Saturday, August 10, 2013

ಬದುಕು ಪುಸ್ತಕಗಳಿಲ್ಲ, ಮಾರ್ಕ್ಸ್ ಗಳಲಿಲ್ಲ ಕಣೋ..!

ಕಳೆದೆರಡು ವಾರಗಳಿಂದ ಹುಬ್ಬಳಿ, ಅಂಕೋಲಾ, ಮಣಿಪಾಲ ಹೀಗೆ ಹಲವಾರು ಊರುಗಳನ್ನು ಸುತ್ತುದಿದ್ದೇನೆ. ಬಿಡುವಿಲ್ಲದ ಸಂಚಾರದ ಪರಿಣಾಮವಾಗಿ ಬರೆಯಲು ನನಗೆ ಸಮಯ ಹಾಗೂ ಮಾನಸಿಕವಾದ ಅವಕಾಶ ಸಿಗಲೇ ಇಲ್ಲ. ಮತ್ತೆ ತಿರುಗಿ ಬೆಂಗಳೂರಿಗೆ ಬಂದು ಸಾವಿರಾರು ಜನರ ಮಧ್ಯೆ ನಾನು ಒಬ್ಬನೇ, ಏಕಾಂಗಿ ಅನ್ನುವ ಮನೋಭಾವ ತಲೆ ದೋರಿದೆ.

ನಾನು ಹುಬ್ಬಳ್ಳಿಗೆ ಹೋದಾಗ, ನನ್ನ ಹಳೆಯ ಗೆಳೆಯನೊಬ್ಬನನ್ನು ಭೇಟಿಯಾಗಿದ್ದೆ.ಅವನು ತನ್ನ ಗೆಳೆಯನೊಬ್ಬನ ಕೂಡಿಕೊಂಡು ಸಂಜೆಯ ಸ್ನಾಕ್ಸ್ ಗೆಂದು ಅಯೋಧ್ಯ ಹೋಟೆಲಿಗೆ ಬಂದ. ಅದೇ ದಿನ ರಾತ್ರಿ ೮ ಗಂಟೆಗೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ನನ್ನ ಪ್ರಯಾಣ ನಿಗದಿಯಾಗಿತ್ತು.

ಬಹಳ ದಿನಗಳ ನಂತರ ಒಂದಡೆ ಸೇರಿದ ನಮ್ಮಲ್ಲಿ ಬಹಳ ವಿಷಯಗಳು ಇದ್ದವು. ನಾವು ಗೆಳೆಯರು ಅನಿಸಿಕೊಂಡರು ಫೋನ್ ನಲ್ಲಿ ಮಾತನಾಡುವುದು ಅಪರೂಪವೇ. ಅವನ ಗೆಳೆಯನು ಸೇರಿದ್ದರಿಂದಲೂ ಹೊಸ ವ್ಯಕ್ತಿಯ ಪರಿಚಯ, ಮಾತನಾಡಲು  ಹಲವಾರು ವಿಷಯಗಳು ಇದ್ದವು. ತಿಂಡಿ-ಪಾನೀಯಗಳು ಮುಗಿಸಿ ಇಂದಿರಾ ಗಾಜಿನ ಮನೆಯ ಹುಲ್ಲುಗಾವಲಿನ ಮೇಲೆ ಕುಳಿತು ಕುಶಲೋಪರಿ ಪರಿಭಾಷೆಯಲ್ಲಿ ತೊಡಗಿದಾಗ, ನೌಕರಿ, ಮನೆ, ಅಪ್ಪ-ಅಮ್ಮ, ಮದುವೆ ಹೀಗೆ ಹಲವಾರು ವಿಷಯಗಳು ಬಂದು ಹೋದವು. ಒಟ್ಟಾರೆ, ಒಂದೇ ವಾಕ್ಯದಲ್ಲಿ ಹೇಳುವುದಾದರೆ, "ಸೆಟ್ಲ್ ಅದೇನ್ಲೇ ಮಗನೆ ?".

