Tuesday, July 16, 2013

ಪ್ರೇಮಿಗಳು ದೇಶ ಕಟ್ಟುತ್ತಾರೆಯೇ?

ದೇಶ ಪ್ರೇಮಿಗಳು ದೇಶ ಕಟ್ಟ ಬಹುದು; ಆದರೆ ಕೇವಲ ಪ್ರೇಮಿಗಳು ದೇಶ ಕಟ್ಟುವುದೆಂದರೇನು? ಮನೆಯಿಂದ ಹೊರಬಂದು, ಯಾವ ಕೆಲಸಕ್ಕೂ ಸಿಗದ, ಯಾವುದೊ ಮರದ ಕೆಳಗೆ, ಬೆಳಿಗ್ಗೆಯಿಂದ ಸಾಯಂಕಾಲದ ವರೆಗೂ ಒಬ್ಬರನೊಬ್ಬರ ತೋಳು ಬಂಧಿಯಲ್ಲಿ ಕುಳಿತು "ನನಗಾಗಿ ನೀನು, ನಿನಗಾಗಿ ನಾನು, ನಿನ್ನ ಹೃದಯದೊಳಗೆ  ನಾನು, ನನ್ನ ಹೃದಯದೊಳಗೆ  ನೀನು, ಹಾಗಿದ್ದರೆ ಉಳಿದಿದ್ದೇನು?" ಎಂದು ಹಾಡಿದನ್ನೇ ಹಾಡುತ ಕುಳಿತ ಪ್ರೇಮಿಗಳಿಂದ ದೇಶಕ್ಕೆ ಯಾವ ಪ್ರಯೋಜನ? ಹುಟ್ಟಿಸಿದ ಅಪ್ಪ-ಅಮ್ಮನಿಗೆ, ಕಳಿಸಿದ ಶಾಲೆಗೆ, ಬದುಕಲು ಕೊಟ್ಟ ಸಮಾಜಕ್ಕೆ, ಈ ದೇಶಕ್ಕೆ ಭಾರ ಅಂತೀರಾ??

ಕಳೆದ ವಾರ, ನನ್ನ ಆಫೀಸ್  badge  ಕೆಲಸ ಮಾಡದ ಕಾರಣ ನಾನು ಎರಡು ದಿನ ಆಫೀಸ್ ನಿಂದ ಹೊರಗೆ ಉಳಿಯ ಬೇಕಾಯಿತು. ಒಂದು ದಿನ ಒಬ್ಬನೇ ಮನೆಯಲ್ಲಿ ಕುಳಿತು ಪುಸ್ತಕ ಓದಿ ಕಳೆದೆಯಾದರು ಎರಡನೇ ದಿನ ನನ್ನಿಂದ ಒಬ್ಬನೇ ಇರುವುದು ಸಾಧ್ಯವಾಗಿಲ್ಲ. ನನಗೆ ಹತ್ತಿರದಲ್ಲಿ ಒಂದು ಬೆಟ್ಟ-ಗುಡ್ಡ ಅಥವಾ ಶಾಂತವಾಗಿರುವ ಪ್ರದೇಶವಿದ್ದರೆ ಹೇಳಿ ಎಂದು roomate ಗಳಿಗೆ ಕೇಳಿದಾಗ ಸಲಹೆ ನೀಡಿದ್ದು "Lal Bhag ". ಬೆಂಗಳೂರಿನ ಕೇಂದ್ರೀಯ ಬಸ್ ನಿಲ್ದಾಣದಿಂದ ಮೂರೂ ನಾಲ್ಕು ಕೀ. ಮಿ ದೂರದಲ್ಲಿರುವುದರಿಂದ ಹೋಗಿ ಬರುದು ಕೂಡ ಸುಲಭವೆಂದು Lal Bhag ನಟ್ಟ ಪ್ರಯಾಣ ಮಾಡಿದೆ.

Lal Bhag  ಪ್ರವೇಶ ದ್ವಾರದಲ್ಲಿ ಟಿಕೆಟ್ ಕೌಂಟರ್ ಗೆ ನಿಂತಾಗ, ದ್ವಾರ ಪಲಕ ಎರಡು ಟಿಕೆಟ್ ಕೈಗಿತ್ತು ೨೦/- ಕೇಳಿದ. "ಸರ್ ಎರಡು ಟಿಕೆಟ್ ಯಾಕೆ?" ಎಂದು ಮರು ಪ್ರಶ್ನೆಗೆ, "ಒಬ್ರೇನಾ?  by default ಎರಡು ಟಿಕೆಟ್ ಕೊಟ್ಟು ಬಿಡ್ತೇವೆ" ಎಂದು ಹೇಳಿ, ಒಂದು ಟಿಕೆಟ್ ಅನ್ನು ವಾಪಸು ಪಡೆದು ೧೦/- ಹಿಂದಿರುಗಿಸಿದ. ಆತನ ಬಾಯಿಂದ ಬಂದ, "by default " ಪದಕ್ಕೆ ನಾನ್ಯಾವ ಅರ್ಥವನ್ನು ಆ ಸಂದರ್ಭದಲ್ಲಿ ಕಲ್ಪಿಸಿ ಕೊಳ್ಳಲು ಸಾಧ್ಯವಾಗಿರಲಿಲ್ಲ.

