Saturday, July 13, 2013

ಪ್ರೀತಿ ಪ್ರೇಮ ಪ್ರಣಯ-ಅಷ್ಟೆಲ್ಲಾ...?

ನನಗೊತ್ತು...ಲವ್ ಬಗ್ಗೆ  ಮಾತಾಡುವುದಕ್ಕೆ ಬೇಕಾದಷ್ಟು ಜನ ಸಿಗುತ್ತಾರೆ. ಆದರೆ ಮದುವೆ ಬಗ್ಗೆ ಮಾತಾಡುವ ಮಂದಿ ಬಹಳ ಕಡಿಮೆ ಅಥವಾ ಸಿಗುವುದೇ ಇಲ್ಲ. ಅದಕ್ಕೆ ಕಾರಣ ಇಲ್ಲದಿಲ್ಲ. ಪ್ರೀತಿ-ಪ್ರೇಮ ಏನಿದ್ದರು ಅದು ಹುಡುಗ-ಹುಡುಗಿಗೆ ಸಂಬಧಿಸಿದ್ದು; ಮದುವೆ ತಮ್ಮ ಮನೆಯವರಿಗೆ ಸಂಬಂಧಿಸಿದ್ದು ಅನ್ನುವ ಧೋರಣೆ ಯೌವನದ ದಾರಿಯಲ್ಲಿದ್ದಾಗ ಎಲ್ಲರು ಭಾವಿಸುತ್ತಾರೆ. ಹಿರಿಯರು ಕೂಡ ಮದುವೆ ತಮ್ಮ ನಿರ್ಧಾರದಂತೆ ನಡೆಯಬೇಕೆಂದು ಹಂಬಲಿಸುತ್ತಲೇ ಇರುತ್ತಾರೆ(ಯಾಕೆ? ಮುಂದಿನ ಲೇಖನದಲ್ಲಿ).

ಮದುವೆಗೂ-ಪ್ರೀತಿಗೂ ಅಂತರ ಬಹಳ ಕಡಿಮೆ. ಪ್ರೀತಿಗೆ  'ಪ್ರೀತಿ'ಯ ಹುಟ್ಟು ಮಾತ್ರ ಗೊತ್ತು; ಆದರೆ ಮದುವೆಗೆ ಪ್ರೀತಿಯ ಹುಟ್ಟು-ಸಾವುಗಳೆರಡು ಗೊತ್ತು. ಪ್ರೀತಿಯೇ ಮದುವೆಯ ಮೂಲ ಹೆಜ್ಜೆ. ಒಂದೊಮ್ಮೆ ಪ್ರೀತಿಯ ಕುರಿತಾಗಿ ಕಲ್ಪನೆಗಳೇ ಇಲ್ಲದಿದ್ದರೆ ಯಾರು ಮದುವೆನೇ ಆಗುತ್ತಿರಲಿಲ್ಲವೋ  ಏನೋ? ಆದರೆ ಯೌವನದ ಬಿಸಿ ರಕ್ತದ ಪರಿಚಲನೆಯಲ್ಲಿ ದೇಹವೇ ಪ್ರೀತಿ-ಪ್ರೇಮದ ಕುರಿತಾಗಿ ಅಮರವಾದ ಸಂವೇದನೆಗಳನ್ನು ವ್ಯಕ್ತ ಪಡಿಸುತ್ತ ಸಾಗುವಾಗ ಅದೇ ಪ್ರೀತಿಯ ಭಾವನೆಗಳು ಮದುವೆಯೆಂಬ ಕಲ್ಪೆನೆಯಲ್ಲಿ, ಒಂದೇ ಮನೆಯಲ್ಲಿ, ಒಬ್ಬ ವ್ಯಕ್ತಿಯ ಜೊತೆಯಲ್ಲಿ ಬದುಕುವಾಗ ಹೇಗಿರಬಹುದು ಎಂದು ಭಾವಿಸುವದಕ್ಕೂ, ಉಹಿಸಿಕೊಲ್ಲುವುದಕ್ಕೂ  ಮನಸ್ಸಿಗೆ ಸ್ವಲ್ಪವೂ ಬಿಡುವು ಇರುವುದಿಲ್ಲ. ಸಮಾಜದಲ್ಲಿ ಮದುವೆಯ ನಂತರದ ದಿನಗಳಲ್ಲಿ ಗಂಡ-ಹೆಂಡತಿಯರ ಅದೆಷ್ಟು ಜಗಳಗಳು ನಮ್ಮ ಗಮನಕ್ಕೆ ಬಂದರು ನಾವು ಅಷ್ಟೊಂದು ಸೂಕ್ಷ್ಮವಾಗಿ ನೋಡುವುದೇ ಇಲ್ಲ.ಕಾರಣ, ಪ್ರೀತಿಯ ಸಂವೇದನೆ ಮುಂದೆ ಅವೆಲ್ಲ ಗಣಕವೇ ಅಲ್ಲ ಅಂದುಕೊಳ್ಳುದು ಒಂದು ವಿಚಾರ ವಾದರೆ, ಅಂತಹ ವಿಚಾರಗಳನ್ನು ನಾವೊಮ್ಮೆ ಮೆಲಕು ಹಾಕಲೇ ಬೇಕು ಅನ್ನುವ ಜವಾಬ್ಧಾರಿ ಕೂಡ ನಮ್ಮ ಮೇಲಿರುವುದಿಲ್ಲ.

