Saturday, December 28, 2013

ಮೂವತ್ತೈದರ (೩೫) ಹರೆಯ..!

ಸುಮ್ಮನೆ ಯಾವುದೊ ಲೇಖನ ಬರೆಯಲು ಸಾಧ್ಯವಾಗುವುದಿಲ್ಲ. ಯಾವುದೊ ಒಂದು ವಿಷಯ ಹೀಗೆ ಯಾಕೆ? ಎಂಬ ಪ್ರಶ್ನೆಗೆ  ಬಿದ್ದಾಗ, ಅದು ಕಾಡಿದಾಗ, ಅದು ಒಂದು ಚಿಂತನೆಯಾದಾಗ, ಅದನ್ನು ಯಾರಿಗಾದರೂ ಹೇಳಲೇ ಬೇಕು ಎಂಬ ಭಾವ ಮೂಡಿದಾಗ ಬರೆಯಲು ಆರಂಭಿಸುತ್ತೇನೆ. ನನಗೆ ಮದುವೆಯ ವ್ಯವಸ್ಥೆ, ಪುಸ್ತಕ -ಸಿನೆಮಾಗಳಿಂದ ನಾನು ತಿಳಿದುಕೊಂಡ ಸತ್ಯಕ್ಕೂ ಬಹಳ  ವ್ಯತ್ಯಾಸ ತಿಳಿದು ಈ  ಮದುವೆಯ ವಿಷಯ ಬಹಳ ಕುತೂಹಲಕಾರಿ ಅನಿಸಿದೆ.

ಸಾವಿರಾರು ಜನ ರಾಜಕೀಯದ ಕುರಿತಾಗಿ, ಸ್ಥಳಗಳ ಕುರಿತಾಗಿ, ನಿಸರ್ಗದ ಕುರಿತಾಗಿ, ವಿಜ್ಞಾನದ ಕುರಿತಾಗಿ ಬರೆಯುತ್ತಲೇ  ಇರುತ್ತಾರೆ. ಆದರೆ ನಮ್ಮ ನಮ್ಮೊಳಗೇ ಸೃಷ್ಟಿ ಮಾಡಿಕೊಂಡಿರುವ ನಿಯಮ ಹಾಗೂ ಪದ್ಧತಿಗಳ ಕುರಿತಾಗಿ ನಾವು ಮಾತನಾಡುವುದು ಅಪರೂಪ. ಯಾಕಂದರೆ ದೈನಂದಿನ ಬದುಕಿನಲ್ಲಿ ಹಾಸುಹೊಕ್ಕಾಗಿರುವ ವಿಷಯದ ಕುರಿತಾಗಿ ಬರೆಯುವುದೇನು ಉಳಿದಿದೆ ಎಂಬ ಭಾವ ಅಥವಾ ಅಂತದೊಂದು ಉದಾಸೀನತೆ  ಇರಬಹುದು. ಏನೇ ಇರಲಿ, ನಾನು ಮಾತ್ರ ಬರೆಯುವುದು ಇಂಥ ವಿಷಯದ ಕುರಿತಾಗಿ...ನೀವು ಓದಿ.

ಅವಳ ಆಫೀಸ್ ಮುಂದೆ ಇರುವ ಬೋರ್ಡ್ ಮೇಲೆ  ಹೀಗೆ ಬರೆದಿದೆ.
                                  Ms. Asha( BE,Mtech,MBA-HR).

ಅವಳು ಈಗ ಕೆಲಸ ಮಾಡುತ್ತಿರುವುದು, ಅತ್ಯಂತ ಶ್ರೇಷ್ಟ ಕಂಪನಿಯಲ್ಲಿ ಮ್ಯಾನೇಜರ್ ಕಮ್ CFO  ಎಂದು. ವೃತ್ತಿಯಲ್ಲಿ ಬಹಳ ಸಾಧಿಸಿದ ಹುಡುಗಿ. ಅವಳು ಇಷ್ಟು ಸಾಧಿಸಲು ಪಟ್ಟಿರುವ ಕಷ್ಟ  ಸಾಮನ್ಯವೇನು  ಅಲ್ಲ. ಅವಳು ಸಾಧಿಸಿರುವ ಡಿಗ್ರಿ, ಪೇಪರ್ ಗಳ ಲಿಸ್ಟ್ ಗೆ ಅವಳ ಹೆಸರ ಮುಂದೆ ಒಂದು website  ಬರೆದು ಅದರಲ್ಲಿ ಲಿಸ್ಟ್ ಮಾಡಬೇಕು ಹೊರತು ನೇರವಾಗಿ ಹೆಸರ ಮುಂದೆ ಜಾಗ ಸಾಲುವುದಿಲ್ಲ. ಓದುವುದರಲ್ಲಿ ಎತ್ತಿದ್ದ ಕೈ. ಸಾಧಿಸುತ್ತೇನೆ ಅನ್ನುವುದರಲ್ಲಿ ಪಳಗಿದ ಕಾನ್ಫಿಡೆನ್ಸ್. ಅವಳ ಕೈ ಕೆಳಗೆ ಕೆಲಸ ಮಾಡುತ್ತಿರುವ BE  graduate ಗಳಿಗಿಂತ ಹತ್ತು ಪಟ್ಟು  ಹೆಚ್ಚಿನ ಸಂಬಳ. ಅತ್ಯುತ್ತಮ ಕಾರಲ್ಲಿ ಬರುತ್ತಾಳೆ. ಅವಳಿಗೆ ಎಲ್ಲ ಫೆಸಿಲಿಟಿ ಇವೆ. ಅವಳಿಗೆ ಎಲ್ಲರು ತಲ್ಲೇ ತಗ್ಗಿ ನಿಲ್ಲುತ್ತಾರೆ. ಅವಳ ಸಾಧನೆಯ ದೃಷ್ಟಿಯಿಂದ, ಕೆಲಸದ ಕಂಪನಿಯಲ್ಲಿ ಅವಳಿಗೆ ಸರಿ ಸಮನಾರು ಯಾರು ಇಲ್ಲ. ಅವಳು ಬಿಡುತ್ತೇನೆ ಅಂದರೆ ಅದೇ ಕಂಪನಿ ಅವಳು ಹೇಳಿದ್ದನ್ನು ಕೊಟ್ಟು ಉಳಿಸಿ ಕೊಂಡೀತು..!  ತುಂಬಾ ಒಳ್ಳೆ ಹುಡುಗಿ. ಆಶಾ (ಮೂವತ್ತೈದು).(ನ್ಯೂಸ್ ಪೇಪರ್ ಗಳಲ್ಲಿ ಹೆಸರಿನ ಮುಂದೆ ವಯಸ್ಸನ್ನು ಈ ರೀತಿ ಬರೆಯುವುದನ್ನು ಗಮನಿಸಿರುತ್ತಿರಿ)

ಕೆಲಸಕ್ಕೆ ಸೇರಿ ಎರಡು  ವರ್ಷದ ತನಕ ಎಲ್ಲವು ಸರಿಯಾಗಿತ್ತು. ಅವಳ ಕೆಲಸ ಎಲ್ಲವು ಮೆಚ್ಚತಕ್ಕದೆ. ಆದರೆ ಇದ್ದಹಾಗೆ ಒಂದು ದಿನ ಕೆಲಸಕ್ಕೆ ಬೈ ಎಂದು ಹೇಳಿದ್ದಳು. ಅವಳು resignation  ಕೊಟ್ಟು ಹೋಗಿಲ್ಲ, ಬದಲಾಗಿ ರಜೆಯ ಮೇಲೆ. 