ಲಾಲ್ ಭಾಗ್ ಬೃಹತ್ ಬೆಂಗಳೂರಿನ "ಬೃಹತ್ ಬೆಟ್ಟ-ಗುಡ್ಡ ಪ್ರದೇಶ" ಇರಬೇಕು. ಕಬ್ಬನ್ ಪಾರ್ಕ್ ಅನ್ನೋದೊಂದು ಇದೆಯಂತೆ. ಅಲ್ಲಿ ನಾನಂತೂ ಹೋಗಿಲ್ಲ. ಈ  ಲಾಲ್ ಭಾಗ್ ಪಶ್ಚಿಮ ಘಟದಲ್ಲಿ ಹುಟ್ಟಿ ಬೆಳುದು ಬಂದ ಹುಡುಗರಿಗೆ ಒಂದು ಸಣ್ಣ ತೋಟ ನೋಡಿದ ಅನುಭವ ಕೊಡಬಹುದಷ್ಟೇ. ಇರಲಿ, ಬೆಂಗಳೂರು ಎಂಬ ನಗರದ ಒಂದು ಭಾಗದಲ್ಲಿ  ನೋಡುವದಕ್ಕಾದರು ಒಂದು ಅರಣ್ಯ ಪ್ರೆದೇಶ ಇದೆಯಲ್ಲವೆಂದು  ಸಂತೋಷ ಪಡೋಣ.

ಆದರೆ, ಲಾಲ್ ಭಾಗ್ ಕೇವಲ ಬೆಟ್ಟ ಅಲ್ಲ, ಉದ್ಯನವಲ್ಲ ಅದು ಪ್ರೇಮಿಗಳ ಸ್ವರ್ಗ. ಒಂದೊಂದು ಮರದ ಕೆಳಗೆ ಒಂದೊಂದು ಜೋಡಿ. ಜೋಡಿಗಳ  ಚಲನ-ವಲನ, ತಪ್ಪಿ ಹೋಗುವರೆಂದು ಅಪ್ಪಿ ಕೊಂಡುವರ ದೃಶ್ಯಗಳು ನೋಡತ್ತ ಹೋದಂತೆ ಪ್ರೇಮಿಗಳು ಇರಬೇಕು ಅಂದರೆ ಕಾಡು ಇರಲೇ ಬೇಕು ಅನಿಸಿತು. ಹಾಗೊಮ್ಮೆ ಯೋಚಿಸಿದಾಗ   ಪಶ್ಚಿಮ ಘಟದ ನಾವೇ ಶ್ರೇಷ್ಠ ಪ್ರೇಮಿಗಳು ಎಂದು ಭಾವಿಸಿ ಕೊಂಡೆ. ಏನೇ ಇರಲಿ, ಪ್ರೇಮಿಗಳ ಸ್ವರ್ಗ ನೋಡಿದಾಗ ಇವರಿಂದ ಏನು ಪ್ರಯೋಜನ ಎಂಬ ಪ್ರಶ್ನೆ ಮೂಡುವುದು ಸಹಜ? ನನಗನ್ನಿಸಿದ್ದು ನಿಜವಾಗಿ ದೇಶವನ್ನು ಕಟ್ಟುವರು ಇವರೇ ಎಂದು ..!?

