Monday, May 13, 2013

ಚುನಾವಣೆ -"ನಾನು ಬೆಂಗಳೂರಿನಿಂದ ಬಂದೆ"

ಕಾರ್ಮಿಕ ದಿನಚಾರಣೆ ನಿಮಿತ್ತ ಸಿಕ್ಕ ರಜೆ,ಮನೆಗೆ ಹೋಗಬೇಕೆಂಬ ತವಕದೊಂದಿಗೆ ಚುನಾವಣೆ ಕಾರಣವನ್ನಿಟ್ಟುಕೊಂಡು ಏಪ್ರಿಲ್ 30 ರಾತ್ರಿಯೇ ಬೆಂಗಳೂರಿನಿಂದ ಹೊರಟಿದ್ದೆ. ನನ್ನ ಊರು ಯಾಣದ ಬಲ ಭಾಗದ ಗುಡ್ಡದ ಮೇಲೆ ಇದೆ . ಹೀಗಾಗಿ ಕುಮಟಾದಲ್ಲಿ ಬಸ್ಸಿಳಿದು, ಸಿರ್ಸಿ ಬಸ್ಸನ್ನು ಹತ್ತಿ, ಯಾಣ ಕ್ರಾಸ್ ಬಳಿ ಯಾವುದಾದರು ವಾಹನ ಸಿಗಬಹುದೇ ಎಂದು ಕಾದು ಕುಳಿತಿದ್ದೆ.

ಚುನಾವಣ ಪ್ರಚಾರಕ್ಕೆ ಅದೆಷ್ಟೋ ಮಂದಿ ಅದೇ ರಸ್ತೆಯಲ್ಲಿ ಓಡಾಡಿದರು. ಅದೆಷ್ಟೋ ಬೈಕ್ ಗಳು ನನ್ನ ಕಣ್ಣ ಮುಂದೆ ಸಾಗಿ ಹೋದವು. ಯಾರು ಕೂಡ ಯಾಣದ ತುದಿಯ ತನಕ ತಲುಪುವವರು ಆಗಿರಲಿಲ್ಲ(೧೬ ಕೀ .ಮಿ ). ಸುಮಾರು ನಾನು ಕ್ರಾಸ್ ಗೆ ಇಳಿದ ಒಂದೂವರೆ ತಾಸಿನ ಬಳಿಕ ಒಬ್ಬ ಯುವಕ ಬೈಕ್ ನ ಮೇಲೆ ಬಂದು ನಾನು ಕುಳಿತ ಸ್ತಳದಲ್ಲಿಯೇ ಬೈಕ್ ನಿಲ್ಲಿಸಿ, ಬಹುಶ ನನ್ನ ಬೆಂಗಳೂರಿನ ಡ್ರೆಸ್, ಶೂಸ್, ಸ್ಟೈಲ್ ಗಮನಿಸಿ ನೀವು ಯಾಣಕ್ಕೆ ಪ್ರವಾಸಿಗರೊ? ಎಂದು ಪ್ರಶ್ನಿಸಿ ಮಾತಿಗೆ ತೊಡಗಿದ. ಹೀಗೆ ಮಾತಿಗೆ ಮಾತು ಬೆಳೆದು, ನನ್ನ ಊರು ಯಾಣ ಸಮೀಪವೆಂದು ತಿಳಿ ಹೇಳಿ, ವಂಶದ ಸಾರವನ್ನೆಲ್ಲ ಹೇಳಿಕೊಂಡ ಮೇಲೆ, ನನ್ನ ತಮ್ಮನಿಗೆ ಪರಿಚಯದವನು ಎಂದು ತಿಳಿದು ಬಂತು. ಜೊತೆಗೆ, ನಮ್ಮೂರಿನ ಮೂಲಕ ಮುಂದಿನ ಯಾವುದೋ ಊರುಗಳನ್ನು ಕೆಲಸ ನಿಮಿತ್ತವಾಗಿ ತೆರಳುವುದಾಗಿ ಹೇಳಿದ ಮೇಲೆ, ನನಗೆ ಸ್ವಲ್ಪ ನನ್ನ ಊರಿಗೆ ಬಿಡುತ್ತಿರಾ ಎಂದು ದೈನ್ಯತೆಯಿಂದ ಕೇಳಿಕೊಳ್ಳಬೇಕಾಯಿತು. ಅವನ ಬೈಕ್ ಹತ್ತಿ ಒಂದು ಕೀ . ಮೀ ಸುಮಾರು ಕ್ರಮಿಸಿದ ಬಳಿಕ ತಾನು ದಾರಿಯಲ್ಲಿ ಸಿಗುವ ಎಲ್ಲ ಮನೆಗಳಿಗೂ ಹೋಗಿ ಹೋಗುವನೆಂದು, ತಾನೊಂದು ರಾಜಕೀಯ ಪಕ್ಷದ ಪ್ರಚಾರಕ್ಕಾಗಿ ಹೋಗುತ್ತಿರುವನೆಂದು ಹೇಳಿದ. ಇವನು ಪ್ರಚಾರ ಮಾಡಿದರೆ ನನಗೇನು, ನಾನು ಯಾವತ್ತು ಹೋಗದ ಹಳ್ಳಿಗಳಿಗೆ ಒಂದು ಪ್ರವಾಸ ದಂತೆ ಎಂದು ಭಾವಿಸಿ, ಅವನ ಪಕ್ಷದ ಪರವಾಗಿಯೇ ಧನಾತ್ಮಕವಾಗಿ ಮಾತುನಾಡುತ್ತ ಸಾಗಿದೆ.( ಬೈಕ್ ಮೇಲೆ ಕುಳಿತುದ್ದಕ್ಕೆ ಅಷ್ಟು ಕೆಲಸವಾದರೂ ನಾನು ಮಾಡಲೇ ಬೇಕಾಗಿತ್ತು). ಹಾಗೆಂದು ನಾನು ಯಾವ ಕಾರಣಕ್ಕೂ ಒಂದು ರಾಜಕೀಯ ಪಕ್ಷದ ಜೊತೆಯಲ್ಲಿ ಗುರಿತಿಸಿಕೊಳ್ಳಲು ಮನಸಿರಲಿಲ್ಲ. ನಾನು ಒಬ್ಬ ಒಳ್ಳೆಯ ಮತದಾರ ಮಾತ್ರವೆಂದು ನಾನು ಭಾವಿಸಿಕೊಂಡವನಾಗಿದ್ದೆ.