ಒಂದರ ಮೇಲೆ ಒಂದರಂತೆ ಸಾಧಿಸಿದ ಡಿಗ್ರಿ ಗಳು, ಸಾಧಿಸಿದ ಪ್ರೊಫೆಷನಲ್  ಗೆಲುವು ಎಲ್ಲವು ಅವಳ ಬದುಕಿನ್ನಲ್ಲಿ ಒಂದು ದಿನ ಕೈ ಕೊಟ್ಟಿತ್ತು. ಮನೆಗೆ ಹೋಗಿ, ಬೇಡ ರೂಂ ನ ಸಿಲಕ ಹಾಕಿ, ಬೆಳಗಿನ ಕಾಫ್ಫಿ ಕುಡಿಯದೆ ಅಂಗಾತ ಮಲಗಿ,
"ಮೂವತ್ತೈದು...!" ಎಂದು ಯೋಚಿಸುತ್ತ  ಕಣ್ಣೀರ ಹನಿಗಳೊಂದಿಗೆ, ಮನೆಯ ಸೀಲಿಂಗ್ ನೋಡುತ್ತಿದ್ದಳು. ಮೊವತೈದಕ್ಕೆ ಸಂಬಂಧ ಕೂಡಿ ಬರದು; ಎಪ್ಪತ್ತೈದಕ್ಕೆ ಬಾಲ್ಯ ಬರದು. ಕಳೆದು ಹೋಯಿತು ಸಂತೋಷ ಡಿಗ್ರಿಗಳ ಮಧ್ಯೆ..!

ಇದೆ ಅವಳ ಬದುಕಿನ ತಪ್ಪು.! ನಮ್ಮ ಶಿಕ್ಷಣ, ನಮ್ಮ ನೆರೆ-ಹೊರೆ ಎಲ್ಲರು ಹೇಳುವುದು ಬಹಳಷ್ಟು ಡಿಗ್ರಿ ಗಳು, ತುಂಬಾ ದೊಡ್ಡ ಸ್ಥಾನ ಮಾನ ಹೊರತು, ಯಾವುದನ್ನೂ, ಯಾವಾಗ, ಯಾರು, ಹೇಗೆ ಮಾಡಬೇಕು ಎಂದು ಯಾರು ಹೇಳುವುದಿಲ್ಲ. ಬಿಸಿ ರಕ್ತ ಇರುವಾಗ ಬಹಳ ಮಂದಿ ಇಂಥ ಶಿಕ್ಷಣ ನಮ್ಬಿಯೋ, ನೆರೆ ಹೊರೆಯವರನ್ನು ನಮ್ಬಿಯೋ, ಮತ್ತೊಬ್ಬರ ಜೊತೆ ತಮ್ಮನ್ನು ಹೋಲಿಸಿಯೋ ಅಥವಾ ಸಾಧಿಸಲೇ ಬೇಕು ಎಂಬ ಉತ್ಕಟ ಇಚ್ಛೆಯಿಂದಲೋ ತಮ್ಮ ಬದುಕಿನಲ್ಲಿ ಏನಾಗಬೇಕು, ತಮ್ಮ ಬದುಕಿನ ಸಂತೋಷಕ್ಕೆ ಏನು ಬೇಕು ಎಂದು ಯೋಚಿಸುವುದೇ ಇಲ್ಲ. ಈ ಪರಿಣಾಮವಾಗಿ ನಾಲ್ಕಾರು ಡಿಗ್ರಿ ಗಳಿದ್ದರು, ಎರಡೇ ವರ್ಷದಲ್ಲಿ ಆಶಾ ಇಸ್ ಫ್ಲಾಟ್. ನೋ ಮೊರೆ ವರ್ಕ್ !

ಅವಳ ದುಖದ  ಕಾರಣ- ಜೀವನೋದ್ದೇಶ ಮತ್ತು ಗುರಿಗಳ ಕುರಿತಾದ ಅಜ್ಞಾನ. ಗುರಿಗಳು(aim ) ಮತ್ತು ಉದ್ದೇಶ (purpose ) ಒಂದೇ ಅಲ್ಲ. ಇವುಗಲೆರಡನ್ನು ಒಂದೇ  ಎಂದು ಸಾಧಿಸಲು ಹೊರಟವರು ತಮ್ಮ ಜೀವನದಲ್ಲಿ ಏನನ್ನಾದರೂ ಕಳೆದು ಕೊಳ್ಳಲೆ ಬೇಕು ಅಥವಾ ಒಳ್ಳೆಯ  ಹಣೆಬರಹ ಹೊಂದಿರಬೇಕು. ನನ್ನ ಪ್ರಕಾರ, ಸಂತೋಷದ ಅತ್ಯುತ್ತಮ ಮಟ್ಟ  ಬದುಕಿರುವರೆಗೂ ಸಾಧಿಸುವುದೇ  ನನ್ನ ಉದೇಶ.ಆದರೆ ಗುರಿಗಳು  ಅವರವರ ಇಷ್ಟಕ್ಕೆ ಸರಿಯಾಗಿ ಇರುತ್ತವೆ. ಕೆಲವರಿಗೆ ಮ್ಯಾನೇಜರ್ ಆಗಬೇಕು, ಕೆಲವರಿಗೆ ಡಿಸೈನರ್ ಆಗಬೇಕು, ಕೆಲವರಿಗೆ  ಕಂಪನಿ ಕಟ್ಟಬೇಕು. ಹೀಗೆ ಇರುವುದು ತಪ್ಪಲ್ಲ.

ಆದರೆ ತಪ್ಪಾಗುವುದು ತಾನು ಸಂತೋಷವಾಗಿರಲು ಏನು ಬೇಕು ಎಂದು ಅರಿಯದೆ ಇರುವುದರಿಂದ. ಅದರಲ್ಲೂ ಪ್ರತಿಯೊಬ್ಬರ ಜೀವನದಲ್ಲಿ ತನ್ನದೇ ಅನ್ನುವ ವ್ಯಕ್ತಿಗತ ಸಂತೋಷದ ಕ್ಷಣಗಳಿರುತ್ತವೆ. ಅಂತಹ ಕ್ಷಣಗಳು ಆಯುಷ್ಯದ ಕ್ಷಣಗಳೊಂದಿಗೆ ಜೋಡಣೆಗೊಂಡಿರುತ್ತವೆ. ಬಾಲ್ಯ, ಕಾಲೇಜ್ ಜೀವನ, ಮದುವೆ, ದಾಂಪತ್ಯ, ಮಕ್ಕಳು...ಹೀಗೆ ಬದುಕಿನಲ್ಲಿ ಸರಿಯಾದ ಸಮಯದಲ್ಲಿ ಹಾದು ಹೋದಾಗಲೇ ಬದುಕಿನಲ್ಲಿ ಸಂತೋಷ ಸಾಧ್ಯ. ಒಮ್ಮೆ  ಇಂಥ ವಿಷಯಗಳು ನಮ್ಮಿಂದ ದೂರ ಸರಿದವು ಅಂದರೆ ಬಿಟ್ಟ ಬಾಣದಂತೆ .... ಮತ್ತೆ ಹಿಂತಿರುಗಿ ಬರಲಾರವು.

ಆಶಾ ಗುರಿಗಳನ್ನು ಸಾಧಿಸಿದ್ದಾಳೆ; ಉದೇಶ ಮರೆತಿದ್ದಳು. ಈಗ ಗುರಿಯ ನೆತ್ತಿಯನ್ನು ಏರಿದ ಮೇಲೆ ಉದೇಶ ವೇನೆಂದು ಪ್ರಶ್ನಿಸಿ ಕೊಂಡಿದ್ದಾಳೆ. ದು:ಖಿತಲಾಗಿದ್ದಾಳೆ. ಆದರೆ ದುಖ ಹೇಳಿಕೊಳ್ಳಲು ಗೆಳೆಯರಿಲ್ಲ;ಗೆಳತಿಯರಿಲ್ಲ;ತಂದೆ-ತಾಯಿಗೆ ಹೇಳಲಾಗುತ್ತಿಲ್ಲ. ಅವಳಿಗೆ ಈಗ ಕಾಣುತ್ತಿರುವುದು ಮುಟ್ಟಲಾಗದ ಆ ಮನೆಯ ಸೀಲಿಂಗ್ ಮಾತ್ರ.

