Monday, May 13, 2013

ರಾಜಧಾನಿಗೆ ಬಂದಾಗ..!

ನಾನು ನನ್ನ ಹಳ್ಳಿಗಿಂತಲೂ ಅತಿ ಹೆಚ್ಚು ಪ್ರೀತಿಸಿದ ಸ್ಥಳ ಇದ್ದರೆ ಅದು ಉಡುಪಿ. ಉಡುಪಿಯ ಕಲೆ-ಸಂಸ್ಕೃತಿ-ಆಹಾರ ನನ್ನ ಹೃದಯದಲ್ಲಿ ಬಹುದೊಡ್ಡ ಸ್ಥಾನ ಪಡೆದಿರುವ ಸಂಗತಿಗಳು. ಹಿಗುರುವಾಗ-ರಾಜಧಾನಿ ಬೆಂಗಳೂರಿಗೆ ಒಲ್ಲದ ಮನಸ್ಸಿನಿಂದ ಬಂದವನು ನಾನು. ಇವತ್ತು ಸುಮಾರು ದಿನಗಳು ಕಳೆದು ಹೋದವು.
ರಾಜಧಾನಿಯ ಧೂಳು, ವಾಹನ ಸಂದಣಿ, ಸ್ವಲ್ಪವೂ ಹೃದಯ ಬಿಚ್ಚದ(ಮಾತಾಡದ) ಜನ ನೋಡಿ ಯಾವ ನರಕಕ್ಕೆ ನಾನು ಬಂದೆ ಅಂದುಕೊಂಡಿದ್ದೆ ಮೊದಲ ದಿನಗಳಲ್ಲಿ. ಬೆಂಗಳೊರಿನಲ್ಲಿ ಬದುಕು ಅನ್ನುದು ಒಂದು ಇದೆಯಾ ? ಇವರೆಲ್ಲ ಯಾಕೆ ಹುಚ್ಚಾರ ಹಾಗೆ ರಾತ್ರಿ ಹಗಲು ರಸ್ತೆಯ ನೂಕು-ನುಗ್ಗಲಿನಲ್ಲಿ ಕಾಲ ಕಳೆಯುತ್ತಿದ್ದಾರೆ ಅನ್ನುವ ಪ್ರಶ್ನೆ ಕೆಲವೊಮ್ಮೆ ನಿದ್ದೆಯಲ್ಲೂ ಕನಸುಗಳಾಗಿ ಕಾಣಿಸಿದ್ದುಂಟು. ಇಂತ ವಿಚಿತ್ರ ಸ್ಥಿತಿಯಿಂದ ಯೋಚಿಸುತಿದ್ದ ನಾನು ಇವತ್ತು ಧೂಳನ್ನು ಉಸಿರಾಡುತ್ತಾ....ವಾಹನಗಳ ಶಬ್ಧವನ್ನು ಜೋಗುಳವೆಂದೆ ಭಾವಿಸಿ ದಿನದ ಎರಡು ತಾಸು ನಿದ್ರೆ ಮಾಡುತಿದ್ದೇನೆ. ಉಡುಪಿಯಲ್ಲಿ ನಾನು ಆಲೋಚಿಸಿತ್ತಿದ್ದ ಬದುಕಿಗೂ ಇಲ್ಲಿರುವ ಬದುಕಿಗೂ ವತ್ಯಾಸವಿದೆ. ಬದುಕು ನಾಟ್ಯ-ಸಂಗೀತದಷ್ಟು ಸುಲಭವಲ್ಲ. ಇಲ್ಲಿಯ ಬದುಕಿನ ವಿವಿಧ ಅಂಗಗಳ ಕುರಿತಾಗಿ - ನಾನು ಅನುಭವಿಸಿದ್ದು, ಕೇಳಿದ್ದು, ಜನ ಹೇಳಿದ್ದು -ಬರೆಯುತ್ತೇನೆ.

ನಿರೀಕ್ಷಿಸಿ ಮುಂದಿನ ಅಂಕಣದಲ್ಲಿ ..

No comments:

Post a Comment