Sunday, September 29, 2013

ರವಿ ಮತ್ತು ಸಿಂಹ...!

ನಾನು ಬರೆಯುತ್ತಿದ್ದದು ರವಿ ಬೆಳೆಗರೇ ಹಾಗೂ ಪ್ರತಾಪ್ ಸಿಂಹರ ಬಗ್ಗೆ. ಅವರಿಬ್ಬರೂ ಒಂದೇ ನಾಣ್ಯದ ಎರಡು ಮುಖಗಳು(ಯಾವತ್ತು ಒಬ್ಬರನೊಬ್ಬರು ಒಪ್ಪಿಕೊಲ್ಲಲಾರರು ಎನ್ನುವ ಅರ್ಥದಲ್ಲಿ).ಆದರೆ ನನ್ನ ಬದುಕಿನಲ್ಲಿ ಒಂದು ಒಳ್ಳೆಯ ಕಲ್ಪನೆಗಳ ಹಿಂದೆ ಈ ಲೇಖಕರ  ಭಾಷೆ, ನುಡಿ ಹಾಗೂ ಒಂದು ಬಗೆಯ ಗೌರವವಿದೆ.

ನಾನು PUC  ಮುಗಿಸಿದ ಬಳಿಕ ಮೆಡಿಕಲ್ ಸೇರಬೇಕೆಂಬ ತುಂಬಾ ಆಸೆ ಇತ್ತು. CET ಯಲ್ಲಿ ಒಳ್ಳೆಯ ರಾಂಕ್ ಗಳಿಸುವ ಮೂಲಕ ಬಳ್ಳಾರಿಯ ಮೆಡಿಕಲ್ ಸೀಟ್ ಸಿಕ್ಕಿದ್ದರು ಸೇರಲು ಸಾಧ್ಯವಾಗದೆ ನಂತರ ಕೆಲವು ಮಹನಿಯರ ಕೃಪೆಯಿಂದ(ಮುಂದೊಂದು ದಿನ -ಅವರಿಗಾಗಿ ಹೊಸ ಲೇಖವನ್ನೇ ಬರೆಯುತ್ತೇನೆ.) ಇಂಜಿನಿಯರಿಂಗ್ ಸೇರಿ, ಜಾಬ್ ಸಿಕ್ಕಿ ಆರು ವರ್ಷಗಳೇ ಕಳೆದು ಹೋದವು.