ಅದೆಷ್ಟೋ ಸಮಸ್ಯೆಗಳು ನಾವು ಸಮಯಕ್ಕೆ ಸರಿಯಾಗಿ ಯೋಚಿಸುವುದರಿಂದ ಬಗೆಹರಿಸಲು ಸಾಧ್ಯವಿದೆ. ಸ್ಥಾನ, ಗೌರವ, ಅಧಿಕಾರ, ಹಣ ಇವುಗಳು  ಅಲ್ಪಾವಧಿಗೆ ಸಂತೋಷವನ್ನುಂಟು ಮಾಡುತ್ತವೆ. ಹೀಗಾಗಿ ಮನುಷ್ಯ ಜೀವನದ ಉದೇಶ ಖಂಡಿತ ಮರೆಯಬೇಡಿ.

Wednesday, December 25, 2013

ಅವನ್ಯಾಕೆ ಬದಲಾದ?

ಈ ಪ್ರಶ್ನೆ ನೀವು ಬಹಳ ಸಾರಿ ಕೇಳಿಯೇ ಇರುತ್ತೀರಿ. ಕೆಲವೊಮ್ಮೆ ನಿಮ್ಮ ಗೆಳೆಯ-ಗಳತಿ  ಅಥವಾ ಸಹಪಾಟಿ ನಿಮ್ಮ ಜೊತೆಯಲ್ಲಿದ್ದಾಗ ಚೆನ್ನಾಗಿಯೇ ಇದ್ದು ಯಾವುದೋ ಒಂದು ದಿನ ಅವನು/ಅವಳಲೊಂದು ಕನಿಷ್ಠ ಮಟ್ಟದ ಕೆಲಸದಲ್ಲಿ ನರಳಿದಾಗ ನೀವು ಹಿಗಿಯೇ ಹೇಳುತ್ತಿರಿ. "ಕಾಲೇಜ್ ನಲ್ಲಿ ಇದ್ದಾಗ ಅವನ ಫಿಲಾಸಫಿ ಚೆನ್ನಾಗಿಯೇ ಇತ್ತು..ಅವನು ಒಳ್ಳೆಯವನು ... ಹೀಗೆಲ್ಲಾ ಮಾಡಲು ಸಾಧ್ಯನೇ ಇಲ್ಲ ಅನ್ನುತ್ತಾ.." ನಿಮ್ಮ ಗೆಳೆಯನ ಕುರಿತಾಗಿ ಯಾರೋ ಕೀಳಾಗಿ ಪ್ರಶ್ನಿಸಿದರೆ  ಇದೆ ಉತ್ತರ.

ಹಾಗಿದ್ದರೆ ಮನುಷ್ಯ ಯಾವತ್ತು ಬದಲಾಗುವುದಿಲ್ಲವೇ? ಪ್ರತಿಕ್ಷಣದ ಅನುಭವು ಮನುಷ್ಯನ ಮನಸ್ಸಿನ ಮೇಲೆ, ಬದುಕುವ ರೀತಿಯ ಮೇಲೆ ಪ್ರಭಾವ ಬಿರಲಾರದೆ? ಅದಕ್ಕಾಗಿಯೆ ಅಲ್ಲವೇ ಮನೆಯಲ್ಲಿದ್ದಾಗ ಸಸ್ಯಹಾರಿಗಲಾದವರು  ಗೆಳೆಯರ ಮಧ್ಯೆ ಸಿಲುಕಿ  ಮಾಂಸಹಾರಿ ಕೂಡ ಆಗಿ ಬಿಡುತ್ತಾರೆ. ಮನೆಯಲ್ಲಿ ಅಪ್ಪ-ಅಮ್ಮ ಹಾಗೆ ಮಾಡಲಾರ ನಮ್ಮ ಮಗ ಅನ್ನುತ್ತಲೇ ಇರುತ್ತಾರೆ. ಆದರೆ ಮಗ ಬದಲಾವಣೆಗೆ ಗುರಿಯಾಗಿ, 'ಸ್ವಾಹ' ಅನ್ನುತ್ತಾನೆ. ಯಾವತ್ತು ನಾನು ಸ್ನಾನ ಮಾಡದೇ ತಿನ್ನಲಾರೆ ಅನ್ನುವರು ಕೂಡ, ಇಲ್ಲೊಂದು ಕಡೆ ಗೆಳೆಯರ ಮಧ್ಯದಲ್ಲಿ, "ಲೇ ಮಗನೆ, ತಿನ್ನಲೇ ನಾವೇನು ಸ್ನಾನ ಮಾಡಿದ್ದೇವಾ ?" ಎಂದು ಒತ್ತಡ ಹೇರಿದಾಗ, ಆಹಾರವನ್ನು ಮೊದಲು ಪ್ರಯಸದಾಯಕವಾಗಿ ಗಂಟಲೋಳಗಿರಿಸಿದ ಮಹನಿಯ ವರ್ಷವೊಂದು ಉರುಳಲು ಸ್ನಾನವೇ ಮರೆತು ತಿನ್ನಲು ಸಾಧ್ಯವಿದೆ. ಅಂದರೆ, ಮನೆಯಲಿ ಕಲಿಸಿದ ನೀತಿ, ಸಂಸ್ಕೃತಿ ಅಥವಾ ಬದುಕಿನ ಒಂದು ಫಿಲೋಸೋಪ್ಯ್ ಎಲ್ಲೊಂದೆಡೆ ಕಾಲ ಚಕ್ರದಲ್ಲಿ ಬದಲಾಗಲು ಸಾಧ್ಯವಿದೆ; ಆಗುತ್ತಲೇ ಇರುತ್ತದೆ.

ನಾನು ವರದಕ್ಷಿಣೆಯ ವಿರೋಧಿ. ಅದು ಸರಿಯಲ್ಲ ಎಂದು ಪ್ರಾಥಮಿಕ ಶಾಲೆಯಲ್ಲಿ ನನ್ನ ಗುರುಗಳು ಬರೆಸಿದ ನಿಬಂಧಗಳು  ಅಂತಹ ನಿಲುವು ನನ್ನ ಮನಸ್ಸಿನಲ್ಲಿ ಅಚ್ಚಳಿಯದಂತೆ ಮೂಡಿಸಿತ್ತು. ನಾನು, ಅದೆಷ್ಟೋ ಬಾರಿ ಗೆಳೆಯರ ಮಧ್ಯದಲ್ಲಿ ಮದುವೆಯ ಕುರಿತಾಗಿ ಮಾತನಾಡುವಾಗ, ಅಥವಾ ಯಾವುದೊ ಮದುವೆಗೆ  ಹೋದಾಗ ಗುಡ್ಡೆ ಹಾಕಿರುವ ವರದಕ್ಷಿಣೆಯ ರಾಶಿ ವಸ್ತುಗಳು, ಅಥವಾ ಇನ್ನಾರದೋ ಮಾವ ಕಾರು ಕೊಟ್ಟ, ಬಂಗಾರ ಕೊಟ್ಟ ಅಂದಾಗ ಅದೆಲ್ಲ ಸರಿಯಲ್ಲ ಎಂದು ನನ್ನ ವಿರೋಧಿ ನೀತಿಯನ್ನು ತೋರಿಸಿದ್ದು ಮಾತ್ರ ಅಲ್ಲ, ನಾನೊಬ್ಬ ಸಾಚಾ ಎನ್ನುವುದನ್ನು ತೋರಿಸಿದ್ದೆ. ಇಲ್ಲಿಯ ವರೆಗೂ ನಾನು ಸಾಚಾ ನೇ ಆಗಿದ್ದೆ. ಆದರೆ ಇನ್ನು ಸಾಚಾ ತನ ಒಳ್ಳೆಯದಲ್ಲ, ಅಂತ ಘನತೆಯ ಹಿಂದೆ ಕಹಿಯಾದ ಬೇವಿನ ರಸವಿದೆಯೆಂದು ಅರಿಕೆಯಾಗಿದೆ.

