Sunday, July 21, 2013

ಮೋದಿಯ ಹಾದಿ ಗದ್ದುಗೆ ಯತ್ತ...!

ಇತ್ತೀಚಿಗೆ facebook,twitter ಗಳಿಂದ ಹಿಡಿದು ಎಲ್ಲ  ಸಮೂಹ ಮಾಧ್ಯಮಗಳು ನರೇಂದ್ರ ಮೋದಿಯ ಬಗ್ಗೆ ಬಹಳ ಹೋಗುಳುತ್ತಿವೆ;ಬಹಳ ಜನ ಈ ವಿಷಯದ ಕುರಿತಾಗಿ 'ಚಿಂತನೆ'ಗೊಳಗಾಗಿರುವುದು ಕಂಡು ಬಂದರೆ, ಕಾಂಗ್ರೆಸ್ಸಿಗರು ಮಾತ್ರ 'ಚಿಂತೆ'ಗೆ ಒಳಗಾಗಿದ್ದಾರೆ. ಮತದಾರ ಯಾವತ್ತು ಪಕ್ಷ, ವ್ಯಕ್ತಿಯನ್ನು ಗಮನಿಸುವುದಿಲ್ಲ ಬದಲಾಗಿ ಪುಂಕಾನುಪುಂಕವಾಗಿ ರಾಜಕೀಯ ನಾಯಕರ ಬಾಯಿಯಿಂದ ಬರುವ ಪ್ರಣಾಳಿಕೆಗಳಲ್ಲಿ ಯಾವದನ್ನು ಭರವಸೆದಾಯಕವೆಂದು ಗಮನಿಸುತ್ತ ಇರುತ್ತಾನೆ. ಹೀಗಾಗಿ,"ಮಾತುದಾರ(ರಾಜಕಾರಣಿ)" ರ ಬಗ್ಗೆ ಗಮನವಿಟ್ಟು ನೋಡುತ್ತಾನೆ ಒಳ್ಳೆಯ "ಮತದಾರ". 'ಪ್ರಣಾಳಿಕೆಯ  ಜೊತೆಗೆ ಅದನ್ನು ಇಡೆರಿಸುತ್ತೇನೆ'  ಎಂಬ ರಾಜಕೀಯ ಇಚ್ಚಾಶಕ್ತಿಯ  ಪ್ರದರ್ಶನ  ಇಂದಿನ ಅವಶ್ಯಕತೆ.