ಆಹಾ!,

ಅದೊಂದು ದಿನ, ಮಣಿಪಾಲದಲ್ಲಿ ಫುಟ್ಬಾಲ್ ಆಟ ಆಡಿ, ಮನೆಯ ಹಾಲ್ ನಲ್ಲೆ ಶವಾಸನದಲ್ಲಿ  ಮಲಗಿಕೊಂಡಿದ್ದೆ. ಶವಾಸನ  ಮುಗಿದು, ಸ್ವಲ್ಪ ನಿದ್ರಾಸನಕ್ಕೆ(ಅಂತದೊಂದು ಆಸನ ಇದೆಯಾ?) ಜಾರುವ ಸಂದರ್ಭದಲ್ಲಿ ನನ್ನ ಫೋನ್ ರಿಂಗ್ ಹೊಡಿಯಿತು. ಎದ್ದು ನಿಂತು, ಹೊರಕ್ಕೆ ಬಂದು, "ಹಲ್ಲೋ ಯಾರು?" ಎಂದು..
"ನಾನು ವರದಾ ಹಸ್ಬಂಡ್, ಜಾನಕಿನಾಥ  ಹೈದರಬಾದ್ ನಿಂದ ಕಾಲ್ ಮಾಡ್ತಾ ಇದ್ದೇನೆ.."..
"ಯಾರು ?! , ವರದಾ!? ಯಾರು ಅಂತ ಗೊತ್ತಾಗುತ್ತಿಲ್ಲ ...ಏನು ವಿಚಾರ ಹೇಳಿ ?" . ಹೀಗೆ ಕೆಲವು ಸಮಯ ನಡೆದ  ಸಂಭಾಷಣೆಯಲ್ಲಿ, ನನ್ನ ಪರಿಚಯದವಲೋಬ್ಬಳು  ಅನ್ನುವುದು ತಿಳಿಯಿತು. ಮನೆಯ ಸೈಟವೊಂದನ್ನು ಖರಿದಿಸಬೇಕೆಂದು ವ್ಯವಹಾರಕ್ಕಿಳಿದಾಗ ಬ್ರೋಕರ್ ಆಗಿ ಸಿಕ್ಕ ವರದಾ,  ವ್ಯವಹಾರ ಚತುರೆಯಾಗಿದ್ದ ಆಕೆ ನನ್ನ ಜೊತೆ ಒಳ್ಳೆಯ ರೀತಿಯಲ್ಲಿ ನಡೆದು ಕೊಂಡಿದ್ದಳು. ಜೊತೆಗೆ, ನನ್ನಿಂದಾಗಿ ನನ್ನ ಕೆಲವು ಸಹೋದ್ಯೋಗಿಗಳ ಜೊತೆಗೂ ವ್ಯವಹಾರ ಕುದುರಿಸಬಹುದು ಅನ್ನುವುದು ಅವಳ ಮನೋಇಂಗಿತವಿದ್ದೀತು. ಹೀಗಾಗಿ ನನ್ನ ನಂಬರ್ ಅವಳ ಮೊಬೈಲ್ ನಲ್ಲಿ ಇತ್ತು.