ಆದರೆ ಮದುವೆ ವಿಷಯ ಬಂದಾಗ, ಆ ವಿಷಯದ ವಿಸ್ತಾರ, ಅಳ ಎಷ್ಟೊಂದು ಇರುತ್ತದೆ ಅನ್ನುವುದು ಹೇಳಲು ಸಾಧ್ಯವಿಲ್ಲ. ಮದುವೆಯೊಂದು "ಸರಿಯಾದ ನಾರಿಯೊಂದಿಗೆ" ನಡೆದರೆ ಬದುಕು, ಅದೊಮ್ಮೆ " ವೈರಿಯಾದ ಮಾರಿಯೊಂದಿಗೆ" ನಡೆದರೆ? ಜೀವನ ಮುಕ್ತಯವೋ ಅಥವಾ ಮತ್ತೊಂದು ರೀತಿಯ ಆರಂಭವೋ? ನನಗೆ ಗೊತ್ತಿಲ್ಲ. ಆದರೆ, ನನ್ನ ಗೆಳೆಯನ- ಗೆಳೆಯನ ಬದುಕಿನಲ್ಲಿ ನಡೆದ ಕತೆ, ಹುಬ್ಬಳಿಯ ಗಾಜಿನ ಮನೆಯ ನವಿರಾದ ಹುಲ್ಲುಗಾವಲಿನ ಮೇಲೆ ತಂಗಾಳಿ ಸೇವಿಸುತ್ತ, ಗೆಳೆತನದ  ರೋಮಾಂಚನಕಾರಿ ಮಾನಸಿಕ ಉಲ್ಲಾಸದ ನಡುವೆಯೂ ಕಣ್ಣೀರು ತರಿಸಿದ ಕತೆ.