ಮದುವೆಗಾಗಿ ಹುಡುಗಿ ಹುಡುಕುತ್ತಿದ್ದೇನೆ  ಅನ್ನುವ ವಿಚಾರ ನಿಮಗೆ ಪ್ರತ್ಯೇಕವಾಗಿ ಹೇಳಲೇ ಬೇಕೆಂದೆನು ಇಲ್ಲ. ಅದು ವಯಸ್ಸಿನ ಸಹಜ ನಿಯಮ ಹಾಗೂ ನೀವು ಕೂಡ ಇಂತ ಕೆಲಸ ಕೆಲವರು  ಮಾಡಿರುತ್ತೀರಿ; ಕೆಲವರು ಮಾಡುತ್ತಲು ಇರಬಹುದು; ಇನ್ನು ಕೆಲವರು ಮಾಡುವವರು ಇರಬಹುದು.

ಕೆಲವು ತಿಂಗಳ ಹಿಂದೆ ಮೊದಲ ಹುಡುಗಿ ನೋಡಲು ಹೋದಾಗ, ನೇರವಾಗಿ ಭಾವಿ ಮಾವ ತನ್ನ ಏಕೈಕ ಕನ್ಯಾ ಮಣಿಯನ್ನು  ನೀಡಲು ಕಾತರನಾಗಿ, ವರದಕ್ಷಿಣೆಯ ಕುರಿತಾಗಿ ಮೊದಲ ದಿನವೇ ಪ್ರಶ್ನಿಸಲ್ಪಟ್ಟೆ. ಯಕ್ಷಗಾನದ ವೀರ ಬಬ್ರುವಾಹನ ಹಾಗೆ ಎದೆತಟ್ಟಿ, " ಭಾವಿ ಮಾವ, ಉಟ್ಟ ಬಟ್ಟೆಯಲ್ಲಿ ನಿನ್ನ ಮಗಳನ್ನು ಕರೆದುಕೊಂಡು  ಹೋಗುತ್ತೇನೆ. ನನ್ನ ಮನೆಯಲ್ಲಿ ವರದಕ್ಷಿಣೆ ಸರಿಯೆಂದು ನಾವು ಯಾರು ಭಾವಿಸುವುದಿಲ್ಲ. ಅದಕ್ಕಾಗಿ ಆ ವಿಷಯಕ್ಕೆ ತಿಲಾಂಜಲಿ ಇಟ್ಟರೆ ಒಳ್ಳೇದು" ಎಂದು  ಹೇಳುವುದರ ಮೂಲಕ, ನನ್ನ ಗುರುಗಳನ್ನು ಒಮ್ಮೆ  ನೆನೆದು ಆ ಮನೆಯಿಂದ ಹೊರಬಂದೆ.

 ಆದರೆ, ಕೆಲವು ದಿನಗಳು ಕಳೆದ ಮೇಲೆ, ಈ ಮದುವೆಯ ಸಂಬಂಧದ ಏರ್ಪಡಿಸಿದ ಅವರ ಸಂಬಂಧಿ, " ನೀವು ಯಾಕೆ  ವರದಕ್ಷಿಣೆ ಬೇಡ ಅಂದಿದ್ದಿರಿ, ಅಂತಾ ಅವರು  ವಿಚಾರ ಮಾಡ್ತಾ ಇದ್ದಾರೆ, ಅವರ ಮನಸ್ಸಿನಲ್ಲಿ ಹುಡುಗ ಏನೋ ಸರಿಯಲ್ಲ ಅದಕ್ಕೆ ವರದಕ್ಷಿಣೆ ಬೇಡ ಅಂತ ಇದ್ದಾನೆ ಅಂತ, ಅವರು ನನ್ನ  ಜೊತೆ  ಒಮ್ಮೆ ಹೇಳಿದರು. ನೀವು ಈಗ, ನಿಮ್ಮ ತಂದೆ ತಾಯಿ ಮೂಲಕ ವರದಕ್ಷಿಣೆಗೆ ಬೇಡಿಕೆ ಇಟ್ಟರೆ, ಈ ಮದುವೆ ಮುಂದುವರಿಯಬಹುದು. ಇಲ್ಲ ಅಂದರೆ  ಅವರು ಸಂದೇಹ ಬಗೆಹರಿಸಿಕೊಂಡು ನಿಮಗೆ ಹುಡುಗಿ ಕೊಡ್ತಾರೆ ಅಂತ ಅನ್ಸ್ತಾ ಇಲ್ಲ...ನೀವು ಎನ್ಮಾಡ್ತಿರಾ?"
"ನಮಗೆ ಇಷ್ಟ ಇಲ್ಲ ಅಂತ ಹೇಳಿ" ಎಂದು ಸಂಬಂಧ ಕಡಿದುಕೊಂಡು  ಸುಮ್ಮನಾದೆ.

ಇನ್ನೊಂದು ಸಂಬಂಧ.... ಮನೆಗೆ ಕರೆದರು. ಮನೆಯ ಮಂದಿ ನೆರದಿದ್ದರು. " ಮತ್ತೆ ಏನು ಹೇಳ್ತಿರ ವೆಂಕಟ್, ನೋಡಿ ಇಷ್ಟು ದೂರ ಸಣ್ಣ ಸಣ್ಣ ವಿಷಯಕ್ಕೆ ಮತ್ತೆ ನಿಮ್ಮ ಕರೆಸುದು ಅಂದ್ರೆ ಕಷ್ಟ. ಅದಕ್ಕೆ ನೀವು ಬೇಸರ ಇಲ್ಲ ಅಂದರೆ, ನೀವು ಮದುವೆ ಬಗ್ಗೆ ಡೀಟೇಲ್ ಆಗಿ ಮಾತನಾಡಬಹುದು... ಅಂದರೆ  ವರದಕ್ಷಿಣೆ ಎಷ್ಟು ಬೇಕು? ನಿಮ್ಮ ಮನೆ ಕಡೆಯಿಂದ ಯಾರು ಮಾತನಾಡುತ್ತಾರೆ".  ನಾನು ಮತ್ತೆ ಹಳೆಯ ರಾಗದಲ್ಲಿ, " ಅಂಕಲ್ ನಮ್ಮ ಮನೆಯಿಂದ ತಂದೆ-ತಾಯಿ ಮಾತನಾಡ್ತಾರೆ. ಮನೆಗೆ ಹೋಗಿ ವಿಷಯ ಹೇಳಿದ ಮೇಲೆ ಎಲ್ಲವನ್ನು ಮಾತನಾಡೋಣ. ಆದರೆ ವರದಕ್ಷಿಣೆ ವಿಷಯದಲ್ಲಿ ನನ್ನ ನಿರ್ಧಾರವೇ ಅಂತಿಮ. ನನಗೆ  ವರದಕ್ಷಿಣೆ ಖಂಡಿತ ಬೇಡ. ಇದರಲ್ಲಿ ತಂದೆ-ತಾಯಿಗೆ ಕೇಳುವುದು ಏನು ಇಲ್ಲ" ಎಂದು ಹೇಳಿ, ಹುಡುಗಿಯೋನ್ನೊಮ್ಮೆ ಒರೆ ದೃಷ್ಟಿಯಿಂದ ನೋಡಿ ಮನೆಯಿಂದ ಹೊರಬಂದೆ.