೬೦ರ ಸಂಭ್ರಮದಲ್ಲಿರುವ ಭಾರತಿಯ ಪ್ರಜಾಪ್ರಭುತ್ವಕ್ಕೆ ಅದೆಷ್ಟೋ ಚುನಾವಣೆಗಳು ನಡೆದು ಹೋಗಿಲ್ಲ?  ಅದೆಷ್ಟೋ ಪ್ರಣಾಳಿಕೆಗಳು ಚಪ್ಪಾಳೆಗಳ ಮೂಲಕವಾಗಿ ಸ್ವಾಗತಿಸಲ್ಪಟ್ಟು, ಸಾಮಿಯನ  ಕೆಳಗಿಲಿಸುವಾಗಲೇ ಕೊನೆ ಕಂಡಿಲ್ಲ? ಸತ್ಯವಾಗಿ ಆಡಿದಂತೆ, ಜನತೆಯ  ಭರವಸೆಗೆ ಕುಂದು ಬರದಂತೆ ಜಾರಿಗೆ ತಂದ ಪ್ರಣಾಳಿಕೆಗಳೆಷ್ಟು? ಹೀಗಾಗಿ ಪ್ರಣಾಳಿಕೆಗಳು ಕೇಳಿ ಕೇಳಿ ಸಾಕಾಗಿದೆ ಅನ್ನುವಷ್ಟು ನೋವು ಜನಕ್ಕೆ ಇದೆ. ಜನಕ್ಕೆ ಬೇಕಾಗಿರುವುದು ಪ್ರಣಾಳಿಕೆಗಳ ಉದ್ದುದ್ದ  ಭಾಷಣಗಳಲ್ಲ; ಬಣ್ಣ-ಬಣ್ಣಗಳಿಂದ ರಂಜಿತವಾದ ಪ್ರಣಾಳಿಕೆಯ  pamplet ಗಳಲ್ಲ,"ಭಾರತ ನವ ನಿರ್ಮಾಣ" ಎಂದು ಸಂಗೀತ ಸೇರಿಸಿ ಗುನುಗುವ ಹಾಡಲ್ಲ; ಬದಲಾಗಿ ಇಂದು ಹೇಳಿದ್ದನ್ನು ನಾಳೆ ಮಾಡಿಯೇ ತೀರುತ್ತೇನೆ ಎನ್ನುವ  "ಭರವಸೆಯ ನಾಯಕ". ಅಂತ ನಾಯಕತ್ವದ ಹುಡುಕಾಟದಲ್ಲಿ ಇದ್ದಾನೆ ಇಂದಿನ ಪಜ್ನಾವಂತ ಮತದಾರ. ಆ ಭರವಸೆಯಾಗಿ ಇಂದು ಗೋಚರಿಸುತ್ತಿರುವರು "ನರೇಂದ್ರ ಮೋದಿ ಮಾತ್ರ". ನೀವು ಇದನ್ನು ಗಮನಿಸಿರಬಹುದು-ಯಾರು ಕೂಡ BJP  ಬೇಕು ಅನ್ನುತ್ತಿಲ್ಲ, ಬದಲಾಗಿ ನರೇಂದ್ರ ಮೋದಿ ಬೇಕು ಅನ್ನುತಿದ್ದಾರೆ.

ಮೋದಿಯ ನಾಯಕತ್ವದ ಬಗ್ಗೆ  ಅಂತ ಒಂದು ಭರವಸೆ ಮೂಡಿರುವುದು ಇಂಗ್ಲಿಷ್ ಸೆ ಇರದ,  ಹಿಂದಿ ಭಾಷೆಯಿಂದಲೇ  ಮಾಡಿದ ಭಾಷಣಗಳಿಂದಲ್ಲ; ಯಾರಿಂದಲೂ ಪ್ರಶ್ನಿಸಿಲಾಗದ ನಾಯಕತ್ವ ಅವರಿಗೆ ಬಂದಿರುವುದು, ಅದನ್ನು ಜನ ಒಪ್ಪಿರುದಕ್ಕೆ ಕಾರಣ ಅವರು ಗುಜರಾತನಲ್ಲಿ ತಂದಿರುವ ಬದಲಾವಣೆ. ನಾವು ಯಾರು ಕೂಡ ಗುಜರಾತನ್ನು ನೋಡಿದವರಲ್ಲ,ಆದರೆ ಒಟ್ಟಾರೆಯಾಗಿ  ಸಮೂಹ ಮಾಧ್ಯಮಗಳು  ಟ್ವಿಟ್ಟರ್-ಫೇಸ್ಬುಕ್  ಅವಲೋಕಿಸಿದಾಗ ಸಿಗುವ ಧನಾತ್ಮಕ ಧೋರಣೆಗಳಿಂದ ಮೋದಿ ಯೊಬ್ಬ ಬದಲಾವಣೆಯ ಹರಿಕಾರ ಎಂದೇ ಭಾವಿಸುತ್ತೇವೆ.