ಆತ ಪಕ್ಕ ಉತ್ತರ ಕನ್ನಡಿಗ. ಭಾಷೆಯ ಗಡಸುತನ, ಬಳಸುವ ಶಬ್ಧಗಳು, ಅಮ್ಮ ಅನ್ನುವ ಬದಲಾಗಿ "ಅವ್ವ" ಎನ್ನುವ ಮಾತು ಎಲ್ಲವು "ಆ ನನ್ನ ಮಗ" ಉತ್ತರ ಕರ್ನಾಟಕದವನು ಎಂದು ಹೇಳಲು ಸಾಧ್ಯವಿತ್ತು. ಗೆಳೆಯನ ಗೆಳೆಯ ನನಗೂ ಗೆಳೆಯ ತಾನೇ? ಅಂತೂ ನಾವು ಮೂರೂ ಜನ ಗೆಳೆಯರು. ಆತ MBA ಪಧವಿ ಧರ. ಪ್ರತಿಷ್ಟಿತ ಬ್ಯಾಂಕವೊಂದರಲ್ಲಿ  "Financial Analysyst". ಹಾಗಂದೆರೆನು? ನನಗೆ ಗೊತ್ತಿಲ್ಲ. ಅವನು ಒಳ್ಳೆಯ ಕುಟುಂಬದ  ವ್ಯಕ್ತಿ. ಅವನಿಗೆ ಕಾಲೇಜಿನಲ್ಲಿ ಒಂದು crush ಇದ್ದಿತ್ತಾದರು , ಮಾನ-ಮರ್ಯಾದೆ, ಮನೆತನದ ಗೌರವ ಇತ್ಯಾದಿ ಕಾರಣಗಳಿಂದಾಗಿ ಅವನು ಸ್ವಲ್ಪವೂ ಪ್ರಯತ್ನ ಮಾಡಿರಲಿಲ್ಲ. ಒಳ್ಳೆಯ ಓದು ಮುಗಿಸಿ, ಒಳ್ಳೆಯ ಬ್ಯಾಂಕ್ ಒಂದರಲ್ಲಿ ಒಳ್ಳೆಯ ಸ್ಯಾಲರಿ ಪಡೆಯುತಿದ್ದ ನಮ್ಮ ಒಳ್ಳೆಯ ಗೆಳೆಯ. "ಮಗನೆ, ಮೂವತ್ತು ದಾಟುತ್ತ ಇದೆ(೨೬ ವಯಸ್ಸು), ಬೇಗ ಒಂದು  ಸೊಸೆ ತರಬೇಕು" ಎಂದು ಮನೆಯವರೆಲ್ಲ ಹೇಳಿದ ಮೇಲೆ, ಸಹಜವಾಗಿ ಒಪ್ಪಿಕೊಂಡು, ೨ ವರ್ಷಗಳ ಹಿಂದೆ ಹುಡುಗಿಯನ್ನು ಹುಡುಕಲು ಪ್ರಾರಂಭ ಮಾಡಿದರಂತೆ. "MBA  ಪದವಿಧರ...! ಪದಾ ರಹೇ ಹೈ"....ಎನ್ನುವಂತೆ,  ಅಕ್ಕ, ಅವ್ವ, ಸೋದರ ಮಾವ, ಮತ್ತೊಬ್ಬ ಹಿರಿಯ ಒಳಗೊಂಡ ಕೋರ್ ಕಮಿಟಿ ನಿರ್ಧಾರವಾಗಿ ಮೂರುಜನ ಹುಡುಗಿಯರನ್ನು ತೋರಿಸಿಯೂ ಆಯಿತು. "ನೋಡಲು ಚೆನ್ನಾಗಿರುವ ಒಳ್ಳೆಯ ಗುಣದ ಒಂದು ಹುಡುಗಿ ಇದ್ದಾರೆ ಸಾಕು" ಎನ್ನುವುದ ಮಾತ್ರ ಇವನು ಕೋರ್ ಕಮಿಟಿಗೆ ಮಾಡಿದ ಶಿಪಾರಷು. ಇವನು ನೋಡುವುದು ಮಾತ್ರ- ಕಾಲು ಗುಣ, ಕೈ ಗುಣ, ಹವ್ಯಾಸಗಳು ಎಲ್ಲದರ ಬಗ್ಗೆ ಅವ್ವ ನೋಡಿಕೊಳ್ಳುತ್ತಿದ್ದರೆ;  ಆಕಾಶದಲ್ಲಿದ ಗ್ರಹಗಳು ಪೇಪರ್ ಮೇಲೆ ಹೇಗೆ ಕುಣಿಯುತ್ತವೆ ಎಂದು ಹಿರಿಯರು ನೋಡಿಕೊಳ್ಳುತಿದ್ದರು. ಕೆಲವೊಮ್ಮೆ ಇವೆಲ್ಲ ಯಾಕಪ್ಪ ಅನ್ನುವ ನೋವು ಅವನಿಗೆ ಅನಿಸಿದ್ದರು ಸಂಪ್ರದಾಯದ ವಿರುದ್ಧ ಬಂಡಾಯ ಏಳುವ ಮನಸ್ಥಿತಿ ಅವನದಲ್ಲ. ಇಂಥ ವಿಷಯದಲ್ಲಿ ಬಹಳ ವಿಚಾರ ಮಾಡಬೇಕು-ಹಿರಿಯರಿಂದ ಸೈ ಎನಿಸಿಕೊಳ್ಳಬೇಕಾದರೆ  ಅವರಾಡುವ ನಾಟಕಗಳಿಗೆ ನಾವು ತಲೆದೂಗ ಬೇಕು , ಇಲ್ಲ ಅಂದರೆ  "ವಿದ್ಯಾ ವಿನಯ ಸೋಭತೆ:", "ಈಗಿನ ಕಾಲದ ಹುಡುಗರಿಗೆ ಒಂದಿಷ್ಟು ಡಿಗ್ರೀ ಸಿಕ್ಕರೆ ಸಾಕು, ಎಲ್ಲವು ತಮಗೆ ಗೊತ್ತಿದೆ ಅಂತರೆ" ಹೀಗೆ ಹಲವಾರು ವಾಕ್ಯಗಳು ಕೇಳಿ ಬಿಸಿ ರಕ್ತ ಕಂಟ್ರೋಲ್ ಮಾಡಿಕೊಳ್ಳುವ ಕಲೆ ಗೊತ್ತಿರಬೇಕು.

