Friday, August 31, 2012

ಉಡುಪಿ ಯಾಕಪ್ಪ?

ಉಡುಪಿ ಅಂದಾಗ ಕಣ್ಣ ಮುಂದೆ ಬರುವುದೇನು?
ಹಾ, ನಾನು ೭ ನೇ ತರಗತಿಯಲ್ಲಿಂದಲೇ ಉಡುಪಿ ಬಗೆ ಕೇಳುತ್ತ ಬಂದಿದ್ದೇನೆ. ಮುಲ್ಕಿ ಪರಿಕ್ಷೆಯಲ್ಲಾಗಲಿ, ಎಸ್ ಎಸ್ ಎಲ್ ಸಿ ಪರಿಕ್ಷೆಯಲ್ಲಾಗಲಿ ಅಥವಾ  ಹನ್ನರೆಡ್ನೆತಿ ಪರಿಕ್ಷೆಯಲ್ಲಾಗಲಿ ಯಾರು ಫಸ್ಟ್ ಅಂದರೆ ಉಡುಪಿ ಎಂಬ ಉತ್ತರ ಸಿದ್ದವಾಗಿರುತಿತ್ತು. ಉಡುಪಿಯ ಮಕ್ಕಳು ಯಾವ ಗೈಡು  ತಗೊತ್ತಾರೆ ಅನ್ನು ಪರ್ಶ್ನೆ ೮ ತರಗತಿಯಲ್ಲಿ ಬಹಳ ತಲೆ ಕೆಡಿಸಿತ್ತು. ಕೆಲೋವೊಮ್ಮೆ, ನಮ್ಮ ಮನೆಯಲ್ಲಿ ಅಥವಾ ಊರಲ್ಲಿ ದೂರದ ಟ್ರಿಪ್ ಅಂದರೆ ಧರ್ಮಸ್ಥಳವಾಗಿರುತಿತ್ತು.ಹೀಗಾಗಿ ಮಣಿಪಾಲ ದಲ್ಲಿ ಹಾದುಹೋಗುವಾಗ, ಎತ್ತರದ ಆಸ್ಪತ್ರೆಯನ್ನು ನೋಡಲು ಕೆಂಪು ಬಸ್ಸಿನ ಕಿಡಕಿಯಿಂದ ಹೊರ ನೋಡಲು ನಮ್ಮ ಜೊತೆಯಾಗಿದ್ದ ಮಕ್ಕಳೆಲ್ಲರು ಕಿದಕಿಗೆ ಬಂದು ನಿಲ್ಲುತ್ತಿದ್ದೆವು. ಇನ್ನೊಂದು ವಿಶೇಷವೆಂದರೆ, ವರ್ಷದಲ್ಲಿ ಒಂದು ಸರಿಯಾದರೂ ಭೇಟಿ ನೀಡುವ ಯಕ್ಷಗಾನ ಮೇಳಗಳು -ಸಾಲಿಗ್ರಾಮ ಮೇಳ ಹಾಗು ಪೆರ್ಡೂರು ಮೇಳ. ಈ ಮೇಳಗಳ ಕೊನೆಯ ಪರಿಚಯವಿರುವುದು ಉಡುಪಿ ತಾಲ್ಲೂಕು(ಈಗ ಜಿಲ್ಲೆ)ಅನ್ನುವುದು. ರೇಡಿಯೋ ವಾರ್ತೆಯಲ್ಲೂ ಉಡುಪಿ ಅವಾಗವಾಗ ಶುದ್ಧಿಗೆ ಬಂದಿರುತ್ತಿತು- ಓಂದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂದ್ ಗೆ ಮಿಶ್ರ ಪ್ರತಿಕ್ರಿಯೆ(ಬಹುಶ ಉಡುಪಿ ಇತಿಹಾಸದಲ್ಲಿ ಬಂದ್ ಪದವೇ ಇಲ್ಲವೇನೋ ಅನ್ನುವ ಹಾಗೆ) . ಹವಾಮಾನ ವರದಿಯಲ್ಲಾದರೂ ಉಡುಪಿ ಸಮೀಪದ ಆಗುಂಬೆಯಲ್ಲಿ ಭಾರಿ ಮಳೆ ಎಂದು ಓದಲಾಗುತ್ತಿತು.