ಮೊದಿಯಲ್ಲದ ನಾಯಕತ್ವ ಭಾರತದಲ್ಲಿ ಬೇರೊಂದು ಇಲ್ಲವೇ? ಇದ್ದಾರೆ ನಮ್ಮ ರಾಹುಲ್ ಗಾಂಧಿ ಸಾಹೇಬರು. ಅವರಿಗೆ 'ಗಾಂಧಿ' ಹೆಸರಿನಿಂದ ಹಾಗೂ ನೆಹರು-ಇಂದಿರಾ-ರಾಜೀವ ಈ ಮೂವರ ಕೆಲವು ಐತಿಹಾಸಿಕ ಸಾಧನೆಗಳಿಂದಾಗಿ ರಾಹುಲ್ ಒಬ್ಬ ರಾಜಕೀಯದಲ್ಲಿ ಕಡೆಗನಿಸಲಾರದ ವ್ಯಕ್ತಿ ಅಷ್ಟೇ ಅನಿಸುತ್ತದೆ. ಅವರ ಶಿಕ್ಷಣ ಅರ್ಹತೆಯಲ್ಲೂ ಅಲ್ಲ-ಸಲ್ಲದ ಆರೋಪಗಳು ಫೇಸ್ಬುಕ್ ತುಂಬಾ ಓಡಾಡುತ್ತಿದೆ. ಅವರಲ್ಲೊಂದು ಅನುಭವ, ಸಾಧನೆ ಅಥವಾ ಮುಂದಲೋಚನೆಯಿದೆ ಎಂದು ಭಾವಿಸಲು ಯಾವ ಕಾರಣಗಳು ಸಿಗುತ್ತಿಲ್ಲ. ಒಂದೊಮ್ಮೆ ಮಾನ್ಯ ಪ್ರಣಬ್ ಮುಖರ್ಜಿಯವರು ಕಾಂಗ್ರೆಸ್ ಕಡೆಯಿಂದ ಪ್ರಧಾನ ಮಂತ್ರಿ ಸ್ಥಾನಕ್ಕೆ ಏನಾದರು ನಾಮಾಂಕಿತರಾಗಿದ್ದರೆ ರಾಜಕೀಯ ಕಣದಲ್ಲಿ ರಾಜಕೀಯ ಅನುಭವದಲ್ಲಾದರು  ಮೋದಿಗೆ ಸರಿ ಸಮಾನರು ಎಂಬ ಭಾವ ಮತದಾರರಲ್ಲಿ ಮುಡುತಿತ್ತೋ ಏನೋ ? ಇವತ್ತು ಕಾಂಗ್ರೆಸ್ಸ್ ಕೇವಲ ವಂಶವಾಹಕ ಕಣಗಳ ಸಾಮರ್ಥ್ಯದಿಂದಲೇ ಗೆಲ್ಲಬೇಕು ಹೊರತು ಅದಕೊಂದು ಬೇರೆಯಾದ  ಕಾರಣ ನನಗಂತೂ ಸಿಗದು.

ಮೋದಿ ಮುಸ್ಲಿಂ ವಿರೋಧಿ, ಅವರೊಬ್ಬ ಕೊಲೆಗಾರ ಎನ್ನುವ ಆರೋಪಗಳು ಕೇಳುತ್ತಲೇ ಇರುತ್ತೇವೆ..ಇದು ಒಪ್ಪವುದು ಬಹಳ ಕಷ್ಟ. ಒಂದೊಮ್ಮೆ ಮೋದಿ ಗೋದ್ರ ಹತ್ಯಾಕಾಂಡದಲ್ಲಿ ಭಾಗಿಯಾಗಿದ್ದರೆ ಕಾಂಗ್ರೆಸ್ಸ್ ಕೈಯಲ್ಲೇ ನಲಿದಾಡುತ್ತಿರುವ(ನಲಿದಾಡುತಿದ್ದ) ಪಂಜರದ ಗಿಳಿ ಸಿಬಿಐ ಇಷ್ಟು ದಿನ ಮೋದಿಗೆ ಜೈಲಿಗೆ ತಳ್ಳುತಿರಲಿಲ್ಲವೇ? ಅದನ್ನು ಇನ್ನು ತನಕ ಸಾಧ್ಯವಾಗದಿರುವಾಗ, ಇಲ್ಲಿಯ ತನಕ ಮೋದಿ ಬಗ್ಗೆ  ಕ್ಲೀನ್ ಚೀಟ್ (http://goo.gl/otX6O) ಇರುವಾಗ ಈ ಮಾಧ್ಯಮಗಳು, ಕಾಂಗ್ರೆಸ್ಸ್ ನಾಯಕರುಗಳು ಯಾಕೆ ಪದೆ ಪದೆ ಗೋದ್ರ-ಗೋದ್ರ ಎಂದು ಬಾಯಿ ಬಡಿತಾರೋ? ಒಂದೊಮ್ಮೆ ಮೋದಿ ಅಪರಾಧಿಯಾಗಿದ್ದರೆ ಅವರು ಜೈಲಿನಲ್ಲಿ ಕೊಳೆಯಲೇ ಬೇಕು ..! ಅದು ಕೇವಲ ಮುಸ್ಲಿಮರ ಕೊರಿಕೆಯಾಗಲಾರದು; ಸಮಸ್ತ ಭಾರತೀಯರು ಅಪರಾಧಿಯನ್ನು ನೋಡುವ ದೃಷ್ಟಿ ತಾನೇ?