ಮೂರನೆಯ ಹುಡುಗಿಯ ಮನೆಯ ಬಾಗಿಲು ಇಷ್ಟವಾಯಿತು; ಮನೆಯ ಸ್ಟೇಟಸ್ ಒಪ್ಪಿತವಾಯಿತು; ಆಕಾಶದ ಸೂರ್ಯ-ಚಂದ್ರಾದಿಗಳು  ಇನ್ನು ಮುಂದೆ  ತಮ್ಮ  ಹೆಸರು ಹಾಳುಮಾಡಬೇಡಿ ಅನ್ನುವಂತೆ ಎಲ್ಲವು ಸರಿಯನಿಸಿದರು..ಅರ್ಥಾತ್ ಜಾತಕ ಕೂಡಿತು, ಮೊದಲು ಪರಿಚಯವಿಲ್ಲದ ಮನೆ, ನೆಂಟರು ಎಂಬ ಭಾವದಿಂದ, ಮನೆಯ ಪ್ರತಿಯೊಂದು ವಿಷಯವು ಗೌರವದಿಂದ ನೋಡುವ ಕಾಲ ಬಂತು. ಅದೊಂದು ದಿನ ಗುರು-ಹಿರಿಯರ ಸಮ್ಮುಖದಲ್ಲಿ  ವಿವಾಹ ನಿಶ್ಚಯ ಮಾಡಿ, ಉಂಗುರ ಬದಲಾವಣೆ ನಡೆದು ಹೋಯಿತು. ಅಂತೂ ಕೊನೆಗೂ ಹುಡುಗನಿಗೆ ಹುಡುಗಿಯ ಜೊತೆ ಮಾತನಾಡುವ ಯೋಗ ಬಂತು. ಇಬ್ಬರು ಮಾತನಾಡಿದರು. ಫೇಸ್ಬುಕ್ ನಲ್ಲಿ ಫೋಟೋ ಅಪ್ಲೋಡ್ ಆದವು, ಗೆಳೆಯರಿಂದ " made for each other", "Very nice pair", "settled man...congrats", "looking so beatiful" ... ಹೀಗೆ ಸಾವಿರಾರು ಕಾಮೆಂಟ್ಸ್ ಗಳು ತುಂಬಿದವು.  ಮದುವೆಯ ಟೈಮರ್ ಕೌಂಟ್ ಡೌನ್ ಆರಂಭಿಸಿತ್ತು.

ಆದರೆ,
     ಆ ಹುಡುಗಿ ಪದವಿಧರೆಯಾದರು ತನ್ನ ಅಂತರಂಗದ ವಿಷಯಗಳನ್ನು ಹುಲಿಯಂತಿದ್ದ ತನ್ನ ಅಪ್ಪನ ಮುಂದೆ ಬಿಚ್ಚಿ ಹೇಳುವ ಹಾಗಿರಲಿಲ್ಲ. ಅಮ್ಮನ ಮುಂದೆ ಹೇಳಿಕೊಂಡಿದ್ದರು ಪ್ರಯೋಜನವಾಗುತ್ತಿರಲಿಲ್ಲ. ಮದುವೆಯ ಗಂಡುಗಳು ಬಂದು ಹೋದರು ತನ್ನ  ಅಂತರಂಗದಲ್ಲಿ ತನ್ನ ಕಾಲೇಜಿನ ಗೆಳೆಯನೊಬ್ಬನಿಗೆ  ನೆಲೆ ನೀಡಿದ್ದೇನೆ ಎಂದು ಎಲ್ಲಿಯೂ ಬಿಚ್ಚಿ ಹೇಳಲಿಲ್ಲ. ಅಪ್ಪ-ಅವ್ವನಾ  ಮಾತಿಗೆ ಒಪ್ಪಿಕೊಂಡು, ಮನೆಯಲ್ಲಿ  ಕೊನೆಯ ದಿನ ಕಳೆಯುವ ತನಕವೂ ಸದ್ಗುಣ ಸಂಪನ್ನೆ ಎಂದೇ ಸಾರಿದಳು.

