Tuesday, October 2, 2012

ಹೆಂಡತಿಗೆ ನೌಕರಿ ?

ಹೆಂಡತಿ ಒಂದು ಆಳೇ ?
ಹೆಂಡತಿಗೆ ಸಾಲರಿ ಕೊಡಬೇಕು- read  more  in  http://www.dw.de/dw/article/0,,16253266,00.html .  ನನಗೆ ಆಶ್ಚರ್ಯ ಆಗಿತ್ತು. ಈಗ ಇದು old  ನ್ಯೂಸ್ ಬಿಡಿ. ಆದರೆ ಇದೊಂತರ ಹೇಳಲು ಆಗದ  ಆದರೆ ಸುಮ್ಮನಿರಲು ಸಾಧ್ಯವಿರದ ವಿಷಯ. ಹೆಂಡತಿ ಆಳೆಂದು ಗುರುತಿಸುವ ಯೋಜನೆಯು ಹೆಂಡತಿಯಾಗಿ ಬರುವ ಹೆಣ್ಣು ಮಕ್ಕಳ ಹಣೆಬರಹ ಹೇಗೆ ಬದಲಾಯಿಸಬಲ್ಲದು ಯೋಚಿಸಿದಾಗ ಕೆಲವು ದಿನನಿತ್ಯ ನಡೆಯಬಹುದಾದ ವಿಷಯಗಳು:

೧) ಹೆಂಡತಿ: ರೀ ಏಳ್ರಿ, ಸಮಯ ಆಗ್ತಾ ಇದೆ..!
    ಗಂಡ: ಏಯ್, ನಿನ್ ಯಾರೇ ನಂಗೆ ಹೇಳಕೆ...ನಿನ್ನ ಕೆಲಸ ಎಸ್ಟ್ ಇದೆ ಆಸ್ಟ್ ಮಾಡು..!
೨) ಹೆಂಡತಿ: ರೀ ಮಕ್ಕಳಿಗೆ ನೋಟ್ ಬುಕ್ ಬೇಕ್ರಿ...ಆಫೀಸ್ ನಿಂದ ಬರುವಾಗ ತರ್ತಿರಾ?
      ಗಂಡ: ಅವ್ ಏನ್ ನನ್ನ ಒಬ್ಬಂದೆ  ಮಕ್ಕಳಾ ? ನಿನ್ pay  ಮಾಡಿದ್ನಲ್ಲ...ತರ್ಸ್ಕೋ?
೩) ಹೆಂಡತಿ: ಯಾಕ್ರಿ ನಂಗೆ ಮನೆ ಮುಂದೆ ಎಲ್ಲ ಬಯ್ತೀರಾ? ನಾನು ನಿಮ್ಮ ಹೆಂಡತಿ ರೀ...ನಿಮ್ಮ ಪ್ರೀತಿಯ ...? ....ನಾನು ಅಪ್ಪನ ಮನೆಗೆ ಹೋಗಬೇಕಾಗುತ್ತೆ?
    ಗಂಡ: ಒಹ್, ಹೋಗೆ.... ಹೋಗೆ .... ಆಳಿಗೇನು ಕೊರತೆಯ ? ಮತ್ತೊಬ್ಬಳು ಬರುತ್ತಾಳೆ....
೪) ಹೆಂಡತಿ: ಅವರದು ತಪ್ಪಲ್ಲ... ಎಷ್ಟಂದ್ರು ನಾನು ಆಳೇ.....ನಮ್ಮ ಸರ್ಕಾರ ನೀಡಿದ ಪಟ್ಟ..!(ದುಖಿಸುತ್ತಾಳೆ).

ಗಂಡ ಹೆಂಡತಿ ಎನ್ನುವ ಸಂಬಂಧ -ಹಣಕಾಸಿನ ಸ್ವಲಂಬನೆ ಅನ್ನುವ ಪರಿಕಲ್ಪನೆಯ  ಆಧಾರದ ಮೇಲೆ  ಆಳು-ಒಡೆಯ ಸಂಬಂಧಕ್ಕೆ ಬದಲಾಯಿಸಲು ಹೊರಟಿರುವುದು ಯಾಕೋ ಸರಿ ಬರಲಾರದು. ಹಿಂದೂ ಪುರಾಣ-ಶಾಸ್ತ್ರಗಳಲಂತೂ ಗಂಡ-ಹೆಂಡತಿ ಸಂಬಂಧ ಚೆನ್ನಾಗಿ ವಿವರಿಸಲಾಗಿದೆ-ಉದಾಹರಣೆಗೆ-ವನವಾಸ ವಿದುದ್ದು ರಾಮನಿಗೆ ಹೊರತು ಸೀತೆಗೆ ಅಲ್ಲ,ಆದರು ಸೀತೆ ರಾಮನನ್ನೇ ಅನುಸರಿಸಿ ಗಂಡ-ಹೆಂಡತಿ ಸುಖ-ದುಃಖಗಳಿಗೆ ಸಮಭಾಗಿಗಳು ಎಂಬುದನ್ನು ತೋರಿಸುತ್ತಾಳೆ. ಅರ್ಧನಾರಿಶ್ವರ ಅಂತು ಹೆಣ್ಣು-ಗಂಡುಗಳ ಸಮ್ಮಿಶ್ರಣ.