ನಮ್ಮದು ಅತಿ ದೊಡ್ಡ ಪ್ರಜಾಪ್ರಭುತ್ವ. ಪ್ರಜೆಗಳ ಮಾತು ಹೇಳಲು-ಕೇಳಲು  ಕಾರಣವಾಗಿರುವುದೇ ಸಮೂಹ ಮಾಧ್ಯಮಗಳಿಂದ. ಇದಕ್ಕಾಗಿಯೇ, ಸಮೂಹ ಮಾಧ್ಯವನ್ನು ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವೆಂದು ಭಾವಿಸಲಾಗುತ್ತದೆ. ನಾವೆಲ್ಲ ಇಂದು ಮೋದಿ ಕೆಟ್ಟವರು-ಒಳ್ಳೆಯವರು ಎಂದು ತಿರ್ಮಾನಿಸುತ್ತಿರುದು ಈ ಮಾಧ್ಯಮಗಳು ನಮ್ಮ ಮುಂದೆ ಇಟ್ಟ ವಿಷಯಗಳು ತಾನೆ? ನಾವೆಲ್ಲರೂ ಮೋದಿಯ ಜೊತೆ ಮಾತನಾಡಿದವರಲ್ಲ, ಗುಜರಾತಿನ ಮಣ್ಣು ಮೆಟ್ಟಿದವರಲ್ಲ.. ಹೀಗಿರುವಾಗ, ಯಾವುದೇ ವ್ಯಕ್ತಿ, ಪಕ್ಷದ ಕಡೆ ಮತದಾರ ವಾಲಲು ಕೇವಲ ಸಮೂಹ ಮಾಧ್ಯಮಗಳೇ ಕಾರಣ ವಾಗುತ್ತವೆ. ಒಂದೊಮ್ಮೆ ಅಂತ ನಿರ್ದಿಷ್ಟ ವಿಷಯಗಳಲ್ಲಿ ಮಾಧ್ಯಮ ಕೆಟ್ಟರೆ, ಲಾಬಿಗೆ ಒಳಗಾಗಿ ಕೆಲಸ ವಹಿಸಿದರೆ ದೇಶದ ಗತಿ ಏನು ಹೇಳಲು ಸಾಧ್ಯ? ಕೇವಲ ರಾಜಕಾರಣಿಗಳು ಒಳ್ಳೆಯ ದಾದರೆ ಸಾಲುವುದಿಲ್ಲ; ಒಳ್ಳೆಯ ಮಾಧ್ಯಮವೂ ಬೇಕು.