 ಇನ್ನು ಮನೆಯನ್ನು ತಲುಪುವಾಗಲೇ, ನನ್ನ ಮೊಬೈಲ್ ಗೆ ಒಂದಿಷ್ಟು  sms ಗಳು ಬಂದವು. ಆ ಮಸೇಜ್  ಮಾಡಿದವರು ಮತ್ತಾರು ಅಲ್ಲ, ನಾನು ನೋಡಿ ಬಂದ ಹುಡುಗಿ. ತನ್ನ ಹೆಸರನ್ನು ಹೇಳಿ, ನಿಮ್ಮ ಜೊತೆ ಮಾತನಾಡಬಹುದ ಎಂದು ಕೇಳಿದ್ದಳು. ನಾನು ಕಾಲ್ ಮಾಡಿಬಿಟ್ಟೆ. " ಹೇಯ್, ಪ್ಲೀಸ್ ನಾನು ಕಾಲ್ ಮಾಡಿದ್ದೇನೆ ಅಂತ ಅಮ್ಮಗೆ ಹೇಳ್ಬೇಡಿ. ಅವರ ಮೊಬೈಲ್ ನಿಂದ ನಿಮ್ಮ ನಂಬರ್ ತಕೊಂಡೆ. ನೀವೇನು ಚೆನ್ನಾಗಿದ್ದೀರಾ..! ನಾನು ನಿಮಗೊಂದು ಪ್ರಶ್ನೆ ಕೇಳಲಾ?" ಎಂದು ತವಕಿಸಿ ಮಾತನಾಡಿದ್ದಳು. ನಾನು ಭಾವಪರವಸನಾಗಿಯೇ ಇದ್ದೆ. "ನೀವು ಇಂಜಿನಿಯರ್ ಓದ್ದಿದ್ದಿರಿ ಅಂತಿರಲ್ಲ... ಹಾಗಿದ್ದು ಯಾಕ್ರೀ ವರದಕ್ಷಿಣೆ ಬೇಡ ಅಂತ ಹೇಳಿ ಬಿಟ್ರಿ?. ನನಗೆ ಈ ನಿಮ್ಮ ಮಾತು ಸರಿಯನಿಸಲಿಲ್ಲ. ನಾಳೆ ಮದುವೆಯಾಗಿ ಬರುವಳು ನಾನು ತಾನೇ? ನೀವು ಇಷ್ಟು ಹೇಳಿದಕ್ಕೆ ಅಪ್ಪ-ಅಮ್ಮ ಕುಷಿಯಾಗಿದ್ದಾರೆ. ಅವರು ನನ್ನ ಅಕ್ಕನಿಗೆ ಕಾರು-ಚಿನ್ನ ಕೊಟ್ಟಿದ್ದಾರೆ. ನೀವು ಬೇಡ ಅಂದರೆ ನಮಗೆ ಏನು ಕೊಡಲ್ಲ ಗೊತ್ತ? 'atleast  ನಿಮ್ಮ ಇಷ್ಟ' ಅಂತ ಹೇಳುವ ಮನಸ್ಸು ಕೂಡ ನಿಮಗೆ ಅಗಿಲ್ಲಿಲ್ವಾ? ". ಭಯಾನಕ ಅನಿಸಿತ್ತು;ಅವಳು ನನ್ನ ತರಾಟೆಗೆ ತೆಗೆದು ಕೊಂಡಿದ್ದಳು; ಮನಸ್ಸಿನ ಭಾವ ಜಾರಿತ್ತು. ಅವಳಿಗೆ ಹೇಳಿದ್ದು ಒಂದೇ ಉತ್ತರ... " ಮದುವೆಯ ಮುನ್ನ ಎಲ್ಲವು ನನ್ನ ನಿರ್ಧಾರ... ನಿನ್ನ ವಿಚಾರಕ್ಕೆ ನನ್ನಿಂದ ಉತ್ತರ ಇಲ್ಲ. ಆದರೆ ನಿನ್ನ ಅಪ್ಪ-ಅಮ್ಮನ ಬಗ್ಗೆ ನೀನೆ ಯೋಚಿಸ ಬೇಕು ಹೊರತು, ನಾನು ಏನು ಹೇಳಲು ಸಾಧ್ಯವಿಲ್ಲ" ಅಂದೆ. " ಹಾಗಲ್ಲರಿ... ನಾಳೆ ಮದ್ವೇಯಾದ್ರೆ ಖರ್ಚುಗಳು ಬಹಳ ಇರ್ತವಲ್ರಿ... ಸಿಗುದನ್ನು ಯಾಕೆ ಬಿಡ್ತಿರಿ" ಎಂದು ನನ್ನ ಸಮಾಧಾನಿಸಿದ್ದಳು. ಅವಳಿಗಾಗಿ ಕೊನೆಗೆ, "ನಿಮ್ಮ ಮಗಳಿಗೆ ಏನು ಬೇಕು ಅವಳಿಗೆ ಕೊಡಿ ...ನನಗಂತೂ ಏನು ಬೇಡ' ಎಂದು ಅವಳ ತಂದೆ ತಾಯಿಗೆ ನಾನು ಹೇಳುವಂತ ನಿರ್ಧಾರಕ್ಕೆ ನಾವಿಬ್ಬರು, ನೋಡಿದ ೬ ಗಂಟೆಯೊಳಗೆ, ಇಂತ ಒಪ್ಪಂದ ಮಾಡಿಕೊಂಡಿದ್ದೆವು. ಆದರೆ ಗ್ರಹಗಳು ಕೈ ಕೊಟ್ಟಿದ್ದರಿಂದ, ಒಪ್ಪಂದದೊಂದಿಗೆ ಮದುವೆಯು ಮುರಿದುಹೋಯಿತು. ನನ್ನ ವರದಕ್ಷಿಣೆ  ರಹಿತ ಮದುವೆಯ ನನ್ನ ವಿಚಾರದ originality  ಹಾಗೂ variginality ಎರಡು ಉಳಿಸಿಕೊಂಡು ಬಂದೆ.

ಇನ್ನು ಸಾಚಾತನ ಬೇಕಾ ? ವರದಕ್ಷಿಣೆ ಯಾಕೆ ಬೇಕು ? ಬೇಡ ಅನ್ನುದು ಅಷ್ಟು ಸುಲಭನಾ? ಯೋಚನೆಯಲಿರುವಾಗ ಇರುವಾಗಲೇ ಇನ್ನೊಂದು ಘಟನೆ ನನ್ನ ಹೃದಯ ಕಲುಕಿತು.

ಮೂರನೆ ಸಂಬಂಧ: ಅದು ನನ್ನ ಪರಿಚಯದವರೊಬ್ಬರು ಕುದಿರಿಸಿದ ಸಂಬಂಧ. ನನ್ನ ಬೇಡಿಕೆಯ ಮೇರೆಗೆ ಹುಡುಗಿಯ ಅಣ್ಣ ನನಗೆ ಕೆಲವು ಫೋಟೋ ಗಳನ್ನೂ ನನಗೆ ಇಮೇಲ್ ಮಾಡಿದ್ದರು. ಮೊದಲು ಆ ಫೋಟೋಗಳು ಹುಡುಗಿಯ ಇಮೇಲ್ ನಿಂದ ಅಣ್ಣನ ಇಮೇಲ್ ಗೆ ಬಂದಿದ್ದವು. ಅಣ್ಣ ಇಮೇಲ್ ಗೆ ರಿಪ್ಲೈ ಆಲ್ ಮಾಡಿ ನನ್ನ ಇಮೇಲ್ ಸೇರಿಸಿದ್ದ ರಿಂದ  ಹುಡುಗಿಯ ಇಮೇಲ್ ಅದರಲ್ಲಿ ಸೇರಿಕೊಂಡಿತ್ತು. ನಾನು ರಿಪ್ಲೈ ಮಾಡಿ, ಥ್ಯಾಂಕ್ಸ್ ಎಂದು ಕೆಳಗೆ ಮೊಬೈಲ್ ನಂಬರ್ ಸೇರಿಸಿದ್ದೆ. ಇದರಿಂದಾಗಿ ಹುಡುಗಿಗೂ ನನ್ನ  ಮೊಬೈಲ್ ನಂಬರ್ ಹೋಗಿತ್ತು.