ಹುಬ್ಬಳ್ಳಿಯಲ್ಲಿ ನಾಲ್ಕು ವರ್ಷ ಕಳೆದ ನನಗೆ , ಉಡುಪಿಗೆ ಬಂದಾಗ  ಸದಾ ಹಸಿರಿನ, ಚಿಕ್ಕ ಚೊಕ್ಕ ಊರು  ನೋಡಿ ಖುಷಿಯೇ ಖುಷಿ. ಒಂದು ಕಡೆ ಕೂಲ್ ಕನ್ನಡ (" ಎಂತಾ !")  ಇನ್ನೊಂದು ಕಡೆ ಇಲ್ಲಿಯ ಸಾಂಸ್ಕೃತಿಕ ವೈಭವ! ನಾನು ನನ್ನ ಉತ್ತರ ಕನ್ನಡದ ತವರು ಮನೆಯನ್ನೇ ಮರೆತು ಬಿಟ್ಟೆ.

 ಉಡುಪಿಗೆ ಬಂದ ಮೇಲೆ ನನಗೆ ಇಲ್ಲಿಯ ಸಂಸ್ಕೃತಿ ಮತ್ತೆ ನನ್ನನ್ನು ಯಕ್ಷಗಾನದಂತ ಸಾಂಸ್ಕೃತಿಕ ಪರಂಪರೆಗೆ ಕರೆದೊಯಿತು. ಉಡುಪಿ ಶ್ರೀ ಕೃಷ್ಣನ ರಾಜಾಂಗಣ, ಕೊಡವೂರಿನ ಶಂಕರನಾರಾಯಣ, ಅಂಬಲಾಪದಿಯದ ಶ್ರೀದೇವಿ, ಕಡೆಯಾಳಿಯ ಶ್ರೀ ದೇವಿ ಮಹಿಷ ಮರ್ದಿನೀ ದೇವಾಲಯಗಳಲ್ಲಿ ನಡೆಯುವ ಯಕ್ಷಗಾನ ಹಾಗೂ ಇತರ ಕಾರ್ಯಕ್ರಮಗಳಿಗೆ ಭೇಟಿನಿದುತ್ತಿದೆ. ಆ ಸಾಂಸ್ಕೃತಿಕ ಕಾರ್ಯಕ್ರಮಗಳಿಂದಾಗಿ ನನ್ನ ಹೃದಯ ಸೂರೆ ಗೋಳ್ಳುತಿತ್ತು.

ರಾಜಾಂಗಣ ವಂತೂ ಒಂದು ವಿಶೇಷವಾದ ಪ್ರದೇಶ. ಇದರ ಕುರಿತು ಬರೆದರೆ ತುಂಬಾ ಬರೆಯ ಬೇಕು.ರಾಜಾಂಗಣದಲ್ಲಿ ಕುಳಿತ ಪ್ರೇಕ್ಷಕರು ಖಂಡಿತವಾಗಿಯೂ ರಾಜರೇ ವಾಗುತ್ತಾರೆ. ಬೇಕಾದಷ್ಟು ಆಸನಗಳು,ಎತ್ತರದಲ್ಲಿರುವ ಸಭಾಂಗಣ, ಸಮಯ ನಿರ್ಧಾರಿತ ಕಾರ್ಯಕ್ರಮಗಳು ಹಾಗೂ ಶಾಂತ ಮತ್ತು ಆಸಕ್ತ ಪ್ರೇಕ್ಷಕ ವರ್ಗ. ಇಲ್ಲಿ ನಡೆಯುವ ಕಾರ್ಯಕ್ರಮಗಳು ವಿಶಿಷ್ಟ ವಾಗಿರುತ್ತವೆ. ಭಗವದ್ಗೀತೆ ಪಠಣ, ಯಕ್ಷಗಾನ, ನೃತ್ಯ, ಭಕ್ತಿ ಸಂಗೀತ, ಕೊಳಲು ವಾದನ, ವಿಚಾರ ಗೋಷ್ಠಿ, ಬಾಲ ಕಿಶೋರ ಕಾರ್ಯಕ್ರಮಗಳು.... ಹೀಗೆ ಹಲವಾರು ಚಟುವಟಿಕೆಗಳು ಸದಾ ಜರುಗುತ್ತಲೇ ಇರುತ್ತವೆ. ಯಕ್ಷಗಾನ ಟ್ರಸ್ಟ್ ನಿಂದ ನಡೆಸಲ್ಪಟ್ಟ ಕಿಶೋರ ಯಕ್ಷಗಾನ ಗಳಂತೂ ಒಂದು ವಿಶಿಷ್ಟವಾದ ಸಾಧನೆ. ಒಮ್ಮೆ ರಾಜಾಂಗಣ ಪ್ರವೇಶ ಮಾಡಿದರೆ ಉಡುಪಿ ಸಾಂಸ್ಕೃತಿಕ ಪರಂಪರೆ ನಮ್ಮ ಕಣ್ಣ ಮುಂದೆ ನಿಲ್ಲುತ್ತದೆ.