ನಾವಿಬ್ಬರು ಹೀಗೆ ವ್ಯವಹಾರಕೆ  ಬಂದ ನಾಲ್ಕಾರು ತಿಂಗಳೊಳಗೆ ಅವಳ ಮದುವೆಯಾಯಿತು. ನಂತರ ಅವಳು ಎಲ್ಲಿಗೋ ಹೋದಳು... ನಾಪತ್ತೆ...!

ಅವಳ ಮದುವೆಯಾಗಿ ೬ ತಿಂಗಳು ಕಳೆದ ಬಳಿಕ ಅವಳ ಗಂಡ ಜಾನಕಿನಾಥ, ಅವಳಿಗೆ ತಿಳಿಯದ ಹಾಗೆ  ಅವಳ ಮೊಬೈಲ್ ಶೋಧಿಸಿ ಅವಳ ಮೊಬೈಲ್ contacts ಗೆ ಕಾಲ್ ಮಾಡಲಾರಂಭಿಸಿದ್ದ.
"ಒಹ್, ಗೊತ್ತಾಯಿತು  ವಿಷಯ ಹೇಳಿ? " ಎಂದೇ.
"ಏನಿಲ್ಲ, ಬೇಸರ ಮಾಡ್ಕೋ ಬಾರದು. ನಿಮ್ಮ ಮೇಲೆ ನನಗೇನು ಸಂಶಯ ಅಂತ ಭಾವಿಸಬಾರದು. ನಿಮ್ಮಿಂದ ನನಗೊಂದು ಹೆಲ್ಪ್ ಬೇಕು ಅಷ್ಟೇ". ಅವನಿಗೆ ಧೈರ್ಯ ಸ್ಪಂದನೆ ನೀಡಿದ ಮೇಲೆ ಅವನು ಹೇಳಿದಿಷ್ಟು :

" ನಾನು ೪ ತಿಂಗಳ ಹಿಂದೆ ವರದಾಳನ್ನು  ಮದುವೆಯಾದೆ. ಮದುವೆ ನಮ್ಮ ಮನೆಯವರು ಸೇರಿ, ಜಾತಕ ನೋಡಿ ಮದುವೆ ಮಾಡಿದ್ದು ಸರ್. ಆದರೆ ಅವಳಿಗೆ ನನ್ನ ಜೊತೆಗೆ ಸರಿ ಬರ್ತಿಲ್ಲ... ಏನು ಹೇಳಿದರು ಕೊಪ್ಪಿಸಿ ಕೊಳ್ಳುತ್ತಾಳೆ. ಅವಳು ಯಾಕಿಗೆ ಮಾಡ್ತಾಳೆ ಅಂತ ಗೊತ್ತಿಲ್ಲ...ನನಗೇನು ಜಾತಕ-ಗಿತ್ಕ ನಂಬಿಕೆಯಿಲ್ಲ. Atleast , psycologist ಗೆ ತೋರಿಸಿ ಬರೋಣ ಅಂದ್ಕೊಂಡೆ. ಆದರೆ ಅವಳ ಪೂರ್ವಾಪರ ಏನು ಅಂತಾನೆ ಗೊತ್ತಿಲ್ಲ ಸರ್. ಬಹಳ ಹಿಂದೆ ನೀವೇ ಈ ಮೊಬೈಲ್ ಗೆ ಕಾಲ್ ಮಾಡಿ 'ವರದಾ  ಇದ್ದರಾ' ಅಂತ ಕೇಳಿದ್ದಿರಿ. ಅದಕ್ಕೆ ನೀವು ಅವಳ ಫ್ರೆಂಡ್ ಅಂದ್ಕೊಂಡು ಕೇಳ್ತಾ ಇದ್ದೇನೆ... ದಯವಿಟ್ಟು ತಪ್ಪಾಗಿ ತಿಳಿಬಾರದು".