   ಪಾಪ, ಆ ಭಾವಿ ಗಂಡ ತಂದುಕೊಟ್ಟ ಬೆಲೆ ಬಾಳುವ ಮೊಬೈಲ್ ಗಿಫ್ಟ್, ಮನೆಯ ಒಂದು  ಮುಲೆಯಲ್ಲಿರಿಸಿದ್ದಳು. ಅವನು ಕೇಳಿದರೆ ಮದುವೆ ಯಾದ ಮೇಲೆ ಎಂದು ಬಳಸುವುದಾಗಿ ಹೇಳಿ  ಆ ಗಿಫ್ಟ್ ವಿಷಯದಿಂದ ನುಣುಚಿ ಕೊಳ್ಳುತಿದ್ದಳು. ಅವನ ಕಾಲ್ ಮಾಡಿದಾಗಲೆಲ್ಲ, wait  ಎಂದು ಮೆಸೇಜ್ ಕಲಿಸುತಿದ್ದಳು ಅಥವಾ ಇವಳ ಮೊಬೈಲ್  ಬ್ಯುಸಿ ಸಂದೇಶ ಕೊಡುತ್ತಿತ್ತು. ಇಷ್ಟು ಸಣ್ಣ ವಿಷಯಕ್ಕೆಲ್ಲ ಅವಳಿಗೆ ಪ್ರಶ್ನಿಶ ಬಾರದೆಂದು ಸುಮ್ಮನಾಗಿದ ಗೆಳೆಯ ಮದವೆಯ ಟೈಮರ್ ೧೫ ದಿನಗಳ ಕೌಂಟರ್ ಡೌನ್ ತೋರಿಸುವಾಗ ನೇರವಾಗಿ ಅವಳ ಮನೆ ಪ್ರವೇಶ ಮಾಡಿ, ಮದುವೆಯ ಕುರಿತಾಗಿ ಮಾತನಾಡುತ್ತಾನೆ. ಆದರೆ, ಪ್ರೀತಿಯಿಂದ ಹುಡುಗಿ ಮನೆಯ ಮಹಡಿ ಮೇಲೆ ಕರೆಯಿಸಿ ಹೇಳಿದ್ದೇನು ಗೊತ್ತೇ," ನನಗೊಂದು ಭಾಷೆ ಕೊಡ್ತಿಯ?"  ಅವನು, ನಾಳೆ ಹೆಂಡತಿಯಾಗಿ ಬರುವಳು ಏನು ಕೇಳಿಯಾಳು ಎಂದುಕೊಂಡು ನಗುತ್ತಲೇ ಹೇಳು ನಿನ್ನ ಭಾಷೆ ಎಂದು ಕೈ  ಒಡ್ಡಿದ, " ನಾನು ಹೇಳುವ ವಿಷಯ  ಮದುವೆಯ ಮುಹೂರ್ತ ಮುಗಿಯುವವರೆಗೆ ಯಾರಿಗೂ ಹೇಳುವ ಹಾಗಿಲ್ಲ. ನಾನು ಇವಗಲೇ ಒಬ್ಬನನ್ನು ಪ್ರೀತಿಸ್ತ ಇದ್ದೇನೆ. ನಾನು ಅಪ್ಪ-ಅಮ್ಮನಿಗೆ ಹೆದರಿ ಈ ವಿಷಯ ಹೇಳಿಲ್ಲ. ದಯವಿಟ್ಟು ಈ ಮದುವೆ ನೀನೆ ಕ್ಯಾನ್ಸಲ್ ಮಾಡಬೇಕು. ನಾನಂತೂ ನಿನ್ನ ಮದುವೆಯಾಗುವುದಿಲ್ಲ". 

ನಾಲ್ಕು ತಿಂಗಳಿಂದ  ತನ್ನ ಹೆಂಡತಿಯಾಗುವಲೆಂದು ಯೋಚಿಸಿ, ಸಾವಿರಾರು sms  ಮಾಡಿ, ಗಿಫ್ತನ್ನು  ಕೊಟ್ಟು, ತನ್ನ ಹೆಂದಿತಿಯಾಗುವ ಹುಡುಗಿಯನ್ನು ಫೇಸ್ಬುಕ್ ಮೂಲಕ ಎಲ್ಲರಿಗು ತೋರಿಸಿ ಇದ್ದ ಇವನಿಗೆ ಅವಳ ಮಾತು ನಂಬುವುದು ಸುಲಭದ ವಿಷಯವಾಗಿರಲಿಲ್ಲ. ಮುಂದಿನ ಕ್ಷಣದಲ್ಲಿ ಏನಾಗುವುದೋ ತಿಳಿಯದ ಆತ ಹೇಗಾದರೂ ಆ ಮನೆ ಖಾಲಿ ಮಾಡಬೇಕೆಂದು ವೇಗಾವಾಗಿ ತನ್ನ  ಮನೆಗೆ ಬಂದ. ಮುಂದಿನ ಮೂರೂ ತಿಂಗಳು ಅವನ ಬದುಕು ಹೇಗಿತ್ತು, ಹೇಗಾಯಿತು ಆ ಕಥೆ ಭಯಾನಕ. ಯಾವುದಾದರು ಒಂದು ಸಿನೆಮಾದ ದುರಂತ ಕತೆ ನೆನಪಿಸಿಕೊಳ್ಳಿ.