ಹೀಗಿರುವಾಗ, ನಾನು ಮೆಡಿಕಲ್ ಸೇರಲಾಗದ ನೋವು ನನಗೆ ಇಂಜಿನಿಯರಿಂಗ್ ದಿನಗಳಲ್ಲಿ ಬಹಳ ಕಾಡಿತ್ತು. ಆ ದಿನಗಳ, ಮೆಡಿಕಲ್ ಎಂಬ ನೋವಿನ ಪರಿಣಾಮವಾಗಿ ನನ್ನಲ್ಲಿ ಹುಟ್ಟಿದ ಹುಚ್ಚು ಕಲ್ಪನೆಯೆಂದರೆ ನಾನು ಡಾಕ್ಟರ ಒಬ್ಬಳನ್ನೇ ಮದುವೆಯಾಗಬೇಕು ಎಂದು. ಇಂಜಿನಿಯರಿಂಗ್ ಮುಗಿಯುವತನಕವು ಆ ಕನಸ್ಸು ನನ್ನ ರಕ್ತದಲ್ಲಿ ಇದ್ದೆ ಇತ್ತು. ಆದರೆ ಇಂಜಿನಿಯರಿಂಗ್ ಮುಗಿಸಿ, ಜಾಬ್ ಸಿಕ್ಕಿದ ಮೇಲೆ, ಅಂತ ಹುಡುಗಿಯೊಬ್ಬಳು ಸಿಗುವಳೇ ? ನನಗಾರಾದರು ತಿಳಿದವರು ಇರುವರೇ ಇಂತಲ್ಲ ಲೆಕ್ಕ ಹಾಕಿದಾಗ ಮೆಡಿಕಲ್ ಹುಡುಗಿಯೊಬ್ಬಳು ಈ ಬಡಪಾಯಿಗೆ ಸಿಗುತ್ತಲೇ ಅನ್ನುವ ನಂಬಿಕೆಯೇ ಬರಲಿಲ್ಲ. ಆದರೆ ನನ್ನ ಅಜ್ಜ, ನನ್ನ ಅಪ್ಪ ತನ್ನ ಜೀವಿತಾವಧಿಯಲ್ಲಿ ದುಡಿದುದ್ದನ್ನು ಒಂದೇ ವರ್ಷದಲ್ಲಿ ದುಡಿಯಲು ಸಾಧ್ಯವಿರುವ ನಾನು, ಯಾಕೆ ಒಂದು ಒಳ್ಳೆಯ ಹುಡುಗಿಯನ್ನು ನೋಡಿ ಅವಳಿಗೆ ಮೆಡಿಕಲ್ ಓದಿಸಬಾರದು ಎಂದು ಆಲೋಚನೆಗೆ ಬಿದ್ದೆ. ಆಲೋಚನೆಯೇನೋ ಒಳ್ಳೆಯದು.. ಆದರೆ ಮದುವೆಗೆ ಒಪ್ಪಿಸಿ ....ನಾನು ಸಹಾಯ ಮಾಡುತ್ತೇನೆ ಎನ್ನುವುದು ಹೆಣ್ಣನ್ನು ಕೊಂಡು-ಕೊಂಡಂತೆ, ಮತ್ತು ಸಂಸ್ಕೃತಿಯ ಭಾಷೆ  ದೃಷ್ಟಿಯಿಂದ ಸರಿಯಲ್ಲ ಎನ್ನುವ  ನೋವು ನನಗೆ ಧರ್ಮ ಸಂಕಟಕ್ಕೆ ತೊಡಗಿಸಿತ್ತು. ಆದರು, ಮದುವೆಯ ಬಗ್ಗೆ ಸ್ವಲ್ಪವೂ ಓಪನ್ ಆಗಿ ಮಾತನಾಡಲಾಗದ ಆ ದಿನಗಳಲಿ ನನ್ನ ಗೆಳೆಯನೊಬ್ಬನಿಗೆ ನನ್ನ ಕತೆ ವಿವರಿಸಿದಾಗ, " ಹುಚ್ಚು ಕಲ್ಪನೆ....ಸಹಾಯ ಬೇಕಾದರೆ ಮಾಡು ....ಆದ್ರೆ ಮದುವೆ ಮತ್ತು ಸಹಾಯ ಬೇರೇನೆ ಇರಬೇಕು..." ಹೇಳಿದ್ದಲ್ಲದೆ, ರವಿ ಬೆಳೆಗೆರೆಯವರ "ಹೇಳಿ ಹೋಗು ಕಾರಣ" ಕಾದಂಬರಿಯನ್ನು ಓದುವಂತೆ ಸಲಹೆ ನೀಡಿದ. "ಹೇಳಿ ಹೋಗು ಕಾರಣ" ಕಾದಂಬರಿ ಹೀಗೆ ಒಬ್ಬ ಮೆಡಿಕಲ್ ಹುಡುಗಿಯನ್ನು ಓದಿಸಿದ ಒಬ್ಬ ಹಳ್ಳಿಯ ಬಡ ಹುಡುಗನ ದುರಂತ ಜೀವನವನ್ನು ಅಧರಿಸಿರುವಂತ್ತದ್ದು. ಕೆಲವೊಮ್ಮೆ ಸಾಹಿತ್ಯ-ಪುಸ್ತಕಗಳು ಬದುಕಿನಲ್ಲಿ ಎಂಥ  ಭಾವನಾತ್ಮಕ ವಿಚಾರಗಳಿಗೆ ಉತ್ತರವನ್ನು , ಸಮಾಧಾನವನ್ನು ಕೊಡುತ್ತವೆ ಅನ್ನುವುದುಕ್ಕೆ ಇದು ಒಳ್ಳೆಯ ಉದಾಹರಣೆ.

ಈ ಕಾದಂಬರಿಯ ಮೂಲಕ ನಾನು ರವಿ ಬೆಳೆಗೆರೆಯನ್ನು ಬಹಳ ಪ್ರೀತಿಸಿದೆ. ನಾನು ಅವರ ಬಗ್ಗೆ ಇರುವ "ಹಾಯ್ ಬೆಂಗಳೂರು" ಮೂವಿ ನೋಡಿದೆ. ಮುಕ್ತ ಧಾರವಾಹಿಯಲ್ಲಿ ನ್ಯಾಧಿಶರಾಗಿಯು ನೋಡಿದೆ. ಅವರ 'ಓ ಮನಸ್ಸೇ...!" (ಈಗ ಬಂದಾಗಿದೆ) ಪುಸ್ತಕಕ್ಕೆ  ಪ್ರತಿತಿಂಗಳ ಚಂದದಾರನು ಆಗಿಬಿಟ್ಟೆ. ತಾನು ಪ್ರೀತಿಸಿದ ಹುಡುಗಿಗಾಗಿ ೧೭ ವರ್ಷ ಶೂನ್ಯ ಸಂಪಾದನೆಯೊಂದಿಗೆ, ಶೂನ್ಯ ಲೋಕವನ್ನೇ ಸೃಷ್ಟಿಸಿ,ಕುಡಿತ-ಸಿಗರಟ್ ಗೆ ಬಲಿಯಾಗಿಕಳೆದು ಹೋದ ಆಯುಷ್ಯದ ಕುರಿತ  ಅವರ ಜೀವನಗತಿ ಓದಿ ಮರುಕ ಹುಟ್ಟಿತ್ತು