ಈ ಸಂಬಂಧದ ಕುರಿತಂತೆ ಅಣ್ಣ, ಅಣ್ಣ ಜೊತೆಯಲ್ಲಿ ಮಾತುಕತೆಗಿಳಿದು, ಯಾವಾಗ ಬರುತ್ತಿರ?, ಎಲ್ಲಿ? ಅಂತೆಲ್ಲ ನಿರ್ಧಾರ ಮಾಡುವ ವಿಷಯದ ಕುರಿತಾಗಿ ಹೇಳುತ್ತಿದ್ದ. ಅದನ್ನೆಲ್ಲಾ ಕೇಳುತ್ತಲಿದ್ದ  ಹುಡುಗಿ ಮರುದಿನ ನನಗೆ ಮಾತನಾಡಬೇಕು ಎಂದು  msg  ಮಾಡಿದ್ದಳು. ಅಗಾ ಅವಳು ಹೇಳಿದ್ದೇನು ಗೊತ್ತೇ?
"ನೀವು ನನ್ನ ನೋಡಲಿಕ್ಕೆ ಬರುತ್ತಿರಂತೆ. ಅಣ್ಣ ನಿಮ್ಮ ಜೊತೆ ಮಾತನಾಡುತ್ತಿರುವುದು ನಾನು ಕೇಳಿದ್ದೇನೆ. ಆದರೆ ಒಂದು ವಿಷಯ. ನೀವು ಇಂಜಿನಿಯರ್ ಅಂತೆ. ನೀವು ವರದಕ್ಷಿಣೆ ಕೇಳಿಯೇ ಕೆಳುತ್ತಿರಿ.! ಆದರೆ ನಾನು ಪೂರ್ ಗರ್ಲ್. ನನಗೆ ತಂದೆ ಇಲ್ಲ. ನೀವು ವರದಕ್ಷಿಣೆ ಕೆಳುದೇ ಆದರೆ ಬರುದೆ ಬೇಡ...ನನ್ನ ಮದುವೆಗಾಗಿ ನನ್ನ ಅಣ್ಣ-ಅಮ್ಮ ಏನು ಬೇಕಾದ್ರೂ ಮಾಡಬಹುದು ಆದರೆ ನನಗೆ ಇಷ್ಟ ಇಲ್ಲ" ಎಂದು ಹೇಳುತ್ತಾ ಸಾಗಿದ ಹುಡುಗಿಗೆ ನಾನು ಮಾತನಾಡಲು ಸಾಧ್ಯವೇ ಇರಲಿಲ್ಲ. ಕೊನೆಗೂ," ನಾನು ವರದಕ್ಷಿಣೆಯ ಕುರಿತಾಗಿ  ಏನು ಹೇಳಿಯೇ ಇಲ್ಲ.. ನೀವು  ಯಾಕೆ ಇದನೆಲ್ಲ ಹೇಳುತ್ತಿರಿ? " ಎಂದು ಕೇಳಿದಾಗ, ಹುಡುಗಿ ಗದ್ಗದಿತಲಾಗಿದ್ದಳು... " ಹಿಂದೆ ನನಗೆ ಇಂಜಿನಿಯರ್ ಪ್ರಪೋಸಲ್ ಬಂದಿತ್ತು. ಇಷ್ಟವು ಆಗಿತ್ತು. ಆದರೆ ಮದುವೆ ಆಗುವ ಲೆವೆಲ್ ಗೆ ಬಂದಾಗ ಬಹಳ ದೊವ್ರಿ ಕೇಳಿದ್ರು. ನಮ್ಮ ಅಮ್ಮ ಮನೆ ಮಾರೋಣ ಅಂದು ಹೇಳಿದ್ರು... ನಾನು ಆ ಮದುವೆ ಬೇಡ ಅಂತ ಹೇಳಿದೆ".

ನನ್ನ ಹೃದಯದಲ್ಲಿ ರಕ್ತವೇ ನಿಂತತೆ ಆಯಿತು. ಹುಡುಗಿಯೊಬ್ಬಳು ಒಂದು ಮನೆಯನ್ನು ಕಟ್ಟಲು ಇನ್ನೊಂದು ಮನೆಯನ್ನು ವಿನಾಶಕ್ಕೆ ತಳ್ಳಬೇಕಾದ ಪರಿಸ್ಥಿತಿ ಸಮಾಜವೇ ನಿರ್ಮಿಸುತ್ತದೆ.

ಯಾವುದು ಸರಿ? ವರದಕ್ಷಿಣೆ ಹುಡುಗನ ಆರೋಗ್ಯದ  ಸಂಕೇತವೇ? ವರದಕ್ಷಿಣೆ ಹೆಂಡತಿಯೆಂಬ ಜೀವಿ ಬಂದಾಗ ಆಗಬಹುದಾದ ಖರ್ಚುಗಳಿಗೆ ಕೊಡುವ ಬಾಬತ್ತೆ ? ಇಲ್ಲ ಬಡ ಹೆಣ್ಣು ಮಕ್ಕಳ ಕಣ್ಣಿರೆ ? ಕಾನೂನು ಹೇಗೆ ಇದ್ದರು, ಮನುಷ್ಯನ ಸಮಾಜದ ರೀತಿ-ನೀತಿಗಳೇ ಸಮಾಜವನ್ನು ಆಳುತ್ತವೆ. ನಾನು ಇದೆ ಸಮಾಜಕ್ಕೆ ಒಳಪಟ್ಟವನು. ನನಗೂ ವರದಕ್ಷಿಣೆ ಬೇಕು. ನಾಳೆ ನನ್ನ ಬೆಲೆ ಎಷ್ಟು ಅಂತ ebay ಯಲ್ಲಿ ನೋಡಬಹುದು..! ಯಾಕಂದ್ರೆ, ನಾನು ಈ ಘಟನೆಗಳಿಂದಾಗಿ ಬದಲಾಗಿದ್ದೇನೆ.

ಛೆ...ಈ ಬದುಕೇ..!

Saturday, December 21, 2013

ಹಳ್ಳಿ ಹುಡುಗ

ಹಳ್ಳಿ ಹುಡುಗ.
     ನೀವು ಯಾವತ್ತಾದರೂ, 'ಲೇ ಹಳ್ಳಿ  ಹೈದ' ಅಂತ ಬೈದಿದ್ದಿರಾ? ಅಥವಾ ಹಿಗಂತಾನು ಜನ ಬೈತಾರೆ ಅಂತ ನಿಮಗೆ ಗೊತ್ತು ತಾನೇ? ಹೌದು, ನಾವು ಬಯ್ಯುವ ಶಬ್ಧಗಳಲ್ಲಿ ಹಳ್ಳಿ ಎಂಬ ಶಬ್ದ ಸೇರಿಸಿ ಬಯ್ಯುವದರ ಹಿಂದೆ ಹಳ್ಳಿಯ ಕುರಿತಾಗಿ, ಹಳ್ಳಿಯ ಜನರ ಕುರಿತಾಗಿ ಇರುವ ಕೀಳು ಭಾವನೆ ಎತ್ತಿ ತೋರಿಸುತ್ತದೆ. ಹಳ್ಳಿಯ ಬಗ್ಗೆ, ಹಳ್ಳಿತನ ಬಗ್ಗೆ ಯಾಕೆ ನಮಗೆ ಅಷ್ಟೊಂದು ಆಕ್ರೋಶ?