ಮಾಧ್ಯಮಗಳು ತಪ್ಪುತ್ತಿರುವ ಅಂಶಗಳು ಅನೇಕ ಇವೆ - ಜಾತ್ಯತೀತ ಭಾರತದಲ್ಲಿ ಜಾತಿವಾರು ಮತಗಳ ಕುರಿತಾಗಿ ಅವಲೋಕನ ಮಾಡುವುದು, ಯಾವೊದೋ ಒಬ್ಬ ಬಡಪಾಯಿ ಧರ್ಮ, ಜಾತಿ ಬಗ್ಗೆ ಮಾತನಾಡಿದನೆಂದು ಅದನ್ನೇ ಈಡಿ ದೇಶಕ್ಕೂ ಬೆಂಕಿ ಹತ್ತುವಂತೆ ಮಾಡುವುದು ಸರಿಯಲ್ಲ. ಮಾಧ್ಯಮವೂ ಕೂಡ ದೇಶದ ಒಳಿತಿಗಾಗಿ ಶ್ರಮಿಸುವ ವರ್ಗ ಎಂದು ಭಾವಿಸ ಬೇಕೇ ಹೊರತು, ವಾಕ್ ಸ್ವಾತಂತ್ರ್ಯವೆಂದು ದೇಶಕ್ಕೆ ನಷ್ಟವುಂಟು ಮಾಡುವ ವಿಷಯವನ್ನು  ಪ್ರಸರಿಸುವುದು, ವಾದಿಸುವುದು ತಪ್ಪು ಅನಿಸುತ್ತದೆ. ಮೋದಿಯವರಿಗೆ ಇಲ್ಲಿ ತನಕ ಎಲ್ಲ ನ್ಯಾಯಲಾಯಗಳು 'ಕ್ಲೀನ್' ಎಂದು ಹೇಳಿದ ಮೇಲೆ, ನ್ಯಾಲಯಗಳ ತೀರ್ಪು ತಪ್ಪು ಅನ್ನುವಂತೆ ಅವರನ್ನು ಮತ್ತೆ-ಮತ್ತೆ ಗೋದ್ರದ ಕುರಿತಾಗಿ ಪ್ರತಿ ದಿನ ಪ್ರಶ್ನಿಸುವುದು ತಪ್ಪಲ್ಲವೆ? ಒಮ್ಮೆ ನಿಮಗೆ  ಗೊದ್ರದ ಕುರಿತಾಗಿ ಸರಿಯಾದ ಮಾಹಿತಿ ಗೊತ್ತಿದ್ದರೆ, ಮೋದಿಯನ್ನು ಜೈಲಿಗೆ ತಳ್ಳಬೇಕು ಎನ್ನುವ ಮನಸ್ಸಿದ್ದರೆ ನೀವೇ ನ್ಯಾಲಯಕ್ಕೆ ಹೋಗಬಹುದಲ್ಲ? ನೀವು ಲಾಬಿ ಗೆ ಒಳಗಾಗಿದ್ದಿರಿ ಎಂದು ಭಾವಿಸಲೇ?