ಕಾನೂನು ಇಂಥ ಸಂಬಂಧಗಳ ಮಧ್ಯೆ ಪ್ರವೇಶ ಮಾಡುವಂತಾದರೆ, ಭಾರತದಲ್ಲಿಲ್ಲನ ಮುಂದಿನ ಪೀಳಿಗೆಯ ಎಲ್ಲ ಗಂಡ-ಹೆಂಡತಿ ಹನಿಮೂನ್ ಗೆ ಹೋಗುವ ಬದಲಾಗಿ ಕೋರ್ಟ್ ಕಟ್ಟೆ ಏರುವನ್ತಾಗುತ್ತದೋ ಏನೋ ? ಯಾಕಂದರೆ ಗಂಡ-ಹೆಂಡತಿ ಅಂದರೆ ಒಂದು ವಿಚಾರದಲ್ಲಿ ಜಗಳವನ್ನೇ ಹೊತ್ತು ಕೊಂಡು ಬಂದಿರುವ ಪ್ರೇಮಿಗಳು ಮಾತ್ರವಲ್ಲ ಒಂದೇ ಸೂರಿ ನಡಿ ಬದುಕುವ ಜೀವಿಗಳು. ಇಲ್ಲಿ ಜಗಳಗಳು,ನೋವು, ನಲಿವು, ಅಣಕು, ಅನುಬಂಧ ಅನಿವಾರ್ಯವೇ..! ಅಲ್ಲಿ ಸಾಮಾಜಿಕವಾಗಿ  ಪುರುಷ ಪ್ರಧಾನ ಕುಟುಂಬಗಳಿಂದಾಗಿ ಗಂಡಸಿಗೆ ಪ್ರಾಧಾನ್ಯತೆ ನೀಡಿದ್ದರು ಆತನ ಬದುಕಿನ ಪ್ರತಿಕ್ಷಣವು ತನ್ನ ಹೆಂಡತಿಗಾಗಿ, ತನ್ನ ಮಕ್ಕಳಿಗಾಗಿಯೇ ಇರುತ್ತದೆ.  ಆದರೆ ಇಂಥ ವಿಷಯದಲ್ಲಿ ಮೂರನೇ ವ್ಯಕ್ತಿಯ(ಅಂತ ಕಾನೂನು) ಅನಗತ್ಯ ಪ್ರವೇಶಕ್ಕೆ ಎಡೆ ಮಾಡಿ ಕೊಟ್ಟರೆ, ಸರ್ಕಾರವೇ living together ವ್ಯವಸ್ಥೆಯೊಂದನ್ನು ಮದುವೆ ಎಂಬ ಹೆಸರಿನಡಿಯೇ ಒದಗಿಸಿದಂತಾಗುತ್ತದೆ.

ಹಾಗಾದರೆ, ಹೆಣ್ಣು ಮಕ್ಕಳಿಗೆ ಕಾನೂನು ಬೇಡವೇ? ಖಂಡಿತ ಬೇಕು. ಇಂದಿನ ಸುಶಿಕ್ಷಿತ ಸಮಾಜದಲ್ಲಿ ಕಲಿತ ಹಾಗು ಅರ್ಥಿಕವಾಗಿ ಸಬಲೀಕರಣ ಗೊಳ್ಳುತ್ತಿರುವ ಹಂತ ದಲ್ಲಿ ಕಾನೂನು ಎಂಬ ಭಯ ಹುಟ್ಟಿಸುವ ಪರಿಕಲ್ಪನೆಯೇ ಇಲ್ಲದಿದ್ದರೆ ಕೆಲವರಾದರು ಸಂಬಂಧಗಳನ್ನು ಕೆಡಿಸಿ ಬಿಡುತ್ತಾರೆ. ಹಾಗಾಗಿ ಬದುಕಿನ (ಮದುವೆಯ-ದಾಂಪತ್ಯದ) ಹಳಿ ತಪ್ಪಿ ಹೋಗಿದೆ, ಇನ್ನೇನು ಮೂರನೇ ವ್ಯಕ್ತಿಯ ಪ್ರವೇಶ ಇಲ್ಲದಿದ್ದರೆ ಇಲ್ಲಿ ಶತ-ಗತಾಯ ಮುಂದೆ ಸಾಗಲು ಸಾಧ್ಯವಿಲ್ಲ ಎಂದಾಗ ಮಾತ್ರ ಕಾನೂನು-ಕೋರ್ಟು ಗಳು ಮುಖ್ಯ ಅನಿಸುತ್ತವೆ.

ನನಗೊಂದು ಆಶ್ಚರ್ಯ: ಜಾತಿಯಂತ  ಅನಗತ್ಯ ವಿಷಯಗಳನ್ನು ಪಾರಮ್ಪರಿಕವೆಂದು ಸಾರಿ ಇಂತ ಬದಲಾವಣೆಗೆ ತೀಕ್ಷಣವಾಗಿ ಪ್ರತಿಕ್ರಿಯೆ ನೀಡುವ ಸಮಾಜ; ಭಾರತೀಯ ಸನಾತನ ವ್ಯವಸ್ಥೆಯ ಭದ್ರ ಬುನಾದಿಯಾಗಿರುವ ಮದುವೆ ಯಲ್ಲಿನ ಅನಗತ್ಯ ಬದಲಾವಣೆಗೆ ಯಾಕೆ ಮೌನ ತಾಳಿದೆ ಅನ್ನುದೆ  ಗೊತ್ತಿಲ್ಲ...!






  

No comments:

Post a Comment