ನಾನು ಹಳ್ಳಿಯ ಹುಡುಗ. ಯಾವ ಊರಲ್ಲಿ ರಸ್ತೆ ಇರಲಿಲ್ಲ;ವಿದ್ಯುತ ಇರಲಿಲ್ಲ; ಅಲ್ಲಿಂದ ಬಂದವನು.ಎಲ್ಲರ ಮಧ್ಯದಲ್ಲಿ ನಿಂತಾಗ ಡಿಗ್ರಿ ಯಿಂದ ಇಂಜಿನಿಯರ್ ಅದರೂ, ಬದುಕುತ್ತಿರುವುದು  ಬೃಹತ್ ನಗರದಲ್ಲಾದರು ನನ್ನ ಮನಸ್ಸಿನಲ್ಲಿ ಅಚ್ಚು ಹಾಕಿದಂತ 'ಹಳ್ಳಿತನ' ಬಿಡಲು ಮನಸಾಗುವುದಿಲ್ಲ. ಹಳ್ಳಿತನ ಬಿಟ್ಟು ಹೊರಬಂದು ನಗರದ ಬದುಕಿನೊಂದಿಗೆ ನಾನು ಸೇರಿದ್ದೇನೆ ಎಂದು ತೋರಿಸಿಕೊಳ್ಳಲು ಬಹಳ ಪ್ರಯತ್ನ ಮಾಡಿದ ಮೇಲೆ, ಕೆಲವೊಮ್ಮೆ ನಾನು ಎಲ್ಲೋ ನನ್ನ ಪೂರ್ವ ಪರ ಕಳೆದು 'ನಾನು', 'ನನ್ನದು' ಎಂಬ ಐಡೆಂಟಿಟಿ ಕಳೆದು ಕೊಳ್ಳುತ್ತಿದ್ದೇನೆ ಅನಿಸುತಿತ್ತು.ಆದರೆ ಅದಕ್ಕೊಂದು ದಿನ ಉತ್ತರವೂ ಸಿಕ್ಕಿದೆ.

'ಹಳ್ಳಿತನ' ಎನ್ನುದು ಒಂದು ಕೆಟ್ಟ ನಡತೆಯಲ್ಲ;ಅದು ಅಜ್ಞಾನದ ಸಂಕೇತ ಅಲ್ಲ; ಅದು ನಿಸರ್ಗದ ಜೊತೆಯಲ್ಲಿ ಬದುಕುವ ಪರಿ. ಹಳ್ಳಿಯ ಜನತೆಗೆ ಏನಿಲ್ಲ ಅಂದರು ನಿಸರ್ಗದ ಕುರಿತಾಗಿ ಬಹಳ ತಿಳುವಳಿಕೆ ಇರುತ್ತದೆ. ವೈಜ್ಞಾನಿಕವಾಗಿ ಹವಾಮಾನ ವರದಿ ನಿಡುವ ನಮ್ಮ ಹವಾಮಾನ ಇಲಾಖೆಗಿಂತ ಅದೆಷ್ಟೋ ಬಾರಿ ಹಳ್ಳಿಯ ಜನ ಯಾವುದೊ ಮರದ ಎಲೆಗಳನ್ನು, ಕಾಯಿಗಳ ಸಂಖೆಯನ್ನು ನೋಡಿ ಹೇಳುವ ಮಳೆಯ ವರದಿ  ಅದೆಷ್ಟೋ ನಿಖರವಾಗಿರುತ್ತದೆ. ಬೆಂಗಳೂರಿನಲ್ಲಿ ಕನ್ನಡ ಕಾವಲು ಸಮಿತಿಗಳು(ಕನ್ನಡ ಪರಿಷತ್ ನಂತಹ ಸಂಸ್ಥೆಗಳು) ಸಾವಿರಾರು ಇವೆ. ಆದರೆ ಹಳ್ಳಿಗಳಲ್ಲಿ ಕನ್ನಡ ಭಾಷೆಯನ್ನೂ, ಅದರ ಜನಪದ ಕಲೆಯನ್ನು ಉಳಿಸಿಕೊಂಡು ಬರುತ್ತಿರುದು ಹಳ್ಳಿಯ ಮುಗ್ದ ಮನಸ್ಸುಗಲಿಂದಲೇ.( ಕನ್ನಡದ ನಟ-ನಟಿಯರ ಬಗ್ಗೆ ನನಗಂತೂ ಅದೆಷ್ಟೋ ನೋವು ಇದೆ. ಕನ್ನಡ  ಭಾಷೆಯನ್ನೂ ತಮ್ಮ ದುಡ್ಡಿನ ಮೂಲವಾಗಿಸಿ ಕೊಂಡಿರುವ ಇವರಿಗೆ, TV  ಕ್ಯಾಮೆರಾದ ಮುಂದೆ ಮಾತ್ರ ಇಂಗ್ಲೆಂಡ್ ನಿಂದ ಎರವಲು ಪಡೆದ ಜೆವಿಗಳಂತೆ ವರ್ತಿಸುತ್ತಾರೆ.). ಹಳ್ಳಿಗರ ಇನ್ನೊಂದು ವಿಶೇಷ ಅಂದರೆ ನಿಸರ್ಗದತ್ತವದ ಗಿಡಮೂಲಿಕೆಗಳು. ಬಹಳಷ್ಟು ರೋಗಗಳಿಗೆ ಆಸ್ಪತ್ರೆಗಳಲ್ಲಿ ಸಿಗಲಾರದ ಮದ್ದುಗಳು ಹಳ್ಳಿಗಳಲ್ಲಿ ಸಿಗುತ್ತಿವೆ. ಉದಾಹರಣೆಗೆ ಅಂಕೋಲದ ಬೆಲಾಂಬರ್ ಅಂತ ಹಳ್ಳಿಯಲ್ಲಿ ನಿಡುವ ಮದ್ದು ಪಾರ್ಶ್ವವಾಯು ಪಿದಿತರಿಗೆ ವರದಾನ. ಅದೆಷ್ಟೋ ಹಾವು-ಚೇಳು ಕಡಿತಗಳಿಗೆ ಹಳ್ಳಿಗಲ್ಲಿ ಮದ್ದುಗಳಿವೆ.

ಆದರೆ ನಮ್ಮ ಶಿಕ್ಷಣ ವ್ಯವಸ್ತೆಯಲ್ಲಿ ಒಂದು ದೊಡ್ಡ ದುರಂತವೇ ನಡೆದು ಹೋಗಿದೆ. ಅದು ಏನು? (ಇಲ್ಲಿದೆ ಓದಿ-http://epapervijayavani.in/Details.aspx?id=10503&boxid=142241281). ಶಿಕ್ಷಣದ ಉದ್ದೇಶ ಹಣದ ಸಂಪಾದನೆಯಾಯಿತೆ ಹೊರತು ನಿಜವಾದ ನಮ್ಮ ಸಂಸ್ಕೃತಿಯ  ಪುನರುಜ್ಜೀವನ ಆಗಲಿಲ್ಲ. ಅದಕ್ಕೆ ನಾವು ಪಶ್ಚಾತಾಪ ಪದಬಹುದೇ ಹೊರತು, ಧಿಕ್ಕನ್ನು ಬದಲಾಯಿಸಲು ಸಾಧ್ಯವಿಲ್ಲ. ಹೋಗಲಿ ಬಿಡಿ, ಅಂತು ಹಳ್ಳಿಯಿಂದ ಬೆಂಗಳೂರ್ ನಂತಹ ನಗರಗಳಿಗೆ ಬಂದಿದ್ದೇವೆ.

