನೀಡುವ ಸಮಾಜ; ಭಾರತೀಯ ಸನಾತನ ವ್ಯವಸ್ಥೆಯ ಭದ್ರ ಬುನಾದಿಯಾಗಿರುವ ಮದುವೆ ಯಲ್ಲಿನ ಅನಗತ್ಯ ಬದಲಾವಣೆಗೆ ಯಾಕೆ ಮೌನ ತಾಳಿದೆ ಅನ್ನುದೆ  ಗೊತ್ತಿಲ್ಲ...!