ಮೋದಿಗೆ ಗದ್ದುಗೆಯತ್ತ ನುಸುಳುವುದು ಅಷ್ಟು ಸುಲಭವಂತು ಅಲ್ಲ. ಅವರಲ್ಲಿ ಅರ್ಹತೆ ಇದೆ, ದೇಶದ ಬಗ್ಗೆ ಕಲ್ಪನೆಗಳಿವೆ ಎಂದು ನಾವು 'ಭರವಸೆಯ ನಾಯಕ' ನೆಂದು ನೆಚ್ಚಿ ಕೊಂಡರು ಅವರ ದಾರಿ  ಮುಳ್ಳಿನಿಂದ ಕೂಡಿದೆ. ಮೋದಿ ಒಳ್ಳೆಯ ನಾಯಕರಾದರು, ಗೋದ್ರ ಘಟನೆ ನಡೆದಿರುವುದು ಅವರ ಮೂಗಿನ ಕೆಳಗೆ ಅನ್ನುವ ಕಾರಣದಿಂದ ಅವರನ್ನು ಇಂದಿಗೂ ತೆಗಳಲಾಗುತ್ತಿದೆ. ಜೊತೆಗೆ , ಅವರ ಪಕ್ಷದಲ್ಲೇ ಅವರ ಬಗ್ಗೆ ಸಹ ಮತವಿಲ್ಲ. ಮೋದಿಯ ದಿನ-ದಿನ ಕಾಣುತ್ತಿರುವ ಏಳಗೆಯನ್ನು ಅವರ ಸಮಾನ ವಯಸ್ಕರು(ಅಥವಾ ಸಮಾನ ವೃತಿ ಬಾಂಧವರು) ಎತ್ತಿ ಹಿಡಿಯಲು ಮನಸ್ಸು ಮಾಡುತ್ತಿಲ್ಲ. ಅಮೇರಿಕಾದ(western ) ಅಭಿಮಾನಿಗಳು ದೇಶದಲ್ಲಿ ಹೆಚ್ಚುತ್ತಿರುವ ಕಾಲದಲ್ಲಿ, ಅಮೇರಿಕಾದ ವೀಸಾ ನಿರಾಕರಣೆ ಸಹ ಪ್ರಭಾವ ಬಿರುವ ಸಂಗತಿಯೇ ಆಗಿದೆ. ಅಷ್ಟೆಯಲ್ಲದೆ ಮೊದಿಯೊಬ್ಬ ಕೃತಿಯಿಂದ ಸಾಧಿಸಬಲ್ಲ ವ್ಯಕ್ತಿಯಾಗಿದ್ದರೂ ಮಾತಿನಿಂದ  'ನಾಯಿ ಮರಿ', 'ಬುರ್ಖಾ' ದಂತ ಶಬ್ಧಗಳಿಂದಾಗಿ ಹಾಗೂ ವಿರೋಧಿಗಳು ಪ್ರತಿಯೊಂದು ಮಾತನ್ನು ಮೋದಿ ಒಬ್ಬ 'ರಕ್ತ ಪಿಪಾಶು ' ಅನ್ನುವಂತೆ ಪ್ರೇರಿಪಿಸುವುದು ಕೂಡ ಅವರ ಹಿನ್ನಡೆಗೆ ಕಾರಣವಾಗಲಿದೆ. ಜೊತೆಗೆ ಬಿಜೆಪಿ, ಎಲ್ಲಕಡೆ ಒಳ್ಳೆಯ ಇಮೇಜ್ ಉಳಿಸಿಕೊಂಡಿಲ್ಲ. ಉದಾಹರಣೆಗೆ- ಕರ್ನಾಟಕದ ಬಿಜೆಪಿಯ ರೆಸಾರ್ಟ್ ರಾಜಕಾರಣ, ಭೃಷ್ಟಚಾರಗಳಿಂದ ಬೇಸೆತ್ತ ಮತದಾರ ಬೇರೆ ಪಕ್ಷಗಳನ್ನು ನೋಡಿಕೊಲ್ಲಬೇಕಾಯಿತು. ಇದರ ಪರಿಣಾಮವಾಗಿ, "ಕೇಂದ್ರದಲ್ಲಿ ಮೋದಿ ಬಂದರೆ ನಮಗೇನು ಫಲ,ಇಲ್ಲಿರುವ ಒಳ್ಳೆಯವರಲ್ಲದಿದ್ದರೆ?" ಎನ್ನುವ ಮತದಾರ ,ಮೋದಿಯ ನಾಯಕತ್ವದ ಕುರಿತಾದ ಭರವಸೆಯಿಂದ ಪಕ್ಷದ  ಲೋಕಲ್ ಲೀಡರ್ ಗಳನ್ನೂ  ಅಪ್ಪಿಕೊಳ್ಳುತ್ತಾನೆಯೇ?

ಒಟ್ಟಾರೆ, ಮೋದಿ ದೇಶದ ಕೇಂದ್ರ ಸ್ಥಳದಿಂದ ಹಳ್ಳಿ-ಮನೆಯ ಜಗುಲಿಯ ತನಕವೂ ಬಿಜೆಪಿಯನ್ನು ನಿರೂಪಿಸುವ ಕಾರ್ಯದಲ್ಲಿ ತೊಡಗಬೇಕು. ಅವರ ಪ್ರನಾಳಿಕೆ  ದೇಶದ ಜನತೆಯ ಹೃದಯ ಗೆಲ್ಲಬೇಕು.