ಒಂದು ದೇಶವನ್ನು ಕಟ್ಟಬೇಕು ಅಂದರೆ ಮೊದಲು ಭಾವನಾತ್ಮಕವಾಗಿ ನಾವೆಲ್ಲಾ ಒಂದು ದೇಶದವರೆಂದು ಭಾವಿಸಬೇಕು. ಎಲ್ಲರು ಎದೆ ತಟ್ಟಿ ಇದು ನನ್ನ ದೇಶ ಎನ್ನಬೇಕಾದರೆ ಅದೆಂತ ಬೆಸುಗೆ ಈ ಜನರ ಮಧ್ಯೆ ಇರಬೇಕು? ಭಾರತದಲ್ಲಿ  ಇಂದಿಗೂ ಅಂತ ಬೆಸುಗೆಯ ವೈಫಲ್ಯತೆ ಇದೆ. ಹಿಂದೂ-ಮುಸಲ್ಮಾನ-ಕ್ರಿಶ್ಚಿನ ಎಂದು ಹೊಡೆದಾದುತ್ತೇವೆ; ಹಿಂದುಗಳಲ್ಲೇ ದಲಿತ, ಕೀಳು, ಕೆಟಗರಿ, ಬ್ರಾಹ್ಮಣ ಅಂತೆಲ್ಲ ಸಾಮಾಜಿಕ ಅಂತಸ್ತುಗಳನ್ನು ಸೃಷ್ಟಿ ಮಾಡಿ ಎಷ್ಟೇ ಗಾಮ್ಭಿರ್ಯದಿಂದ, ಪ್ರಖರಿತ ವಾಗ್ಜರಿಯಿಂದ ಭಾಷಣಗಳನ್ನು ಮಾಡಿದರು,ದೇಶದ ಜಾತ್ಯತೀತ ನಿಲುವಿನ ಮೇಲೆ ಉದ್ಗೃಂಥ ಗಳನ್ನೂ ಬರೆದರೂ ನಾವು-ನೀವು ಎಂಬ ಭೇಧವನ್ನು ಕಳೆದ ೬೦ ವರ್ಷಗಳಿಂದಲೂ ಈ ಜಾತ್ಯತೀತ ಭಾರತದಲ್ಲಿ ಉಳಿಸಿಕೊಂಡು ಬಂದಿದ್ದೇವೆ. ನಾವು ಏನೇ ಹೇಳಿದರು, ಮನಸ್ಸಿನ ಆಳದಲ್ಲಿ ಜಾತಿಗಳ, ಧರ್ಮಗಳ ಕುರಿತಾದ ಬೆಸುಗೆ ತೀರಾ ಕಳಪೇನೆ ಆಗಿರುತ್ತದೆ. ರಾಜಕಾರಣಿಗಳು ಮತಕ್ಕಾಗಿ, ಸ್ವಾಮಿಗಳು ತಮ್ಮ ಮಠ ಉಳಿಸಿಕೊಳ್ಳಲು, ಕೆಳವರ್ಗದವರೆಂದು ಕರೆಸಿ ಕೊಂಡವರು  ಸರ್ಕಾರದಿಂದ ಲಾಭ ಪಡೆಯಲು ಜಾತಿಯನ್ನು ಉಳಿಸಿಕೊಂಡೆ ಜಾತ್ಯತೀತ ನಿಲುವನ್ನು ಪ್ರಕಟಿಸುವುದು ಖೇಧಕರ.

ಇಂಥ ಜಾತಿ, ಮತ, ಧರ್ಮಗಳ  ಸಮ್ಮಿಲನವಾಗಿ ಭಾವನಾತ್ಮಕವಾಗಿ ಜಾತ್ಯತಿತತೆ ಎತ್ತು ಹಿಡಿಯುವ  ಒಂದು ವರ್ಗ ಈ ದೇಶದಲ್ಲಿದ್ದರೆ ಅದು ಪ್ರೇಮಿಗಳಾಗಿ ಅಂತರ್ ಜಾತಿಯ ವಿವಾಹವಾಗುವ  ವರ್ಗ.ಅವರಿಗೆ ಮೇಲು ಕೀಳು ಭಾವವಿಲ್ಲ. ಧರ್ಮದ ನೋವು ಇಲ್ಲ; ಅಂತ ಪ್ರೇಮಿಗಳಲ್ಲಿ ಇರುವುದು ಬುರ್ಖಾ secularism  ವೂ ಅಲ್ಲ; naked  secularism  ವೂ ಅಲ್ಲ; ಅದು ನಿಜಾವಾಗಿ ಭಾರತವನ್ನು ಒಂದು ಎಂದು ಹೇಳಬಲ್ಲ  real  secularism .