ಮೊದಲ ಹಳ್ಳಿಯ ಮನೆಗೆ ಪ್ರವೇಶ ಮಾಡಿದ ಬಳಿಕ, ಬೈಕ್ ಶಬ್ಧಕ್ಕೆ ಆಚೆ-ಇಚೆ ಮನೆಯವರೆಲ್ಲ ಸೇರಲಾರಮ್ಬಿಸಿದರು. ನನ್ನ ಡ್ರೆಸ್, ನನ್ನ ಮೊಬೈಲ್, ನನ್ನ ಶೂ ಇವೆಲ್ಲ ಒಂದುರಿತಿಯಲ್ಲಿ ಪ್ರದರ್ಶನಕ್ಕೆ ಇಟ್ಟಂತೆ ಇತ್ತು ಆ ಸಂದರ್ಭ. ಎಲ್ಲರು ಬಂದು ಸುತ್ತಲು ನೆರದ ಬಳಿಕ, "ನೋಡಿ, ಈ ವರ್ಷ ನಾವು ಈ XYZ ಪಕ್ಷದವರನ್ನು ಆಯ್ಕೆ ಮಾಡಬೇಕೆಂದಿದ್ದೇವೆ. ನೀವೆಲ್ಲ ಇದಕ್ಕೆ ವೋಟ್ ಮಾಡಬೇಕು. ನಿಮಗೆ ರಸ್ತೆ, ರೇಶನ್, ಕರೆಂಟ್ ಎಲ್ಲ ನಮ್ಮ ಪಕ್ಷದವರು ಮಾಡಿಕೊಳ್ಳುತ್ತಾರೆ..(ನನ್ನ ಕೈ ತೋರಿಸುತ್ತ )... ಇವರು ನಿಮಗೆ ಗೊತ್ತಿರಬೇಕಲ್ಲ..? ಇವರದು ಕೂಡ ಇಲ್ಲೇ ಪಕ್ಕದ ಹಳ್ಳಿ...ಇವರು ಬೆಂಗಳೂರಿನಲ್ಲಿ ಇಂಜಿನಿಯರ್ ಸಾಹೇಬ್ರು. ಇವರು ಕೂಡ XYZ ಪಕ್ಷಕ್ಕೆನೇ ಮತ ಹಾಕುದು. ಅದನ್ನು ಹೇಳುದಕ್ಕೆ ಇವರು ಬೆಂಗಳೂರಿಂದ ಅವರು ನಮ್ಮ ಜೊತೆ ಬಂದಿದ್ದಾರೆ . ನಮ್ಮ ಮೇಲೆ ನಂಬಿಕೆ ಬರಲಿಲ್ಲ ಅಂದರೆ ...ನಿಮ್ಮ ಸಮೀಪದವರಾದ ಇವರನ್ನು ನಂಬಿ..." ಎಂದು ಹೇಳಿ, ಕೆಲವು ಆಮಿಷದ ಮಾತುಗಳನ್ನು ತೋಡಿಕೊಂಡರು. ಅವನ ಮಾತು ಮುಗಿದ ಬಳಿಕ, ನಾನು ಹಾಗೇನೆ ಮಾತು ಆಡುತ್ತೇನೆ ಎಂದು ಕೊಂಡಿದ್ದ ಹಳ್ಳಿಯ ಮಂದಿಗೆ, ಒಂದು ರೀತಿಯಲ್ಲಿ ಚುನಾವಣೆಗೆ ಬಂದ ನಟ ನಂತೆ ನನ್ನ ಕಡೆ ನೋಡಿದರು. ನಾನು ಅವನ ಮಾತಿಗೆ ವಿಷ್ಮಯಗೊಂಡು, ನನ್ನ ನೋವು ನುಂಗಿ, ಮೌನವಾದೆ . ನನಗೆ ಮಾತನಾಡಲು ಏನು ಉಳಿದಿರಲಿಲ್ಲ.