ಸರ್ವಧರ್ಮಗಳ ಸಮನ್ವಯ ಕಂಡಿರುವ ಭಾರತ ಭೂಮಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ನಿಂದ ಆಳಲ್ಪಟ್ಟಿದೆ. ಅದಕ್ಕೂ ಸಮಾನ ಅವಕಾಶ, ಅಂತದನ್ನು ಒಪ್ಪಿಕೊಳ್ಳುವ ಉದಾರ ಹೃದಯ ಪ್ರತಿ ಭಾರತಿಯನಿಗೂ ಇದೆ. ಯಾರು ಕೂಡ ರಕ್ತ ಕ್ರಾಂತಿಯನ್ನು ಕಾಣಲು ಬಯಸುವುದಿಲ್ಲ. ಅಳುವ ಪಕ್ಷ ಕಾಂಗ್ರೆಸ್ಸ್ ಆಗಲಿ, ಬಿಜೆಪಿಯೇ ಆಗಲಿ ಗತ ಇತಿಹಾಸ ಸೇರಿದ ಭಯೋತ್ಪಾದನೆಯನ್ನು ಆಧಾರವಾಗಿಸಿ ದೇಶವನ್ನು ಕಟ್ಟಲು ಹಪಹಪಿಸುವವರಿಗೆ  ಖಂಡಿತ ಮತದಾರ ದೇಶವನ್ನು ಕೊಡಲಾರ. ನಮಗೆ ನಿಮ್ಮ(ರಾಜಕಾರಣಿಗಳ) ಸೌಂದರ್ಯ, ಜಾತಿ ಧರ್ಮಗಳು ಕಾರಣವಲ್ಲ. ನಮಗೆ ಈ ದೇಶದಲ್ಲಿ ಶಾಂತಿಯಿಂದ  ಸ್ವಾಭಿಮಾನದಿಂದ ಬದುಕಲು ಅವಕಾಶ ಸಿಕ್ಕಿದರೆ ಸಾಕು.

ಮೊದಿಯೋಬ್ಬರು  ಗುಜರಾತಿನ ಬದಲಾವಣೆಯ ಹರಿಕಾರರಾದ  ಕಾರಣ ಅವರ ಅರ್ಹತೆ-" ಭರವಸೆಯ ನಾಯಕ" ಅಷ್ಟೇ. ಒಂದೊಮ್ಮೆ ಕಾಂಗ್ರೆಸ್ಸ್ ಒಳ್ಳೆಯ ಭರವಸೆಯ ನಾಯಕನನ್ನು ೨೦೧೪ ರ ಲೋಕಸಭೆಯ ಒಳಗೆ  ನಿರೂಪಿಸಿದರೆ ನಾವು ಅವರನ್ನು ಇಷ್ಟೇ ಮುಕ್ತ ಹೃದಯದಿಂದ ಸ್ವಾಗತಿಸಬಹುದು. 

ಕಾಯಬೇಕು ೨೦೧೪- ಮೋದಿ  ಗದ್ದುಗೆಯತ್ತ  ಪಯಣಿಸುವರೆ?

ಮೋದಿ ಬದುಕಿನ ಪ್ರತಿಯೊಂದು
ಹಾದಿಯಲಿ ಸದ್ದು ಗದ್ದಳಗಲಿದ್ದು
ಓದಿ ತಿಳಿದು ಚಿಂತನೆಯಲಿ ಮುಳುಗಿ
ಬುದ್ದಿಗೆ ತಿಳಿದಂತೆ ಬರೆದೆ ಈ ಕತನ...

ಎದ್ದು ಬರುವರೆ ಮೋದಿ
ಬಿದ್ದವರನ್ನು ಎತ್ತಲು
ಸಿದ್ಧಿಸುವುದೇ ಅವರಿಗೆ
ಗದ್ದುಗೆಯ  ಅವಕಾಶವು?

No comments:

Post a Comment