ಇಂಥ ಅಂತರ್ ಜಾತಿಯ ವಿವಾಹಗಳು ದೇಶದ ಒಳಿತಿಗೆ ಸಹಕಾರಿಯೆಂದು ನಾನು ಹೇಳಿದ್ದಲ್ಲ; ಯಾವೊದೋ ಒಬ್ಬ ಪ್ರೇಮಿ ಹೇಳಿದ ಮಾತಲ್ಲ; ಅದು ಭಾರತದ  ಮಾನ್ಯ ಸರ್ವೋಚ್ಚನ್ಯಾಲಯ ಹೇಳಿದ ಮಾತು(http://goo.gl/z538W). ಭಾರತದ ಸಧ್ಯದ ಪರಿಸ್ಥಿಯಲ್ಲಿ ಅಂತರ್ ಜಾತಿಯ ವಿವಾಹಗಳು ಸಾಮಾಜಿಕ ಸಂಪ್ರದಾಯಗಳಿಗೆ ವಿರುದ್ಧವಾಗಿರುವದರಿಂದ  ಅರೇಂಜ್ಡ್ ಇಂಟರ್ ಕಾಸ್ಟ  ಮ್ಯಾರೇಜ್ ಗಳು ಒಂದು ಮರೀಚಿಕೆ ಅನ್ನುವಂತಿದೆ. ಹೀಗಾಗಿ ಪ್ರೇಮಿಗಳು ಮಾತ್ರ ಈ ನಿಟ್ಟಿನಲ್ಲಿ ಅಸಾಧ್ಯವಾದನ್ನು ಸಾಧಿಸುತ್ತಾರೆ ಅನ್ನುವುದು ನನ್ನ ನಂಬಿಕೆ. ಅವರಿಗೆ ಒಂದು ಸಲಾಂ..!

ಪ್ರೇಮಿಗಳೇ,
 ನೀವು ಸಮಾಜದ  ದರಿದ್ರ ಜಾತಿ ಸಂಪ್ರದಾಯದ ವಿರುದ್ದ ಬಂಡಾಯವೆದ್ದು  ಬದುಕ ಬೇಕಾದವರು. ಹೀಗಾಗಿ ನಿಮ್ಮ ಪ್ರೇಮದ ಕತೆಯನ್ನು ಸುಖಂತವನ್ನಾಗಿಸಲು ನೀವು ಸಮಾಜದ ಎಲ್ಲ ಅಂಗ (ತಂದೆ, ತಾಯಿ,ಬಂಧು-ಬಳಗ, ಧರ್ಮ)ಗಳಿಂದಲೂ ದೂರವಾಗಿ ಬದುಕ ಬೇಕಾದ ಕಾಲದಲ್ಲೂ ಕೆಂಗೆಡದೆ  ಮುಂದುವರಿಯಬೇಕಾದರೆ ಅರ್ಥಿಕ ಸ್ವಲಂಬನೆ  ನಿಮಗೆ ಅಗತ್ಯವಾಗಿ ಬೇಕು. ಹೀಗಾಗಿ ಓದುವ ಕಾಲದಲ್ಲಿ ನೀವು ಯಾವುದೊ ಮರದ ಕೆಳಗೆ ಕುಳಿತು ಪ್ರೇಮ ಗೀತೆ ಹಾಡಿದರೆ, Newton ತಲೆಯ ಮೇಲೆ  apple    ಬಿದ್ದಹಾಗೆ  ನಿಮ್ಮ ತಲೆ ಮೇಲೆ apple  ಬಿದ್ದರೂ ಪ್ರಯೋಜನವಾಗಲಾರದು. ಓದುವ ಕಾಲದಲ್ಲಿ ಓದಿ ಸ್ವತಂತ್ರರಾದಾಗಲೇ ನಿಮ್ಮ ಪ್ರೀತಿ-ಪ್ರೇಮಕ್ಕೆ ಬೆಲೆ, ದೇಶಕ್ಕೊಂದು ಕೊಡುಗೆ. ಇಲ್ಲದೆ ಹೋದರೆ, 'ಕಿಸ್ಸಿಂಗ್' ಎಂದು ಯಾವ ಮರದ ಕೆಳಗೆ ಕುಳಿತಿದ್ದಿರೋ, ಅದೇ ಮರದ ಕೆಳಗೆ 'ಮಿಸ್ಸಿಂಗ್' ಎಂದು ಬರೆಯುವ ಕಾಲ ಬಂದೀತು. ಜೋಕೆ .....!

ಆ ಪುಣ್ಯಾತ್ಮ ಎರಡು ಟಿಕೆಟ್ "by default" ಆಗಿ ಕೊಡುವುದಕ್ಕೆ ಕಾರಣ ಇಷ್ಟೊಂದು ಪ್ರೇಮಿಗಳ ಆಗಮನವೇ ಕಾರಣ ಎಂದು "ಲಾಲ್ ಭಾಗ್ ಗುಡ್ ಬೈ" ಹೇಳುವಾಗ ಅರಿವಿಗೆ ಬಂತು.

No comments:

Post a Comment