ಮುಂದಿನ ಮನೆಗೆಳಿಗೆ ಹೋದ ಮೇಲೆ, ಇದೆ ಪರಿಸ್ಥಿತಿ ನನಗಾಗಬರದೆಂದು, "ನನ್ನನ್ನು ನಿಮ್ಮ ಪ್ರಚಾರ ಕಾರ್ಯಕ್ಕೆ ಬಳಸಿಕೊಳ್ಳಬೇಡಿ" ಎಂದು ತಾಕೀತು ಮಾಡುವುದು ದೈನ್ಯತೆಯಿಂದ ನನ್ನ ಊರಿಗೆ ಬಿಡುತ್ತಿರಾ ಎಂದು ಕೇಳಿಕೊಂಡ ನನ್ನ ಮಾತಿಗೆ ವಿರೋಧಭಾಷವಾಗಿ ಕಾಣುತ್ತಿರುವುದರಿಂದಲೂ, ನಾನೇ ಹೇಗಾದರೂ ಮಾಡಿ ನನ್ನ ಸಮಸ್ಯೆ ನಾನೇ ಬಗೆಹರಿಸಿಕೊಳ್ಳಬೇಕೆಂದು ನಿರ್ಧರಿಸಿದೆ. ಮುಂದಿನ ಮನೆಗೆ ಪ್ರವೇಶಿಸಿದ ಕೂಡಲೇ,"ನಾನು ಯಾಣ ಸಮೀಪದ ಹಳ್ಳಿಯವನು, ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿದ್ದೇನೆ. ಊರಿಗೆ ಬರಲು ಯಾಣದ ಕ್ರಾಸ್ ನಲ್ಲಿ ಬಸ್ಸು ಕಾಯುತ್ತ ಇದ್ದೆ.ಇವರ ಪರಿಚಯವಾಯಿತು.. ಹೀಗಾಗಿ ಇವರ ಜೊತೆ ಬಂದೆ... ನಾನು ಬೆಂಗಳೂರಿಂದ ಬಂದೆ...." (ಈ ಮಾತಿನಲ್ಲಿ ನನಗೂ-ನನ್ನ ಜೊತೆಯಲ್ಲಿದ್ದ ಪ್ರಚಾರಕನಿಗೂ ಯಾವ ರಾಜಕೀಯ ಸಂಬಂಧವಿಲ್ಲ ಎಂದು ಎತ್ತಿ ಹಿಡಿಯುವುದಾಗಿತ್ತು.).