ಆತನ ಮಾತುಗಳನ್ನು ಕೇಳುತಿದ್ದರೆ  ಒಂದು ಬಗೆಯ ವಿನಮ್ರತೆ ಇತ್ತು ಆದರೆ ಅದೊಂದು ಸಂಶಯ ಬುದ್ದಿಯೋ,ಏನೋ ನೋವಿನ ಸಂಗತಿಯೋ ತಿಳಿಯಲಿಲ್ಲ. ಆದರೆ, ಮದುವೆಯಾದ ಮೇಲೆ, ತನ್ನ ಹೆಂಡತಿಯಂದು ಒಪ್ಪಿದವಳನ್ನು ನಾಲ್ಕು ಜನರಲ್ಲಿ "ಅವಳು ಹೇಗೆ?" ಎಂದು ಪ್ರಶ್ನಿಸಿದರೆ ಯಾರು ತಾನೇ ಹೇಳಿಯಾರು? ಅದೆಷ್ಟು ಸರಿ ?ನಾನು ಯಾಕಾಗಿ ಅವಳ ಜೊತೆ ಮಾತನಾಡಿದೆ ಎಂದು ತಿಳಿಸಿ, ಅವಳ ಬಗ್ಗೆ ವಯಕ್ತಿಕ ವಿಚಾರಗಳ ಕುರಿತಾಗಿ ತಿಳಿದಿಲ್ಲವೆಂದು ಹೇಳಿ,     
"ಹೆಂಡಿತಿಯೆಂದು ಕರೆತಂದ ಹೆಣ್ಣನ್ನು ಕುರಿತಾಗಿ  ಮತ್ತೊಬ್ಬರಲ್ಲಿ ನೀವು ಹೀಗೆ ಪ್ರಶ್ನಿಸುವುದು ತಪ್ಪು, ಬೇಕಾದರೆ ನೀವು ಇಬ್ಬರು ಚೆನ್ನಾಗಿ ಸಂಯಮದಿಂದ ಚರ್ಚೆ ಮಾಡಿ. ಇಲ್ಲವೇ ನೀವಿಬ್ಬರೂ ಡಾಕ್ಟರಗೆ ಭೇಟಿಯಾಗಿ.." ಎಂದು ಸಲಹೆ ನೀಡಿ  ಕಾಲ್ ಮುಗಿಸಿದ್ದೆ.

ಈ ಘಟನೆಯ ಮೂಲಕವಾಗಿ, ನಾನು ಮದುವೆಯ ಕುರಿತಾಗಿ ಪ್ರೀತಿ-ಪ್ರೇಮ-ಪ್ರಣಯದ ಆಚೆಗೂ ಒಂದು ವಿಶಾಲವಾದ ಜಗತ್ತು ಇದೆ ಎಂಬುದನ್ನು ಅರಿತೆ. ಈ ಘಟನೆಯ ನಂತರ ಮದುವೆಯಾದ ಅಂಕಲ್-ಗಳ ಜೊತೆ ಮದುವೆ ನಂತರದ ವಿಷಯವಾಗಿ ಅಲ್ಲಿ-ಇಲಿ ಮಾತನಾಡಿದೆ. ಅವರ ವಿಚಾರಗಳ  ಒಟ್ಟು ಸಾರ ಹೀಗಿದೆ:

ಮದುವೆ ಎಂಬ ಸಂಕೀರ್ಣ ಸಂಬಂಧ ನಾವು ಭಾವಿಸಿಕೊಳ್ಳುವಷ್ಟು ಸರಳ ಅಂತೂ ಖಂಡಿತ ಅಲ್ಲ. ಹಾಗೆಂದು ದಂಪತಿಗಳೆಂಬ ಜೀವಿಗಳ ನಡುವೆ ವಾದ-ಪ್ರತಿವಾದ-ಸಂವಾದ, ಜಗಳ-ಮೌನ-ಮಾತು ಇವುಗಳ ಸರಣಿ ಇದ್ದರೇನೆ ಸುಖವೇನು-ದುಖವೇನು ಎಂಬುದು ಮನುಷ್ಯನ ಸ್ಮೃತಿಗೆ ಬರಲು ಸಾಧ್ಯ, ಹದವಾದ ಸಾಂಬರನ  ಒಗ್ಗರಣೆಯಂತೆ ಸುಖ-ದುಖಗಳ ಮಿಶ್ರಣ ಇರಲೇ ಬೇಕು. ಒಂದೊಮ್ಮೆ, ಸುಖವೊಂದೆ ಇದೆ ಅಥವಾ ದುಖವೊಂದೆ ಇದೆ ಅನ್ನುವುದಾದರೆ ದಾಂಪತ್ಯ ಹಳಿ ತಪ್ಪಿದೆ ಅಂತಾನೆ ಅರ್ಥ.ಮದುವೆಯಾದ ಮೇಲೆ ಗಂಡಸರು ಯಾವಾಗಲು ಹೆಣ್ಣಿಗೆ ಸೋಲುವ, ಸೋಲಲೇ ಬೇಕಾದ ಜೀವಿಗಳು. ಹಾಗಾಗಿ ಹೆಂಡತಿಯ ಜೊತೆ ಬಹಳ ಸಮಯ ಜಗಳ ಮಾಡಿ ಸಮಯ ವ್ಯರ್ಥ ಮಾಡುವುದು ಒಳ್ಳೆಯದಲ್ಲವಂತೆ.

ಮನುಷ್ಯನ ಜೀವನದ ಮೇಲೆ ಏನೋ ಕೆಲಸವಿಲ್ಲದ ಗ್ರಹಗಳು ಅದೆಷ್ಟೋ  ಪ್ರಭಾವ ಬಿರುತ್ತಾವೆ ಗೊತ್ತಿಲ್ಲ. ಆದರೆ ಜಾತಕಗಳು ಎಲ್ಲವನ್ನು ನಿರ್ಧರಿಸಿ, ಯಾವಾಗಲು ಅಮೃತಮಯವಾದ ಸಂಬಂಧ ಒದಗಿ ಬರುತ್ತವೆ ಎಂದು ಹೇಳುವ ಹಾಗಿಲ್ಲ.ಹಿರಿಯರೇ ಮದುವೆ ಮಾಡುವಾಗ ಹುಡುಗಿಯ 'ಬಗೆ'ಯಾಗಲಿ("ಬಗ್ಗೆ" ತಿಳಿದಿರುತ್ತವೆ),  ಹುಡುಗನ 'ಬಗೆ'ಯಾಗಲಿ ತಿಳಿದು ಕೊಳ್ಳಲು ಅವಕಾಶ, ಅದಕೊಂದು ಸಮಯ ಇರುವುದು ತುಂಬಾ ಕಡಿಮೆ. ಕೇವಲ ಬಾಹ್ಯವಾಗಿ ಅವರವರ ಬಗ್ಗೆ ಮಾತ್ರ ತಿಳಿದುಕೊಂಡು ಸಪ್ತಪದಿ ತುಳಿದ ಮೇಲೆ, ಬಗೆಯ ಕುರಿತಾಗಿ ತಿಳಿಯಲು ಹೊರಟಾಗ ಕಾಣುವ ವತ್ಯಾಸಗಳು ಮದುವೆಯೊಂದು ಗೋಳಾಗಿಸಿತು-ಇದು ವರದಾ ಬದುಕಿನ ಸತ್ಯ. ಹೀಗಾಗಿ ಅರೇಂಜ್ಡ್  ಮ್ಯಾರೇಜ್ ನಲ್ಲಿ ಅಂತದೊಂದು ನೋವು ಇದೆ ಅನಿಸುತ್ತಿದೆ. 

ಆದರೆ, ಮುಂದೇನು ಆಗುವುದೋ ನಾ ತಿಳಿಯೆ ? ನನಗೆ ಜೋತಿಷ್ಯವಾಗಲಿ, ರವಿ-ಚಂದ್ರರನ್ನು ಕಾಗದ ಮೇಲೆ ಕುಳ್ಳಿರಿಸಿ
ಮತ್ತೊಂದು ಹುಡುಗಿ ಅಥವಾ ಹುಡುಗನ ಬದುಕಿನ ವ್ಯವಹಾರದ ನೀತಿ ತಿಳಿಯಲು ಸಾಧ್ಯವಾಗಿಲ್ಲ. 

No comments:

Post a Comment