ದುರದೃಷ್ಟ ವಶಾತ್, ಅವರ ಬದುಕಿನ ಪ್ರತಿಯೊಂದು ಘಟ್ಟವನ್ನು ಅವಲೋಕಿಸುವಾಗ ಅವರು ವಯಕ್ತಿಗವಾಗಿ ಬದುಕಿನ  ಮೌಲಿಕ ವಿಚಾರಗಳಲ್ಲಿ ಕೆಲೋಮ್ಮೆ 'ಸರಿಯಲ್ಲ' ಎನ್ನುವ ವಿಚಾರಗಳನ್ನು ಓದಿದ ಮೇಲೆ ನಾನು ಅತಿಯಾಗಿ ನೋವು ಅನುಭವಿಸಿದೆ. ಇವರು ಬರೆಯುವುದಕ್ಕೂ ಇವರು ಇರುವುದಕ್ಕೂ ವತ್ಯಾಸವಿದೆ ಎಂದಾಗ ಅವರ ಸಾಹಿತ್ಯದ ನಂಬಿಕೆ ಕಳೆದುಕೊಂಡದ್ದು ಸತ್ಯ. ಪ್ರತಿಯೊಬ್ಬ ವ್ಯಕ್ತಿ, ಸಾಹಿತಿ ಬರೆದ ಲೇಖನ ಹಾಗೂ ಅವನ ಜೀವನದ ರೀತಿ-ನೀತಿಗಳು ತುಲನಾತ್ಮವಾಗಿರಬೆಕು ಎಂದು ಬಯಸುತ್ತಾನೆ. ಹೀಗಾಗಿ ನನ್ನ ಬದುಕಿನಲ್ಲಿ ಒಂದು  ಹುಚ್ಚು ಕಲ್ಪನೆಗೆ ಉತ್ತರ ನೀಡಿದ ಲೇಖಕ, ಹೆಚ್ಚು ದಿನ ಆದರ್ಶ ಲೇಖಕನಾಗಿ ಇಲ್ಲದಿರುವುದು ದುಖದ ವಿಷಯ.

ಸಿಂಹ... ನನ್ನ ಬದುಕಿನಲ್ಲಿ ಬರೆಯುವುದನ್ನು ಕಳಿಸಿದ ಗುರು. ಎಲ್ಲರು ಬರೆಯುತ್ತಾರೆ, ಎಲ್ಲರು ಮಾತನಾಡುತ್ತಾರೆ...ಆದರೆ ಅದಕ್ಕೊಂದು ಶೈಲಿ ಬೇಕು. ಅದು ಪ್ರತಾಪರಲ್ಲಿದೆ. ಯಾವುದೇ ಲೇಖನ ಓದಲು ಕುಳಿತರೆ... ಲೇಖನವೇ ನಮ್ಮನ್ನು ಓದಿಸುವಂತೆ ಪ್ರೆರಿಪಿಸುತ್ತದೆ.

ರವಿ-ಸಿಂಹ ಜಗಳ ಹೊಸದೇನು ಅಲ್ಲ. ಸಿಂಹದ ನೈತಿಕತೆ, ಮದುವೆಯ ಮುಂಚೆ ಕಾಲು ಕಳೆದು ಕೊಂಡ ಪ್ರೇಯಸಿಯನ್ನು  ಒಂದಿಷ್ಟು ನೋವು ಇಲ್ಲದೆ ಒಪ್ಪಿ ಮದುವೆಯಾಗಿ ಜೀವನ ಮಾಡುತ್ತಿರುವುದು ನನಗೆ ಬಹಳ ಹೆಮ್ಮೆ ಅನಿಸಿತು. ನೈತಿಕತೆಯ ಮುಂದೆ ರವಿ ತಗ್ಗಿ ಹೋದಾಗ, ಸಿಂಹ ನನ್ನ ಹೃದಯದಲ್ಲಿ  ನೆಲೆಸಿದ. ಆದರು ಇಬ್ಬರ ಜಗಳ  ಮಾಡುತ್ತಿರುವುದು ನನಗೆ ಸರಿಯಲ್ಲ ಅನಿಸಿತ್ತು.  'ಗಂಡ-ಹೆಂಡತಿಯ ಜಗಳದಲ್ಲಿ ಕೂಸು ಬಡವಾಯಿತ್ತಂತೆ ' ಅನ್ನುವಂತೆ ಇವರ ಜಗಳ ನನಗೆ ನೋವು ಕೊಟ್ಟಿತ್ತು.  ಕಾರಣ ಇಷ್ಟೇ- ಒಬ್ಬ ಸಾಹಿತಿ ಅಂದಾಗ ಒಳ್ಳೆಯ ನಡತೆ, ಗಾಂಭಿರ್ಯತೆ, ನೈತಿಕ ಸ್ವಚತೆ  ಓದಾಗ ಅಪೇಕ್ಷೆ ಪಡುತ್ತಲಿರುತ್ತಾನೆ. ಇದಕ್ಕೆ ಭಂಗವಾದಾಗ ನೋವು ಸಹಜವೇ.

No comments:

Post a Comment