ಈ ಮದುವೆ ನಡುಯುವುದಿಲ್ಲ ಎಂದು ಮನೆಯಲ್ಲಿ ತಿಳಿಯುತಿದ್ದಂತೆ ಹುಲಿ ಅಪ್ಪನಿಗೆ ಪಂಗನಾಮ ಹಾಕಿ, ತನ್ನ ಪ್ರಿಯಕರನ ಜೊತೆ ಒಡಿ ಹೋಗಿ, ಕೆಲವು ತಿಂಗಳು  ಅಲ್ಲಿ-ಇಲ್ಲಿ ಅಲೆದಾಡಿ, ಕರುಳ ಕುಡಿಯ ನಿರ್ಧಾರ ಒಳ್ಳೆಯದೇ ಇರಬಹುದು ಎಂದು  ಮಗಳನ್ನು ಮತ್ತೆ ಕ್ಷಮಿಸಿ ಅವಳ ಪ್ರಿಯಕರನನ್ನು ಅಳಿಯನೆಂದು ಸ್ವೀಕರಿಸಿದರು. ಅಲ್ಲಿಗೆ ಅವಳ ಜೀವನ ಮುಂದುವರಿಯಿತ್ತು.

ಕೆಲವು ತಿಂಗಳು ಮುಗಿದ ಬಳಿಕ, ಅವಳನ್ನು ಮರೆತು ಮತ್ತೆ, ಹುಡುಗಿಗಾಗಿ ಪರದಾಟ. ಗ್ರಹಗಳು ದೂರವಾಗಿ ಎಲ್ಲ ಕೂಡಿದರೂ-" ಹಿಂದೆ ಒಂದು engangement  cancel  ಆಗಿತ್ತಂತೆ" ಎಂಬ ವಿಷಯ ಭಾವಿ ಮಾವನ ಮನೆ ಮಂದಿಯ ಕಿವಿಗೆ ಬಿಳುತಿದ್ದಂತೆ ಎಲ್ಲರು ಶನಿ ಗ್ರಹ ದಂತೆ ಕಾಡಿ,  ಹುಡುಗಿಗೆ ಒಪ್ಪಿತವಲ್ಲ ಎಂಬ ಸಂದೇಶದೊಂದಿಗೆ ಹಿಂತಿರುಗುತ್ತಿದ್ದ. ಹಾಗೆ ಅವನು ನೋಡಿದ ಹುಡುಗಿಯರ ಸಂಖ್ಯೆ "ಕೇವಲ" ೬೧; ಆದರೂ ಅವನನ್ನು ಹಿಂಬಾಲಿಸುವಳು ಒಬ್ಬಳು ಇರಲಿಲ್ಲ.