ಆದರೆ ಇಲ್ಲಿ ಹಳ್ಳಿತನ ಅಂದರೆ ಪೆದ್ದತನವೆಂದೆ ಅರ್ಥ ಕಲ್ಪಿಸುತ್ತಾರೆ. ಯಾವನಿಗೆ ಕಾಫಿ ಮಷೀನ್ ಆಪರೇಟ್ ಮಾಡಲು ಬರುವುದಿಲ್ಲವೋ, ಯಾವನಿಗೆ ಲಿಫ್ಟ್ ನಂಬರ್ ಗೊತ್ತಗುವುದಿಲ್ಲವೋ, ಯಾವನು ಇಡ್ಲಿಯನ್ನು ಸ್ಪೂನ್ ಬಳಸಿ ತಿನ್ನುವುದಿಲ್ಲವೋ, ಯಾವನು ಮಾತಾಡುವಾಗ ಇಂಗ್ಲಿಷ್ ಬಳಸುವುದಿಲ್ಲವೋ, ಯಾವನಿಗೆ ಪಿಜ್ಜಾ ಆರ್ಡರ್ ಮಾಡಲು ಬರುವುದಿಲ್ಲವೋ, ಯಾವನು ಪೆಪ್ಸಿ ಬೇಡ ಅನ್ನುತ್ತಾನೋ ಅವನೇ ಹಳ್ಳಿಯ ಪೆದ್ದ ಅನ್ನುತ್ತಾರೆ. ನಿಜವಾಗಿ ಹಳ್ಳಿಯ ಹುಡುಗ ಅದನ್ನೆಲ್ಲಾ ತಿಳಿದಿರಲೇ ಬೇಕಾ? ಮನುಷ್ಯ ಮಾಡಿದ ಮಷೀನ್ಗಳು ದಿನಕ್ಕೊಂದು ರೀತಿ ಬದಲಾಯಿಸುವಾಗ ಅವನೆಲ್ಲ ತಿಲಿದರಲೇ ಬೇಕು ಅನ್ನುವುದು ಶುದ್ಧ ತಪ್ಪು ಅಥವಾ ಇಂತ ಒಂದು ಮಷೀನ್ ಬಗ್ಗೆ ಗೊತ್ತೇ ಇಲ್ಲ ಎಂದು  ನನ್ನಂತ ಹಳ್ಳಿಯ ಹುಡುಗ, 'ಅಯ್ಯೋ ನನಗೆ ಗೊತ್ತಿಲ್ಲ ಅಲ್ವ' ಅಂತರಿಕವಾಗಿ ನೊಂದು ಕೊಳ್ಳಬೇಕಾದ ಅಗತ್ಯವಿದೆಯಾ? 

ಬೆಂಗಳೂರಿಗೆ ನಾನು ಮೊದಲು ಬಂದಾಗ ಬಹಳಷ್ಟು ವಿಷಯಗಳು ಗೊತ್ತಿರಲಿಲ್ಲ. ಬೇಸ್ಮೆಂಟ್ ಎಂಬ ಪದ  ಹೊಸದಾಗಿತ್ತು. ಆದರೆ ಗ್ರೌಂಡ್ ಫ್ಲೋರ್ ನ ಕೆಳಗಿನ ಫ್ಲೋರ್ ಗೆ ಬೇಸ್ ಮೆಂಟ್ ಎಂದು ಕರೆಯುತ್ತಾರೆ ಎಂದು ಸ್ವಲ್ಪ ಮಟ್ಟಿಗೆ ಅರಿವು ಇತ್ತು. ಆದರೆ ಅದೊಂದು ದಿನ ಬೇರೆ ಕಂಪನಿ ಬಿಲ್ಡಿಂಗ್ ಗೆ ಹೋದಾಗ, ಅಲ್ಲಿ ಅಪ್ಪೆರ್ ಬೇಸ್ಮೆಂಟ್, ಲೋವರ್ ಬೇಸ್ಮೆಂಟ್ ಎಂದಿತ್ತು. ಅಪ್ಪೆರ್ ಬೇಸ್ಮೆಂಟ್ ನಲ್ಲಿ ಕ್ಯಾಂಟೀನ್ ಇತ್ತು. ನನ್ನ ಪ್ರಕಾರ ಲೋವರ್ ಬಸ್ಮೆಂತ್ ಗ್ರೌಂಡ್ ಫ್ಲೋರ್ ನ  ಕೆಳಗೆ ಇದ್ದರೇ, ಅಪ್ಪರ್ ಬೇಸ್ಮೆಂಟ್ top most ಫ್ಲೋರ್ ಗಿಂತ ಮೇಲೆ ಇರಬೇಕು. ಹೀಗಾಗಿ ೧೦ ಅಂತಸ್ತಿನ  ಬಿಲ್ಡಿಂಗ್ ನ ೧೦ ನೆ ಫ್ಲೋರ್ ಗೆ ಹೋಗಿ ಅಪ್ಪರ್ ಬೇಸ್ಮೆಂಟ್ ಹುಡುಕಾಡಿದೆ. ಸಿಗಲಿಲ್ಲ; ಬ್ರೇಕ್ಫಾಸ್ಟ್ ಮಾಡಿರಲಿಲ್ಲ. ನನ್ನ ಹಳ್ಳಿತನ ಬಯಲಾದಿತು ಎಂದು ಕೇಳಲು ಸಾಧ್ಯವಾಗದೆ ಮನೆಗೆ ಬಂದು  ಗೆಳೆಯರಿಗೆ ಕೇಳಿದ್ದೆ.
ನನ್ನ ಹಾಗೆ, ಇಂಥ ತೊಳಲಾಟ ಬಳಷ್ಟು  ಗೆಳೆಯರು ಕೂಡ ಅನುಭವಿಸಿದ್ದರಂತೆ. ಆದರೆ ಹಾಗೆ ನಾಚಿಕೆಯಾಗಿ ಯಾರೊಂದಿಗೂ ಹೇಳಿಕೊಳ್ಳಲಿಲ್ಲ ಅಂತೆ!

ಆದರೆ ಅದೊಂದು ದಿನ, ಬೆಂಗಳೂರಿನ BMS  ಕಾಲೇಜಿನಲ್ಲಿ, 'ಹೊಸ ಕಾಲದ ವೈರುಧ್ಯಗಳು' ಎಂಬ ಚರ್ಚ ಗೋಷ್ಠಿಯಲ್ಲಿ, ಹರೀಶ್ ಹಂದೆಯವರು ಹಳ್ಳಿತನ ಅನ್ನುವುದು ಅಜ್ಞಾನವಲ್ಲ. ಅದು ಒಂದು ಬದುಕುವ ರೀತಿ.ಅಲ್ಲೂ ಮೌಲ್ಯಗಳಿವೆ ಎಂದಾಗ, ನನ್ನ ಮನಸ್ಸಿನಲ್ಲಿದ್ದ ಹಳ್ಳಿಯ ಎಂಬ ಪರದೆ ಹರಿದಿತ್ತು.

ಯಾರು ಏನು ಅನ್ನಲಿ, ಇಡ್ಲಿ ಬರಿಗೈಯಲ್ಲಿ ತಿನ್ನುತ್ತೇನೆ. ನೇರವಾಗಿ ಅಪ್ಪರ್ ಬೇಸ್ಮೆಂಟ್ ಯಾವುದು ಎಂದು ಕೇಳುತ್ತೇನೆ. ನನ್ನ ತನ ಹಳ್ಳಿತನ.