I love Udupi..!


Thursday, August 23, 2012

ತೆರೆದ ಹೃದಯದಿಂದ !

ನಾನು ಹಿಂದೂ ಧರ್ಮದ ಸಂಸ್ಕೃತಿಗೆ ಬೆಲೆ ಕೊಡುತ್ತೇನೆ...ವಿವೇಕಾನಂದರ ವಿಚಾರಧಾರೆ ನನಗೆ ಇಷ್ಟವೇ. ನಾನು ಬೌದ್ಧಿಕವಾಗಿ ಜನ ಸಾಮಾನ್ಯ...ಯಾವತ್ತು ಬುದ್ದಿ ಜೀವಿ ಅಲ್ಲ. ನನಗೆ ಸರಿಯನಿಸಿದ್ದನ್ನು ಮತ್ತೊಬ್ಬರ ಸ್ವಾತಂತ್ರ್ಯಕ್ಕೆ ಧಕ್ಕೆ ಬರದ ಹಾಗೆ ಬರೆಯುದು ನನ್ನ ಹಕ್ಕು ಅನ್ನುವುದಕ್ಕಿಂತಲೂ ಕರ್ತವ್ಯ ವೆಂದು ಭಾವಿಸುತ್ತೇನೆ.

ನಾನು ಕೆಲವೊಮ್ಮೆ ವೈಜ್ಞಾನಿಕ ವಿಷಯಗಳಿಂದ ದೂರವಾಗುವಂತ ಶನ್ನಿವೆಷಗಳು ಬಂದಾಗ ಸಾಹಿತ್ಯದ ಕಡೆಗೆ ಓಡಿಹೋಗುತ್ತೇನೆ. ಅದರಲ್ಲೂ ಹುಟ್ಟುತ್ತಲೇ ಯಕ್ಷಗಾನದಂತಹ ಕಲೆಯನ್ನು ರೂಢಿಸಿಕೊಂಡು ಬಂದಿರುವುದು ಕಾರಣವಾಗಿರಬಹುದು. ಇನ್ನುವೊಂದು ವಿಶೇಷ ಅಂದರೆ, ಇತ್ತೀಚಿಗೆ ಜಾತಕ ನೋಡಿದ ಒಬ್ಬರು, ನೀವು ರೋಹಿಣಿ ನಕ್ಷತ್ರದಲ್ಲಿ ಹುಟ್ಟಿದ್ದಿರಿ ಹೀಗಾಗಿ ನಿಮಗೆ ಕಲೆಯಲ್ಲಿ ಆಸಕ್ತಿ ಉಂಟಾಲ್ಲವೇ? ಎಂದು ಹೇಳಿದಾಗ ಮೀಸೆ ಬೊಳಿಸಿದ್ದರು, ಒಮ್ಮೆ ಗಲ್ಲದ ಮೇಲೆ ಕೈ ಆಡಿಸಿ , ಅದಕ್ಕೆ ಅಲ್ಲವೇ ಉಡುಪಿಯಲ್ಲಿ ನಿಮಗೆ ಭೇಟಿಯಾಗಿರುವುದು ಅಂದೇ...!  ಹೀಗಾಗಿ ಜಾತಕ ಕೂಡ ನಾನು ಕಲಾಭಿಮಾನಿ ಅಂತ ಹೇಳಿತಲ್ಲ ಅನ್ನೋದಕ್ಕೆ ನಾನು ಜಾತಕ್ಕೆ ಬಹಳ ಗೌರವದಿಂದ ಕಾಣುತಿದ್ದೇನೆ.

