Thursday, August 22, 2013

ಒಂದು ವರ್ಷ..!

ಇವತ್ತು ನನ್ನ ಈ ಕನ್ನಡ ಬ್ಲಾಗ್ ಗೆ ಒಂದು ವರ್ಷ..! 

ಅಂಗಡಿಯವನಿಗೆ  ಗಿರಾಕಿ, ಮಠಕ್ಕೆ ಸ್ವಾಮಿ,ದೇಶಕ್ಕೆ ರಾಜಕಾರಣಿ, ಭೂಮಿಗೆ ರೈತ ಇರುವಂತೆ  ಒಬ್ಬ ಬರಹಗಾರನಿಗೆ ಓದುವ ಒಬ್ಬ ಓದುಗ ಬೇಕೇ ಬೇಕು. ಹಾಗಾಗಿ ನನ್ನ ಓದುಗ ಮಿತ್ರರಿಗೆ  ಬರಹಗಳನ್ನು ಸರಿಯಾಗಿ,ಕನಿಷ್ಠ ಪ್ರಯತ್ನದಿಂದ ಓದುವಂತೆ ಸಹಾಯವಾಗಲು ನನ್ನ ಬ್ಲಾಗ್  www.heartwaves4u.blogspot.in ಆದರದಿಂದ ಸ್ವಾಗತಿಸುತ್ತಿದೆ. 'ಓದುಗ' ಗಿರಾಕಿಗೆ ನನ್ನ ನಮಸ್ಕಾರಗಳು. ಒಬ್ಬನು ಬಂದು ನನ್ನ ಬರಹ ಓದಬೇಕು ಎಂಬ ತುಡಿತ, ಬಯಕೆ ಒಬ್ಬ ಬರಹಗಾರನಿಗೆ ಇರುವ ಅತಿ ದೊಡ್ಡ ಹುಚ್ಚು. ಅದರಲ್ಲೂ ನಾನು ಬರೆಯುವುದು ಹಣಕ್ಕಾಗಿಯಲ್ಲ; ಬರಹದ  ಜೊತೆ ನೋವು ಇದೆ, ಆಕಾಂಕ್ಷೆ ಇದೆ; ಹುಚ್ಚು ಕಲ್ಪನೆಗಳಿವೆ. ಇಂಥದೊಂದು ಮನಸ್ಸಿನ ತುಡಿತವನ್ನು ತೆರೆದಿಡುವುದಕ್ಕೆ  ಬರಹಕ್ಕಿಂತ ಒಳ್ಳೆಯ ದಾರಿಯವುದು ನನಗೆ ಕಾಣದು.

ನಾನು ಬರೆಯಲು ಸುರು ಮಾಡಿ ನಾನು ನೌಕರಿಗೆ ಸೇರಿದಷ್ಟೇ ವರ್ಷಗಳು(೬ ವರ್ಷಗಳು) ಆಗಿ ಹೋದವು. ಮೊದಲು ಡೈರಿ ಎಂದು ನೋಟ್ ಬುಕ್ ಮೇಲೆ ಗಿಚುತಿದ್ದೆ. ಅದರಲ್ಲಿ ಅಮ್ಮ ನಿಂದ ದೂರ ಬಂದ ದುಖ, ಹೋಂ ಸಿಕ್ನೆಸ್ಸ್ , ಮೊದಲ ಕೃಷ್, ಗೆಳೆಯರ-ಆಫೀಸ್ ನಲ್ಲಿ ನಡೆದ ಯಾವುದೇ ಸಣ್ಣ ನೋವಿನ ಸಂಗತಿಯಿದ್ದರು ದಾಖಲಿಸುತಿದ್ದೆ. ಆದರೆ ಅದೊಂದು ದಿನ  ಡೈರಿ ತಿರುವಿಹಾಕಿದಾಗ, ನಾನೇ ನನ್ನ ಬರಹಕ್ಕೆ ಹೌಹಾರಿದೆ. ಒಂದೊಮ್ಮೆ ನಾನು ಬದುಕಿರುವಾಗಲೇ ಯಾರಾದರು ಡೈರಿ ಓದಿದರೆ, ತೀರ ನನ್ನ ವಯಕ್ತಿಕ ಅನಿಸುವ ವಿಷಯಗಳು ನನ್ನ ಕೈ ಬರಹದಲ್ಲೇ ಮೊತ್ತೊಬ್ಬ ಓದಿದರೆ ಬಹಳ ಅಸಹ್ಯ ಅನಿಸಲಾರದೆ ? ಅದನ್ನೇ ನಮ್ಮ ವಿಕ್ನೆಸ್ಸ್ ಎಂದು ಜನ ಭಾವಿಸಲಾರರೆ ? ಗಲಿಬಿಲಿಯಾದೆ. ಒಂದು ದಿನ ಡೈರಿ ಬೆಂಕಿಗೆ ಅಹುತಿಯಾತು. ಅಲ್ಲಿಗೆ ಬದುಕಿನ ಕುರಿತಾಗಿ ಸಿಲ್ಲಿಯಾಗಿ ಬರೆಯುವುದನ್ನು ನಿಲ್ಲಿಸಿದೆ. ಆದರು ಮನಸ್ಸು ಕೇಳಬೇಕಲ್ಲ. ಅದಕ್ಕೆ ಬ್ಲಾಗ್ ಒಂದನ್ನು ಸುರು ಮಾಡಿದೆ.