ಇನ್ನು ಹುಡುಗಿ ನೋಡಲೋ ಬೇಡವೋ ಎಂಬ ತನ್ನ ನಿರ್ಧಾರದ ಕುರಿತಾಗಿ ತನ್ನ ಗೆಳೆಯನ ಜೊತೆ ಮಾತನಾಡಲು ಹುಬ್ಬಳಿಗೆ ಬಂದಿದ್ದ. ಇಷ್ಟು ಕತೆ ಕೆಳುತಿದ್ದಂತೆ, " ನಿನ್ನ ಬಾಳು ಹಾಳು ಮಾಡಿದವಳು  ಮೊದಲು ಮದುವೆಯಾಗಲು ಒಪ್ಪಿದ ಹುಡುಗಿ ತಾನೆ?. ಅವಳು ಎಲ್ಲಿದ್ದಾಳೆ ?, ಅವಳಿಗೆ ಮೊದಲು ಬುದ್ದಿ ಕಲಿಸಬೇಕು" ಎಂದು ನನ್ನ ಗೆಳೆಯ ಕೋಪಾವೇಶದಿಂದ ನುಡಿದಾಗ, " ಅಲ್ಲಲೇ, ನಿನ್ಯಾಕೆ ಅವಳ ಬಗ್ಗೆ ದ್ವೇಷ ಕಾರ್ತಿಯಾ?, ಅವಳು ತನ್ನ ಆಯ್ಕೆ ಮೊದಲೇ ಮಾಡಿದ್ದಳು. ಆದರೆ ಅಪ್ಪ-ಅಮ್ಮಗೆ ಹೆದರಿ ಹೀಗೆ ಮಾಡಿದ್ದಾಳೆ. ಅವಳು ಬದುಕಲಿ ಬಿಡು. ತಪ್ಪು ನನ್ನದು... ಕೇವಲ ಮಾರ್ಕ್ಸ್ ಶೀಟ್ ನೋಡಿ ಬದುಕು ನಿರ್ಧರಿಸಲು ಹೊರಟವನು ನಾನು...! ಅದೊಮ್ಮೆ ಕಾಲೇಜ್ ಡೇಸ್ ನಲ್ಲಿ ನನ್ನದು ಅಂತ ಒಂದು ಪ್ರೀತಿ ಇದ್ದಿದ್ದರೆ, MBA ಪದವಿಧರ  ಇವತ್ತು ೬೧  ಹುಡುಗಿಯರನ್ನು  ನೋಡಿ ಮದುವೆ ಬೇಕಾ ಬೇಡ್ವಾ ಅನ್ನುವ ಸಿದ್ಧಾಂತಕ್ಕೆ ಬರುವ ಸಾಧ್ಯತೆ ಗಳಿರಲಿಲ್ಲ. ಬದುಕು ಪುಸ್ತಕಗಳಿಲ್ಲ, ಮಾರ್ಕ್ಸ್ ಗಳಲಿಲ್ಲ  ಕಣೋ. ಬರ್ತೀನಿ" ಎಂದು  ಹೊರಟೆ ಹೋದ. ಇದೆ ಮೊದಲ ಬಾರಿಗೆ ಅಪರೂಪದ ಪ್ರೀತಿಯ ಸಿದ್ಧಾಂತಕ್ಕೆ ನನ್ನ ಒಂದು ಕಣ್ಣಿರ ಹನಿ ನೆಲಕ್ಕೆ ಬಿತ್ತು.

ಇಲ್ಲಿ ಯಾರದು ತಪ್ಪು ? ಯಾವುದು ಪ್ರಶ್ನೆ? ಯಾವುದು ಉತ್ತರ? ನನಗೆ ತಿಳಿಯಲಿಲ್ಲ. ಇನ್ನು  ನನ್ನ ಬಸ್ಸು ಹತ್ತಲು ೧೫ ನಿಮಿಷಗಳಿದ್ದವು. ಮೌನಕ್ಕೆ ಶರಣಾಗಿದ್ದ ಗೆಳೆಯನ ಹೆಗಲು ಮುಟ್ಟಿ, " ಪ್ರೀತಿ ಪ್ರೇಮದ ವಿಷಯದಲ್ಲಿ ಈ ಜಗತ್ತೇ ಹೋರಾಟದಲ್ಲಿದೆ. ಯಾವ ವಿಜ್ಞಾನ ಕೂಡ ಉತ್ತರ ಹೇಳಲ್ಲ. ೫೦ ನೆ ಶತಮಾನ ಬಂದರು ಇಂಥ ಸಮಸ್ಯೆಗಳು ಇರುತ್ತವೆ ಅನಿಸುತ್ತಾ ಇದೆ" ಎಂದು ಹೇಳಿ, ಒಮ್ಮೆ watch ನೋಡಿ, ಅವನಿಗೆ ಬಸ್ಸಿನ ಸಮಯವಾಗಿದೆ ಎಂದು ಅರಿವು ಮಾಡಿಸಿ ಬಸವ ವನಕ್ಕೆ ಬಂದು ಬಸ್ಸು ಹತ್ತಿದೆ.

No comments:

Post a Comment