ಇಂತ ಎಲ್ಲ ವಿಷಯಗಳ್ಳನ್ನು ಯಾರು ತಾನೇ ಬರೀತಾರೆ? ಜಾತಕ-ಮದುವೆ ಇವೆಲ್ಲ ತಂದೆ-ತಾಯಿ ಅಥವಾ ನಮ್ಮ ಮನೆಯ ಹಿರಿಯರಿಗೆ ಬಿಟ್ಟ ವಿಚಾರ ಗಳಲ್ಲವೇ? ಒಂದು ತರ ನಾಚಿಕೆ ಅಂತನೂ ಮಾತಾಡುವ  ಮಂದಿ ಇದ್ದಾರೆ... ಇರಲಿ ಅಷ್ಟಕ್ಕೂ ನಾನೇನು ಪ್ರತಿನಿತ್ಯ - ತ್ರಿ-ಕಾಲ ಸಂಧ್ಯಾವಂದನೆ ಮಾಡಿ ಬೆಳೆದ ಹುಡುಗನು ಅಲ್ಲ. ಹೀಗಾಗಿ ನಾಲ್ಕು ಜನರಿಗೆ, ನನ್ನ ಸಮಾಧಾನಕ್ಕೆ, ಆಸಕ್ತಿಗಾಗಿ ನಡೆದು ಹೋದ ಕೆಲವು ವಿಚಾರಗಳನ್ನು "ಸಚ್  ಕಾ ಸಮ್ನಾ" ಎನ್ನುವಂತೆ ಬರಿಯ ಬೇಕು ಅಂದು ಕೊಂಡಿದ್ದೇನೆ.ಯಾರಿಗೆ ಇಷ್ಟವೋ ಅವರು ಓದಬಹುದು.

"ನಾನು" ಅಂದರೆ ಕೇವಲ ನಾನಾಗಿ ಸಮಾಜದಲ್ಲಿ ಉಳಿಯಲು ಸಾಧ್ಯವೇ ಇಲ್ಲ. ಈ ನಾನು ಯಾವಾಗಲೂ ತಂದೆ-ತಾಯಿ, ಅಕ್ಕ-ತಂಗಿ,ಅಣ್ಣ-ತಮ್ಮ, ಆಜು-ಬಾಜು ಮನೆಯವರು, ನಮ್ಮ ಗೆಳೆಯರು, ನನ್ನ ಸಹೋದ್ಯೋಗಿಗಳು ಹೀಗೆಲ್ಲ ಸುತ್ತಿಕೊಂಡಿರುತ್ತದೆ. ಕೆಲೋವೊಮ್ಮೆ ಹೊಗಳುವಂತ -ಕೆಲೋವೊಮ್ಮೆ ತೆಗಳುವಂತ ವಿಷಯಗಳಿಗೆ ಈ ನಾನು ಸುತ್ತಿ ಕೊಂಡರೆ, ಅದರಲ್ಲಿ ನನ್ನನು ಹೊರತು ಪಡಿಸಿ ಬೇರೆಯರು ಸುತ್ತಿಕೊಂಡರೆ ಅವರ ಹೆಸರು ಅಥವಾ ಅಂಥವರ ವ್ಯಕ್ತಿತ್ವ ಸಾದರ ಪಡಿಸುವುದು ತಪ್ಪಾಗುತ್ತದೆ. ಹೀಗಾಗಿ ಕೆಲವು ವಿಷಯಗಳು ಸಿನಿಮಾದಂತೆ ಹೊಸ ಪಾತ್ರಗಳನ್ನು ಸೃಷ್ಟಿ ಮಾಡಿ -ಕೆಲವೊಂದನ್ನು ಕೊಲೆ ಮಾಡಿಸಿ ನನ್ನ ಬರಹ ಮುಂದುವರಿಸಬೇಕಾಗುತ್ತದೆ. ಅಂದಹಾಗೆ ಸಾಹಿತ್ಯ-ಬರಹ ಒಂದು ಸಂತೋಷಕ್ಕೆ ಹೊರತು ಯಾರದೋ ವ್ಯಕ್ತಿತ್ವವನ್ನು ಸಾಯಿಸುವುದಕ್ಕಲ್ಲ.

ಇಷ್ಟೊಂದು ಪಿಟಿಕೆ ಯೊಂದಿಗೆ, ತಮ್ಮೆಲ್ಲರ ಮುಂದೆ ಕಿರು ಬರಹಗಳೊಂದಿಗೆ ಬರುತ್ತಿದೇನೆ. (ಅಕ್ಷರ ತಪ್ಪುಗಳಿಗೆ ಕ್ಷಮೆಯಿರಲಿ...!)