ಆದರೆ  ಬ್ಲಾಗ್ ವೊಂದನ್ನು ತೆರೆದು, ಪಬ್ಲಿಕ್ ಆಗಿ ನನ್ನ ಬರಹ ನೀಡುವುದಕ್ಕೆ ಹೆದರಿಕೆಯಾಗಿತ್ತು. ನಾನು ಆಡುವ ಭಾಷೆ, ನನ್ನ ಅಕ್ಷರ ತಪ್ಪುಗಳು, ಯಾವುದೇ ಒಂದು ವಿಷಯವೆಂದಾಗ ಅಲ್ಲಿ ಭಿನ್ನಾಭಿಪ್ರಾಯಗಳು ಏಳುತ್ತವೆ, ಅಂತ ಸಮಯದಲ್ಲಿ ಹೇಗೆ ಬಗೆಹರಿಸಲಿ ಅನ್ನುವ ತೊಡಕು  ನನ್ನನ್ನು ಅಡಗಿಕೊಂಡಿರುವಂತೆ ಮಾಡಿತು.ನಾನು ಪರಿ ಪೂರ್ಣ ವ್ಯಕ್ತಿಯಾದಾಗ ಬರೆದರಾಯಿತು ಎನ್ನುವ ಕಲ್ಪನೆ ಇತ್ತು. ಆದರೆ ೧೬ ವರ್ಷಗಳ ಶಿಕ್ಷಣ ಮುಗಿಸಿ, ೬ ವರ್ಷಗಳೇ ಸಂದು ಹೋದರು ಪರಿಪೂರ್ಣತೆ ಅದೆಷ್ಟೋ ದೂರದಲ್ಲಿ ಇದೆ..! ಬಹುಶ: ಎಲ್ಲಿ ಆಕಾಶ ಭೂಮಿಯನ್ನು ಸಂಧಿಸುತ್ತದೋ ಅಲ್ಲಿರಬಹುದೋ ಏನೋ ? ಆದರೆ, facebook  ಮೂಲಕ ಓದುಗರು ನೀಡಿದ ಪ್ರತಿಕ್ರಿಯೆ ಧನಾತ್ಮವಾಗಿದ್ದರಿಂದ ಏನೋ ಒಂದು ಧೈರ್ಯ ಬಂತು. ಈ ಸಂದರ್ಭದಲ್ಲಿ ನನ್ನ ಬ್ಲಾಗ್ ನ ಪ್ರಥಮ ವರ್ಷಾಚರಣೆಯನ್ನು ಆಚರಿಸುವಲ್ಲಿ ನಿಮಗೂ ಸ್ವಾಗತಿಸುತ್ತೇನೆ.

ಇಂಥ ಬರಹಗಳ ನಡುವೆ ನನಗೆ ದು:ಖವಿದೆ, ಖೇದವಿದೆ. ಉಡುಪಿಯೆಂಬ ಊರಿನಲ್ಲಿ ನಾನು ಹುಟ್ಟದಿದ್ದರೂ ಆ ಊರಿನ ಸಂಸ್ಕೃತಿ, ಕಲೆ, ಸಾಹಿತ್ಯ, ಊಟ, ಶಿಕ್ಷಣ ಇತ್ಯಾದಿಗಳ ಕಾರಣಗಳಿಂದಾಗಿ ನಾನು ಕಂಡ ಕನಸುಗಳು ಅಷ್ಟೇ ಸೊಗಸಾಗಿದ್ದವು. ಜಾನ್ ಮರ್ಫಿ ಹೇಳುವಂತೆ, ಮನಸ್ಸಿನಲ್ಲಿ ಆಳವಾಗಿ ಕಾಣುವ "subconsicous mind" ಎಂದು ಒಂದು ಇರುತ್ತದೆಯಂತೆ. ಬಹುಶ ಆ ಭಾಗದ ಮನಸ್ಸಿನಲ್ಲಿ ನನ್ನ ಕನಸುಗಳು ಸೇರಿಕೊಂಡು ಇತ್ತ ಸಾಧಿಸಲಾಗದ-ಅತ್ತ ಬಿಟ್ಟು ಬದುಕಲಾರದ ನೋವು ನನಗೆ ಕಾಡಿತ್ತು. ಅದೊಂದು ದಿನ ರಾತ್ರಿ ಅತ್ತು ಬಿಟ್ಟೆ. ಮನಸ್ಸಿನಲ್ಲಿ ಬಹಳ ನೋವು, ಏನೋ ಒಂದು ಸಾಧಿಸಲಾಗದ ಗುರಿ, ಯಾರೊಂದಿಗೂ ಹೇಳಲಾಗದ ಯಾತನೆ, ಅಲ್ಪ-ಸ್ವಲ್ಪ ನನ್ನ ಬಗ್ಗೆ ತಿಳಿದ ಗೆಳೆಯರಿಂದಲೂ ತಾತ್ಸಾರ. ಇವೆಲ್ಲದರ ನೋವಿನಿಂದ ಹೊರಬರಲು ನನಗೆ ಯಾವ ದಾರಿಯು ಇರಲಿಲ್ಲ. ದು:ಖದ ಮಡುವಿನಲ್ಲಿ ಅರಳಿದ್ದೆ ಈ ಕನ್ನಡ ಕಥೆಗಳ ಒಂದು ಬ್ಲಾಗ್.