ಹೀಗೆ ಒಂದು ಮನೆಯಿಂದ ಇನ್ನೊಂದು ಮನೆಗೆ ಪ್ರವೇಶಿಸದ ಕೂಡಲೇ, ಅವನ ರಾಜಕೀಯ ಪ್ರಚಾರಕ್ಕಿಂತಲೂ ನಾನು ಬೆಂಗಳೂರಿಂದ ಬಂದುದ್ದೆ ದೊಡ್ಡ ಪ್ರಚಾರವೆನ್ನುವಂತೆ ನನಗೆ ಅನಿಸಲಾರಂಭಿಸಿತು. ಅದೆಷ್ಟೋ ಬಾರಿ ಮೇಲಿನ ಮಾತು ಹೇಳಿದೆನೋ ದೇವರಿಗೆ ಗೊತ್ತು. ಕೊನೆಗೂ ಅವನಿಗೆ ನನ್ನನ್ನು ರಾಜಕೀಯ ದಲ್ಲಿ ಸೇರಿಸಿ ಕೊಳ್ಳಲು ಆಗಲಿಲ್ಲ.

ಬೆಂಗಳೂರುರಾಜಧಾನಿಯಗಿದ್ದರು, ಸ್ವಚ ಬದುಕಿನ ನೆಲೆಯಲ್ಲಿ ಯೋಚಿಸಿದಾಗ ನನ್ನ ಪುಟ್ಟ ಹಳ್ಳಿ, ಮನೆ ಬೆಂಗಳೂರಿನ ವರ್ಣ ರಂಜಿತ ಬದುಕಿಗಿಂತ ಎಷ್ಟೋ ಮೆಲು. ಬೆಂಗಳೂರಿಂದ ನಾನು ಕಳೆದ ಮೂರೂ ಬಾರಿ ಮನೆಗೆ ಹೋದರು ಮನೆಯ ಅಕ್ಕ-ಪಕ್ಕದವರಿಗೂ ನಾನು ಬೆಂಗಳೂರಿನಲ್ಲಿದ್ದಿನೋ ... ಮಂಗಳೂರಿನಲ್ಲಿದ್ದಿನೋ... ತಿಳಿಯದಾಗಿತ್ತು. ಈ ಬಾರಿ ಮಾತ್ರ ನಾನೇ ಚುನಾವಣೆಯಲ್ಲಿ ಪ್ರಚಾರದ ಹಾಗೇನೆ , "ಬೆಂಗಳೂರಿನಿಂದ ಬಂದೆ" ಎಂಬ ಘೋಷ ವಾಕ್ಯದೊಂದಿಗೆ ಪ್ರಚಾರ ಮಾಡಿದ ಹಾಗಿತ್ತು. ಕೊನೆಗೂ ನಾನು ಸ್ವತಂತ್ರ ಅಭ್ಯರ್ತಿಯಾಗಿ ಗುರುತಿಸಿಕೊಂಡೆ.

ಆದರೆ, ಅದೆಷ್ಟೋ ಹಳ್ಳಿಯ ಮಂದಿ ನನ್ನ ಕುರಿತಾಗಿ " ಬೆಂಗಳೂರಿಗೆ ಹೊದುದ್ದಕ್ಕೆ ಅವನಿಗೆ ಸೊಕ್ಕು ನೋಡಿ" ಅಂದುಕೊಂಡರೋ ತಿಳಿಯದು.

No comments:

Post a Comment