ಕನಸು-ಕಲ್ಪನೆಗಳು ಕೈಗೆ ನಿಲುಕದ  ವಿಚಾರಗಳು,
ಮನದಿಂದ ಕಿತ್ತೆಸೆದೆ ಉಡುಪಿಯೆಂಬ ಭಾವ,
ಮನಸ್ಸು ಇದ್ದರೆ ಬದುಕುವೆ ಸಾಧನೆಯ ಗೈದು..!,
ಕನಸುಗಳು ದೂರ ಸರಿಸಿ ಸರಿಸಿ  ಮೊತ್ತೊಮ್ಮೆ ಸರಿಸಿ.

ನನ್ನ ಬರಹಗಳು ಇಲ್ಲಿಯವರೆಗೆ ಸುತ್ತ ಮುತ್ತಣ ಸಣ್ಣ ವಿಷಯಗಳ ಕುರಿತಾಗಿ ಮಾತ್ರ ವಾಗಿತ್ತು. ಪ್ರೀತಿ-ದೇಶ-ಜಾತಿ-ಭಾವನೆಗಳು ಇವುಗಳೇ ನನ್ನ ಬರಹದ ಮುಖ್ಯ ವಿಷಯಗಳು. ಇನ್ನು ಮುಂದೆ ಇನ್ನು ಅನೇಕ ವಿಷಯಗಳನ್ನು ಬರೆಯ ಬೇಕು ಎಂದು ಕೊಂಡಿದ್ದೇನೆ.

ನನ್ನ ಕೆಲವು ಗೆಳೆಯರು ಪತ್ರಿಕೆಗಳಿಗೆ ಬರೆಯಲು ಸಲಹೆ ನೀಡಿದ್ದಾರೆ.ಆದರೆ, ಸಧ್ಯ ನಾನು ಉದುಪಿಯಂಬ ಊರಿನ ನೆರಳಿನಿಂದ ಸಂಪೂರ್ಣವಾಗಿ ಹೊರ ಬಂದಿಲ್ಲ... ಶ್ರೀ ಕೃಷ್ಣ ಮಠದ ಸಭಾಂಗಣದ ಸಾಂಸ್ಕೃತಿಕ ಪ್ರಪಂಚ ವಾರದ ಕೊನೆಗೊಮ್ಮೆಯಾದಾರು ನನ್ನ ಕಣ್ಣ ಮುಂದೆ ನಾಟ್ಯ ಮಾಡುತ್ತಲೇ ಇದೆ. ಎಲ್ಲಿಯ ತನಕ ಉದುಪಿಯೆಂಬ ಕಲ್ಪನೆಗಳು ನನ್ನ ಸ್ಮೃತಿ ಪಟಲದಿಂದ ದೂರ ಸರಿಯುವದಿಲ್ಲವೋ ಅಲ್ಲಿಯ ತನಕ ನಾನು ನೋವನ್ನೇ ಬರೆಯುತ್ತೇನೆ ಅನಿಸುತ್ತಿದೆ. ಏನೇ ಇದ್ದರು ನನ್ನ ಓದುಗರ ಆಕಾಂಕ್ಷೆಗೆ ನಾನು ಭಂಗವನ್ನುಂಟು ಮಾಡಲಾರೆ... ಮುಂದೊಂದು ದಿನ ನಿಮ್ಮ ಆಸೆಯನ್ನು ಪೋರೈಸುತ್ತೇನೆ.

ಇವತ್ತು ತುಂಬಾ ಬ್ಯುಸಿ ಯಾಗಿದ್ದೇನೆ. ಕೆಲಸ ಹಾಗೂ ಇನ್ನು ಕೆಲವು ವಿಶೇಷ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಂತದಲ್ಲಿದ್ದೇನೆ. ಮುಂದಿನ ದಿನಗಳಲ್ಲಿ ಒಳ್ಳೆಯ ಬರಹದೊಂದಿಗೆ ಬರುತ್ತೇನೆ.

ಸದಾ ನನ್ನ ಜೊತೆ ಇರ್ತಿರಲ್ವಾ?

                                                                                            ಇಂತಿ ನಿಮ್ಮ ಪ್ರೀತಿಯ ಭಾವಜೀವಿ
                                                                                                                        ವೆಂಕಿ.

1 comment:

  1. Hi venkat it was nice to read ur blog .i am nethra

    ReplyDelete